ETV Bharat / sitara

ರಿಷಿ ಕಪೂರ್ ಜೊತೆ ಕಳೆದ ದಿನಗಳನ್ನು ಮೆಲುಕು ಹಾಕಿದ ಜೆ.ಕೆ. ಭಾವುಕ

author img

By

Published : Apr 30, 2020, 6:19 PM IST

ಬಾಲಿವುಡ್​​ ಹಿರಿಯ ನಟ ರಿಷಿ ಕಪೂರ್​​ ಅಗಲಿಕೆಯ ದುಃಖವನ್ನು ಸ್ಯಾಂಡಲ್​​ವುಡ್​​ ನಟ ಜಯರಾಮ್​ ಕಾರ್ತಿಕ್​ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ಬರೆದುಕೊಂಡಿದ್ದಾರೆ.

JK  Recalled who spent days with Rishi Kapoor
ರಿಷಿ ಕಪೂರ್ ಜೊತೆ ಕಳೆದ ದಿನಗಳನ್ನು ನೆನದು ಜೆಕೆ ಭಾವುಕ

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ಇಂದು ಕೊನೆಯುಸಿರೆಳೆದಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಸಿನಿಲೋಕವೇ ದಂಗಾಗಿದೆ. ಬಾಲಿವುಡ್, ಸ್ಯಾಂಡಲ್ ವುಡ್ ಕಲಾವಿದರುಗಳ ಜೊತೆಗೆ ಕನ್ನಡ ಕಿರುತೆರೆ ಕಲಾವಿದರು ಕೂಡ ಅಗಲಿದ ಹಿರಿಯ ನಟನನ್ನು ಸ್ಮರಿಸಿಕೊಂಡಿದ್ದಾರೆ.

ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಜೆ.ಕೆ. ಅಲಿಯಾಸ್ ಜಯರಾಂ ಕಾರ್ತಿಕ್ ರಿಷಿ ಕಪೂರ್ ಅವರೊಂದಿಗಿದ್ದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ. ರಿಷಿ ಕಪೂರ್ ಅವರೊಂದಿಗೆ ತಾವು ಕಳೆದ ಕ್ಷಣಗಳ ಬಗ್ಗೆ ಜಯರಾಂ ಕಾರ್ತಿಕ್ ಬರೆದುಕೊಂಡಿದ್ದಾರೆ.

ಜಯರಾಂ ಕಾರ್ತಿಕ್ ಬಾಲಿವುಡ್​​ನ ಹೆಸರಾಂತ ನಟ ರಿಷಿ ಕಪೂರ್ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದು 2016 ರಲ್ಲಿ. ಅದು ಸಿಯಾ ಕೆ ರಾಮ್ ಶೂಟಿಂಗ್ ಸಮಯದಲ್ಲಿ. "ಆ ದಿನ ನನಗಿನ್ನು ಸರಿಯಾಗಿ ನೆನಪಿದೆ. 05 ಸೆಪ್ಟೆಂಬರ್ 2016. ಆ ದಿನ ನಾನು ಅವರನ್ನು ರಾಮೋಜಿ ಫಿಲಂ ಸಿಟಿಯಲ್ಲಿ ಭೇಟಿಯಾಗಿದ್ದೆ. ಮುಂದೆ ಒಂದಷ್ಟು ದಿನಗಳ ಕಾಲ ನಾನು ಅವರೊಂದಿಗೆ ಜಿಮ್​​ನಲ್ಲಿ ಕಾಲ ಕಳೆದಿದ್ದೇನೆ" ಎಂದು ಅವರು ಹೇಳಿದ್ದಾರೆ.

ಸಿಯಾ ಕೇ ರಾಮ್​​​ನಲ್ಲಿ ನಾನು ರಾವಣನ ಪಾತ್ರ ಮಾಡುತ್ತಿದ್ದೇನೆ ಎಂದು ರಿಷಿ ಕಪೂರ್ ಅವರ ಬಳಿ ಹೇಳಿದಾಗ, ನಾನು ನಿನ್ನನ್ನು ರಾಮ ಮಾಡಿದ್ದೆ ಎಂದು ಅವರು ಹೇಳಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಗುಂಗುನಿಸುತ್ತಿದೆ.

ಒಟ್ಟಿನಲ್ಲಿ ನಾವು ಓರ್ವ ಉತ್ತಮ ನಟ, ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ನನ್ನಂಥ ಅದೆಷ್ಟೋ ನಟರಿಗೆ ಸ್ಫೂರ್ತಿಯಾಗಿದ್ದ ರಿಷಿ ಕಪೂರ್ ಇಂದು ನಮ್ಮ ಜೊತೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಬಾಲಿವುಡ್‌ನ ಹಿರಿಯ ನಟ ರಿಷಿ ಕಪೂರ್ ಇಂದು ಕೊನೆಯುಸಿರೆಳೆದಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಸಿನಿಲೋಕವೇ ದಂಗಾಗಿದೆ. ಬಾಲಿವುಡ್, ಸ್ಯಾಂಡಲ್ ವುಡ್ ಕಲಾವಿದರುಗಳ ಜೊತೆಗೆ ಕನ್ನಡ ಕಿರುತೆರೆ ಕಲಾವಿದರು ಕೂಡ ಅಗಲಿದ ಹಿರಿಯ ನಟನನ್ನು ಸ್ಮರಿಸಿಕೊಂಡಿದ್ದಾರೆ.

ಅಶ್ವಿನಿ ನಕ್ಷತ್ರ ಧಾರಾವಾಹಿ ಖ್ಯಾತಿಯ ಜೆ.ಕೆ. ಅಲಿಯಾಸ್ ಜಯರಾಂ ಕಾರ್ತಿಕ್ ರಿಷಿ ಕಪೂರ್ ಅವರೊಂದಿಗಿದ್ದ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ. ರಿಷಿ ಕಪೂರ್ ಅವರೊಂದಿಗೆ ತಾವು ಕಳೆದ ಕ್ಷಣಗಳ ಬಗ್ಗೆ ಜಯರಾಂ ಕಾರ್ತಿಕ್ ಬರೆದುಕೊಂಡಿದ್ದಾರೆ.

ಜಯರಾಂ ಕಾರ್ತಿಕ್ ಬಾಲಿವುಡ್​​ನ ಹೆಸರಾಂತ ನಟ ರಿಷಿ ಕಪೂರ್ ಅವರನ್ನು ಮೊದಲ ಬಾರಿ ಭೇಟಿ ಮಾಡಿದ್ದು 2016 ರಲ್ಲಿ. ಅದು ಸಿಯಾ ಕೆ ರಾಮ್ ಶೂಟಿಂಗ್ ಸಮಯದಲ್ಲಿ. "ಆ ದಿನ ನನಗಿನ್ನು ಸರಿಯಾಗಿ ನೆನಪಿದೆ. 05 ಸೆಪ್ಟೆಂಬರ್ 2016. ಆ ದಿನ ನಾನು ಅವರನ್ನು ರಾಮೋಜಿ ಫಿಲಂ ಸಿಟಿಯಲ್ಲಿ ಭೇಟಿಯಾಗಿದ್ದೆ. ಮುಂದೆ ಒಂದಷ್ಟು ದಿನಗಳ ಕಾಲ ನಾನು ಅವರೊಂದಿಗೆ ಜಿಮ್​​ನಲ್ಲಿ ಕಾಲ ಕಳೆದಿದ್ದೇನೆ" ಎಂದು ಅವರು ಹೇಳಿದ್ದಾರೆ.

ಸಿಯಾ ಕೇ ರಾಮ್​​​ನಲ್ಲಿ ನಾನು ರಾವಣನ ಪಾತ್ರ ಮಾಡುತ್ತಿದ್ದೇನೆ ಎಂದು ರಿಷಿ ಕಪೂರ್ ಅವರ ಬಳಿ ಹೇಳಿದಾಗ, ನಾನು ನಿನ್ನನ್ನು ರಾಮ ಮಾಡಿದ್ದೆ ಎಂದು ಅವರು ಹೇಳಿದ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಗುಂಗುನಿಸುತ್ತಿದೆ.

ಒಟ್ಟಿನಲ್ಲಿ ನಾವು ಓರ್ವ ಉತ್ತಮ ನಟ, ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ನನ್ನಂಥ ಅದೆಷ್ಟೋ ನಟರಿಗೆ ಸ್ಫೂರ್ತಿಯಾಗಿದ್ದ ರಿಷಿ ಕಪೂರ್ ಇಂದು ನಮ್ಮ ಜೊತೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.