ETV Bharat / sitara

ಆಟೋ ಚಾಲಕ ನಿರ್ದೇಶಿಸಿರುವ 'ಜನುಮದ ಜಾತ್ರೆ' ಆಡಿಯೋ ಬಿಡುಗಡೆ - ಜನುಮದ ಜಾತ್ರೆ ಆಡಿಯೋ ರಿಲೀಸ್​​​

ಆನಂದ್ ಎಂಬ ಆಟೋ ಚಾಲಕ ಇದೀಗ ಚಿತ್ರರಂಗಕ್ಕೆ ಬಂದಿದ್ದು ಅವರೇ ಕಥೆ , ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಜನುಮದ ಜಾತ್ರೆ' ಚಿತ್ರದ ಆಡಿಯೋ ಇಂದು ಬಿಡುಗಡೆಯಾಗಿದೆ.

'ಜನುಮದ ಜಾತ್ರೆ' ಆಡಿಯೋ ಬಿಡುಗಡೆ
author img

By

Published : Nov 1, 2019, 7:53 PM IST

ಆಟೋ ಡ್ರೈವರ್​​, ಕ್ಯಾಬ್ ಡ್ರೈವರ್ ಸೇರಿ ನಿರ್ಮಿಸಿರುವ 'ಸ್ಟಾರ್ ಕನ್ನಡಿಗ' ಸಿನಿಮಾ ಇಂದು ಬಿಡುಗಡೆಯಾಗಿದೆ. ಇದೇ ರೀತಿ ಬಹಳ ವರ್ಷಗಳಿಂದ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಆಟೋ ಚಾಲಕರೊಬ್ಬರು ಇದೀಗ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.

'ಜನುಮದ ಜಾತ್ರೆ' ಆಡಿಯೋ ಬಿಡುಗಡೆ

ಆನಂದ್ ಎಂಬ ಆಟೋ ಚಾಲಕ ಇದೀಗ ಚಿತ್ರರಂಗಕ್ಕೆ ಬಂದಿದ್ದು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಜನುಮದ ಜಾತ್ರೆ' ಚಿತ್ರದ ಆಡಿಯೋ ಇಂದು ಬಿಡುಗಡೆಯಾಗಿದೆ. ಮಲ್ಲೇಶ್ವರಂನ ಎಸ್​​ಆರ್​​ವಿ ಸಭಾಂಗಣದಲ್ಲಿ ನಡೆದ ಆಡಿಯೋ ಕಾರ್ಯಕ್ರಮಕ್ಕೆ ಲಹರಿ ವೇಲು ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೂ ಸಿನಿಮಾ ಮೇಲಿನ ಮೋಹದಿಂದ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಆನಂದ್. ಈಗಾಗಲೇ ಸಿನಿಮಾ ಶೂಟಿಂಗ್ ಮುಗಿಸಿದ್ದು ಸೆನ್ಸಾರ್ ಮಂಡಳಿ ಕದ ತಟ್ಟಲು ರೆಡಿಯಾಗಿದೆ. ಜೀವನದಲ್ಲಿ ಸೋಲು-ಗೆಲುವು ಎರಡು ಯಾವಾಗಲೂ ನಮ್ಮ ಜೊತೆಗಿರುತ್ತವೆ. ಸೋತಾಗ ಕುಗ್ಗಬಾರದು, ಗೆದ್ದಾಗ ಬೀಗಬಾರದು ಎಂಬ ಅಂಶ ಹೊಂದಿರುವ ಸಿನಿಮಾ ಇದು.

ಮದನ್ ಕುಮಾರ್ ಈ ಚಿತ್ರದಲ್ಲಿ ಹಳ್ಳಿ ಯುವಕನ ಪಾತ್ರದ ನಾಯಕನಾಗಿ ನಟಿಸಿದ್ದಾರೆ. ಎರಡನೇ ನಾಯಕನ ಪಾತ್ರದಲ್ಲಿ ಮಂಡ್ಯ ಕೆಂಪ ಎಂಬುವರು ನಟಿಸಿದ್ದಾರೆ. ನಾಯಕ ಮದನ್ ಕುಮಾರ್ ತಂದೆಯೇ ಮಗನ ಸಿನಿಮಾ ಪ್ರೀತಿಗೆ ಸೋತು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಚಿತ್ರ ಹಾಗೂ ಅಂಜಲಿ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿನು ಮನಸ್ಸು ಸಂಗೀತ ನೀಡಿದ್ದಾರೆ. ಮಂಡ್ಯ, ಮಹದೇಶ್ವರ ಬೆಟ್ಟ, ತುಮಕೂರು ಹಾಗೂ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.

ಆಟೋ ಡ್ರೈವರ್​​, ಕ್ಯಾಬ್ ಡ್ರೈವರ್ ಸೇರಿ ನಿರ್ಮಿಸಿರುವ 'ಸ್ಟಾರ್ ಕನ್ನಡಿಗ' ಸಿನಿಮಾ ಇಂದು ಬಿಡುಗಡೆಯಾಗಿದೆ. ಇದೇ ರೀತಿ ಬಹಳ ವರ್ಷಗಳಿಂದ ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ಆಟೋ ಚಾಲಕರೊಬ್ಬರು ಇದೀಗ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.

'ಜನುಮದ ಜಾತ್ರೆ' ಆಡಿಯೋ ಬಿಡುಗಡೆ

ಆನಂದ್ ಎಂಬ ಆಟೋ ಚಾಲಕ ಇದೀಗ ಚಿತ್ರರಂಗಕ್ಕೆ ಬಂದಿದ್ದು ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಜನುಮದ ಜಾತ್ರೆ' ಚಿತ್ರದ ಆಡಿಯೋ ಇಂದು ಬಿಡುಗಡೆಯಾಗಿದೆ. ಮಲ್ಲೇಶ್ವರಂನ ಎಸ್​​ಆರ್​​ವಿ ಸಭಾಂಗಣದಲ್ಲಿ ನಡೆದ ಆಡಿಯೋ ಕಾರ್ಯಕ್ರಮಕ್ಕೆ ಲಹರಿ ವೇಲು ಆಗಮಿಸಿ ಚಿತ್ರದ ಆಡಿಯೋ ಬಿಡುಗಡೆ ಮಾಡಿದರು. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದರೂ ಸಿನಿಮಾ ಮೇಲಿನ ಮೋಹದಿಂದ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಆನಂದ್. ಈಗಾಗಲೇ ಸಿನಿಮಾ ಶೂಟಿಂಗ್ ಮುಗಿಸಿದ್ದು ಸೆನ್ಸಾರ್ ಮಂಡಳಿ ಕದ ತಟ್ಟಲು ರೆಡಿಯಾಗಿದೆ. ಜೀವನದಲ್ಲಿ ಸೋಲು-ಗೆಲುವು ಎರಡು ಯಾವಾಗಲೂ ನಮ್ಮ ಜೊತೆಗಿರುತ್ತವೆ. ಸೋತಾಗ ಕುಗ್ಗಬಾರದು, ಗೆದ್ದಾಗ ಬೀಗಬಾರದು ಎಂಬ ಅಂಶ ಹೊಂದಿರುವ ಸಿನಿಮಾ ಇದು.

ಮದನ್ ಕುಮಾರ್ ಈ ಚಿತ್ರದಲ್ಲಿ ಹಳ್ಳಿ ಯುವಕನ ಪಾತ್ರದ ನಾಯಕನಾಗಿ ನಟಿಸಿದ್ದಾರೆ. ಎರಡನೇ ನಾಯಕನ ಪಾತ್ರದಲ್ಲಿ ಮಂಡ್ಯ ಕೆಂಪ ಎಂಬುವರು ನಟಿಸಿದ್ದಾರೆ. ನಾಯಕ ಮದನ್ ಕುಮಾರ್ ತಂದೆಯೇ ಮಗನ ಸಿನಿಮಾ ಪ್ರೀತಿಗೆ ಸೋತು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಚಿತ್ರ ಹಾಗೂ ಅಂಜಲಿ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ವಿನು ಮನಸ್ಸು ಸಂಗೀತ ನೀಡಿದ್ದಾರೆ. ಮಂಡ್ಯ, ಮಹದೇಶ್ವರ ಬೆಟ್ಟ, ತುಮಕೂರು ಹಾಗೂ ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ.

Intro:ಆಟೋ ಡ್ರೈವರ್ ಗಳೇ ಸೇರಿ ಕನ್ನಡ ಚಿತ್ರವನ್ನು ನಿರ್ಮಾಣ ಮಾಡಿದ್ದು ಈಗ ಆ ಚಿತ್ರ ರಿಲೀಸ್ ಗೆ ರೆಡಿಯಾಗಿದೆ.ಆದ್ರೆ ಈಗ ಸುಮಾರು ಐದು ವರ್ಷಗಳಿಂದ ಆಟೋ ಒಡಿಸಿಕೊಂಡು ಜೀವನ ಸಾಗಿಸುತ್ತಿರುವ ಆಟೋ ಡ್ರೈವರ್ ಆನಂದ್ ಖಾಕಿ ಬಟ್ಟೆ ಕಳಚಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು, " ಜನುಮದ ಜಾತ್ರೆ" ಎಂಬ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು.
ಇಂದು " ಜನುಮದ ಜಾತ್ರೆ" ಚಿತ್ರದ ಆಡಿಯೋ ರಿಲೀಸ್ ಆಗಿದೆ. ಮಲ್ಲೇಶ್ವರಂ ನ ಎಸ್ ಅರ್ ವಿ ಸಭಾಂಗಣದಲ್ಲಿ ನಡೆದ ಆಡಿಯೋ ಕಾರ್ಯಕ್ಕೆ ಲಹರಿ ವೇಲು ಆಗಮಿಸಿ ಚಿತ್ರದ ಆಡಿಯೋ ರಿಲೀಸ್ ಮಾಡಿದ್ರು.ಇನ್ನೂ ಈ ಕಾರ್ಯಕ್ರಮಕ್ಕೆ ಚಿತ್ರತಂಡದ ಸಂಭಂದಿಕರು ಜಾತ್ರೆಗೆ ಬಂದ ರೀತಿಯಲ್ಲೇ ಬಂದು ಚಿತ್ರದ ಆಡಿಯೋ ಬಿಡುಗಡೆಗೆ ಸಾಕ್ಷಿಯಾದರು.


Body:ವೃತ್ತಿಯಲ್ಲಿ ಆಟೋ ಚಾಲಕನಾಗಿದ್ರು ಸಿನಿಮಾ ಮೋಹದಿಂದ ಗಾಂಧಿನಗರಕ್ಕೆ ಎಂಟ್ರಿಕೊಟ್ಟು , ಆಟೋಚಾಲಕ ಆನಂದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಈಗಾಗಲೇ ಚಿತ್ರ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ,ಸೆನ್ಸಾರ್ ಮಂಡಳಿ ಕದ ತಟ್ಟಲು ರೆಡಿಯಾಗಿದ್ದು, ಜೀವನದಲ್ಲಿ ಸೋಲು ಗೆಲುವು ಎರಡು ಜಾತ್ರೆ ರೀತಿ ಸದಾ ನಮ್ಮ ಜೊತೆ ಇರುತ್ತವೆ. ಸೋತಾಗ ಕುಗ್ಗಬಾರದು ಗೆದ್ದಗಾ ಬೀಗಬಾರದು ಎಂಬ ಲೈನ್ ಇಟ್ಕೊಂಡ್ ಹಳ್ಳಿ ಸೊಗಡಿನಲ್ಲಿ ಚಿತ್ರ ಮಾಡಿರುವುದಾಗಿ ನಿರ್ದೇಶಕ ಆಟೋ ಆನಂದ್ ತಿಳಿಸಿದ್ರು. ಇನ್ನೂವೀ ಚಿತ್ರಕ್ಕೆ ಮದನ್ ಕುಮಾರ್ ನಾಯಕಿಯಾಗಿ ನಟಿಸಿದ್ದು.ಹಳ್ಳಿಯುವಕನ ಪಾತ್ರದಲ್ಲಿ ಕಾಣಿಸಿದ್ದಾರೆ.ಇದರ ಜೊತೆ ಎರನೇ ನಾಯಕನ ಪಾತ್ರದಲ್ಲಿ ಮಂಡ್ಯ ಕೆಂಪ ನಟಿಸಿದ್ದು.ನಾಯಕ ಮದನ್ ಕುಮಾರ್ ಅವರ ತಂದೆ ಮಗನ ಸಿನಿಮಾ ಪ್ರೀತಿಗೆ ಸೋತು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು.
ಚಿತ್ರ ಹಾಗೂ ಅಂಜಲಿ " ಜನುಮದ ಜಾತ್ರೆ" ಚಿತ್ರದಲ್ಲಿ ನಾಯಕಿಯರಾಗಿವಕಾಣಿಸಿದ್ದು , ಈ ಚಿತ್ರದ ಮೂಲಕ ನಾಲ್ಕು ಜನ ಅದೃಷ್ಟ ಪರೀಕ್ಷೇಗೆ ಸಿದ್ದರಾಗಿದ್ದಾರೆ.ಚಿತ್ರದಲ್ಲಿ ಮೂರು ಹಾಡುಗಳಿದ್ದು , ವಿನು ಮನಸ್ಸು ಸಂಗೀತ ನೀಡಿದ್ದು.ಹಳ್ಳಿ ಸೊಗಡಿನ ಬ್ಯಾಕ್ ಡ್ರಾಪ್ ನಲ್ಲಿ ಟ್ಯೂನ್ ಕಂಪೋಸ್ ಮಾಡಿದ್ದು ,ಮಂಡ್ಯ, ಮಹದೇಶ್ವರ ಬೆಟ್ಟ,ತುಮಕೂರು ಸುತ್ತ ಮುತ್ತ ಚಿತ್ರೀಕರಣ ಮಾಡಿದ್ದು , ಮುಂಜಾನೆ ಮಂಜು ಕ್ಯಾಮರ ಕಣ್ಣಿನಲ್ಲಿ " ಜನುಮದ ಜಾತ್ರೆ " ಚಿತ್ರ ಸೆರೆಯಾಗಿದೆ.

ಸತೀಶ ಎಂಬಿ.

ಬೈಟ್
.೧ ದೊಡ್ಮನೆ ಮಂಜುನಾಥ್ ನಿರ್ಮಾಪಕ

೨ಆಟೋ ಆನಂದ್ ನಿರ್ದೇಶಕ

೩,ಮದನ್ ಕುಮಾರ್ ನಾಯಕ

೪ ಮಂಡ್ಯ ಕೆಂಪ ಎರಡನೇ ನಾಯಕ

೫ ಚಿತ್ರ ನಾಯಕಿ

೬ಅಂಜಲಿ ಎರಡನೇ ನಾಯಕಿ



Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.