ETV Bharat / sitara

ಜಗ್ಗೇಶ್ ಮಲ್ಲೇಶ್ವರಂ‌ನಲ್ಲಿ ಮನೆ ಕಟ್ಟಲು ಆ ಒಂದು ಸಿನಿಮಾ ಕಾರಣವಂತೆ..!

author img

By

Published : May 9, 2019, 9:37 PM IST

Updated : May 9, 2019, 10:21 PM IST

ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ ನವರಸನಾಯಕ ಜಗ್ಗೇಶ್ ಎಂದು ಅಭಿಮಾನಿಗಳಿಂದ ಬಿರುದು ಪಡೆದಿರುವ ನಟ ಜಗ್ಗೇಶ್ ಇಂದು ಮಲ್ಲೇಶ್ವರಂನಲ್ಲಿ ಮನೆ ಕಟ್ಟಿ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಅವರು ಮಲ್ಲೇಶ್ವರಂನಲ್ಲಿ ಮನೆ ಕಟ್ಟಲು ಆ ಒಂದು ಚಿತ್ರ ಕಾರಣವಂತೆ.

ಜಗ್ಗೇಶ್

ಕನ್ನಡ ಚಿತ್ರರಂಗದಲ್ಲಿ ತಮ್ಮ ಕಾಮಿಡಿ ಟೈಮಿಂಗ್​​ನಿಂದಲೇ ಸ್ಟಾರ್​​​​​​​​​​​​​​​​​​​​​​​​​​ಡಮ್ ಗಿಟ್ಟಿಸಿದ ಮೊಟ್ಟ ಮೊದಲ ನಟ ಜಗ್ಗೇಶ್. ಇದುವರೆಗೂ ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ಮಾಡಿರುವ ಜಗ್ಗೇಶ್, ತಮ್ಮ ಜೀವನದ ಪ್ರಮುಖ ಸಿನಿಮಾವೊಂದರ ಸ್ವಾರಸ್ಯಕರ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

  • ಅಂದು ಈಚಿತ್ರದಲ್ಲಿ ನಟನೆಗೆ ನನಗೆ ಸಿಕ್ಕ ಪ್ರತಿಪಲ ನನ್ನ ಮಲ್ಲೇಶ್ವರದ ಮನೆ ಕಟ್ಟಲು 32/58 ಜಾಗ!ಇಂದು ಇದರ ಮಾರ್ಕೆಟ್ ದರ 6ಕೋಟಿ!ಅಂದಿನ ಸಂಭಾವನೆ ಘನತೆ ನಡೆದುಬಂದ ದಾರಿ..ಕನ್ನಡಿಗರ ಚಪ್ಪಾಳೆ ಹೆಮ್ಮೆ ಅನ್ನಿಸುತ್ತದೆ!ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಶೃಷ್ಟಿಸಿದ ಚಿತ್ರಗಳು ಅಂದು ಇಂದು ಮುಂದು.. https://t.co/wbjlmbhiQ9

    — ನವರಸನಾಯಕ ಜಗ್ಗೇಶ್ (@Jaggesh2) May 9, 2019 " class="align-text-top noRightClick twitterSection" data=" ">

ಇಂದು ಜಗ್ಗೇಶ್ ದೊಡ್ಡನಟನಾಗಿ ಬೆಳೆದು ನಿಂತಿದ್ದಾರೆ ಅಂದ್ರೆ ಅವರ ಸಿನಿಮಾ ಹಾಗೂ ಅದಕ್ಕಾಗಿ ವಹಿಸಿದ ಶ್ರಮ ಕಾರಣ. ಜಗ್ಗೇಶ್ ಇಂದು ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ. ಅವರು ನಟಿಸಿದ 'ಬೇವುಬೆಲ್ಲ' ಸಿನಿಮಾ ಜಗ್ಗೇಶ್​ ಮಲ್ಲೇಶ್ವರಂನಲ್ಲಿ ಮನೆ ಕಟ್ಟಲು ಕಾರಣವಂತೆ. ಈ ಬಗ್ಗೆ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. 'ಅಂದು ಈ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ನನಗೆ ಸಿಕ್ಕ ಪ್ರತಿಫಲ ಮಲ್ಲೇಶ್ವರಂನಲ್ಲಿ ಮನೆ ಕಟ್ಟಲು 32/58 ಜಾಗ. ಇಂದು ಇದರ ಮಾರ್ಕೆಟ್ ದರ 6 ಕೋಟಿ ರೂಪಾಯಿ. ಅಂದಿನ ಸಂಭಾವನೆ, ಘನತೆ, ನಡೆದು ಬಂದ ದಾರಿ, ಕನ್ನಡಿಗರ ಚಪ್ಪಾಳೆ ನನಗೆ ಹೆಮ್ಮೆ ಅನ್ನಿಸುತ್ತಿದೆ. ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಸೃಷ್ಟಿಸಿದ ಚಿತ್ರಗಳು ಇಂದಿಗೂ ಮುಂದುವರೆದಿವೆ' ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

jaggesh
ನವರಸನಾಯಕ ಜಗ್ಗೇಶ್

1993ರಲ್ಲಿ 'ಬೇವು ಬೆಲ್ಲ' ಸಿನಿಮಾ ತೆರೆಗೆ ಬಂದಿತ್ತು. ಎಸ್​​. ನಾರಾಯಣ್ ಅವರ ನಿರ್ದೇಶನ, ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆ ಈ ಚಿತ್ರಕ್ಕಿತ್ತು. ಜಗ್ಗೇಶ್​​​​​​​​​​​​​​​​​​​​​ಗೆ ನಾಯಕಿಯಾಗಿ ರಾಗಿಣಿ ನಟಿಸಿದ್ದರು. ಇನ್ನು ಚಿತ್ರದಲ್ಲಿ ಹಿರಿಯ ನಟ ಲೋಕೇಶ್, ಎಸ್​​. ನಾರಾಯಣ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇತ್ತು. ಈ ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ನಾದಬ್ರಹ್ಮ ಹಂಸಲೇಖ ಅವರ ಸಂಗೀತ. ಅದ್ಭುತ ಹಾಡುಗಳು ಚಿತ್ರದ ಸಕ್ಸಸ್​​​​​​​​​​​​​​​​ಗೆ ಮತ್ತೊಂದು ಕಾರಣವಾಗಿತ್ತು. ಅದರಲ್ಲೂ 'ಜನುಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ' ಹಾಡು ಇಂದಿಗೂ ಎವರ್ ಗ್ರೀನ್ ಹಾಡಾಗಿ ಗಾನಪ್ರಿಯರ ಮನದಲ್ಲಿ ಮನೆ ಮಾಡಿದೆ. ಈ ಅದ್ಭುತವಾದ ಹಾಡಿಗೆ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಅಂದು ಈ ಸಿನಿಮಾ ಗಲ್ಲಾಪೆಟ್ಟಿಗೆಯನ್ನು ತುಂಬಿಸಿ ಕೌಟುಂಬಿಕ ಸಿನಿಮಾ ಎಂಬ ಖ್ಯಾತಿ ಪಡೆದಿತ್ತು. ಜಗ್ಗೇಶ್ ಸಿನಿಮಾ ಕೆರಿಯರ್​​​​​​ನಲ್ಲಿ ಸದಾ ನೆನಪಿನಲ್ಲಿರುವ ಚಿತ್ರ ಅಂದ್ರೆ 'ಬೇವು ಬೆಲ್ಲ' ಎಂದರೆ ತಪ್ಪಿಲ್ಲ.

  • " class="align-text-top noRightClick twitterSection" data="">

ಕನ್ನಡ ಚಿತ್ರರಂಗದಲ್ಲಿ ತಮ್ಮ ಕಾಮಿಡಿ ಟೈಮಿಂಗ್​​ನಿಂದಲೇ ಸ್ಟಾರ್​​​​​​​​​​​​​​​​​​​​​​​​​​ಡಮ್ ಗಿಟ್ಟಿಸಿದ ಮೊಟ್ಟ ಮೊದಲ ನಟ ಜಗ್ಗೇಶ್. ಇದುವರೆಗೂ ಸುಮಾರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ಮಾಡಿರುವ ಜಗ್ಗೇಶ್, ತಮ್ಮ ಜೀವನದ ಪ್ರಮುಖ ಸಿನಿಮಾವೊಂದರ ಸ್ವಾರಸ್ಯಕರ ವಿಷಯವೊಂದನ್ನು ಹಂಚಿಕೊಂಡಿದ್ದಾರೆ.

  • ಅಂದು ಈಚಿತ್ರದಲ್ಲಿ ನಟನೆಗೆ ನನಗೆ ಸಿಕ್ಕ ಪ್ರತಿಪಲ ನನ್ನ ಮಲ್ಲೇಶ್ವರದ ಮನೆ ಕಟ್ಟಲು 32/58 ಜಾಗ!ಇಂದು ಇದರ ಮಾರ್ಕೆಟ್ ದರ 6ಕೋಟಿ!ಅಂದಿನ ಸಂಭಾವನೆ ಘನತೆ ನಡೆದುಬಂದ ದಾರಿ..ಕನ್ನಡಿಗರ ಚಪ್ಪಾಳೆ ಹೆಮ್ಮೆ ಅನ್ನಿಸುತ್ತದೆ!ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಶೃಷ್ಟಿಸಿದ ಚಿತ್ರಗಳು ಅಂದು ಇಂದು ಮುಂದು.. https://t.co/wbjlmbhiQ9

    — ನವರಸನಾಯಕ ಜಗ್ಗೇಶ್ (@Jaggesh2) May 9, 2019 " class="align-text-top noRightClick twitterSection" data=" ">

ಇಂದು ಜಗ್ಗೇಶ್ ದೊಡ್ಡನಟನಾಗಿ ಬೆಳೆದು ನಿಂತಿದ್ದಾರೆ ಅಂದ್ರೆ ಅವರ ಸಿನಿಮಾ ಹಾಗೂ ಅದಕ್ಕಾಗಿ ವಹಿಸಿದ ಶ್ರಮ ಕಾರಣ. ಜಗ್ಗೇಶ್ ಇಂದು ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ. ಅವರು ನಟಿಸಿದ 'ಬೇವುಬೆಲ್ಲ' ಸಿನಿಮಾ ಜಗ್ಗೇಶ್​ ಮಲ್ಲೇಶ್ವರಂನಲ್ಲಿ ಮನೆ ಕಟ್ಟಲು ಕಾರಣವಂತೆ. ಈ ಬಗ್ಗೆ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. 'ಅಂದು ಈ ಚಿತ್ರದಲ್ಲಿ ನಟಿಸಿದ್ದಕ್ಕಾಗಿ ನನಗೆ ಸಿಕ್ಕ ಪ್ರತಿಫಲ ಮಲ್ಲೇಶ್ವರಂನಲ್ಲಿ ಮನೆ ಕಟ್ಟಲು 32/58 ಜಾಗ. ಇಂದು ಇದರ ಮಾರ್ಕೆಟ್ ದರ 6 ಕೋಟಿ ರೂಪಾಯಿ. ಅಂದಿನ ಸಂಭಾವನೆ, ಘನತೆ, ನಡೆದು ಬಂದ ದಾರಿ, ಕನ್ನಡಿಗರ ಚಪ್ಪಾಳೆ ನನಗೆ ಹೆಮ್ಮೆ ಅನ್ನಿಸುತ್ತಿದೆ. ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಸೃಷ್ಟಿಸಿದ ಚಿತ್ರಗಳು ಇಂದಿಗೂ ಮುಂದುವರೆದಿವೆ' ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.

jaggesh
ನವರಸನಾಯಕ ಜಗ್ಗೇಶ್

1993ರಲ್ಲಿ 'ಬೇವು ಬೆಲ್ಲ' ಸಿನಿಮಾ ತೆರೆಗೆ ಬಂದಿತ್ತು. ಎಸ್​​. ನಾರಾಯಣ್ ಅವರ ನಿರ್ದೇಶನ, ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆ ಈ ಚಿತ್ರಕ್ಕಿತ್ತು. ಜಗ್ಗೇಶ್​​​​​​​​​​​​​​​​​​​​​ಗೆ ನಾಯಕಿಯಾಗಿ ರಾಗಿಣಿ ನಟಿಸಿದ್ದರು. ಇನ್ನು ಚಿತ್ರದಲ್ಲಿ ಹಿರಿಯ ನಟ ಲೋಕೇಶ್, ಎಸ್​​. ನಾರಾಯಣ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇತ್ತು. ಈ ಚಿತ್ರದ ಪ್ಲಸ್ ಪಾಯಿಂಟ್ ಅಂದ್ರೆ ನಾದಬ್ರಹ್ಮ ಹಂಸಲೇಖ ಅವರ ಸಂಗೀತ. ಅದ್ಭುತ ಹಾಡುಗಳು ಚಿತ್ರದ ಸಕ್ಸಸ್​​​​​​​​​​​​​​​​ಗೆ ಮತ್ತೊಂದು ಕಾರಣವಾಗಿತ್ತು. ಅದರಲ್ಲೂ 'ಜನುಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ' ಹಾಡು ಇಂದಿಗೂ ಎವರ್ ಗ್ರೀನ್ ಹಾಡಾಗಿ ಗಾನಪ್ರಿಯರ ಮನದಲ್ಲಿ ಮನೆ ಮಾಡಿದೆ. ಈ ಅದ್ಭುತವಾದ ಹಾಡಿಗೆ ಹಂಸಲೇಖ ಅವರ ಸಾಹಿತ್ಯ ಮತ್ತು ಸಂಗೀತವಿದೆ. ಅಂದು ಈ ಸಿನಿಮಾ ಗಲ್ಲಾಪೆಟ್ಟಿಗೆಯನ್ನು ತುಂಬಿಸಿ ಕೌಟುಂಬಿಕ ಸಿನಿಮಾ ಎಂಬ ಖ್ಯಾತಿ ಪಡೆದಿತ್ತು. ಜಗ್ಗೇಶ್ ಸಿನಿಮಾ ಕೆರಿಯರ್​​​​​​ನಲ್ಲಿ ಸದಾ ನೆನಪಿನಲ್ಲಿರುವ ಚಿತ್ರ ಅಂದ್ರೆ 'ಬೇವು ಬೆಲ್ಲ' ಎಂದರೆ ತಪ್ಪಿಲ್ಲ.

  • " class="align-text-top noRightClick twitterSection" data="">
Intro:ಜಗ್ಗೇಶ್ ಮಲ್ಲೇಶ್ವರಂ‌ನಲ್ಲಿ ಮನೆ ಕಟ್ಟಲು ಆ ಒಂದು ಸಿನಿಮಾ ಕಾರಣ!!

ಕನ್ನಡ ಚಿತ್ರರಂಗ ಅಲ್ಲೇ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ನವರಸಗಳ ಹೊಂದಿರುವ ಏಕೈಕ ನಟ ಜಗ್ಗೇಶ್.. ತಮ್ಮ ಕಾಮಿಡಿ ಟೈಮಿಂಗ್ ನಿಂದಲೇ ಸ್ಟಾರ್ ಡಮ್ ಗಿಟ್ಟಿಸಿದ ಮೊಟ್ಟ ಮೊದಲ ನಟ ಜಗ್ಗೇಶ್..ಬರೋಬ್ಬರಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರ ಮಾಡಿರೋ ಜಗ್ಗೇಶ್, ಇದೀಗ ತಮ್ಮ ಜೀವನದ ಬಹುಮುಖ್ಯವಾದ ಚಿತ್ರದ ಅಚ್ಚರಿ ವಿಷ್ಯವನ್ನ ಹಂಚಿಕೊಂಡಿದ್ದಾರೆ...ಯಸ್ ಇಂದು ಜಗ್ಗೇಶ್ ದೊಡ್ಡ ನಟನಾಗಿ ಬೆಳೆದುನಿಂತಿದ್ದಾರೆ ಅಂದ್ರೆ ಅವ್ರ ಶ್ರಮ ಮತ್ತು ಅವರು ಮಾಡಿದ ಸಿನಿಮಾಗಳೆ ಕಾರಣ. ಸದ್ಯ ಜಗ್ಗೇಶ್ ಇಂದು ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ, ಭಟ್ ಮಲ್ಲೇಶ್ವರಂನಲ್ಲಿ ಜಗ್ಗೇಶ್ ಮನೆ ಕಟ್ಟಲು ಕಾರಣವಾದ ಸಿನಿಮಾ ಅಂದ್ರೆ, ಬೇವು ಬೆಲ್ಲ ಅಂತೆ. ಈ ಬಗ್ಗೆ ಜಗ್ಗೇಶ್ ತಮ್ಮ ಟ್ಟೀಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..ಅಂದು ಈ ಚಿತ್ರದಲ್ಲಿ ನಟನೆಗೆ ನನಗೆ ಸಿಕ್ಕ ಪ್ರತಿಪಲ ನನ್ನ ಮಲ್ಲೇಶ್ವರದ ಮನೆ ಕಟ್ಟಲು 32/58 ಜಾಗ. ಇಂದು ಇದರ ಮಾರ್ಕೆಟ್ ದರ 6ಕೋಟಿ. ಅಂದಿನ ಸಂಭಾವನೆ, ಘನತೆ, ನಡೆದು ಬಂದ ದಾರಿ, ಕನ್ನಡಿಗರ ಚಪ್ಪಾಳೆ ಹೆಮ್ಮೆ ಅನ್ನಿಸುತ್ತಿದೆ. ಹಳ್ಳಿ ಹುಡುಗನ ಬದುಕಿನ ಸುವರ್ಣಕಾಲ ಸೃಷ್ಟಿಸಿದ ಚಿತ್ರಗಳು ಅಂದು ಇಂದು ಮುಂದುವರೆದಿದೆ..1993ರಲ್ಲಿ ಬೇವು ಬೆಲ್ಲ ಸಿನಿಮಾ ತೆರೆಗೆ ಬಂದಿತ್ತು..ನಿರ್ದೇಶಕ. ಎಸ್ ನಾರಾಯಣ್ ಅವರ ನಿರ್ದೇಶನ, ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆ ಈ ಚಿತ್ರಕ್ಕಿತ್ತು. ಜಗ್ಗೇಶ್ ಗೆ ನಾಯಕಿಯಾಗಿ ರಜನಿ ಕಾಣಿಸಿಕೊಂಡಿದ್ದರು. ಇನ್ನು ಚಿತ್ರದಲ್ಲಿ ಹಿರಿಯ ನಟ ಲೋಕೇಶ್, ಎಸ್ ನಾರಾಯಣ್ ಸೇರಿದಂತೆ ದೊಡ್ಡ ಕಲಾವಿದರ ದಂಡೆ ಇತ್ತು. ವಿಶೇಷ ಅಂದ್ರೆ ಈ ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ನಾದಬ್ರಹ್ಮ ಹಂಸಲೇಖ ಅವರ ಸಂಗೀತ. ಅದ್ಭುತ ಹಾಡುಗಳು ಚಿತ್ರದ ಸಕ್ಸಸ್ ಗೆ ಮತ್ತೊಂದು ಕಾರಣವಾಗಿತ್ತು.Body:ಅದ್ರಲ್ಲಿ ಜನ್ಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ" ಹಾಡು ಇಂದಿಗೂ ಎವರ್ ಗ್ರೀನ್ ಹಾಡಾಗಿ ಗಾನಪ್ರಿಯರ ಮನದಲ್ಲಿ ಮನೆ ಮಾಡಿದೆ. ಈ ಅದ್ಭುತವಾದ ಹಾಡಿಗೆ ಹಂಸಲೇಖ ಅವರ ಹಾಹಿತ್ಯ ಮತ್ತು ಸಂಗೀತವಿದೆ. ಜೊತೆಗೆ ರಾಜೇಶ್ ಕೃಷ್ಣನ್, ಎಸ್ ಪಿ ಬಾಲಸುಭ್ರಮಣ್ಯಂ, ಕೆ.ಎಸ್ ಚಿತ್ರ ಮತ್ತು ಲತಾ ಹಂಸಲೇಖ ಅವರ ದ್ವನಿ ಈ ಹಾಡು ಮತ್ತಷ್ಟು ಇಂಪಾಗಿ ಮೂಡಿ ಬರುವಂತೆ ಮಾಡಿದೆ.ಅಂದು ಈ ಸಿನಿಮಾ ಗಲ್ಲಾ ಪಟ್ಟಿಯನ್ನ ತುಂಬಿಸಿ ಕೌಟುಂಬಿಕ ಸಿನಿಮಾ ಅಂತಾ ಕರೆಯಿಸಿಕೊಂಡಿತ್ತು..ಈಗ ಜಗ್ಗೇಶ್ ಸಿನಿಮಾ ಕೆರಿಯರ್ ನಲ್ಲಿ ಸದಾ ನೆನಪಿನಲ್ಲಿರುವ ಚಿತ್ರ ಅಂದ್ರೆ ಬೇವು ಬೆಲ್ಲ ಅಂದ್ರೆ ತಪ್ಪಿಲ್ಲ..Conclusion:ರವಿಕುಮಾರ್ ಎಂಕೆ
Last Updated : May 9, 2019, 10:21 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.