ETV Bharat / sitara

ದಿಶಾ ಪ್ರಕರಣದ ಸ್ಫೂರ್ತಿಯಿಂದ ತಯಾರಾಗುತ್ತಿದೆ 'ಹುಡುಕಾಟ' ಸಿನಿಮಾ.. - ಹುಡುಕಾಟ ಚಿತ್ರಕ್ಕೆ ಸ್ಫೂರ್ತಿಯಾದ ದಿಶಾ ಪ್ರಕರಣ

ದಿಶಾ ಪ್ರಕರಣದ ಸ್ಫೂರ್ತಿಯಾಗಿರಿಸಿಕೊಂಡು ಕನ್ನಡದಲ್ಲಿ 'ಹುಡುಕಾಟ' ಎಂಬ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕೆ 'ಪ್ರತಿ ನಿಮಿಷ ಹೋರಾಟ' ಎಂಬ ಟ್ಯಾಗ್​​ಲೈನ್ ಇದೆ. ಇಂದು ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋನಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.

hudukata movie muhurtha
'ಹುಡುಕಾಟ' ಸಿನಿಮಾ ಮುಹೂರ್ತ
author img

By

Published : Dec 14, 2019, 11:44 PM IST

ಹೈದರಾಬಾದ್​​​​​ನ ಪಶುವೈದ್ಯೆ ದಿಶಾ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್ ಮಾಡಿದ್ದರೂ ಇಂತಹ ದುರ್ಘಟನೆಗಳು ಮರುಕಳಿಸುತ್ತಲೇ ಇವೆ.

'ಹುಡುಕಾಟ' ಸಿನಿಮಾದ ಮುಹೂರ್ತ..

ದೇಶದಲ್ಲಿ ನಡೆಯುವ ಕೆಲ ನೈಜ ಘಟನೆಗಳನ್ನು ಆಧರಿಸಿ ಎಷ್ಟೋ ಸಿನಿಮಾಗಳು ತಯಾರಾಗಿವೆ. ಇದೀಗ ದಿಶಾ ಪ್ರಕರಣದ ಸ್ಫೂರ್ತಿಯಾಗಿರಿಸಿಕೊಂಡು ಕನ್ನಡದಲ್ಲಿ 'ಹುಡುಕಾಟ' ಎಂಬ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕೆ 'ಪ್ರತಿ ನಿಮಿಷ ಹೋರಾಟ' ಎಂಬ ಟ್ಯಾಗ್​​ಲೈನ್ ಇದೆ. ಇಂದು ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋನಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ಶಿವಶಂಕರ್ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದರು. ನಂತರ ಮಾತನಾಡಿದ ಅವರು, ಪಕ್ಕದ ರಾಜ್ಯದಿಂದ ಬೆಂಗಳೂರಿಗೆ ಬಂದು ಸಿನಿಮಾ ಮಾಡುತ್ತಿರುವ ರವಿ ಮುಲಕಪಲ್ಲಿ ಅವರಿಗೆ ಶುಭ ಕೋರಿದರು.

'ಹುಡುಕಾಟ' ಚಿತ್ರವನ್ನು ಆಂಧ್ರಪ್ರದೇಶದ ರವಿ ಮುಲಕಪಲ್ಲಿ ಎಂಬುವರು ಕಥೆ, ಚಿತ್ರಕಥೆ ಬರೆದು ನಿರ್ಮಾಣದೊಂದಿಗೆ ನಿರ್ದೇಶನ ಕೂಡಾ ಮಾಡುತ್ತಿದ್ದಾರೆ. ಜತೆಗೆ ಚಿತ್ರದ ಹಾಡುಗಳಿಗೆ ಸಂಗೀತ ಕೂಡಾ ನೀಡಿದ್ದಾರೆ. ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಥೆ ಹೇಳಲು ಹೊರಟಿರುವ ರವಿ, ಈ ಚಿತ್ರಕ್ಕಾಗಿ ಆಂಧ್ರದ ಅಭಿಷೇಕ್ ಎನ್ನಲುರಿ ಹಾಗೂ ಕನ್ನಡದ ಪ್ರಜ್ವಲ್ ಕುಮಾರ್ ಎಂಬ ಇಬ್ಬರು ನಟರನ್ನು ಪ್ರಮುಖ ಪಾತ್ರದಲ್ಲಿ ನಟಿಸಲು ಕರೆ ತಂದಿದ್ದಾರೆ.

ಚಿತ್ರದಲ್ಲಿ ಇಬ್ಬರು ನಾಯಕಿಯರು ಕೂಡಾ ಇದ್ದು ತೆಲುಗು ಹುಡುಗಿ ಮಧುಪ್ರಿಯ ಹಾಗೂ ಪೂಜಿತ ನಟಿಸುತ್ತಿದ್ದಾರೆ. ಮುಂದಿನ ವಾರದಿಂದ ಕರ್ನಾಟಕ ಹಾಗೂ ಆಂಧ್ರದಲ್ಲಿ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ಹೈದರಾಬಾದ್​​​​​ನ ಪಶುವೈದ್ಯೆ ದಿಶಾ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈ ಪ್ರಕರಣದ ಆರೋಪಿಗಳನ್ನು ಪೊಲೀಸರು ಎನ್​ಕೌಂಟರ್ ಮಾಡಿದ್ದರೂ ಇಂತಹ ದುರ್ಘಟನೆಗಳು ಮರುಕಳಿಸುತ್ತಲೇ ಇವೆ.

'ಹುಡುಕಾಟ' ಸಿನಿಮಾದ ಮುಹೂರ್ತ..

ದೇಶದಲ್ಲಿ ನಡೆಯುವ ಕೆಲ ನೈಜ ಘಟನೆಗಳನ್ನು ಆಧರಿಸಿ ಎಷ್ಟೋ ಸಿನಿಮಾಗಳು ತಯಾರಾಗಿವೆ. ಇದೀಗ ದಿಶಾ ಪ್ರಕರಣದ ಸ್ಫೂರ್ತಿಯಾಗಿರಿಸಿಕೊಂಡು ಕನ್ನಡದಲ್ಲಿ 'ಹುಡುಕಾಟ' ಎಂಬ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕೆ 'ಪ್ರತಿ ನಿಮಿಷ ಹೋರಾಟ' ಎಂಬ ಟ್ಯಾಗ್​​ಲೈನ್ ಇದೆ. ಇಂದು ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋನಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಈ ಕಾರ್ಯಕ್ರಮಕ್ಕೆ ಖ್ಯಾತ ಸಾಹಿತಿ ಶಿವಶಂಕರ್ ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಶುಭ ಹಾರೈಸಿದರು. ನಂತರ ಮಾತನಾಡಿದ ಅವರು, ಪಕ್ಕದ ರಾಜ್ಯದಿಂದ ಬೆಂಗಳೂರಿಗೆ ಬಂದು ಸಿನಿಮಾ ಮಾಡುತ್ತಿರುವ ರವಿ ಮುಲಕಪಲ್ಲಿ ಅವರಿಗೆ ಶುಭ ಕೋರಿದರು.

'ಹುಡುಕಾಟ' ಚಿತ್ರವನ್ನು ಆಂಧ್ರಪ್ರದೇಶದ ರವಿ ಮುಲಕಪಲ್ಲಿ ಎಂಬುವರು ಕಥೆ, ಚಿತ್ರಕಥೆ ಬರೆದು ನಿರ್ಮಾಣದೊಂದಿಗೆ ನಿರ್ದೇಶನ ಕೂಡಾ ಮಾಡುತ್ತಿದ್ದಾರೆ. ಜತೆಗೆ ಚಿತ್ರದ ಹಾಡುಗಳಿಗೆ ಸಂಗೀತ ಕೂಡಾ ನೀಡಿದ್ದಾರೆ. ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಥೆ ಹೇಳಲು ಹೊರಟಿರುವ ರವಿ, ಈ ಚಿತ್ರಕ್ಕಾಗಿ ಆಂಧ್ರದ ಅಭಿಷೇಕ್ ಎನ್ನಲುರಿ ಹಾಗೂ ಕನ್ನಡದ ಪ್ರಜ್ವಲ್ ಕುಮಾರ್ ಎಂಬ ಇಬ್ಬರು ನಟರನ್ನು ಪ್ರಮುಖ ಪಾತ್ರದಲ್ಲಿ ನಟಿಸಲು ಕರೆ ತಂದಿದ್ದಾರೆ.

ಚಿತ್ರದಲ್ಲಿ ಇಬ್ಬರು ನಾಯಕಿಯರು ಕೂಡಾ ಇದ್ದು ತೆಲುಗು ಹುಡುಗಿ ಮಧುಪ್ರಿಯ ಹಾಗೂ ಪೂಜಿತ ನಟಿಸುತ್ತಿದ್ದಾರೆ. ಮುಂದಿನ ವಾರದಿಂದ ಕರ್ನಾಟಕ ಹಾಗೂ ಆಂಧ್ರದಲ್ಲಿ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

Intro: ಪಶುವೈದ್ಯ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ-ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ಲದೆ ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡುವ ಮೂಲಕ ಪಾಪಿಗಳನ್ನು ಪರಲೋಕಕ್ಕೆ ಕಳಿಸಿದ್ದು ಆಗಿದೆ.ಅದ್ರೆ ಈಗ ಆಂಧ್ರದ ಟೀಮ್ ಪ್ರಿಯಾಂಕಾ ರೆಡ್ಡಿ ಪ್ರಕರಣವನ್ನು ಬೇಸ್ ಆಗಿ ಇಟ್ಟುಕೊಂಡು, ಕನ್ನಡದಲ್ಲಿ "ಹುಡುಕಾಟ" ಎಂಬ ಟೈಟಲ್ ಇಟ್ಟು ಪ್ರತಿನಿಮಿಷ ಹೋರಾಟ ಎಂಬ ಅಡಿಬರಹ ದೊಂದಿಗೆ ಹೊಸ ಚಿತ್ರ ಮಾಡಲು ರೆಡಿಯಾಗಿದ್ದು,ಇಂದು "ಹುಡುಕಾಟ" ಚಿತ್ರ ಸರಳವಾಗಿ ಸೆಟ್ಟೇರಿದೆ. ಮಲ್ಲೇಶ್ವರಂನ ರೇಣುಕಾಂಬ ಸ್ಟುಡಿಯೋಸ್ ನಲ್ಲಿ ನಡೆದ ಚಿತ್ರದ ಮುಹೂರ್ತ ಸಮಾರಂಭಕ್ಕೆ ಸಿರಿವಂತನಾದರೂ ಕನ್ನಡ ನಾಡಲ್ಲೆ ಮೆರೆವೆ ಭಿಕ್ಷುಕನಾದರೂ ಕನ್ನಡ ನಾಡಲ್ಲೆ ಮಡಿವೆ ಎಂಬ ಸೂಪರ್ ಹಿಟ್ ಹಾಡನ್ನು ಬರೆದಿರುವ ಸಾಹಿತಿ ಶಿವಶಂಕರ್ ಅವರು ಆಗಮಿಸಿ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಲ್ಲದೆ ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ನಾವುಗಳೇ ಒಂದು ಚಿತ್ರ ನಿರ್ಮಾಣ ಮಾಡಿ ಅದನ್ನು ಬಿಡುಗಡೆ ಮಾಡಬೇಕು ಎಂದರೆ ತುಂಬಾ ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ, ಇಂತಹ ದಿನಗಳಲ್ಲಿ ಪಕ್ಕದ ರಾಜ್ಯದಿಂದ ಇಲ್ಲಿ ಬಂದು ಚಿತ್ರ ಮಾಡುತ್ತಿರುವ ಈ ತಂಡಕ್ಕೆ ಚಿತ್ರರಂಗದ ಬೆಂಬಲದ ಅಗತ್ತವಿದೆ ಎಂದು ಹೇಳಿದ್ರು.


Body:ಇನ್ನು ಹುಡುಕಾಟ ಚಿತ್ರವನ್ನು ಆಂಧ್ರಪ್ರದೇಶದ ನಿರ್ದೇಶಕ ರವಿ ಮುಲಕಪಲ್ಲಿ ಕಥೆ, ಚಿತ್ರಕಥೆ ,ಸಂಗೀತ ನಿರ್ಮಾಣ ಹಾಗೂ ನಿರ್ದೇಶನವನ್ನು ಮಾಡ್ತಿದ್ದಾರೆ. ಸದ್ಯ ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕಥೆಯನ್ನು ಹೇಳಲು ಹೊರಟಿರುವ ರವಿ ಈ ಚಿತ್ರಕ್ಕಾಗಿ ಆಂಧ್ರದ ಅಭಿಷೇಕ್ ಎನ್ನಲು ರಿ ಹಾಗೂ ಕನ್ನಡದ ಪ್ರಜ್ವಲ್ ಕುಮಾರ್ ಎಂಬ ಇಬ್ಬರು ನಟರನ್ನು ಲೀಡ್ ರೋಲ್ ನಲ್ಲಿ ತೋರಿಸಲು ರೆಡಿಯಾಗಿದ್ದಾರೆ .ಅಲ್ಲದೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ತೆಲುಗು ಪಿಲ್ಲಾ ಮಧುಪ್ರಿಯ ಹಾಗೂ ಪೂಜಿತ ಫೀಮೇಲ್ ಲೀಡ್ ರೋಲ್ ಪ್ಲೇ ಮಾಡುತ್ತಿದ್ದಾರೆ.


Conclusion:ಇನ್ನು ಈ ಚಿತ್ರದ ಶೂಟಿಂಗ್ ಮುಂದಿನವಾರದಿಂದ ಶುರು ಮಾಡಲು ಚಿತ್ರ ತಂಡ ಸಜ್ಜಾಗಿದ್ದು, ಕರ್ನಾಟಕ ಹಾಗೂ ಆಂದ್ರ ದಲ್ಲಿ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.

ಸತೀಶ ಎಂಬಿ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.