ETV Bharat / sitara

ಹಾರ್ಮೋನಿಯಂ ಹಿಡಿವ ಕೈಯ್ಯಲ್ಲಿ ಗುದ್ದಲಿ ಹಿಡಿದು ರಸ್ತೆಗೆ ಇಳಿದ ನಾದಬ್ರಹ್ಮ...! - ಗುದ್ದಲಿ ಹಿಡಿದು ರಸ್ತೆ ರಿಪೇರಿ ಮಾಡಿದ ಹಂಸಲೇಖ

ಸಂಗೀತ ನಿರ್ದೇಶಕ ಹಂಸಲೇಖ ಹಾರ್ಮೋನಿಯಂ ಹಿಡಿಯುವ ಕೈಯ್ಯಲ್ಲಿ ಇಂದು ಗುದ್ದಲಿ ಹಿಡಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಮನೆ ಮುಂದೆ ಬಿಬಿಎಂಪಿ ತೆಗೆದಿದ್ದ ಹಳ್ಳವನ್ನು ಜೆಲ್ಲಿ ಕಲ್ಲು, ಸಿಮೆಂಟ್ ಹಾಕಿ ತಾವೇ ಮುಚ್ಚಿದ್ದಾರೆ.

Hamsalekha
ನಾದಬ್ರಹ್ಮ
author img

By

Published : Apr 21, 2020, 10:24 PM IST

Updated : Apr 21, 2020, 10:44 PM IST

ಲಾಕ್​ಡೌನ್​ ವೇಳೆ ಸಿನಿಮಾ ಸೆಲಬ್ರಿಟಿಗಳು ಮನೆ ಕೆಲಸದವರಿಗೆ ರಜೆ ನೀಡಿ ತಮ್ಮ ಕೆಲವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಸಾಕಷ್ಟು ನಟ ನಟಿಯರು ಮನೆ ಕೆಲಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೀಗ ನಾದಬ್ರಹ್ಮ ಎಂದೇ ಹೆಸರಾಗಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರ ಸರದಿ.

ಹಾರ್ಮೋನಿಯಂ ಹಿಡಿವ ಕೈಯ್ಯಲಿ ಗುದ್ದಲಿ ಹಿಡಿದು ರಸ್ತೆ ರಿಪೇರಿ ಮಾಡುತ್ತಿರುವ ಹಂಸಲೇಖ

ಹಂಸಲೇಖ, ಹೆಸರು ಕೇಳಿದೊಡನೆ ಅವರು ಸಂಗೀತ ನಿರ್ದೇಶಿಸಿರುವ ಹಾಡುಗಳು ನೆನಪಾಗುತ್ತದೆ. ಹಾರ್ಮೋನಿಯಂ ಹಿಡಿದು ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡುವ ಹಂಸಲೇಖ ಇಂದು ಹಾರ್ಮೋನಿಯಂ ಕೈಯ್ಯಲ್ಲಿ ಗುದ್ದಲಿ ಹಿಡಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಹಾಲಕ್ಷ್ಮಿ ಲೇ ಔಟ್​​​​​ನಲ್ಲಿರುವ ಹಂಸಲೇಖ ನಿವಾಸದ ಮುಂದಿನ ರಸ್ತೆಯಲ್ಲಿ ಪಾರ್ಕಿಗೆ ಪೈಕ್ ಎಳೆಯಲು ಹಳ್ಳ ತೆಗೆಯಲಾಗಿತ್ತು. ಆದರೆ ಬಹಳ ದಿನಗಳಿಂದ ಆ ಹಳ್ಳವನ್ನು ಮುಚ್ಚಿರಲಿಲ್ಲ. ಲಾಕ್​ಡೌನ್​ ಆಗಿದ್ದರಿಂದ ಬಿಬಿಎಂಪಿ ರಸ್ತೆ ರಿಪೇರಿ ಮಾಡುವತ್ತ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಹಂಸಲೇಖ ತಾವೇ ಗುದ್ದಲಿ ಹಿಡಿದು ರಸ್ತೆಗೆ ಇಳಿದಿದ್ದಾರೆ

Hamsalekha
ಗುದ್ದಲಿ, ಬಾಣಲಿ ಹಿಡಿದು ರಸ್ತೆ ರಿಪೇರಿ

ತಲೆಗೆ ಟವೆಲ್ ಸುತ್ತಿ, ಗುದ್ದಲಿ ಹಿಡಿದು ಹಳ್ಳಕ್ಕೆ ಜೆಲ್ಲಿ ಕಲ್ಲು ಸುರಿದು, ಸಿಮೆಂಟ್ ಹಾಕಿ ಕೊನೆಗೆ ನೀರಿನಿಂದ ಕ್ಯೂರಿಂಗ್ ಮಾಡಿದ್ದಾರೆ. ಬಿಬಿಎಂಪಿ ಮಾಡಬೇಕಾದ ಕೆಲಸವನ್ನು ನಾದಬ್ರಹ್ಮ ತಾವೇ ಮಾಡಿ ಮುಗಿಸಿದ್ದಾರೆ. ಈ ಮೂಲಕ ಆ ರಸ್ತೆಯನ್ನು ವಾಹನಗಳು ಸರಾಗವಾಗಿ ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದೇ ಹೇಳಬಹುದು. ಹಂಸಲೇಖ ಈ ಕೆಲಸ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇವರೇನಾ ಹಂಸಲೇಖ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

Hamsalekha
ಸಂಗೀತ ನಿರ್ದೇಶಕ ಹಂಸಲೇಖ

ಲಾಕ್​ಡೌನ್​ ವೇಳೆ ಸಿನಿಮಾ ಸೆಲಬ್ರಿಟಿಗಳು ಮನೆ ಕೆಲಸದವರಿಗೆ ರಜೆ ನೀಡಿ ತಮ್ಮ ಕೆಲವನ್ನು ತಾವೇ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಸಾಕಷ್ಟು ನಟ ನಟಿಯರು ಮನೆ ಕೆಲಸ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೀಗ ನಾದಬ್ರಹ್ಮ ಎಂದೇ ಹೆಸರಾಗಿರುವ ಸಂಗೀತ ನಿರ್ದೇಶಕ ಹಂಸಲೇಖ ಅವರ ಸರದಿ.

ಹಾರ್ಮೋನಿಯಂ ಹಿಡಿವ ಕೈಯ್ಯಲಿ ಗುದ್ದಲಿ ಹಿಡಿದು ರಸ್ತೆ ರಿಪೇರಿ ಮಾಡುತ್ತಿರುವ ಹಂಸಲೇಖ

ಹಂಸಲೇಖ, ಹೆಸರು ಕೇಳಿದೊಡನೆ ಅವರು ಸಂಗೀತ ನಿರ್ದೇಶಿಸಿರುವ ಹಾಡುಗಳು ನೆನಪಾಗುತ್ತದೆ. ಹಾರ್ಮೋನಿಯಂ ಹಿಡಿದು ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡುವ ಹಂಸಲೇಖ ಇಂದು ಹಾರ್ಮೋನಿಯಂ ಕೈಯ್ಯಲ್ಲಿ ಗುದ್ದಲಿ ಹಿಡಿಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಹಾಲಕ್ಷ್ಮಿ ಲೇ ಔಟ್​​​​​ನಲ್ಲಿರುವ ಹಂಸಲೇಖ ನಿವಾಸದ ಮುಂದಿನ ರಸ್ತೆಯಲ್ಲಿ ಪಾರ್ಕಿಗೆ ಪೈಕ್ ಎಳೆಯಲು ಹಳ್ಳ ತೆಗೆಯಲಾಗಿತ್ತು. ಆದರೆ ಬಹಳ ದಿನಗಳಿಂದ ಆ ಹಳ್ಳವನ್ನು ಮುಚ್ಚಿರಲಿಲ್ಲ. ಲಾಕ್​ಡೌನ್​ ಆಗಿದ್ದರಿಂದ ಬಿಬಿಎಂಪಿ ರಸ್ತೆ ರಿಪೇರಿ ಮಾಡುವತ್ತ ತಲೆ ಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಹಂಸಲೇಖ ತಾವೇ ಗುದ್ದಲಿ ಹಿಡಿದು ರಸ್ತೆಗೆ ಇಳಿದಿದ್ದಾರೆ

Hamsalekha
ಗುದ್ದಲಿ, ಬಾಣಲಿ ಹಿಡಿದು ರಸ್ತೆ ರಿಪೇರಿ

ತಲೆಗೆ ಟವೆಲ್ ಸುತ್ತಿ, ಗುದ್ದಲಿ ಹಿಡಿದು ಹಳ್ಳಕ್ಕೆ ಜೆಲ್ಲಿ ಕಲ್ಲು ಸುರಿದು, ಸಿಮೆಂಟ್ ಹಾಕಿ ಕೊನೆಗೆ ನೀರಿನಿಂದ ಕ್ಯೂರಿಂಗ್ ಮಾಡಿದ್ದಾರೆ. ಬಿಬಿಎಂಪಿ ಮಾಡಬೇಕಾದ ಕೆಲಸವನ್ನು ನಾದಬ್ರಹ್ಮ ತಾವೇ ಮಾಡಿ ಮುಗಿಸಿದ್ದಾರೆ. ಈ ಮೂಲಕ ಆ ರಸ್ತೆಯನ್ನು ವಾಹನಗಳು ಸರಾಗವಾಗಿ ಓಡಾಡಲು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದೇ ಹೇಳಬಹುದು. ಹಂಸಲೇಖ ಈ ಕೆಲಸ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಇವರೇನಾ ಹಂಸಲೇಖ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ.

Hamsalekha
ಸಂಗೀತ ನಿರ್ದೇಶಕ ಹಂಸಲೇಖ
Last Updated : Apr 21, 2020, 10:44 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.