ETV Bharat / sitara

ವಿಷ್ಣು ಸರ್ಕಲ್​ ಪ್ರೆಸ್​ ಮೀಟ್​: ಗುರುರಾಜ್​ ಅನುಪಸ್ಥಿತಿಗೆ ಫೋನ್​ ಮೂಲಕ ಕಾರಣ ತಿಳಿಸಿದ್ರು ಜಗ್ಗೇಶ್​

author img

By

Published : Sep 3, 2019, 7:06 PM IST

ಪೈಪೋಟಿ ಸಿನಿಮಾ ಮೂಲಕ, ಚಿತ್ರರಂಗದಿಂದ ದೂರ ಉಳಿದಿದ್ದ ಗುರುರಾಜ್ ಜಗ್ಗೇಶ್ ಇದೀಗ ವಿಷ್ಣುವರ್ಧನ್ ಅಭಿಮಾನಿಯಾಗಿ, ಎರಡು ವರ್ಷಗಳ ಬಳಿಕ ಸ್ಯಾಂಡಲ್​ವುಡ್ ಕಮ್ ಬ್ಯಾಕ್ ಮಾಡ್ತಾ ಇದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರೋ 'ವಿಷ್ಣು ಸರ್ಕಲ್' ಚಿತ್ರ ಇದೇ ವಾರ ರಿಲೀಸ್ ಆಗೋದಕ್ಕೆ ಸಜ್ಜಾಗಿದೆ. ಆದರೆ ಗುರು ರಾಜ್ ಜಗ್ಗೇಶ್ ಗೆ ಜ್ವರ ಬಂದಿರುವ ಕಾರಣ ಅವರು ಪತ್ರಿಕಾಗೋಷ್ಟಿಗೆ ಬಂದಿರಲಿಲ್ಲ.

ವಿಷ್ಣು ಸರ್ಕಲ್ ಚಿತ್ರ

ಬೆಂಗಳೂರು: ಗುರುರಾಜ್ ಜಗ್ಗೇಶ್ ಇದೀಗ ವಿಷ್ಣುವರ್ಧನ್ ಅಭಿಮಾನಿಯಾಗಿ, ಎರಡು ವರ್ಷಗಳ ಬಳಿಕ ಸ್ಯಾಂಡಲ್​ವುಡ್ ಕಮ್ ಬ್ಯಾಕ್ ಮಾಡ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರೋ 'ವಿಷ್ಣು ಸರ್ಕಲ್' ಚಿತ್ರ ಇದೇ ವಾರ ಬಿಡುಗಡೆಗೆ ಸಜ್ಜಾಗಿದೆ. ಆದ್ರೆ, ಗುರುರಾಜ್ ಜಗ್ಗೇಶ್​ಗೆ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆ ಅವರು ಪ್ರೆಸ್​ ಮೀಟ್ ಗೆ ಬರಲಾಗಿಲ್ಲವೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಜಗ್ಗೇಶ್ ದೂರವಾಣಿ ಮೂಲಕವೇ ಮಾಹಿತಿ ನೀಡಿದ್ರು.

ಗುರುರಾಜ್ ಗೆ ಜ್ವರ; ಮಾಧ್ಯಮದ ಸ್ನೇಹಿತರಿಗೆ ಮನವಿ ಮಾಡಿದ ಜಗ್ಗೇಶ್

ಗುರುರಾಜ್ ಈ ಚಿತ್ರದಲ್ಲಿ ವಿಷ್ಣುವರ್ಧನ್ ಅಭಿಮಾನಿಯಾಗಿ ಏನೆಲ್ಲಾ ಒಳ್ಳೆಯ ಕೆಲಸಗಳನ್ನ ಮಾಡ್ತಾರಂತೆ. ಇನ್ನು ವಿಷ್ಣು ಸರ್ಕಲ್ ತ್ರಿಕೋನ ಪ್ರೇಮಕಥೆ ಆಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಸಂಹಿತಾ ವಿನ್ಯಾ, ಡಾ. ಜ್ಯೋತಿ ಜಾನವಿ, ದಿವ್ಯ ಗೌಡ ಸೇರಿ ಮೂವರು ನಾಯಕಿಯರಿದ್ದಾರೆ. ಇದರ ಜೊತೆಗೆ ಅರುಣಾ ಬಾಲರಾಜ್‌, ದತ್ತಣ್ಣ, ಹೀಗೆ ಹಲವು ಕಲಾವಿದರು ನಟಿಸಿದ್ದಾರೆ.

ಆರ್ ಬಿ ಎಂಬುವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‌ಶ್ರೀವತ್ಸ ಸಂಗೀತಾ ನಿರ್ದೇಶನ ಹಾಗೂ ಪ್ರದೀಪ್‌ ವರ್ಮಾ ಎಸ್‌. ಹಿನ್ನೆಲೆ ಸಂಗೀತವಿದ್ದು, ಪಿ.ಎಲ್‌. ರವಿ ಛಾಯಾಗ್ರಹಣವಿದೆ.

ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಲಕ್ಷ್ಮೀ ದಿನೇಶ್, ನಿರ್ಮಾಪಕ ಆರ್ ಬಿ, ಹಿನ್ನೆಲೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಹಾಗು ಈ ಸಿನಿಮಾ ವಿತರಕರಾದ ವೆಂಕಟ್ ಉಪಸ್ಥಿತರಿದ್ದರು.

ಬೆಂಗಳೂರು: ಗುರುರಾಜ್ ಜಗ್ಗೇಶ್ ಇದೀಗ ವಿಷ್ಣುವರ್ಧನ್ ಅಭಿಮಾನಿಯಾಗಿ, ಎರಡು ವರ್ಷಗಳ ಬಳಿಕ ಸ್ಯಾಂಡಲ್​ವುಡ್ ಕಮ್ ಬ್ಯಾಕ್ ಮಾಡ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರೋ 'ವಿಷ್ಣು ಸರ್ಕಲ್' ಚಿತ್ರ ಇದೇ ವಾರ ಬಿಡುಗಡೆಗೆ ಸಜ್ಜಾಗಿದೆ. ಆದ್ರೆ, ಗುರುರಾಜ್ ಜಗ್ಗೇಶ್​ಗೆ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆ ಅವರು ಪ್ರೆಸ್​ ಮೀಟ್ ಗೆ ಬರಲಾಗಿಲ್ಲವೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಜಗ್ಗೇಶ್ ದೂರವಾಣಿ ಮೂಲಕವೇ ಮಾಹಿತಿ ನೀಡಿದ್ರು.

ಗುರುರಾಜ್ ಗೆ ಜ್ವರ; ಮಾಧ್ಯಮದ ಸ್ನೇಹಿತರಿಗೆ ಮನವಿ ಮಾಡಿದ ಜಗ್ಗೇಶ್

ಗುರುರಾಜ್ ಈ ಚಿತ್ರದಲ್ಲಿ ವಿಷ್ಣುವರ್ಧನ್ ಅಭಿಮಾನಿಯಾಗಿ ಏನೆಲ್ಲಾ ಒಳ್ಳೆಯ ಕೆಲಸಗಳನ್ನ ಮಾಡ್ತಾರಂತೆ. ಇನ್ನು ವಿಷ್ಣು ಸರ್ಕಲ್ ತ್ರಿಕೋನ ಪ್ರೇಮಕಥೆ ಆಧಾರಿತ ಚಿತ್ರವಾಗಿದೆ. ಈ ಚಿತ್ರದಲ್ಲಿ ಸಂಹಿತಾ ವಿನ್ಯಾ, ಡಾ. ಜ್ಯೋತಿ ಜಾನವಿ, ದಿವ್ಯ ಗೌಡ ಸೇರಿ ಮೂವರು ನಾಯಕಿಯರಿದ್ದಾರೆ. ಇದರ ಜೊತೆಗೆ ಅರುಣಾ ಬಾಲರಾಜ್‌, ದತ್ತಣ್ಣ, ಹೀಗೆ ಹಲವು ಕಲಾವಿದರು ನಟಿಸಿದ್ದಾರೆ.

ಆರ್ ಬಿ ಎಂಬುವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‌ಶ್ರೀವತ್ಸ ಸಂಗೀತಾ ನಿರ್ದೇಶನ ಹಾಗೂ ಪ್ರದೀಪ್‌ ವರ್ಮಾ ಎಸ್‌. ಹಿನ್ನೆಲೆ ಸಂಗೀತವಿದ್ದು, ಪಿ.ಎಲ್‌. ರವಿ ಛಾಯಾಗ್ರಹಣವಿದೆ.

ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಲಕ್ಷ್ಮೀ ದಿನೇಶ್, ನಿರ್ಮಾಪಕ ಆರ್ ಬಿ, ಹಿನ್ನೆಲೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಹಾಗು ಈ ಸಿನಿಮಾ ವಿತರಕರಾದ ವೆಂಕಟ್ ಉಪಸ್ಥಿತರಿದ್ದರು.

Intro:ಗುರುರಾಜ್ ಗೆ ಜ್ವರ ಮಾಧ್ಯಮದ ಸ್ನೇಹಿತರಿಗೆ ಮನವಿ ಮಾಡಿದ ಜಗ್ಗೇಶ್!!

ಪೈಪೋಟಿ ಸಿನಿಮಾ ಮೂಲಕ, ಚಿತ್ರರಂಗದಿಂದ ದೂರ ಉಳಿದಿದ್ದ ಗುರುರಾಜ್ ಜಗ್ಗೇಶ್ ಇದೀಗ ವಿಷ್ಣುವರ್ಧನ್ ಅಭಿಮಾನಿಯಾಗಿ, ಎರಡು ವರ್ಷಗಳ ಬಳಿಕೆ ಸ್ಯಾಂಡಲ್ ವುಡ್ ಕಮ್ ಬ್ಯಾಕ್ ಮಾಡ್ತಾ ಇದ್ದಾರೆ..ಆಲ್ ಮೋಸ್ಟ್ ಶೂಟಿಂಗ್ ಮುಗಿಸಿರೋ ವಿಷ್ಣು ಸರ್ಕಲ್ ಚಿತ್ರ ಇದೇ ವಾರ ರಿಲೀಸ್ ಆಗೋದಿಕ್ಕೆ ಸಜ್ಜಾಗಿದೆ..ಆದ್ರೆ ಗುರುರಾಜ್ ಜಗ್ಗೇಶ್ ಅನುಪಸ್ಥಿತಿಯಲ್ಲಿ ವಿಷ್ಣು ಸರ್ಕಲ್ ಚಿತ್ರತಂಡ ತಮ್ಮ ಸಿನಿಮಾ 6ಕ್ಕೆ ತೆರೆ ಕಾಣುತ್ತೆ ಅಂತಾ ಅನೌಸ್ ಮಾಡಿತ್ತು..ನಿರ್ದೇಶಕ ಲಕ್ಷ್ಮೀ ದಿನೇಶ್, ನಾಯಕಿಯಾರದ ಸಂಹಿತಾ ವಿನ್ಯಾ, ಜಾನವಿ ಜ್ಯೋತಿ, ನಿರ್ಮಾಪಕ ಆರ್ ಬಿ, ಹಿನ್ನಲೆ ಸಂಗೀತ ನಿರ್ದೇಶಕ ಪ್ರದೀಪ್ ವರ್ಮಾ ಹಾಗು ಈ ಸಿನಿಮಾ ವಿತರಕರಾದ ವೆಂಕಟ್ ಉಪಸ್ಥಿತಿ ಇದ್ರು.‌ಗುರು ರಾಜ್ ಜಗ್ಗೇಶ್ ಗೆ ಜ್ವರ ಇದ್ದ ಕಾರಣ ಪ್ರೆಸ್ ಮೀಟ್ ಗೆ ಬಂದಿರಲಿಲ್ಲ..ಈ ಬಗ್ಗೆ ಮಾಧ್ಯಮದವರು ಪ್ರಶ್ನೆಸಿದಾ ಜಗ್ಗೇಶ್ ದೂರವಾಣಿ ಮೂಲಕ ಮಗನಿಗೆ, ಜ್ವರ ಇದ್ದ ಕಾರಣ ಅವನು ಸಿನಿಮಾ ಪ್ರೆಸ್ ಮೀಟ್ ಗೆ ಬರೋದಿಕ್ಕೆ ಆಗಿಲ್ಲಾ ಮಗನ ಪರವಾಗಿ ಮನವಿ ಮಾಡಿದ್ರು..Body:.ಗುರುರಾಜ್ ಈ ಚಿತ್ರದಲ್ಲಿ ವಿಷ್ಣುವರ್ಧನ್ ಅಭಿಮಾನಿಯಾಗಿ ಏನಾಲ್ಲ ಒಳ್ಳೆಯ ಕೆಲಸಗಳನ್ನ ಮಾಡ್ತಾರಂತೆ..ಇನ್ನು ವಿಷ್ಣು ಸರ್ಕಲ್ ತ್ರಿಕೋನ ಪ್ರೇಮಕಥೆಯಾಧಾರಿತ ಚಿತ್ರವಾಗಿದೆ. . 
ಈ ಚಿತ್ರದಲ್ಲಿ ಸಂಹಿತಾ ವಿನ್ಯಾ ಡಾ. ಜ್ಯೋತಿ ಜಾನವಿ, ದಿವ್ಯ ಗೌಡ ಸೇರಿ ಮೂರು ಜನ ನಾಯಕಿಯರಿದ್ದಾರೆ..ಇದ್ರ ಜೊತೆಗೆ ಅರುಣಾ ಬಾಲರಾಜ್‌, ದತ್ತಣ್ಣ, ಹೀಗೆ ಹಲವು ಕಲಾವಿದರು ನಟಿಸಿದ್ದಾರೆ.. ಆರ್ ಬಿ ಎಂಬುವರು ಈ ಚಿತ್ರಕ್ಕೆ ಹಣ ಹಾಕಿದ್ದಾರೆ. ‌ಶ್ರೀವತ್ಸ ಸಂಗೀತಾ ನಿರ್ದೇಶನ ಹಾಗೂ ಪ್ರದೀಪ್‌ ವರ್ಮಾ ಎಸ್‌. ಹಿನ್ನ್ನೆಲೆ ಸಂಗೀತವಿದ್ದು, ಪಿ.ಎಲ್‌ ರವಿ ಛಾಯಾಗ್ರಹಣವಿದೆ..ಎರಡು ವರ್ಷಗಳ ನಂತ್ರ ಕಮ್ ಬ್ಯಾಕ್ ಮಾಡಿರೋ ಗುರುರಾಜ್ ಜಗ್ಗೇಶ್ ಗೆ ಈ ಸಿನಿಮಾ ಬ್ರೇಕ್ ನೀಡುತ್ತಾ ಅನ್ನೊದು ಈ ವಾರ ಗೊತ್ತಾಗಲಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.