ETV Bharat / sitara

ಕನ್ನಡ ಚಿತ್ರರಂಗದ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿದೆ :ಚಿನ್ನೇಗೌಡರು - undefined

ಕನ್ನಡ ಸಿನಿಮಾರಂಗದಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡರು ತಿಳಿಸಿದರು.

ಚಿನ್ನೇಗೌಡರು
author img

By

Published : Jun 26, 2019, 2:46 PM IST

ಬೆಂಗಳೂರಿನ ಗಾಂಧಿನಗರದ ಗ್ರೀನ್ ಹೌಸ್​ನಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತಾಡಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ನಡೆದ ಕೆಲಸಗಳ ವಿವರ ನೀಡಿದರು. ಪ್ರಮುಖವಾಗಿ ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಮೀಟೂ ಪ್ರಕರಣ ಪ್ರಸ್ತಾಪಿಸಿದ ಅವರು, ನಾನು ಹಾಗೂ ಅಂಬರೀಶ್ ಅವರು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಶ್ರಮಿಸಿದೆವು. ನಾಲ್ಕು ಗೋಡೆಗಳ ಮಧ್ಯೆ ಈ ಸಮಸ್ಯೆ ಬಗೆಹರಿಯಬೇಕೆಂಬುದು ನಮ್ಮ ಉದ್ದೇಶವಾಗಿತ್ತು.ಆದರೆ, ಅವರು ನ್ಯಾಯಾಲಯದ ಮೊರೆಹೋದರು ಎಂದರು.

ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡುತ್ತಿರುವ ಚಿನ್ನೇ ಗೌಡರು

ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ರಾಜ್ಯ ಸರ್ಕಾರ ಕೈ ಜೋಡಿಸಿದೆ. ಮುಂದೆ ಬರುವ ಹೊಸ ಅಧ್ಯಕ್ಷರು ನಾವು ಕೈಗೊಂಡಿರುವ ಕೆಲಸಗಳನ್ನು ಮುನ್ನಡೆಸಿಕೊಂಡು ಹೋಗ್ತಾರೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಮಸ್ಯೆ, ಜಿಎಸ್​​​ಟಿಯಿಂದ ನಿರ್ಮಾಪಕರಿಗೆ ಉಂಟಾಗುತ್ತಿರುವ ಹೊರೆ, ಬುಕ್ ಮೈ ಶೋನಲ್ಲಿ ಆಗುತ್ತಿರುವ ಅನ್ಯಾಯ, ಹಾಗು ಮಲ್ಟಿಪ್ಲೆಕ್ಸ್​​​ಗಳಲ್ಲಿ ದುಬಾರಿಯ ತಿಂಡಿ, ತಿನಿಸುಗಳ ಅತಿಯಾದ ಬೆಲೆ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಆದ್ರೆ,ಸಮಸ್ಯೆಗೆ ಪರಿಹಾರ ಸಿಗೋದಿಕ್ಕೆ ಕಾಲಾವಕಾಶ ಬೇಕಾಗುತ್ತೆ ಎಂದರು.

ಬಳಿಕ ಮತನಾಡಿದ ಉಪಾಧ್ಯಕ್ಷ ಕರಿ ಸುಬ್ಬು, ಸಿನಿಮಾ ವಿತರಣೆಯಲ್ಲಿ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿರ್ಮಾಪಕರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು. ಮಾಧ್ಯಮಗೋಷ್ಟಿಯಲ್ಲಿ ಗೌರವ ಕಾರ್ಯದರ್ಶಿ ಭಾಮಾ ಹರೀಶ್ ಸೇರಿದಂತೆ ಫಿಲ್ಮ್ ಛೇಂಬರ್​​​ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬೆಂಗಳೂರಿನ ಗಾಂಧಿನಗರದ ಗ್ರೀನ್ ಹೌಸ್​ನಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತಾಡಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ನಡೆದ ಕೆಲಸಗಳ ವಿವರ ನೀಡಿದರು. ಪ್ರಮುಖವಾಗಿ ಶೃತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಮೀಟೂ ಪ್ರಕರಣ ಪ್ರಸ್ತಾಪಿಸಿದ ಅವರು, ನಾನು ಹಾಗೂ ಅಂಬರೀಶ್ ಅವರು ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಶ್ರಮಿಸಿದೆವು. ನಾಲ್ಕು ಗೋಡೆಗಳ ಮಧ್ಯೆ ಈ ಸಮಸ್ಯೆ ಬಗೆಹರಿಯಬೇಕೆಂಬುದು ನಮ್ಮ ಉದ್ದೇಶವಾಗಿತ್ತು.ಆದರೆ, ಅವರು ನ್ಯಾಯಾಲಯದ ಮೊರೆಹೋದರು ಎಂದರು.

ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡುತ್ತಿರುವ ಚಿನ್ನೇ ಗೌಡರು

ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ರಾಜ್ಯ ಸರ್ಕಾರ ಕೈ ಜೋಡಿಸಿದೆ. ಮುಂದೆ ಬರುವ ಹೊಸ ಅಧ್ಯಕ್ಷರು ನಾವು ಕೈಗೊಂಡಿರುವ ಕೆಲಸಗಳನ್ನು ಮುನ್ನಡೆಸಿಕೊಂಡು ಹೋಗ್ತಾರೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಸಮಸ್ಯೆ, ಜಿಎಸ್​​​ಟಿಯಿಂದ ನಿರ್ಮಾಪಕರಿಗೆ ಉಂಟಾಗುತ್ತಿರುವ ಹೊರೆ, ಬುಕ್ ಮೈ ಶೋನಲ್ಲಿ ಆಗುತ್ತಿರುವ ಅನ್ಯಾಯ, ಹಾಗು ಮಲ್ಟಿಪ್ಲೆಕ್ಸ್​​​ಗಳಲ್ಲಿ ದುಬಾರಿಯ ತಿಂಡಿ, ತಿನಿಸುಗಳ ಅತಿಯಾದ ಬೆಲೆ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಆದ್ರೆ,ಸಮಸ್ಯೆಗೆ ಪರಿಹಾರ ಸಿಗೋದಿಕ್ಕೆ ಕಾಲಾವಕಾಶ ಬೇಕಾಗುತ್ತೆ ಎಂದರು.

ಬಳಿಕ ಮತನಾಡಿದ ಉಪಾಧ್ಯಕ್ಷ ಕರಿ ಸುಬ್ಬು, ಸಿನಿಮಾ ವಿತರಣೆಯಲ್ಲಿ ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನಿರ್ಮಾಪಕರು ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು. ಮಾಧ್ಯಮಗೋಷ್ಟಿಯಲ್ಲಿ ಗೌರವ ಕಾರ್ಯದರ್ಶಿ ಭಾಮಾ ಹರೀಶ್ ಸೇರಿದಂತೆ ಫಿಲ್ಮ್ ಛೇಂಬರ್​​​ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

Intro:ಸಮಸ್ಯೆಗಳು ಹಲವಾರು ಪರಿಹಾರ ಮಾತ್ರ ನಿಧಾನ ಆಗುತ್ತೆ ಅಧ್ಯಕ್ಷ ಚಿನ್ನೇಗೌಡ!!

ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ‌ ಚುನಾವಣೆ ಇದೇ 29ಕ್ಕೆ ನಡೆಯಲಿದೆ..ಹೀಗಾಗಿ ಒಂದು ವರ್ಷ ಅಧಿಕಾರವನ್ನು ಪೂರೈಯಿಸಿದ ಫಿಲ್ಮ್ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಉಪಾಧ್ಯಕ್ಷ ಕರಿ ಸುಬ್ಬು , ಗೌರವ ಕಾರ್ಯದರ್ಶಿ ಭಾ ಮಾ ಹರೀಶ್ ಸೇರಿ ಹಲವು ಫಿಲ್ಮ್ ಚೇಂಬರ್ ಪದಾಧಿಕಾರಿಗಳು , ಫಿಲ್ಮ್ ಚೇಂಬರ್ ಒಂದು ವರ್ಷದ ಅವಧಿಯಲ್ಲಿ ಏನೆಲ್ಲಾ ಕೆಲಸಗಳು ಆಗಿವೆ ಅಂತಾ, ಗಾಂಧಿನಗರದ ಗ್ರೀನ್ ಹೌಸ್ ಪತ್ರಿಕಾಗೋಷ್ಠಿ ಕರೆದು ತಿಳಿಸಲಾಯಿತು... ಆದ್ರೆ ಅಧ್ಯಕ್ಷ ಚಿನ್ನೇಗೌಡ ಅವಧಿಯಲ್ಲಿ ಹೆಚ್ಚು ಸುದ್ದಿಯಾದ ವಿಷ್ಯ ಮೀ ಟೂ ಪ್ರಕರಣ, ದಶರಥ ಸಿನಿಮಾ ವಿವಾದಗಳನ್ನ ಬಗೆ ಹರಿಸಿರೋ ಬಗ್ಗೆ ಹೇಳಿದ್ರು..ಹಾಗೇ ಕನ್ನಡ ಚಿತ್ರೋದ್ಯಮ ಬೆಳವಣಿಗಾಗಿ, ರಾಜ್ಯ ಸರ್ಕಾರ ಕೈ ಜೋಡಿಸಿದೆ, ಇನ್ನು ಮುಂದೆ ಬರುವ ಹೊಸ ಅಧ್ಯಕ್ಷರು ನಾವು ಕೈ ಗೊಂಡಿರುವ ಕೆಲಸಗಳನ್ನು ಮುನ್ನೆಡೆಸಿಕೊಂಡು ಹೋಗ್ತಾರೆ ಅಂತಾ ಹೇಳಿದ್ರು..ಇನ್ನು ಕನ್ನಡ ಚಿತ್ರರಂಗದಲ್ಲಿ, ಸಿಂಗಲ್ ಸ್ಕ್ರೀನ್ ಚಿತ್ರಮಂದಿಗಳು ಇಲ್ಲದೆ ಇರುವು, ಜಿ ಎಸ್ ಟಿ, ನಿರ್ಮಾಪಕರಿಗೆ ಹೊರೆ ಆಗುತ್ತಿದೆ ಅಂತಾ ಅಧ್ಯಕ್ಷ ಚಿನ್ನೇಗೌಡ ಹೇಳಿದ್ರು.ಬುಕ್ ಮೈ ಶೋನಲ್ಲಿ ಆಗುತ್ತಿರುವ ಅನ್ಯಾಯ, ಹಾಗು ಮಲ್ಟಿಪ್ಲೆಕ್ಸ್ ನಲ್ಲಿ ತಿಂಡಿ, ತಿನಿಸುಗಳ ಅತಿಯಾದ ಬೆಲೆ ಹೀಗೆ ಹಲವಾರು ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ವಿ ಆದ್ರೆ, ಸಮಸ್ಯೆಗೆ ಪರಿಹಾರ ಸಿಗೋದಿಕ್ಕೆ ಕಾಲಾವಕಾಶ ಬೇಕಾಗುತ್ತೆ ಅಂತಾ ಚಿನ್ನೇಗೌಡ ಅವ್ರ ಅಭಿಪ್ರಾಯ.ಹಾಗೇ ಉಪಾಧ್ಯಕ್ಷ ಕರಿ ಸುಬ್ಬು ಮಾತನಾಡುತ್ತಾ ವಿತರಣೆಯಲ್ಲಿ ನಿರ್ಮಾಪಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಿರ್ಮಾಪಕರು ಧ್ವನಿ ಎತ್ತಬೇಕು ಕರಿಸುಬ್ಬು ಸ್ಪಷ್ಟವಾಗಿ ತಿಳಿಸಿದ್ರು..Body:ಒಟ್ಟಾರೆ ಇನ್ನು ಎರಡು ದಿನದಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕಳೆಗಿಳಿಯುತ್ತಿರುವ ಚಿನ್ನೇಗೌಡ ನಮಗೆ ಒಂದು ವರ್ಷದ ಅವಧಿ ಸಂತೋಷ ತಂದಿದೆ ಅಂತಾ ಹೇಳಿದ್ರು.Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.