ಬೆಂಗಳೂರು: ಹಾಸ್ಯ ನಟ ಸಾಧು ಕೋಕಿಲಾ ಹೆಸರಿನಲ್ಲಿ ನಿರ್ಮಾಪಕ ಶಿವಶಂಕರ್ಗೆ ಹರಿಹರನ್ ಹಾಗೂ ಅವಿ ಎಂಬುವರು ವಂಚನೆ ಮಾಡಿದ್ದಾರೆ. ಸಾಧು ಅವರನ್ನು ಚಿತ್ರೀಕರಣಕ್ಕೆ ಕರೆತರುವುದಾಗಿ ಹೇಳಿ ನಿರ್ಮಾಪಕನಿಂದ ಹಣ ಪೀಕಿದ್ದಾರೆ ಎನ್ನಲಾಗಿದೆ.

ಶಿವಶಂಕರ್, 'ರಾವಣ' ಸಿನಿಮಾ ನಿರ್ಮಿಸುತ್ತಿದ್ದಾರೆ. ಈ ಸಿನಿಮಾಗೆ ಸಾಧು ಅವರ ಒಂದು ದಿನದ ಡೇಟ್ ಕೊಡಿಸುವುದಾಗಿ ಹೇಳಿದ್ದ ಅವಿ, ಕೋಕಿಲಾ ಅವರಿಗೆ ಒಂದು ಲಕ್ಷ ರೂ. ಸಂಭಾವನೆ ನೀಡಬೇಕು ಎಂದಿದ್ದನಂತೆ. ಜತೆಗೆ ಮುಂಗಡವಾಗಿ 35,000 ಪಡೆದುಕೊಂಡಿದ್ದ ಎನ್ನಲಾಗಿದೆ.

ಇದೇ ತಿಂಗಳ 18ರಂದು ಹುಬ್ಬಳ್ಳಿಯಲ್ಲಿ ಎರಡು ಲಕ್ಷ ಖರ್ಚು ಮಾಡಿ ಶೂಟಿಂಗ್ಗೆ ರೆಡಿ ಮಾಡಿಸಿಕೊಳ್ಳಲಾಗಿತ್ತು. ಅದರೆ, ಸಾಧು ಶೂಟಿಂಗ್ಗೆ ಬಂದಿರಲಿಲ್ಲ. ನಂತರ ಅವರಿಗೆ ಕಾಲ್ ಮಾಡಿ ವಿಚಾರಿಸಿದಾಗ ತಾವು ವಿದೇಶದಲ್ಲಿದ್ದು, ನಾನು ಯಾರ ಬಳಿಯು ಶೂಟಿಂಗ್ಗೆ ಬರುವುದಾಗಿ ಹೇಳಿಲ್ಲ ಎಂದಿದ್ದಾರೆ ಸಾಧು ಕೋಕಿಲಾ. ಈ ವೇಳೆ ತಾವು ಮೋಸ ಹೋಗಿರುವುದು ಶಿವಶಂಕರ್ ಅರಿವಿಗೆ ಬಂದಿದೆ. ಈ ಬಗ್ಗೆ ಸದ್ಯ ಅವರು ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದಾರೆ.
