ಶಿವರಾತ್ರಿ ಹಬ್ಬದ ಜಾಗರಣೆಗಾಗಿ ದುನಿಯಾ ವಿಜಯ್ ಮತ್ತು ಸಲಗ ಚಿತ್ರತಂಡ ಹೊನಲು ಬೆಳಕಿನ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿತ್ತು.


ನ್ಯಾಷಿನಲ್ ಕಾಲೇಜು ಗ್ರೌಂಡ್ನಲ್ಲಿ ಸಲಗ ಚಿತ್ರತಂಡ ಹಮ್ಮಿಕೊಂಡಿದ್ದ ಈ ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಸಲಗ ಚಿತ್ರತಂಡ ಹಾಗೂ ಯುಸಿಸಿ ಎಂಬ ಖಾಸಗಿ ಕಂಪನಿಗಳು ಸೇರಿದಂತೆ ಆರು ಕ್ರಿಕೆಟ್ ತಂಡಗಳು ಭಾಗವಹಿಸಿದ್ವು. ದುನಿಯಾ ವಿಜಯ್, ಡಾಲಿ ಧನಂಜಯ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್ ಕ್ರಿಕೆಟ್ ಆಡುವ ಮೂಲಕ ರಾತ್ರಿ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿದ್ರು.
ಹತ್ತು ಓವರ್ಗಳ ಕ್ರಿಕೆಟ್ ಮ್ಯಾಚ್ನಲ್ಲಿ ಖಾಸಗಿ ಕಂಪನಿಯ ತಂಡವೊಂದು ಐದು ತಂಡಗಳನ್ನ ಸೋಲಿಸುವ ಮೂಲಕ ಜಯಭೇರಿ ಬಾರಿಸಿತು. ಟೂರ್ನಿಯಲ್ಲಿ ಗೆದ್ದವರಿಗೆ ಸಲಗ ಟೀಂ ಒಂದು ಲಕ್ಷ ರೂಪಾಯಿ ಬಹುಮಾನ ನೀಡಿದೆ.