ETV Bharat / sitara

'ಸಲಗ' ಸಂಭ್ರಮದ ನಂತರ ಟಾಲಿವುಡ್​ಗೆ ವಿಲನ್‌ ಆಗಿ ನುಗ್ಗಿದ 'ಕರಿಚಿರತೆ' - ನಂದಮೂರಿ ಬಾಲಕೃಷ್ಣ ಲೇಟೆಸ್ಟ್ ಸಿನಿಮಾ

ಸ್ಯಾಂಡಲ್​ವುಡ್ ನಟ ದುನಿಯಾ ವಿಜಯ್ ತೆಲುಗು ಚಿತ್ರವೊಂದರಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

DUNIYA VIJAY WILL APPEAR AS VILLAIN IN BALAKRISHNA NEW MOVIE
ಸಲಗದ ಸಂಭ್ರಮದ ನಂತರ ಟಾಲಿವುಡ್​ಗೆ ಕರಿಚಿರತೆ ಎಂಟ್ರಿ
author img

By

Published : Nov 9, 2021, 6:51 PM IST

ಸಲಗ ಚಿತ್ರದ ಅಬ್ಬರದ ನಂತರ ದುನಿಯಾ ವಿಜಯ್ ಮುಂದಿನ ಸಿನಿಮಾ ಕುರಿತಾದ ಸುದ್ದಿಯೊಂದು ಕೇಳಿಬಂದಿದೆ. ಟಾಲಿವುಡ್​ ಸೂಪರ್​​ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ದುನಿಯಾ ವಿಜಯ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಮೂಲಕ ದುನಿಯಾ ವಿಜಯ್ ತೆಲುಗಿಗೆ ಪದಾರ್ಪಣೆ ಮಾಡುತ್ತಿದ್ದು, ಬಾಲಕೃಷ್ಣ ಅವರ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ ನಟಿ ಶೃತಿ ಹಾಸನ್ ಅವರನ್ನು ನಾಯಕ ನಟಿಯನ್ನಾಗಿ ಆಯ್ಕೆ ಮಾಡಲಾಗಿದೆ.

DUNIYA VIJAY WILL APPEAR AS VILLAIN IN BALAKRISHNA NEW MOVIE
ನಂದಮೂರಿ ಬಾಲಕೃಷ್ಣ

ಪ್ಯಾನ್ ಇಂಡಿಯಾ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ, ಬೇರೆ ಭಾಷೆಗಳಲ್ಲೂ ಸಿನಿಮಾಗಳನ್ನು ಹಿಟ್ ಮಾಡುವ ಸಲುವಾಗಿ ಈ ರೀತಿಯ ತಂತ್ರಗಳನ್ನು ಅಳವಡಿಸಲಾಗುತ್ತಿದೆ. ಈಗ ದುನಿಯಾ ವಿಜಯ್ ಅವರನ್ನೂ ಕೂಡಾ ತೆಲುಗಿಗೆ ಆಹ್ವಾನಿಸಲಾಗಿದ್ದು, ಕರಿಚಿರತೆಯ ಅಭಿಮಾನಿಗಳು ಕಾಯುತ್ತಿದ್ದಾರೆ.

DUNIYA VIJAY WILL APPEAR AS VILLAIN IN BALAKRISHNA NEW MOVIE
ಶೃತಿ ಹಾಸನ್

ಇದನ್ನೂ ಓದಿ: ಕ್ಯಾನ್ಸರ್​ ರೋಗಿಗಳಿಗೆ ನೆರವು: ಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್​ರ ಪುತ್ರ

ಸಲಗ ಚಿತ್ರದ ಅಬ್ಬರದ ನಂತರ ದುನಿಯಾ ವಿಜಯ್ ಮುಂದಿನ ಸಿನಿಮಾ ಕುರಿತಾದ ಸುದ್ದಿಯೊಂದು ಕೇಳಿಬಂದಿದೆ. ಟಾಲಿವುಡ್​ ಸೂಪರ್​​ಸ್ಟಾರ್ ನಂದಮೂರಿ ಬಾಲಕೃಷ್ಣ ಅವರ ಸಿನಿಮಾದಲ್ಲಿ ದುನಿಯಾ ವಿಜಯ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಈ ಮೂಲಕ ದುನಿಯಾ ವಿಜಯ್ ತೆಲುಗಿಗೆ ಪದಾರ್ಪಣೆ ಮಾಡುತ್ತಿದ್ದು, ಬಾಲಕೃಷ್ಣ ಅವರ ಸಿನಿಮಾದಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶೀಘ್ರದಲ್ಲೇ ಸಿನಿಮಾದ ಚಿತ್ರೀಕರಣ ಆರಂಭವಾಗಲಿದ್ದು, ಈಗಾಗಲೇ ನಟಿ ಶೃತಿ ಹಾಸನ್ ಅವರನ್ನು ನಾಯಕ ನಟಿಯನ್ನಾಗಿ ಆಯ್ಕೆ ಮಾಡಲಾಗಿದೆ.

DUNIYA VIJAY WILL APPEAR AS VILLAIN IN BALAKRISHNA NEW MOVIE
ನಂದಮೂರಿ ಬಾಲಕೃಷ್ಣ

ಪ್ಯಾನ್ ಇಂಡಿಯಾ ಚಿತ್ರಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಈ ಕಾಲಘಟ್ಟದಲ್ಲಿ, ಬೇರೆ ಭಾಷೆಗಳಲ್ಲೂ ಸಿನಿಮಾಗಳನ್ನು ಹಿಟ್ ಮಾಡುವ ಸಲುವಾಗಿ ಈ ರೀತಿಯ ತಂತ್ರಗಳನ್ನು ಅಳವಡಿಸಲಾಗುತ್ತಿದೆ. ಈಗ ದುನಿಯಾ ವಿಜಯ್ ಅವರನ್ನೂ ಕೂಡಾ ತೆಲುಗಿಗೆ ಆಹ್ವಾನಿಸಲಾಗಿದ್ದು, ಕರಿಚಿರತೆಯ ಅಭಿಮಾನಿಗಳು ಕಾಯುತ್ತಿದ್ದಾರೆ.

DUNIYA VIJAY WILL APPEAR AS VILLAIN IN BALAKRISHNA NEW MOVIE
ಶೃತಿ ಹಾಸನ್

ಇದನ್ನೂ ಓದಿ: ಕ್ಯಾನ್ಸರ್​ ರೋಗಿಗಳಿಗೆ ನೆರವು: ಕೂದಲು ದಾನ ಮಾಡಿದ ಮಾಧುರಿ ದೀಕ್ಷಿತ್​ರ ಪುತ್ರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.