ETV Bharat / sitara

ಪಾರ್ವತಮ್ಮ ರಾಜ್ ಕುಮಾರ್ ಕಂಚಿನ ಪ್ರತಿಮೆ ಅನಾವರಣ

ಬೆಂಗಳೂರು ನಗರದ ಅಂಬರ ಚುಂಬನ ಗಡಿಯಾರ ಗೋಪುರ ಆವರಣದಲ್ಲಿರುವ ಪಾರ್ವತಮ್ಮ ರಾಜ್ ಕುಮಾರ್ ಕಂಚಿನ ಪ್ರತಿಮೆ ಇಂದು ಅನಾವರಣಗೊಂಡಿತು.

author img

By

Published : May 31, 2019, 5:34 PM IST

ಕಂಚಿನ ಪ್ರತಿಮೆ

ಉಪ ಮುಖ್ಯಮಂತ್ರಿಗಳು ಡಾ.ಜಿ.ಪರಮೇಶ್ವರ್, ಬಿಬಿಎಂಪಿ ಮೇಯರ್​​ ಗಂಗಾಬಿಕೆ, ನಟ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಐದು ಅಡಿ ಎತ್ತರದ ಪುತ್ಥಳಿ ಅನಾವರಣಗೊಳಿಸಲಾಯಿತು.

parvathamma
ಪಾರ್ವತಮ್ಮ ರಾಜ್ ಕುಮಾರ್ ಕಂಚಿನ ಪ್ರತಿಮೆ

ಬಳಿಕ ಮಾತಾಡಿರುವ ರಾಘವೇಂದ್ರ ರಾಜ್ ಕುಮಾರ್, ರಾಜ್ ಕುಮಾರ್ ನಮ್ಮನ್ನ ಅಗಲಿ 14 ವರ್ಷ ಹಾಗೂ ಪಾರ್ವತಮ್ಮ ಅಗಲಿ ಇಂದಿಗೆ ಎರಡು ವರ್ಷವಾಯಿತು. ಅದರೆ, ಅಭಿಮಾನಿಗಳು ಇಂದಿಗೂ ಕೂಡ ಇವರ ಜನ್ಮದಿನ ಆರಾಧನೆ ಮಾಡುತ್ತಾರೆ. ಅವರ ಪ್ರೀತಿ-ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದರು.

ಪಾರ್ವತಮ್ಮ ರಾಜ್ ಕುಮಾರ್ ಕಂಚಿನ ಪ್ರತಿಮೆ ಅನಾವರಣ

ಈ ವೇಳೆ ಶಾಸಕರಾದ ರವಿಸುಬ್ರಮಣ್ಯ ,ಉಪ ಮೇಯರ್​ ಭದ್ರೇಗೌಡ, ಯಡಿಯೂರು ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯೆ ಪೂರ್ಣಿಮಾ ರಮೇಶ್, ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ಚಲನಚಿತ್ರ ನಿರ್ಮಾಪಕರಾದ ಎಸ್.ಎ.ಚಿನ್ನೆಗೌಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಉಪ ಮುಖ್ಯಮಂತ್ರಿಗಳು ಡಾ.ಜಿ.ಪರಮೇಶ್ವರ್, ಬಿಬಿಎಂಪಿ ಮೇಯರ್​​ ಗಂಗಾಬಿಕೆ, ನಟ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ಐದು ಅಡಿ ಎತ್ತರದ ಪುತ್ಥಳಿ ಅನಾವರಣಗೊಳಿಸಲಾಯಿತು.

parvathamma
ಪಾರ್ವತಮ್ಮ ರಾಜ್ ಕುಮಾರ್ ಕಂಚಿನ ಪ್ರತಿಮೆ

ಬಳಿಕ ಮಾತಾಡಿರುವ ರಾಘವೇಂದ್ರ ರಾಜ್ ಕುಮಾರ್, ರಾಜ್ ಕುಮಾರ್ ನಮ್ಮನ್ನ ಅಗಲಿ 14 ವರ್ಷ ಹಾಗೂ ಪಾರ್ವತಮ್ಮ ಅಗಲಿ ಇಂದಿಗೆ ಎರಡು ವರ್ಷವಾಯಿತು. ಅದರೆ, ಅಭಿಮಾನಿಗಳು ಇಂದಿಗೂ ಕೂಡ ಇವರ ಜನ್ಮದಿನ ಆರಾಧನೆ ಮಾಡುತ್ತಾರೆ. ಅವರ ಪ್ರೀತಿ-ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ ಎಂದರು.

ಪಾರ್ವತಮ್ಮ ರಾಜ್ ಕುಮಾರ್ ಕಂಚಿನ ಪ್ರತಿಮೆ ಅನಾವರಣ

ಈ ವೇಳೆ ಶಾಸಕರಾದ ರವಿಸುಬ್ರಮಣ್ಯ ,ಉಪ ಮೇಯರ್​ ಭದ್ರೇಗೌಡ, ಯಡಿಯೂರು ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯೆ ಪೂರ್ಣಿಮಾ ರಮೇಶ್, ರಾಜ್ ಕುಮಾರ್ ಅವರ ಸಹೋದರಿ ನಾಗಮ್ಮ ಚಲನಚಿತ್ರ ನಿರ್ಮಾಪಕರಾದ ಎಸ್.ಎ.ಚಿನ್ನೆಗೌಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಡಾ||ಪಾರ್ವತಮ್ಮ ರಾಜ್ ಕುಮಾರ್ ಅವರ ಐದು ಅಡಿ ಕಂಚಿನ ಪ್ರತಿಮೆ ಅನಾವರಣ....!!!!


ಇಂದು ಪಾರ್ವತಮ್ಮ ರಾಜ್ ಕುಮಾರ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ‌ ಅಂಗವಾಗಿ ಇಂದು ಬೆಳಗ್ಗೆ ರಾಜ್ ಕುಟುಂಬ ಅಣ್ಣಾವ್ರ ಕುಟುಂಬ ಕಂಠೀರವ ಸ್ಟೂಡಿಯೋ ದಲ್ಲಿರುವ ಪಾರ್ವತಮ್ಮ ಅವರ ಸಮಾದಿಗೆ ಪೂಜೆಸಲ್ಲಿಸಿದ್ದಾರೆ.ಅಲ್ಲದೆ ಇಂದು ಯಡಿಯೂರು ಬಳಿ :ಡಾ||ಪಾರ್ವತಮ್ಮ ರಾಜ್ ಕುಮಾರ್ ಅವರ ಐದು ಅಡಿ ಕಂಚಿನ ಪ್ರತಿಮೆಯನ್ನು ಅಂಬರ ಚುಂಬನ ಗಡಿಯಾರ ಗೋಪುರ ಅವರಣದಲ್ಲಿ ಲೋಕರ್ಪಣೆ ಮಾಡಲಾಗಿದೆ . ಇನ್ನೂ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳು ,ನಗರಾಭಿವೃದ್ದಿ ಸಚಿವರಾದ ಡಾ||ಜಿ.ಪರಮೇಶ್ವರ್ ,ಮಹಾಪೌರರಾದ ಶ್ರೀಮತಿ ಗಂಗಾಬಿಕೆ ,ಡಾ||ರಾಜ್ ಕುಮಾರ್ ರವರ ಪುತ್ರರಾದ ರಾಘವೇಂದ್ರ ರಾಜ್ ಕುಮಾರ್ ,ಶಾಸಕರಾದ ರವಿಸುಬ್ರಮಣ್ಯ ,ಉಪ ಮಹಾಪೌರರಾದ ಭದ್ರೇಗೌಡರು ,ಆಡಳಿತ ಪಕ್ಷದ ನಾಯಕರಾದ ಅಬ್ದುಲ್ ವಾಜಿದ್ ,ಯಡಿಯೂರು ವಾರ್ಡ್ ಬಿ.ಬಿ.ಎಂ.ಪಿ.ಸದಸ್ಯರಾದ ಶ್ರೀಮತಿ ಪೂರ್ಣಿಮಾ ರಮೇಶ್ ,ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್.ರಮೇಶ್ ,ಡಾ||ರಾಜ್ ಕುಮಾರ್ ರವರ ಸಹೋದರಿ ನಾಗಮ್ಮ ಚಲನಚಿತ್ರ ನಿರ್ಮಾಪಕರಾದ ಎಸ್.ಎ.ಚಿನ್ನೆಗೌಡರು ,ಎಸ್.ಎ.ಗೋವಿಂದರಾಜ್ ಮತ್ತು ಶ್ರೀಮತಿ ಲಕ್ಷ್ಮೀ , ಶ್ರೀಮತಿ ಗೀತಾ ಶಿವರಾಜ್ ಕುಮಾರ್ ,ಶ್ರೀಮತಿ ಆಶ್ವಿನಿ ಪುನೀತ್ ರಾಜ್ ಕುಮಾರ್ ,ನಟರಾದ ವಿನಯ ರಾಜ್ ಕುಮಾರ್ ,ಗುರುರಾಜ್ ಮತ್ತು ಡಾ||ರಾಜ್ ಕುಮಾರ್ ಅವರ ಕುಟುಂಬ ವರ್ಗ ಹಾಗೂ ಮಾಜಿ ಮಹಾನಗರ ಪಾಲಿಕೆಸದಸ್ಯರಾದಎ.ಹೆಚ್.ಬಸವರಾಜ್ ,ಮಂಜುನಾಥ್ ,ಬಿ.ಬಿ.ಎಂ.ಪಿ.ನೌಕರರ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ರವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.ದೀಪಾ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಡಾ||ಪಾರ್ವತಮ್ಮ ರಾಜ್ ಕುಮಾರ್ ರವರ ಪುತ್ಥಳಿ ಆನಾವರಣ ಮಾಡಿದರು.
ಉದ್ಘಾಟನೆ ಮಾಡಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ರವರು ಡಾ||ರಾಜ್ ಕುಮಾರ್ ರವರು ನಮ್ಮನ್ನ ಅಗಲಿ 14ವರ್ಷ ,ಪಾರ್ವತಮ್ಮ ರಾಜ್ ಕುಮಾರ್ ಇಂದಿಗೆ ಎರಡು ವರ್ಷವಾಯಿತು ಆಗಲಿಯಾಗಿ ,ಅದರೆ ಅಭಿಮಾನಿಗಳು ಹುಟ್ಟುಹಬ್ಬದ ಅಚರಣೆ ,ಆರಾಧನೆ ಮಾಡುತ್ತಾರೆ .ಅವರ ಪ್ರೀತಿ ,ವಿಶ್ವಾಸಕ್ಕೆ ಚಿರಋಣಿಯಾಗಿದ್ದೇನೆ. ಅವರ ಋಣ ತೀರಿಸಲು ಮುಂದಿನ ದಿನಗಳಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ತದನಂತರ ನಿರ್ಮಾಪಕರಾದ ಚಿನ್ನೆಗೌಡರು ಮಾತನಾಡಿ ಲಕ್ಷ್ಮೀ ವೆಂಕಟೇಶ್ವರ ,ರಾಧ ಕೃಷ್ಣ ,ಸೀತಾ ರಾಮ ಅದರ ರೀತಿಯಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಹೆಸರಿನಲ್ಲಿ ಅಗಾಧವಾದ ಶಕ್ತಿ ಇದೆ.ಡಾ||ರಾಜ್ ಕುಮಾರ್ ಪ್ರತಿಮೆ ಪಕ್ಕದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಪ್ರತಿಮೆ ಇರುವುದು ಒಂದಾಗಿ ಬಾಳಿ ,ಒಟ್ಟಾಗಿ ಇರುವುದು ನೋಡಿ ಸಂತೋಷವಾಯಿತು ಎಂದುಹೇಳಿದರು .ಮಾಜಿ ಆಡಳಿತ ಪಕ್ಷದ ನಾಯಕರಾದ ಎನ್.ಆರ್.ರಮೇಶ್ ರವರು ಮಾತನಾಡಿ ಡಾ||ಪಾರ್ವತಮ್ಮ ರಾಜ್ ಕುಮಾರ್ ರವರ ಸಾಧನೆ ಜಗತ್ತಿನ ಪ್ರಪ್ರಥಮ ಮಹಿಳಾ ಚಲನಚಿತ್ರ ನಿರ್ಮಾಪಕಿ ,ಸರಿ ಸುಮಾರು 80 ಸದಭಿರುಚಿಯ ಚಲನಚಿತ್ರ ನಿರ್ಮಾಣ ಶೇಕಡ 90ರಷ್ಟು ಯಶ್ವಸಿ ಗಳಿಸಿದ ಚಲನಚಿತ್ರಗಳು ಮತ್ತು ಅಂದಿನ ಕಾಲದಲ್ಲಿ ಮಹಿಳೆಯರು ಸಾಧನೆ ಮಾಡಬಹುದು ಎಂದು ಭಾರತೀಯ ಚಲನಚಿತ್ರ ರಂಗಕ್ಕೆ ತೋರಿಸಿ ಕೊಟ್ಟಿದ್ದಾರೆ ಮತ್ತು ಶಕ್ತಿ ಧಾಮ ಆನಾಥ ಆಶ್ರಮ ಕಟ್ಟಿ ,ಆನಾಥರ ಬಾಳಿನಲ್ಲಿ ಬೆಳಕಾಗಿದ್ದಾರೆ .ಡಾ||ಪಾರ್ವತಮ್ಮ ರಾಜ್ ಕುಮಾರ್ ರವರ ಸಾಧನೆ ನಮ್ಮೆಲ್ಲರ ಜೀವನಕ್ಕೆ ಸ್ಪೂರ್ತಿಯಾಗಲಿ ಎಂದು ಹೇಳಿದರು

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.