ETV Bharat / sitara

ಪೊಲೀಸರಿಗೆ ಬಹುಭಾಷಾ ನಟ ಚರಣ್ ರಾಜ್​ರಿಂದ ಆಹಾರ ಕಿಟ್ ವಿತರಣೆ - food kit to police by actor Charan Raj

ಲಾಕ್​ಡೌನ್ನಲ್ಲಿ‌ ಮನುಷ್ಯ ಸಂಕಷ್ಟಕ್ಕೊಳಗಾದಾಗ ಕೆಲವರು ಸಮಾಜದ ಹಿತ ದೃಷ್ಟಿಯಿಂದ ಸಾಕಷ್ಟು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಯಾವ ಅಪೇಕ್ಷೆಯೂ ಇಲ್ಲದೆ ಸೇವೆ ಮಾಡುತ್ತಿರುವ ಪೊಲೀಸ್ ಇಲಾಖೆ ಹಾಗೂ ಸಿಬ್ಬಂದಿಗೆ ಎಲ್ಲರೂ ಗೌರವಿಸಬೇಕು..

ಆಹಾರ ಕಿಟ್ ವಿತರಣೆ
ಆಹಾರ ಕಿಟ್ ವಿತರಣೆ
author img

By

Published : May 26, 2021, 7:51 PM IST

ಕೊರೊನಾ ವಿರುದ್ಧ ದಿನದ 24 ಗಂಟೆಯೂ ಪೌರ ಕಾರ್ಮಿಕರು, ವೈದ್ಯರು ಮತ್ತು ಪೊಲೀಸ್ ಇಲಾಖೆ ಜೊತೆಗೆ, ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಹೋಂ ಗಾರ್ಡ್​ಗಳು ಕೊರೊನಾ ವಾರಿಯರ್ಸ್​ಗಳಾಗಿ ಕೆಲಸ ಮಾಡುತ್ತಿದ್ದಾರೆ.

ಈ ಫ್ರೆಂಟ್‌ಲೈನ್ ವಾರಿಯರ್ಸ್​ಗಳಿಗೆ ಕೆಲ ಸಿನಿಮಾ ತಾರೆಯರು ತಮ್ಮ ಕೈಲಾದ ಸಹಾಯ ಮಾಡ್ತಾ ಇದ್ದಾರೆ. ಇದೀಗ ಬಹುಭಾಷೆ ನಟ ಚರಣ್ ರಾಜ್, ಪೊಲೀಸ್ ಸಿಬ್ಬಂದಿಗೆ ಆಹಾರ ಕಿಟ್​ಗಳನ್ನ ವಿತರಣೆ ಮಾಡಿದ್ದಾರೆ.

ಚಿಕ್ಕ ಜಾಲ, ಯಲಹಂಕ, ವಿದ್ಯಾರಣ್ಯಪುರ ಸೇರಿ ಹಲವು ಪೊಲೀಸ್ ಠಾಣೆಗಳಿಗೆ ಸ್ವತಃ ಚರಣ್ ರಾಜ್ ತೆರಳಿ ಆಹಾರದ ಕಿಟ್ ನೀಡಿದ್ದಾರೆ. ಸಂಚಾರಿ ಪೊಲೀಸ್ ಸೇರಿ ನಗರದ 148 ಠಾಣೆಗಳಿಗೂ ತೆರಳಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಪೊಲೀಸರು ಕೂಡ ಮನುಷ್ಯರೇ ಅವರು ಜನ ಸಾಯೋದನ್ನ ತಪ್ಪಿಸಲು ಕೊರೊನಾ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಜನರೂ ಕೂಡ ರಸ್ತೆಗಿಳಿಯದಂತೆ ಸಹಕರಿಸಿ ಎಂದಿದ್ದಾರೆ.

ಪೊಲೀಸರಿಗೆ ಆಹಾರ ಕಿಟ್ ವಿತರಣೆ ಮಾಡಿದ ನಟ ಚರಣ್ ರಾಜ್

ಲಾಕ್​ಡೌನ್ನಲ್ಲಿ‌ ಮನುಷ್ಯ ಸಂಕಷ್ಟಕ್ಕೊಳಗಾದಾಗ ಕೆಲವರು ಸಮಾಜದ ಹಿತ ದೃಷ್ಟಿಯಿಂದ ಸಾಕಷ್ಟು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.

ಯಾವ ಅಪೇಕ್ಷೆಯೂ ಇಲ್ಲದೆ ಸೇವೆ ಮಾಡುತ್ತಿರುವ ಪೊಲೀಸ್ ಇಲಾಖೆ ಹಾಗೂ ಸಿಬ್ಬಂದಿಗೆ ಎಲ್ಲರೂ ಗೌರವಿಸಬೇಕು ಎಂದು ನಟ ಚರಣ್ ರಾಜ್, ಪೊಲೀಸ್ ಇಲಾಖೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ವಿರುದ್ಧ ದಿನದ 24 ಗಂಟೆಯೂ ಪೌರ ಕಾರ್ಮಿಕರು, ವೈದ್ಯರು ಮತ್ತು ಪೊಲೀಸ್ ಇಲಾಖೆ ಜೊತೆಗೆ, ಸಿವಿಲ್ ಡಿಫೆನ್ಸ್ ಸಿಬ್ಬಂದಿ, ಹೋಂ ಗಾರ್ಡ್​ಗಳು ಕೊರೊನಾ ವಾರಿಯರ್ಸ್​ಗಳಾಗಿ ಕೆಲಸ ಮಾಡುತ್ತಿದ್ದಾರೆ.

ಈ ಫ್ರೆಂಟ್‌ಲೈನ್ ವಾರಿಯರ್ಸ್​ಗಳಿಗೆ ಕೆಲ ಸಿನಿಮಾ ತಾರೆಯರು ತಮ್ಮ ಕೈಲಾದ ಸಹಾಯ ಮಾಡ್ತಾ ಇದ್ದಾರೆ. ಇದೀಗ ಬಹುಭಾಷೆ ನಟ ಚರಣ್ ರಾಜ್, ಪೊಲೀಸ್ ಸಿಬ್ಬಂದಿಗೆ ಆಹಾರ ಕಿಟ್​ಗಳನ್ನ ವಿತರಣೆ ಮಾಡಿದ್ದಾರೆ.

ಚಿಕ್ಕ ಜಾಲ, ಯಲಹಂಕ, ವಿದ್ಯಾರಣ್ಯಪುರ ಸೇರಿ ಹಲವು ಪೊಲೀಸ್ ಠಾಣೆಗಳಿಗೆ ಸ್ವತಃ ಚರಣ್ ರಾಜ್ ತೆರಳಿ ಆಹಾರದ ಕಿಟ್ ನೀಡಿದ್ದಾರೆ. ಸಂಚಾರಿ ಪೊಲೀಸ್ ಸೇರಿ ನಗರದ 148 ಠಾಣೆಗಳಿಗೂ ತೆರಳಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಈ ವೇಳೆ ಮಾತನಾಡಿದ ಅವರು, ಪೊಲೀಸರು ಕೂಡ ಮನುಷ್ಯರೇ ಅವರು ಜನ ಸಾಯೋದನ್ನ ತಪ್ಪಿಸಲು ಕೊರೊನಾ ನಡುವೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಜನರೂ ಕೂಡ ರಸ್ತೆಗಿಳಿಯದಂತೆ ಸಹಕರಿಸಿ ಎಂದಿದ್ದಾರೆ.

ಪೊಲೀಸರಿಗೆ ಆಹಾರ ಕಿಟ್ ವಿತರಣೆ ಮಾಡಿದ ನಟ ಚರಣ್ ರಾಜ್

ಲಾಕ್​ಡೌನ್ನಲ್ಲಿ‌ ಮನುಷ್ಯ ಸಂಕಷ್ಟಕ್ಕೊಳಗಾದಾಗ ಕೆಲವರು ಸಮಾಜದ ಹಿತ ದೃಷ್ಟಿಯಿಂದ ಸಾಕಷ್ಟು ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.

ಯಾವ ಅಪೇಕ್ಷೆಯೂ ಇಲ್ಲದೆ ಸೇವೆ ಮಾಡುತ್ತಿರುವ ಪೊಲೀಸ್ ಇಲಾಖೆ ಹಾಗೂ ಸಿಬ್ಬಂದಿಗೆ ಎಲ್ಲರೂ ಗೌರವಿಸಬೇಕು ಎಂದು ನಟ ಚರಣ್ ರಾಜ್, ಪೊಲೀಸ್ ಇಲಾಖೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.