ETV Bharat / sitara

'ರಂಗನಾಯಕಿ' ಬಿಡುಗಡೆಗೂ ಮುನ್ನವೇ 'ಒಂಬತ್ತನೇ ದಿಕ್ಕು' ಕಡೆ ಹೊರಟ ದಯಾಳ್ ಪದ್ಮನಾಭನ್

author img

By

Published : Sep 11, 2019, 12:49 PM IST

Updated : Sep 11, 2019, 12:57 PM IST

ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ರಂಗನಾಯಕಿ' ಸಿನಿಮಾ ಬಿಡುಗಡೆಗೂ ಮುನ್ನವೇ ದಯಾಳ್ ಪದ್ಮನಾಭನ್ 'ಒಂಬತ್ತನೇ ದಿಕ್ಕು' ಎಂಬ ಹೊಸ ಸಿನಿಮಾ ಆರಂಭಿಸಿದ್ದಾರೆ. ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ದಯಾಳ್ ಪದ್ಮನಾಭನ್

ನಿರ್ದೇಶಕ ದಯಾಳ್ ಪದ್ಮನಾಭನ್ ಬಿಗ್​​​ಬಾಸ್​​​ನಿಂದ ಹೊರಬಂದ ಮೇಲೆ ಸಾಲುಸಾಲು ಸಿನಿಮಾಗಳ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. 'ಹಗ್ಗದ ಕೊನೆ' ಸಿನಿಮಾದಿಂದ ಎರಡನೇ ಇನ್ನಿಂಗ್ಸ್​ ಆರಂಭಿಸಿದ ದಯಾಳ್​, ನಿರ್ಮಾಪಕರು ಸೋಲು ಅನುಭವಿಸದ ಹಾಗೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

Ombatthane Dikku
ಒಂಬತ್ತನೇ ದಿಕ್ಕು

ಸದ್ಯಕ್ಕೆ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ರಂಗನಾಯಕಿ' ಸಿನಿಮಾ ಬಿಡುಗಡೆಯಾಗುವ ಮುನ್ನವೇ ದಯಾಳ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಡಿ ಪಿಕ್ಚರ್ಸ್ ಹಾಗೂ ಕೆ9 ಸ್ಟುಡಿಯೋ ಜೊತೆ ಸೇರಿ 'ಒಂಬತ್ತನೇ ದಿಕ್ಕು' ಎಂಬ ಸಿನಿಮಾ ಆರಂಭಿಸುತ್ತಿದ್ದಾರೆ. ಸೆಪ್ಟಂಬರ್​ 12 ರಂದು ಬೆಳಗ್ಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಎದುರಿನ ಓಣಿ ಆಂಜನೇಯ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಆರಂಭವಾಗಲಿದೆ. 'ಆ ಕರಾಳ ರಾತ್ರಿ' ಹಾಗೂ 'ಪುಟ 109' ಸಿನಿಮಾಗಳ ಮುಹೂರ್ತವನ್ನು ಕೂಡಾ ದಯಾಳ್ ಇದೇ ದೇವಸ್ಥಾನದಲ್ಲಿ ನೆರವೇರಿಸಿದ್ದರು.

Ranganayaki
ರಂಗನಾಯಕಿ

'ಒಂಬತ್ತನೇ ದಿಕ್ಕು' ಸಿನಿಮಾದಲ್ಲಿ ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಮುಹೂರ್ತದ ದಿನದಂದೇ ದಯಾಳ್ ಚಿತ್ರದ ಪೋಸ್ಟರ್​​​ ಕೂಡಾ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು 'ರಂಗನಾಯಕಿ' ಚಿತ್ರದ ಮೊದಲ ವಿಡಿಯೋ ಹಾಡೊಂದನ್ನು ಸೆ. 13 ರಂದು ಬಿಡುಗಡೆ ಮಾಡಲಾಗುತ್ತಿದೆ. ಶ್ರೀ ತ್ಯಾಗರಾಜರ 'ಸೀತಾ ಕಲ್ಯಾಣ ವೈಭೋಗಮೆ' ಕೀರ್ತನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ವಿನಯ್ ಪಾಂಡವಪುರ ಈ ಹಾಡಿನೊಂದಿಗೆ ಕೆಲವೊಂದು ಹೊಸ ಸಾಲುಗಳನ್ನು ಸೇರಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದಲ್ಲಿ ಈ ಹಾಡನ್ನು ಶ್ರೀನಿವಾಸ್ ಹಾಡಿದ್ದಾರೆ.

ನಿರ್ದೇಶಕ ದಯಾಳ್ ಪದ್ಮನಾಭನ್ ಬಿಗ್​​​ಬಾಸ್​​​ನಿಂದ ಹೊರಬಂದ ಮೇಲೆ ಸಾಲುಸಾಲು ಸಿನಿಮಾಗಳ ನಿರ್ದೇಶನದಲ್ಲಿ ಬ್ಯುಸಿ ಇದ್ದಾರೆ. 'ಹಗ್ಗದ ಕೊನೆ' ಸಿನಿಮಾದಿಂದ ಎರಡನೇ ಇನ್ನಿಂಗ್ಸ್​ ಆರಂಭಿಸಿದ ದಯಾಳ್​, ನಿರ್ಮಾಪಕರು ಸೋಲು ಅನುಭವಿಸದ ಹಾಗೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

Ombatthane Dikku
ಒಂಬತ್ತನೇ ದಿಕ್ಕು

ಸದ್ಯಕ್ಕೆ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ರಂಗನಾಯಕಿ' ಸಿನಿಮಾ ಬಿಡುಗಡೆಯಾಗುವ ಮುನ್ನವೇ ದಯಾಳ್ ಮತ್ತೊಂದು ಸಿನಿಮಾ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಡಿ ಪಿಕ್ಚರ್ಸ್ ಹಾಗೂ ಕೆ9 ಸ್ಟುಡಿಯೋ ಜೊತೆ ಸೇರಿ 'ಒಂಬತ್ತನೇ ದಿಕ್ಕು' ಎಂಬ ಸಿನಿಮಾ ಆರಂಭಿಸುತ್ತಿದ್ದಾರೆ. ಸೆಪ್ಟಂಬರ್​ 12 ರಂದು ಬೆಳಗ್ಗೆ ಬೆಂಗಳೂರಿನ ಸೆಂಟ್ರಲ್ ಕಾಲೇಜು ಎದುರಿನ ಓಣಿ ಆಂಜನೇಯ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಆರಂಭವಾಗಲಿದೆ. 'ಆ ಕರಾಳ ರಾತ್ರಿ' ಹಾಗೂ 'ಪುಟ 109' ಸಿನಿಮಾಗಳ ಮುಹೂರ್ತವನ್ನು ಕೂಡಾ ದಯಾಳ್ ಇದೇ ದೇವಸ್ಥಾನದಲ್ಲಿ ನೆರವೇರಿಸಿದ್ದರು.

Ranganayaki
ರಂಗನಾಯಕಿ

'ಒಂಬತ್ತನೇ ದಿಕ್ಕು' ಸಿನಿಮಾದಲ್ಲಿ ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಮುಹೂರ್ತದ ದಿನದಂದೇ ದಯಾಳ್ ಚಿತ್ರದ ಪೋಸ್ಟರ್​​​ ಕೂಡಾ ಬಿಡುಗಡೆ ಮಾಡುತ್ತಿದ್ದಾರೆ. ಇನ್ನು 'ರಂಗನಾಯಕಿ' ಚಿತ್ರದ ಮೊದಲ ವಿಡಿಯೋ ಹಾಡೊಂದನ್ನು ಸೆ. 13 ರಂದು ಬಿಡುಗಡೆ ಮಾಡಲಾಗುತ್ತಿದೆ. ಶ್ರೀ ತ್ಯಾಗರಾಜರ 'ಸೀತಾ ಕಲ್ಯಾಣ ವೈಭೋಗಮೆ' ಕೀರ್ತನೆಯಲ್ಲಿ ಕೆಲವೊಂದು ಬದಲಾವಣೆ ಮಾಡಿದ್ದು, ವಿನಯ್ ಪಾಂಡವಪುರ ಈ ಹಾಡಿನೊಂದಿಗೆ ಕೆಲವೊಂದು ಹೊಸ ಸಾಲುಗಳನ್ನು ಸೇರಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದಲ್ಲಿ ಈ ಹಾಡನ್ನು ಶ್ರೀನಿವಾಸ್ ಹಾಡಿದ್ದಾರೆ.

ರಂಗನಾಯಕಿ ಬಿಡುಗಡೆ ಸಮಯದಲ್ಲಿ 9 ನೆ ದಿಕ್ಕು ಆರಂಭ – ದಯಾಳ್ ಪದ್ಮನಾಭನ್

ದಯಾಳ್ ಪದ್ಮನಾಭನ್ ಬಹಳ ಚಾಣಾಕ್ಷ. ಹಾಗೆ ಶಿಸ್ತು ಸಹ ಮೈಗೂಡಿಸಿಕೊಂಡಿದ್ದಾರೆ. ಅವರ ಎರಡನೇ ಇನ್ನಿಂಗ್ಸ್ (ಹಗ್ಗದ ಕೋನೆ ಸಿನಿಮಾ ಇಂದ) ಅಲ್ಲಂತು ಅವರು ಯಾವುದೇ ನಿರ್ಮಾಪಕರು ಸೋಲು ಅನುಭವಿಸದ ಹಾಗೆ ಕಾರ್ಯ ನಿರ್ವಹಿಸುತ್ತಾ ಇದ್ದಾರೆ.

ಈಗ ಡಿ ಪಿಕ್ಚರ್ಸ್ ಹಾಗೂ ಕೆ 9 ಸ್ಟುಡಿಯೋ ಜೊತೆ ಜಿ ಸಿನಿಮಸ್ ಜೊತೆ ಆಗಿದೆ. ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ‘9 ನೆ ದಿಕ್ಕು 12 ಸೆಪ್ಟೆಂಬರ್ 2019 ರಂದು ಬೆಳಗ್ಗಿ 10.45 ಕ್ಕೆ ಸೆಂಟ್ರಲ್ ಕಾಲೇಜು ಎದುರು ಇರುವ ಓಣಿ ಆಂಜನೇಯ ದೇವಸ್ಥಾನದಲ್ಲಿ ಪ್ರಾರಂಭ ಮಾಡಲಿದ್ದಾರೆ. ಇದೆ ಸ್ಥಳದಲ್ಲಿ ದಯಾಳ್ ಅವರ ಆ ಕರಾಳ ರಾತ್ರಿ ಹಾಗೂ ಪುಟ 109 ಸಿನಿಮಗಳು ಸೆಟ್ಟೇರಿದರು.

ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಲೂಸ್ ಮಾದ ಯೋಗಿ ಹಾಗೂ ಅದಿತಿ ಪ್ರಭೂದೇವ ಮುಖ್ಯ ತಾರಾಗಣದಲ್ಲಿ ಒಂಬತ್ತನೇ ದಿಕ್ಕು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಹೂರ್ತದ ದಿವಸದಂದೆ ದಯಾಳ್ ಚಿತ್ರದ ಪೋಸ್ಟರ್ ಕನ್ನಡ ಹಾಗೂ ಇಂಗ್ಲೀಷ್ ಅಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ದಯಾಳ್ ಪದ್ಮನಾಭನ್ ಅವರ ಕಾರ್ಯ ವೈಖರಿಯನ್ನು ಫಲೋ ಮಾಡಿದರೆ ಅದೆಷ್ಟೋ ನಿರ್ಮಾಪಕರ ಹಣ ಸೇವ್ ಮಾಡಿಬಿಡಬಹುದು ಎನ್ನುತ್ತದೆ ಗಾಂಧಿನಗರದ ಗಲ್ಲಿ ಗಲ್ಲಿಗಳು. ದಯಾಳ್ ಅವರು ಸಂಪೂರ್ಣ ತಯಾರಿ ಮಾಡಿರುವ ರಂಗನಾಯಕಿ ವಾಲ್ಯುಮ್ 1 ವರ್ಜೀನಿಟಿ ಸಿನಿಮಾದ ಒಂದು ವೀಡಿಯೋ ಹಾಡು 13 ಸೆಪ್ಟೆಂಬರ್ 2019 ರಂದು ಬೆಳಗ್ಗೆ 10 ಘಂಟೆಗೆ ಅನಾವರಣಗೊಳಿಸಲಿದ್ದಾರೆ.

ರಂಗ ನಾಯಕಿ ಚಿತ್ರಕ್ಕೆ ಶ್ರೀ ತ್ಯಾಗರಾಜ ಕೀರ್ತನೆ ಸೀತಾ ಕಲ್ಯಾಣ ವೈಭೋಗಮೆ....ಹಾಡಿಗೆ ಕೆಲವು ಸಾಲುಗಳನ್ನು ವಿನಯ್ ಪಾಂಡವಪುರ ಸೇರಿಸಿದ್ದಾರೆ. ಮಣಿಕಾಂತ್ ಖದ್ರಿ ಸಂಗೀತದಲ್ಲಿ ಈ ಹಾಡನ್ನು ಶ್ರೀನಿವಾಸ್ ಹಾಡಿದ್ದಾರೆ. 

Last Updated : Sep 11, 2019, 12:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.