ETV Bharat / sitara

ಮೆಚ್ಚಿನ ನಟನನ್ನು ಭೇಟಿ ಮಾಡಿ ಕೊನೆಯುಸಿರೆಳೆದ ಪುಟ್ಟ ಅಭಿಮಾನಿ...!

author img

By

Published : Jun 25, 2019, 5:58 PM IST

Updated : Jun 25, 2019, 7:04 PM IST

ತನ್ನನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದ ಪುಟ್ಟ ಅಭಿಮಾನಿಯೊಬ್ಬನನ್ನು ಕೆಲವು ದಿನಗಳ ಹಿಂದೆ ನಟ ದರ್ಶನ್ ಭೇಟಿಯಾಗಿದ್ದರು. ಕೀರ್ತಿರಾಜ್ ಎಂಬ ಈ ಅಭಿಮಾನಿ ತನ್ನ ಮೆಚ್ಚಿನ ನಟನನ್ನು ನೋಡಿ ಆಸೆ ತೀರಿಸಿಕೊಂಡ ಬಳಿಕ ಸಾವನ್ನಪ್ಪಿದ್ದಾನೆ.

ದರ್ಶನ್ ಅಭಿಮಾನಿ

ಚಾಲೆಂಜಿಂಗ್ ಸ್ಟಾರ್ ದರ್ಶನ್​​ ಅಂದ್ರೆ ಅವರ ಅಭಿಮಾನಿ‌ ಬಳಗಕ್ಕೆ ಇನ್ನಿಲ್ಲದ ಪ್ರೀತಿ. ಅದೇ ರೀತಿ ಅಭಿಮಾನಿಗಳೆಂದರೆ ಈ ಯಜಮಾನನಿಗೂ ಕೂಡಾ ಅಷ್ಟೇ ಅಕ್ಕರೆ. ತನ್ನನ್ನು ನೋಡಲು ಬಂದವರನ್ನು ದರ್ಶನ್ ಮಾತನಾಡದೇ ವಾಪಸ್ ಕಳಿಸಿರುವ ಉದಾಹರಣೆ ಇಲ್ಲ.

ತನ್ನ ಪುಟ್ಟ ಅಭಿಮಾನಿಯೊಂದಿಗೆ ಮಾತನಾಡುತ್ತಿರುವ ದರ್ಶನ್

ಇತ್ತೀಚೆಗೆ ನಟ ದರ್ಶನ್​ ಪುಟ್ಟ ಅಭಿಮಾನಿಯೊಬ್ಬರನ್ನು ಭೇಟಿ ಆಗಿದ್ದರು. ಈ ಬಾಲಕ ತನ್ನ ಮೆಚ್ಚಿನ ನಟನನ್ನು ನೋಡಿ ತನ್ನ ಆಸೆ ತೀರಿದ ಮೇಲೆ ಕೊನೆಯುಸಿರೆಳೆದಿದ್ದಾನೆ. ಪುಟಾಣಿ ಅಭಿಮಾನಿಯನ್ನು ದರ್ಶನ್ 'ರಾಬರ್ಟ್' ಸೆಟ್​​ನಲ್ಲಿ ಭೇಟಿ ಮಾಡಿದ್ದರು. ಈ ಅಭಿಮಾನಿ ಹೆಸರು ಕೀರ್ತಿರಾಜ್, ದರ್ಶನ್​ರ ಪಕ್ಕಾ ಅಭಿಮಾನಿ. ಕೀರ್ತಿರಾಜ್ ಮೂಲತಃ ಬಳ್ಳಾರಿ ಜಿಲ್ಲೆ ಹರಪನಹಳ್ಳಿಯ ಯಡಹಳ್ಳಿಯವನು. ಈತ 5 ವರ್ಷದವನಾಗಿರುವಾಗಲೇ ಬ್ಯಾಕ್​ಬೋನ್​ನಲ್ಲಿ ನೀರು ತುಂಬಿಕೊಂಡಿತ್ತು. ಪೋಷಕರು ಈತನನ್ನು ಉಳಿಸಿಕೊಳ್ಳಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದ್ದ ಬದ್ದ ಜಮೀನನ್ನೂ ಮಾರಾಟ ಮಾಡಿದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಈತನ ಬದುಕು ಮತ್ತಷ್ಟು ನರಕಮಯವಾಗಿತ್ತು. ಎದ್ದು ಓಡಾಡಲೂ ಆಗದಷ್ಟು ಕಷ್ಟವಾಗಿತ್ತು. ಈತನ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು.

ಈ ಪುಟ್ಟ ಅಭಿಮಾನಿ ಒಂದು ಬಾರಿ ದರ್ಶನ್ ಅವರನ್ನು ನೋಡಬೇಕೆಂದು ಹಂಬಲ ವ್ಯಕ್ತಪಡಿಸಿದ್ದ. ಬಾಲಕನ ಆಸೆಯಂತೆ ಆತನನ್ನು ದರ್ಶನ್ ಭೇಟಿ ಮಾಡಿ ಚಾಕೊಲೇಟ್ ನೀಡಿ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಜೊತೆಗೆ ಪೋಷಕರಿಗೂ ಧೈರ್ಯ ಹೇಳಿದ್ದರು ದರ್ಶನ್. ದುರಂತವೆಂದರೆ ದರ್ಶನ್ ಭೇಟಿ ಮಾಡಿದ 3-4 ದಿನಗಳಲ್ಲೇ ಕೀರ್ತಿರಾಜ್ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಪುಟಾಣಿ ಅಭಿಮಾನಿಯ ಸಾವಿಗೆ ದರ್ಶನ್ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್​​ ಅಂದ್ರೆ ಅವರ ಅಭಿಮಾನಿ‌ ಬಳಗಕ್ಕೆ ಇನ್ನಿಲ್ಲದ ಪ್ರೀತಿ. ಅದೇ ರೀತಿ ಅಭಿಮಾನಿಗಳೆಂದರೆ ಈ ಯಜಮಾನನಿಗೂ ಕೂಡಾ ಅಷ್ಟೇ ಅಕ್ಕರೆ. ತನ್ನನ್ನು ನೋಡಲು ಬಂದವರನ್ನು ದರ್ಶನ್ ಮಾತನಾಡದೇ ವಾಪಸ್ ಕಳಿಸಿರುವ ಉದಾಹರಣೆ ಇಲ್ಲ.

ತನ್ನ ಪುಟ್ಟ ಅಭಿಮಾನಿಯೊಂದಿಗೆ ಮಾತನಾಡುತ್ತಿರುವ ದರ್ಶನ್

ಇತ್ತೀಚೆಗೆ ನಟ ದರ್ಶನ್​ ಪುಟ್ಟ ಅಭಿಮಾನಿಯೊಬ್ಬರನ್ನು ಭೇಟಿ ಆಗಿದ್ದರು. ಈ ಬಾಲಕ ತನ್ನ ಮೆಚ್ಚಿನ ನಟನನ್ನು ನೋಡಿ ತನ್ನ ಆಸೆ ತೀರಿದ ಮೇಲೆ ಕೊನೆಯುಸಿರೆಳೆದಿದ್ದಾನೆ. ಪುಟಾಣಿ ಅಭಿಮಾನಿಯನ್ನು ದರ್ಶನ್ 'ರಾಬರ್ಟ್' ಸೆಟ್​​ನಲ್ಲಿ ಭೇಟಿ ಮಾಡಿದ್ದರು. ಈ ಅಭಿಮಾನಿ ಹೆಸರು ಕೀರ್ತಿರಾಜ್, ದರ್ಶನ್​ರ ಪಕ್ಕಾ ಅಭಿಮಾನಿ. ಕೀರ್ತಿರಾಜ್ ಮೂಲತಃ ಬಳ್ಳಾರಿ ಜಿಲ್ಲೆ ಹರಪನಹಳ್ಳಿಯ ಯಡಹಳ್ಳಿಯವನು. ಈತ 5 ವರ್ಷದವನಾಗಿರುವಾಗಲೇ ಬ್ಯಾಕ್​ಬೋನ್​ನಲ್ಲಿ ನೀರು ತುಂಬಿಕೊಂಡಿತ್ತು. ಪೋಷಕರು ಈತನನ್ನು ಉಳಿಸಿಕೊಳ್ಳಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದ್ದ ಬದ್ದ ಜಮೀನನ್ನೂ ಮಾರಾಟ ಮಾಡಿದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಈತನ ಬದುಕು ಮತ್ತಷ್ಟು ನರಕಮಯವಾಗಿತ್ತು. ಎದ್ದು ಓಡಾಡಲೂ ಆಗದಷ್ಟು ಕಷ್ಟವಾಗಿತ್ತು. ಈತನ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು.

ಈ ಪುಟ್ಟ ಅಭಿಮಾನಿ ಒಂದು ಬಾರಿ ದರ್ಶನ್ ಅವರನ್ನು ನೋಡಬೇಕೆಂದು ಹಂಬಲ ವ್ಯಕ್ತಪಡಿಸಿದ್ದ. ಬಾಲಕನ ಆಸೆಯಂತೆ ಆತನನ್ನು ದರ್ಶನ್ ಭೇಟಿ ಮಾಡಿ ಚಾಕೊಲೇಟ್ ನೀಡಿ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಜೊತೆಗೆ ಪೋಷಕರಿಗೂ ಧೈರ್ಯ ಹೇಳಿದ್ದರು ದರ್ಶನ್. ದುರಂತವೆಂದರೆ ದರ್ಶನ್ ಭೇಟಿ ಮಾಡಿದ 3-4 ದಿನಗಳಲ್ಲೇ ಕೀರ್ತಿರಾಜ್ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾನೆ. ಪುಟಾಣಿ ಅಭಿಮಾನಿಯ ಸಾವಿಗೆ ದರ್ಶನ್ ಕೂಡಾ ಬೇಸರ ವ್ಯಕ್ತಪಡಿಸಿದ್ದಾರೆ.


ಪುಟಾಣಿ ಅಭಿಮಾನಿಯ ಕೊನೆಯ ಆಶೆ ಈಡೇರಿಸಿದ ಡಿ ಬಾಸ್...!!!! ದಚ್ಚು ಭೇಟಿ ಮಾಡಿ ಕೊನೆಯುಸಿರೆಳೆದ ಪುಟ್ಟ ಅಭಿಮಾನಿ.

ಸದ್ಯ ಸ್ಯಾಂಡಲ್ ವುಡ್ ನಲ್ಲಿ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಗಳಲ್ಲಿ
ಚಾಲೆಂಜಿಗ್ ಸ್ಟಾರ್ ಕೂಡ ಒಬ್ಬರು. ಡಿ ಬಾಸ್ ಅಂದ್ರೆ ಅವರ ಅಭಿಮಾನಿ‌ಬಳಗಕ್ಕೆ ಇನ್ನಿಲ್ಲದ ಪ್ರೀತಿ.ಅದೇರೀತಿ ಅಭಿಮಾನಿಗಳೆಂದ್ರೆ ಈ ಯಜಮಾನನಿಗೂ ಅಷ್ಟೆ ಅಕ್ಕರೆ.ಸದಾ ಅಭಿಮಾನಿಗಳ ಒಡನಾಟದಲ್ಲೆ ಇರುವ ದರ್ಶನ್ ದಿನದಲ್ಲಿ ಒಂದೆರೆಡು ಗಂಟೆ ಅವರಿಗಾಗಿಯೇ ಮೀಸಲಿಟ್ಟಿದ್ದಾರೆ.ಇದಲ್ಲದೆ ದಚ್ಚು ವಿಶೇಷ ಅಭಿಮಾನಿಗಳನ್ನು ಅವರ ಮನೆಗೆ ಹೋಗಿ ಭೇಟಿ ಮಾಡಿ ಬಂದಿದ್ದಾರೆ.ಈಗ ಅದೇ ರೀತಿ ದರ್ಶನ್ ಅವರ ಪುಟಾಣಿ ಅಭಿಮಾನಿಯೊಬ್ಬ ದಾಸನನ್ನು ರಾಬರ್ಟ್ ಸೆಟ್ ನಲ್ಲಿ ಭೇಟಿ ಮಾಡಿದ್ದಾರೆ.ಎಸ್ ಪಟ್​ಪಟ ಅಂತಾ ಮಾತಾಡೋ ದಚ್ಚು ಪುಟ್ಟ. ಅಭಿಮಾನಿ ಹೆಸರು ಕೀರ್ತಿರಾಜ್. ಚಾಲೆಂಜಿಂಗ್ ಸ್ಟಾರ್ ದರ್ಶನ್​ರ ಪಕ್ಕಾ ಅಭಿಮಾನಿ. ದರ್ಶನ್ ಅಂದ್ರೆ ಈತನಿಗೆ ಪಂಚಪ್ರಾಣ. ಕೀರ್ತಿರಾಜ್ ಮೂಲತಃ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ಯಡಹಳ್ಳಿಯವನು. ಈತನಿಗೆ 5ನೇ ವರ್ಷದಲ್ಲಿ ಬ್ಯಾಕ್​ಬೋನ್​ನಲ್ಲಿ ನೀರು ತುಂಬಿಕೊಂಡಿತ್ತು. ಪೋಷಕರು ಈತನನ್ನ ಉಳಿಸಿಕೊಳ್ಳಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇದ್ದಬದ್ದ ಜಮೀನನ್ನೂ ಮಾರಾಟ ಮಾಡಿದ್ರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದ್ರೆ, ವೈದ್ಯರ ಎಡವಟ್ಟಿನಿಂದ ಈತನ ಬದುಕು ಮತ್ತಷ್ಟು ನರಕವಾಗಿತ್ತು. ಎದ್ದು ಓಡಾಡೋಕೂ ಆಗದಷ್ಟು ಕಷ್ಟವಾಗಿತ್ತು. ಯಾಕಂದ್ರೆ, ಎರಡು ಕಾಲು ಸ್ವಾಧೀನ ಕಳೆದುಕೊಂಡಿದ್ದವುಹೀಗಿರುವಾಗ, ತಾನು ಸಾಯೋದ್ರೊಳಗೆ ಒಂದು ಬಾರಿ ದರ್ಶನ್ ಅವರನ್ನು ನೋಡ್ಬೇಕೆಂಬ ಹಂಬಲ ವ್ಯಕ್ತಪಡಿಸಿದ್ದ. ಆಗ ಈತನ ಕನಸನ್ನ ಸಾಕಾರಗೊಳಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೀರ್ತಿರಾಜ್​ನನ್ನು ರಾಬರ್ಟ್ ಸೆಟ್ ಗೆ ಕರೆಸಿ ಭೇಟಿ ಮಾಡಿ ಪ್ರೀತಿಯಿಂದಮಾತನಾಡಿಸಿದ್ದಾರೆ.
ಸಾವು ಬದುಕಿನ ನಡುವೆ ಹೋರಾಟ ಮಾಡ್ತಿದ್ದ ಕೀರ್ತಿ್ರರಾಜ್ ಗೆ ದರ್ಶನ್ ಭೇಟಿ ಮಾಡಿದಾಗ ಆತನ ಸಂತಸಕ್ಕೆ ಪಾರವೇ ಇರಲಿಲ್ಲ. ಸಾವಿನ ಸನಿಹದಲ್ಲಿದ್ದರೂ ಅದೆಲ್ಲವನ್ನು ಮರೆಸಿತ್ತು ‘ಯಜಮಾನ’ನ ಭೇಟಿಯ ಅಪೂರ್ವಗಳಿಗೆಯನ್ನು ಖುಷಿಯಿಂದಅನುಭವಿಸಿದ್ದಾನೆ.
ಅಲ್ಲದೆ ಆ ಪುಟ್ಟ ಬಾಲಕನಿಗೆ ಚಾಕೊಲೇಟ್ ಅನ್ನು ಗಿಫ್ಟ್ ಕೊಟ್ಟ ದಚ್ಚು ಅವರ ತಾಯಿ ನೇತ್ರಾ, ಅವರಿಗೆ ಧೈರ್ಯ ತುಂಬಿದ್ದಾರೆ.ಅಲ್ಲದೆ ದರ್ಶನ್ ಅದೇ ವೇಳೆ ಅವರ ತಂದೆಯ ಸಾವಿನ ರಹಸ್ಯವನ್ನು ಸಹ ಹೇಳಿದ್ದಾರೆ.ಜೊತೆಗೆ ಸದ್ಯ ಮಾನವೀಯತೆ ಮರೆತಿರುವ ಈ ಸಮಾಜ ಹಣ ಮಾಡೋದರಲ್ಲೇ ಇರ್ತಾರೆ ಎಂದು ದಚ್ಚು ಹೇಳಿ ಪುಟಾಣಿ ಅಭಿಮಾನಿಯ ಆಸೆಯನ್ನುಪೂರೈಸಿದ್ದಾರೆ. ದುರಂತವೆಂದರೆ ದರ್ಶನ್ ಅವರ ಪುಟ್ಟ ಅಭಿಮಾನಿ ಕೀರ್ತಿರಾಜ್ ದಚ್ಚುನ ಭೇಟಿ ಮಾಡಿ ಬಂದ ಮೇಲೆ ವಿಧಿಯ ಕ್ರೂರತೆಗೆ ತನ್ನ ಪ್ರಾಣವನ್ನು ಬಿಟ್ಟಿದ್ದಾನೆ.ಕೀರ್ತಿರಾಜ್ ತಾಯಿ ಆತನ ಕೊನೆಯಾಸೆ ಈಡೇರಿದ ಕೆಲವೇ ದಿನಗಳಲ್ಲಿ ಕೀರ್ತಿರಾಜ್ ಕೊನೆಯುಸಿರೆಳೆದಿದ್ದಾನೆ. ಆಡಿ-ನಲಿಯಬೇಕಾದ ಪುಟ್ಟ ಬಾಲಕನ ಬದುಕೇ ಕಮರಿಹೋಗಿದೆ. ಪೋಷಕರನ್ನು ಕಣ್ಣೀರ ಕಡಲಲ್ಲಿ ಮುಳುಗಿಸಿ. ಬಾರದ ಲೋಕಕ್ಕೆ ಕೀರ್ತಿರಾಜ್ ಪಯಣ ಬೆಳೆಸಿದ್ದಾನೆ.ಇನ್ನೂ ಪುಟ್ಟ ಅಭಿಮಾನಿಯ ಸಾವು ದರ್ಶನ್ ಅವರಿಗೂ ತುಂಬಾ ಬೇಸರ ತರಿಸಿದೆ..


ಸತೀಶ ಎಂಬಿ

Last Updated : Jun 25, 2019, 7:04 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.