ETV Bharat / sitara

'ಒಡೆಯ'ನ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ಯಜಮಾನ - ಒಡೆಯ ಚಿತ್ರಕ್ಕಾಗಿ ಡಬ್ಬಿಂಗ್ ಮುಗಿಸಿದ ದರ್ಶನ್​

'ಒಡೆಯ' ಚಿತ್ರಕ್ಕಾಗಿ ದರ್ಶನ್ ತಮ್ಮ ಡೈಲಾಗ್ ಡಬ್ಬಿಂಗ್ ಮಾಡಿರುವ ವಿಡಿಯೋವನ್ನು ಸಂದೇಶ್ ಪ್ರೊಡಕ್ಷನ್ಸ್ ತನ್ನ ಯೂಟ್ಯೂಬ್​​​ ಚಾನೆಲ್​​ನಲ್ಲಿ ಶೇರ್ ಮಾಡಿಕೊಂಡಿದೆ.

ದರ್ಶನ್
author img

By

Published : Oct 29, 2019, 10:26 PM IST

'ಕುರುಕ್ಷೇತ್ರ' ಸಿನಿಮಾ ನಂತರ ಚಾಲೆಂಜಿಂಗ್ ಸ್ಟಾರ್​​​ ದರ್ಶನ್, ಔಟ್ ಆ್ಯಂಡ್ ಔಟ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಒಡೆಯ. ಅಣ್ಣ ತಮ್ಮಂದಿರ ಬಾಂಧವ್ಯದ ಜೊತೆಗೆ ಆ್ಯಕ್ಷನ್ ಝಲಕ್‌ ಕೂಡಾ ಹೊಂದಿರುವ 'ಒಡೆಯ' ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ.

  • " class="align-text-top noRightClick twitterSection" data="">

ಇತ್ತೀಚೆಗೆ ಚಿತ್ರತಂಡ ಸ್ವಿಟ್ಜರ್ಲೆಂಡ್​​ನಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿತ್ತು. ಸದ್ಯಕ್ಕೆ ದರ್ಶನ್ 'ಒಡೆಯ' ಚಿತ್ರದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಈ ವಿಡಿಯೋವನ್ನು ಸಂದೇಶ್ ಪ್ರೊಡಕ್ಷನ್ಸ್ ತನ್ನ ಯೂಟ್ಯೂಬ್​​​ ಚಾನೆಲ್​​ನಲ್ಲಿ ಶೇರ್ ಮಾಡಿಕೊಂಡಿದೆ. ಆದರೆ ಈ ವಿಡಿಯೋದಲ್ಲಿ ದರ್ಶನ್ ಹೇಳುತ್ತಿರುವ ಡೈಲಾಗ್ ಕೇಳಿಸುವುದಿಲ್ಲ. ಡೈಲಾಗ್​​ಗಳನ್ನು ಸಸ್ಪೆನ್ಸ್‌​ ಆಗಿ ಇರಿಸುವ ಕಾರಣದಿಂದ ದರ್ಶನ್ ಧ್ವನಿ ತೆಗೆದು ಮ್ಯೂಸಿಕ್ ಸೇರಿಸಲಾಗಿದೆ. ಚಿತ್ರದಲ್ಲಿ ದರ್ಶನ್​​​ಗೆ ಜೋಡಿಯಾಗಿ ಕೊಡಗಿನ ಕುವರಿ ರಾಘವಿ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ತೆಲುಗಿನ 'ವೀರಂ' ಚಿತ್ರದ ರೀಮೇಕ್ ಆಗಿದ್ದು ಚಿತ್ರದಲ್ಲಿ ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾ ಶೈಣೈ ಸೇರಿದಂತೆ ಇನ್ನಿತರರು ನಟಿಸಿದ್ದಾರೆ. ಬುಲ್ ಬುಲ್, ಪೊರ್ಕಿ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಎಂ.ಡಿ. ಶ್ರೀಧರ್, 'ಒಡೆಯ'ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಈ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

'ಕುರುಕ್ಷೇತ್ರ' ಸಿನಿಮಾ ನಂತರ ಚಾಲೆಂಜಿಂಗ್ ಸ್ಟಾರ್​​​ ದರ್ಶನ್, ಔಟ್ ಆ್ಯಂಡ್ ಔಟ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಒಡೆಯ. ಅಣ್ಣ ತಮ್ಮಂದಿರ ಬಾಂಧವ್ಯದ ಜೊತೆಗೆ ಆ್ಯಕ್ಷನ್ ಝಲಕ್‌ ಕೂಡಾ ಹೊಂದಿರುವ 'ಒಡೆಯ' ಚಿತ್ರದ ಟೀಸರ್ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ.

  • " class="align-text-top noRightClick twitterSection" data="">

ಇತ್ತೀಚೆಗೆ ಚಿತ್ರತಂಡ ಸ್ವಿಟ್ಜರ್ಲೆಂಡ್​​ನಲ್ಲಿ ಹಾಡಿನ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗಿತ್ತು. ಸದ್ಯಕ್ಕೆ ದರ್ಶನ್ 'ಒಡೆಯ' ಚಿತ್ರದ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ. ಈ ವಿಡಿಯೋವನ್ನು ಸಂದೇಶ್ ಪ್ರೊಡಕ್ಷನ್ಸ್ ತನ್ನ ಯೂಟ್ಯೂಬ್​​​ ಚಾನೆಲ್​​ನಲ್ಲಿ ಶೇರ್ ಮಾಡಿಕೊಂಡಿದೆ. ಆದರೆ ಈ ವಿಡಿಯೋದಲ್ಲಿ ದರ್ಶನ್ ಹೇಳುತ್ತಿರುವ ಡೈಲಾಗ್ ಕೇಳಿಸುವುದಿಲ್ಲ. ಡೈಲಾಗ್​​ಗಳನ್ನು ಸಸ್ಪೆನ್ಸ್‌​ ಆಗಿ ಇರಿಸುವ ಕಾರಣದಿಂದ ದರ್ಶನ್ ಧ್ವನಿ ತೆಗೆದು ಮ್ಯೂಸಿಕ್ ಸೇರಿಸಲಾಗಿದೆ. ಚಿತ್ರದಲ್ಲಿ ದರ್ಶನ್​​​ಗೆ ಜೋಡಿಯಾಗಿ ಕೊಡಗಿನ ಕುವರಿ ರಾಘವಿ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ.

ಈ ಸಿನಿಮಾ ತೆಲುಗಿನ 'ವೀರಂ' ಚಿತ್ರದ ರೀಮೇಕ್ ಆಗಿದ್ದು ಚಿತ್ರದಲ್ಲಿ ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ, ಚಿತ್ರಾ ಶೈಣೈ ಸೇರಿದಂತೆ ಇನ್ನಿತರರು ನಟಿಸಿದ್ದಾರೆ. ಬುಲ್ ಬುಲ್, ಪೊರ್ಕಿ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಎಂ.ಡಿ. ಶ್ರೀಧರ್, 'ಒಡೆಯ'ನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಈ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.

Intro:ಒಡೆಯನ ಪಾತ್ರಕ್ಕೆ ಡಬ್ಬಿಂಗ್ ಮುಗಿಸಿದ ದರ್ಶನ್!!

ಕುರುಕ್ಷೇತ್ರ ಸಿನಿಮಾ ನಂತ್ರ ದರ್ಶನ್ ಔಟ್ ಅಂಡ್ ಔಟ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರುವ ಚಿತ್ರ ಒಡೆಯ..ಅಣ್ಣ ತಮ್ಮಂದಿರ ಬಾಂಧವ್ಯ ಜೊತೆಗೆ ಫುಲ್ ಪ್ಯಾಕ್ ಆಕ್ಷನ್ ಹೊಂದಿರುವ ಒಡೆಯ ಚಿತ್ರದ ಟೀಸರ್ ರಿಲೀಸ್ ಮಾಡೋ‌ ಪ್ಲಾನ್ ನಲ್ಲಿದೆ..ಆದ್ರೆ ದರ್ಶನ್ ಒಡೆಯ ಪಾತ್ರಕ್ಕೆ ಡಬ್ಬಿಂಗ್ ಮಾಡಿ ಮುಗಿಸಿದ್ದಾರೆ...ಆದ್ರೆ ದರ್ಶನ್ ಮಾಡಿರೋ ಡಬ್ಬಿಂಗಿಗೆ ಮ್ಯೂಸಿಕ್ ಸೇರಿಸಲಾಗಿದೆ..ದರ್ಶನ್ ರಾಣಿಯಾಗಿ ಕೊಡಗಿನ ಕುವರಿ ರಾಘವಿ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ.ಇನ್ನು ಚಿತ್ರ ತೆಲುಗಿನ ವೀರಂ ಚಿತ್ರದ ರಿಮೇಕ್ ಆಗಿದ್ದು ಚಿತ್ರದಲ್ಲಿ ರವಿಶಂಕರ್, ಸಾಧುಕೋಕಿಲಾ, ಚಿಕ್ಕಣ್ಣ, ಚಿತ್ರಾ ಶಣೈ ಸೇರಿದಂತೆ ಬಹುತೇಕರು ನಟಿಸಿದ್ದಾರೆ. Body:ಇನ್ನು ಬುಲ್ ಬುಲ್, ಪೊರ್ಕಿ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ಎಂ.ಡಿ ಶ್ರೀಧರ್ ಒಡೆಯನಿಗೂ ಆ್ಯಕ್ಷನ್ ಕಟ್ ಹೇಳಿದ್ದಾರೆ.. ಆಲ್‌ ಮೋಸ್ಟ್ ಶೂಟಿಂಗ್ ಮುಗಿಸಿರೋ ಒಡೆಯ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗಲಿದೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.