ETV Bharat / sitara

ಬಬ್ರುವಾಹನ ಟೈಟಲ್​ ಪ್ರೇರಿತ ಬಬ್ರೂ ಸಿನಿಮಾ ಡಿಸೆಂಬರ್​ 6 ರಂದು ತೆರೆಗೆ! - Suman Nagarkar

ಹಾಲಿವುಡ್ ಶೈಲಿಯಲ್ಲಿ ನಮ್ಮ ಬಬ್ರೂ ಸಿನಿಮಾ ನಿರ್ಮಾಣವಾಗಿದೆ ಎಂದು ಚಿತ್ರದ ಮೇಕಿಂಗ್​ ಬಗ್ಗೆ ಚಿತ್ರತಂಡ ಮೈಸೂರಿನಲ್ಲಿ ಪ್ರೆಸ್​ ಮೀಟ್​ ನಡೆಸಿ ವಿವರಿಸಿದೆ.

ಬಬ್ರೂ ಸಿನಿಮಾ,ಡಿಸೆಂಬರ್​ 6 ರಂದು ತೆರೆಗೆ!
author img

By

Published : Nov 12, 2019, 5:53 PM IST

ಮೈಸೂರು: ಬೆಳದಿಂಗಳ ಬಾಲೆ ಖ್ಯಾತಿ ಸುಮನ್​ ನಗರ್ಕರ್​​​​ 15 ವರ್ಷಗಳ ನಂತರ ‘ಬಬ್ರೂ’ ಸಿನಿಮಾ ಮೂಲಕ ಮತ್ತೆ ಚಂದನವವನಕ್ಕೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

ಅಮೆರಿಕದಲ್ಲೇ ನೆಲೆಸಿರುವ ಕನ್ನಡಿಗರಿಂದ ತಯಾರಾದ ‘ಬಬ್ರೂ’ಚಿತ್ರ ಡಿಸೆಂಬರ್​ 6ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಈಗಗಲೇ ಹಲವು ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುಮನ್​ ನಗರ್ಕರ್​ ಮತ್ತೆ ಬಣ್ಣ ಹಚ್ಚಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತರಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ಮಾಪಕ ಗುರುದೇವ್ ನಾಗರಾಜ್ ಮಾತನಾಡಿ, ಮೆಕ್ಸಿಕೊದಿಂದ ಕೆನಡಾವರೆಗೂ ನಡೆಯುವ ಜರ್ನಿ, ಈ ಜರ್ನಿಯಲ್ಲಿ ನಡೆಯುವ ಘಟನೆಗಳೆ ಕಥಾ ವಸ್ತುವಾಗಿವೆ ಎಂದು ಸಿನಿಮಾದಲ್ಲಿರುವ ಟ್ವಿಸ್ಟ್​ ಬಗ್ಗೆ ತಿಳಿಸಿದ್ದಾರೆ.

ಬಬ್ರೂ ಸಿನಿಮಾ,ಡಿಸೆಂಬರ್​ 6 ರಂದು ತೆರೆಗೆ!

ಸಿನಿಮಾಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಸುಜಯ್ ರಾಮಯ್ಯ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಇನ್ನು ವಿಜಯಪ್ರಕಾಶ್, ಚಂದನ್ ಶೆಟ್ಟಿ, ಸಂದೀಪ್ ಹೆಗಡೆ ಹಿನ್ನೆಲೆ ಗಾಯನವಿದೆ. ಸ್ಪ್ಯಾನಿಷ್ ಮಿಶ್ರಿತ ಕನ್ನಡ ಬಳಸಲಾಗಿದೆ ಎಂದು ಚಿತ್ರ ತಂಡ ವಿವರಣೆ ನೀಡಿದೆ.

ಮೈಸೂರು: ಬೆಳದಿಂಗಳ ಬಾಲೆ ಖ್ಯಾತಿ ಸುಮನ್​ ನಗರ್ಕರ್​​​​ 15 ವರ್ಷಗಳ ನಂತರ ‘ಬಬ್ರೂ’ ಸಿನಿಮಾ ಮೂಲಕ ಮತ್ತೆ ಚಂದನವವನಕ್ಕೆ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

ಅಮೆರಿಕದಲ್ಲೇ ನೆಲೆಸಿರುವ ಕನ್ನಡಿಗರಿಂದ ತಯಾರಾದ ‘ಬಬ್ರೂ’ಚಿತ್ರ ಡಿಸೆಂಬರ್​ 6ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಈಗಗಲೇ ಹಲವು ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸುಮನ್​ ನಗರ್ಕರ್​ ಮತ್ತೆ ಬಣ್ಣ ಹಚ್ಚಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತರಿಸಿದೆ. ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕಾರಿ ನಿರ್ಮಾಪಕ ಗುರುದೇವ್ ನಾಗರಾಜ್ ಮಾತನಾಡಿ, ಮೆಕ್ಸಿಕೊದಿಂದ ಕೆನಡಾವರೆಗೂ ನಡೆಯುವ ಜರ್ನಿ, ಈ ಜರ್ನಿಯಲ್ಲಿ ನಡೆಯುವ ಘಟನೆಗಳೆ ಕಥಾ ವಸ್ತುವಾಗಿವೆ ಎಂದು ಸಿನಿಮಾದಲ್ಲಿರುವ ಟ್ವಿಸ್ಟ್​ ಬಗ್ಗೆ ತಿಳಿಸಿದ್ದಾರೆ.

ಬಬ್ರೂ ಸಿನಿಮಾ,ಡಿಸೆಂಬರ್​ 6 ರಂದು ತೆರೆಗೆ!

ಸಿನಿಮಾಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಹಾಗೂ ಸುಜಯ್ ರಾಮಯ್ಯ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಇನ್ನು ವಿಜಯಪ್ರಕಾಶ್, ಚಂದನ್ ಶೆಟ್ಟಿ, ಸಂದೀಪ್ ಹೆಗಡೆ ಹಿನ್ನೆಲೆ ಗಾಯನವಿದೆ. ಸ್ಪ್ಯಾನಿಷ್ ಮಿಶ್ರಿತ ಕನ್ನಡ ಬಳಸಲಾಗಿದೆ ಎಂದು ಚಿತ್ರ ತಂಡ ವಿವರಣೆ ನೀಡಿದೆ.

Intro:ಸಿನೆಮಾBody:ಮೈಸೂರು: ಬೆಳದಿಂಗಳ ಬಾಲೆ ಖ್ಯಾತಿ ಸುಮನ್ ನಗರ್ಕರ್ ಅವರು ೧೫ ವರ್ಷಗಳ ನಂತರ ‘ಬಬ್ರೂ’ ಸಿನೆಮಾದ ಮೂಲಕ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
ಅಮೆರಿಕಾದಲ್ಲೇ ನೆಲೆಸಿರುವ ಕನ್ನಡಿಗರಿಂದ ತಯಾರಾದ ‘ಬಬ್ರೂ’ಚಿತ್ರ ಡಿ.೬ರಂದು ರಾಜ್ಯಾದ್ಯಂತ ತೆರೆ ಕಾಣಲಿದ್ದು, ಬೆಳದಿಂಗಳ ಬಾಲೆ,ನಿಷ್ಕರ್ಷ ,ನಮ್ಮೂರ ಮಂದಾರ ಹೂವೇ,ಹೂ ಮಳೆ ಮುಂತಾದ ಚಿತ್ರಗಳಲ್ಲಿ ನಟಿಸಿ ಸಿನಿ ಪ್ರೇಮಿಗಳ ಮನಗೆದಿದ್ದ ಸುಮನ್ ನಗರ್ಕರ್ ಅವರು ಮತ್ತೆ ಬಣ್ಣ ಹಚ್ಚುವ ಮೂಲಕ ತೆರೆ ಮೇಲೆ ಅಭಿಯನ ತೋರಿಸಲಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕ ನಿರ್ಮಾಪಕ ಗುರುದೇವ್ ನಾಗರಾಜ್ ಮಾತನಾಡಿ, ಮೆಕ್ಸಿಕೊದಿಂದ ಕೆನಡಾವರೆಗೂ ನಡೆಯುವ ಜರ್ನಿ, ಈ ಜರ್ನಿಯಲ್ಲಿ ನಡೆಯುವ ಘಟನೆಗಳೇ ಕಥಾ ವಸ್ತುವಾಗಿವೆ ಎಂದು ಕಥೆ ಹುಟ್ಟಿನ ಗುರು ಆವರು ಮೆಲುಕು ಹಾಕಿ. ಹಾಲಿವುಡ್ ಶೈಲಿಯಲ್ಲಿ ನಿರ್ಮಾಣವಾಗಿರುವ ಕನ್ನಡ ಚಿತ್ರ ಇದಾಗಿದೆ ಎಂದರು.
ಯುಗ ಕ್ರಿಯೇಷನ್ ವತಿಯಿಂದ ನಿರ್ಮಿಸಿರುವ ಸಸ್ಪೆನ್ಸ್ ಕಂ ಥ್ರಿಲರ್ ಮೂವಿಯಲ್ಲಿ ಮಾಹಿ ಹಿರೇಮಠ ಪ್ರಮುಖ ಪಾತ್ರದಲ್ಲಿ, ಗಾನಭಟ್, ಜೈ ಜಗದೀಶ್, ಪ್ರಕೃತಿ ಕಶ್ಯಪ್ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದು, ಕನ್ನಡ ಸಿನಿಮಾದಲ್ಲಿ ತೋರಿಸಲಾಗದ ಅಮೇರಿಕಾವನ್ನು ಈ  ಚಿತ್ರದಲ್ಲಿ ತೋರಿಸಲಾಗಿದೆ ಎಂದು ತಿಳಿಸಿದರು.
ಮೈಸೂರಿನವರಾದ ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನ ಹಾಗೂ ಸುಜಯ್ ರಾಮಯ್ಯನವರ ಛಾಯಾಗ್ರಹಣ.ವಿಜಯಪ್ರಕಾಶ್, ಚಂದನ್ ಶೆಟ್ಟಿ. ಸಂದೀಪ್ ಹೆಗಡೆಯವರ ಹಿನ್ನಲೆ ಗಾಯನವಿದೆ. ಸ್ಪಾನಿಷ್ ಮಿಶ್ರಿತ ಕನ್ನಡವನ್ನು ಬಳಸಲಾಗಿದೆ ಎಂದು ಹೇಳಿದರು.
ಹದಿನೈದು ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿರುವ ಸುಮನ್ ನಗರ್ಕರ್ ಲವಲವಿಕೆಯಿಂದಲೇ ತಮ್ಮ ಪಾತ್ರದ ಬಗ್ಗೆ ಅನಿಸಿಕೆ ಹಂಚಿಕೊಂಡರು,
ಬಬ್ರೂ ಚಿತ್ರದ ನಾಯಕ ನಟ ಮಾಹಿ ಹಿರೇಮಠ್, ಗಾನಭಟ್, ಸುಮುಖ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಪತ್ರಿಕಾಗೋಷ್ಠಿಯಲ್ಲಿದ್ದರು.Conclusion:ಸಿನೆಮಾ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.