ETV Bharat / sitara

ರಾಜ್ಯೋತ್ಸವ ಪುರಸ್ಕೃತೆ ಭಾರ್ಗವಿ ನಾರಾಯಣ ಅವರ ಹಿಂದಿದೆ ಕಲಾ ಕುಟುಂಬ - kannada rajyotsava award 2019

ಮಂಥನ ಮತ್ತು ಮುಕ್ತಾ ಮುಕ್ತಾ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಭಾರ್ಗವಿ ನಾರಾಯನ್​ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಭಾರ್ಗವಿ ನಾರಾಯಣ್
author img

By

Published : Nov 2, 2019, 11:40 AM IST

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಸೂಪರ್​ ಹಿಟ್​ ಚಿತ್ರ ರಾಜಕುಮಾರ ಸಿನಿಮಾದಲ್ಲಿ ರಿಮೋಟ್​​ಗಾಗಿ ಕಿತ್ತಾಡುವ ಅಜ್ಜಿ ಪಾತ್ರ ಯಾರು ತಾನೆ ಮರೆಯೋಕೆ ಸಾಧ್ಯ. ಆ ಪಾತ್ರ ನಿರ್ವಹಿಸಿರುವ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ ಅವರು ಕಲಾ ಕ್ಷೇತ್ರದಲ್ಲಿ ಇಟ್ಟ ಹೆಜ್ಜೆ ಬಹು ದೊಡ್ಡದು.

ಮುಕ್ತ ಧಾರಾವಾಹಿಯಲ್ಲಿನ ಅವರ ಪಾತ್ರಕ್ಕೆ ಮನಸೋಲದ ಕನ್ನಡಿಗರಿಲ್ಲ. ಪಲ್ಲವಿ ಅನುಪಲ್ಲವಿ, ಎರಡು ಕನಸು, ಬಾ ನಲ್ಲೆ ಮಧುಚಂದ್ರಕೆ, ಅಂತಿಮ ಘಟ್ಟ, ಜಂಬೂ ಸವಾರಿ, ಕಾಡಬೆಳದಿಂಗಳು ಸಿನಿಮಾಗಳಲ್ಲಿನ ಅವರ ಮಾಗಿದ ನಟನೆ ಪ್ರತಿಭೆಗೆ ಹಿಡಿದ ಕನ್ನಡಿ.

ರಾಜ್ಯ ಸರ್ಕಾರವು ಈ ಕಲಾವಿದೆಯನ್ನು ಗುರುತಿಸಿ ಈ ಸಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, ರಂಗಭೂಮಿಗೆ ಸಂದ ಗೌರವವಾಗಿದೆ.

ಭಾರ್ಗವಿ ನಾರಾಯಣ್

ಕಲಾ ಕುಟುಂಬ: ಭಾರ್ಗವಿ ನಾರಾಯಣ್​ ಅವರ ಹಿಂದೆ ಒಂದು ಕಲಾ ಕುಟುಂಬವೇ ಇದೆ. ಇವರು ಮೇಕಪ್ ನಾನಿ ಎಂದೇ ಪ್ರಸಿದ್ದರಾದ ನಂಜುಡಯ್ಯ ನಾರಾಯಣರವರ ಪತ್ನಿ. ಇವರು ಪುತ್ರ ಪ್ರಕಾಶ್ ಬೆಳವಾಡಿ, ಪುತ್ರಿ ಸುಧಾ ಬೆಳವಾಡಿ ,ಮತ್ತು ಮೊಮ್ಮಗಳು ಸಂಯುಕ್ತಾ ಹೊರನಾಡು ಕೂಡ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

bhargavi narayan got rajyotsva award 2019
ಭಾರ್ಗವಿ ನಾರಾಯಣ್

ನಟಿಯಾಗಿ ಗುರುತಿಸಿಕೊಂಡಿರುವ ಭಾರ್ಗವಿ ನಾರಾಯಣ್ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಎಐಆರ್​​ನ ಮಹಿಳಾ ಕಾರ್ಯಕ್ರಮಗಳಿಗಾಗಿ ಮತ್ತು ಮಹಿಳಾ ಸಂಘದ ಮಕ್ಕಳಿಗಾಗಿ ಕರ್ನಾಟಕ ನಾಟಕಗಳನ್ನು ಬರೆದಿರುವುದರ ಜೊತೆಗೆ ಅವುಗಳನ್ನು ಸ್ವತಃ ಅವರೇ ನಿರ್ದೇಶಿಸಿದ್ದಾರೆ.

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಸೂಪರ್​ ಹಿಟ್​ ಚಿತ್ರ ರಾಜಕುಮಾರ ಸಿನಿಮಾದಲ್ಲಿ ರಿಮೋಟ್​​ಗಾಗಿ ಕಿತ್ತಾಡುವ ಅಜ್ಜಿ ಪಾತ್ರ ಯಾರು ತಾನೆ ಮರೆಯೋಕೆ ಸಾಧ್ಯ. ಆ ಪಾತ್ರ ನಿರ್ವಹಿಸಿರುವ ರಂಗಭೂಮಿ ಕಲಾವಿದೆ ಭಾರ್ಗವಿ ನಾರಾಯಣ ಅವರು ಕಲಾ ಕ್ಷೇತ್ರದಲ್ಲಿ ಇಟ್ಟ ಹೆಜ್ಜೆ ಬಹು ದೊಡ್ಡದು.

ಮುಕ್ತ ಧಾರಾವಾಹಿಯಲ್ಲಿನ ಅವರ ಪಾತ್ರಕ್ಕೆ ಮನಸೋಲದ ಕನ್ನಡಿಗರಿಲ್ಲ. ಪಲ್ಲವಿ ಅನುಪಲ್ಲವಿ, ಎರಡು ಕನಸು, ಬಾ ನಲ್ಲೆ ಮಧುಚಂದ್ರಕೆ, ಅಂತಿಮ ಘಟ್ಟ, ಜಂಬೂ ಸವಾರಿ, ಕಾಡಬೆಳದಿಂಗಳು ಸಿನಿಮಾಗಳಲ್ಲಿನ ಅವರ ಮಾಗಿದ ನಟನೆ ಪ್ರತಿಭೆಗೆ ಹಿಡಿದ ಕನ್ನಡಿ.

ರಾಜ್ಯ ಸರ್ಕಾರವು ಈ ಕಲಾವಿದೆಯನ್ನು ಗುರುತಿಸಿ ಈ ಸಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು, ರಂಗಭೂಮಿಗೆ ಸಂದ ಗೌರವವಾಗಿದೆ.

ಭಾರ್ಗವಿ ನಾರಾಯಣ್

ಕಲಾ ಕುಟುಂಬ: ಭಾರ್ಗವಿ ನಾರಾಯಣ್​ ಅವರ ಹಿಂದೆ ಒಂದು ಕಲಾ ಕುಟುಂಬವೇ ಇದೆ. ಇವರು ಮೇಕಪ್ ನಾನಿ ಎಂದೇ ಪ್ರಸಿದ್ದರಾದ ನಂಜುಡಯ್ಯ ನಾರಾಯಣರವರ ಪತ್ನಿ. ಇವರು ಪುತ್ರ ಪ್ರಕಾಶ್ ಬೆಳವಾಡಿ, ಪುತ್ರಿ ಸುಧಾ ಬೆಳವಾಡಿ ,ಮತ್ತು ಮೊಮ್ಮಗಳು ಸಂಯುಕ್ತಾ ಹೊರನಾಡು ಕೂಡ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ.

bhargavi narayan got rajyotsva award 2019
ಭಾರ್ಗವಿ ನಾರಾಯಣ್

ನಟಿಯಾಗಿ ಗುರುತಿಸಿಕೊಂಡಿರುವ ಭಾರ್ಗವಿ ನಾರಾಯಣ್ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಎಐಆರ್​​ನ ಮಹಿಳಾ ಕಾರ್ಯಕ್ರಮಗಳಿಗಾಗಿ ಮತ್ತು ಮಹಿಳಾ ಸಂಘದ ಮಕ್ಕಳಿಗಾಗಿ ಕರ್ನಾಟಕ ನಾಟಕಗಳನ್ನು ಬರೆದಿರುವುದರ ಜೊತೆಗೆ ಅವುಗಳನ್ನು ಸ್ವತಃ ಅವರೇ ನಿರ್ದೇಶಿಸಿದ್ದಾರೆ.

Intro:Body:ಪ್ರತಿ ವರುಷ ನವೆಂಬರ್ ಒಂದರಂದು ರಾಜ್ಯ ಸರ್ಕಾರವು ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡುತ್ತದೆ. ಇಂದು ರಾಜ್ಯೋತ್ಸವದ ಶುಭದಿನದಂದು ಪ್ರಶಸ್ತಿ ನೀಡಲಾಗುತ್ತಿದ್ದು ಕಿರುತೆರೆಯ ಹಿರಿಯ ನಟಿ ಭಾರ್ಗವಿ ನಾರಾಯಣ್ ಆಯ್ಕೆಯಾಗಿದ್ದಾರೆ.
ರಂಗಭೂಮಿಯ ಹಿರಿಯ ಕಲಾವಿದೆಯಾಗಿರುವ ಭಾರ್ಗವಿ ನಾರಾಯಣ್ ಮಂಥನ ಮತ್ತು ಮುಕ್ತಾ ಮುಕ್ತಾ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದಾರೆ. ಜೊತೆಗೆ ಪಲ್ಲವಿ ಅನುಪಲ್ಲವಿ, ಎರಡು ಕನಸು, ಬಾ ನಲ್ಲೆ ಮಧುಚಂದ್ರಕೆ, ಅಂತಿಮ ಘಟ್ಟ, ಜಂಬೂ ಸವಾರಿ, ಕಾಡಬೆಳದಿಂಗಳು ಸಿನಿಮಾದಲ್ಲಿ ನಟಿಸಿರುವ ಭಾರ್ಗವಿ ನಾರಾಯಣ್ ಕಳೆದ ವರುಷ ತೆರೆಕಂಡ ಇದೊಳ್ಳೆ ರಾಮಾಯಣ ಸಿನಿಮಾದಲ್ಲೂ ಅಭಿನಯಿಸಿದ್ದಾರೆ.

ನಟಿಯಾಗಿ ಗುರುತಿಸಿಕೊಂಡಿರುವ ಭಾರ್ಗವಿ ನಾರಾಯಣ್ ಅವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದಾರೆ. ಮಾತ್ರವಲ್ಲ ಎಐರ್ ನ ಮಹಿಳಾ ಕಾರ್ಯಕ್ರಮಗಳಿಗಾಗಿ ಮತ್ತು ಮಹಿಳಾ ಸಂಘದ ಮಕ್ಕಳಿಗಾಗಿ ಕರ್ನಾಟಕ ನಾಟಕಗಳನ್ನು ಬರೆದಿರುವುದರ ಜೊತೆಗೆ ಅವುಗಳನ್ನು ಸ್ವತಃ ಅವರೇ ನಿರ್ದೇಶಿಸಿದ್ದಾರೆ.

ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಭಾರ್ಗವಿ ಅವರು ಕನ್ನಡದ ಚಲನಚಿತ್ರ ನಟ ಮತ್ತು ಸೌಂದರ್ಯವರ್ಧಕ ಕಲಾವಿದರಾಗಿ ಗುರುತಿಸಿಕೊಂಡಿರುವ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರನ್ನು ವರಿಸಿದ್ದಾರೆ. ಸುಜಾತಾ, ಪ್ರಕಾಶ, ಪ್ರದೀಪ್ ಮತ್ತು ಸುಧಾ ಎಂಬ ನಾಲ್ಕು ಮಕ್ಕಳ ತಾಯಿಯಾಗಿರುವ ಭಾರ್ಗವಿ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.