ETV Bharat / sitara

'ಕಂಸಾಳೆ' ಬಾರಿಸಲು ಬರುತ್ತಿರುವ ಅರ್ಜುನ್ ಸರ್ಜಾ ಅಳಿಯ ಪವನ್ ತೇಜ

ಜೀವಾ ಆ್ಯಕ್ಷನ್ ಕಟ್ ಹೇಳುತ್ತಿರುವ 'ಕಂಸಾಳೆ' ಚಿತ್ರದಲ್ಲಿ ಅರ್ಜುನ್ ಸರ್ಜಾ ಸಂಬಂಧಿ ಪವನ್ ತೇಜ ನಾಯಕನಾಗಿ ನಟಿಸುತ್ತಿದ್ದಾರೆ. ಈಗಾಗಲೇ ಅಥರ್ವ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ಪವನ್​ ತೇಜ ಈ ಚಿತ್ರದಲ್ಲಿ ಲವರ್ ಬಾಯ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

author img

By

Published : Oct 4, 2019, 3:29 PM IST

ಪವನ್ ತೇಜ

'ಅಥರ್ವ' ಚಿತ್ರದಲ್ಲಿ ನಾಯಕನಾಗಿ ಗಮನ ಸೆಳೆದಿದ್ದ ಅರ್ಜುನ್ ಸರ್ಜಾ ಅಳಿಯ ಪವನ್ ತೇಜ ಈಗ ಮತ್ತೆ 'ಕಂಸಾಳೆ' ಚಿತ್ರದ ಮೂಲಕ ಚಂದನವನದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಮೊದಲ ಚಿತ್ರದಲ್ಲಿ ಮಾಸ್ ಲುಕ್​​​​​ನಲ್ಲಿ ಎಂಟ್ರಿ ಕೊಟ್ಟಿದ್ದ ಪವನ್ ತೇಜ 'ಕಂಸಾಳೆ' ಚಿತ್ರದಲ್ಲಿ ಪಕ್ಕಾ ಲವರ್ ಬಾಯ್ ಆಗಿ ಮಿಂಚಲು ರೆಡಿಯಾಗಿದ್ದು. ನಿನ್ನೆ ನಗರದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಸಿನಿಮಾ ಸೆಟ್ಟೇರಿದೆ.

'ಕಂಸಾಳೆ' ಚಿತ್ರದ ಮುಹೂರ್ತ

'ಕಂಸಾಳೆ' ಸಿನಿಮಾ ಹಳ್ಳಿ ಬ್ಯಾಕ್​​​ಡ್ರಾಪ್​​​​​​​​​​​​​​ನಲ್ಲಿ ನಡೆಯುವ ಪ್ರೇಮಾ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ. ಪ್ರಜ್ವಲ್ ದೇವರಾಜ್ ಅಭಿನಯದ 'ಭುಜಂಗ' ಚಿತ್ರವನ್ನು ನಿರ್ದೇಶಿಸಿದ್ದ ಜೀವಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಚಿಕ್ಕಮಗಳೂರಿನ ಸುತ್ತ ಮುತ್ತ ನಡೆಯಲಿದ್ದು ಸದ್ಯ ಮಲೆನಾಡಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು ಮಳೆ ನಿಂತ ಮೇಲೆ ಶೂಟಿಂಗ್ ಶುರು ಮಾಡುವುದಾಗಿ ನಿರ್ದೇಶಕ ಜೀವಾ ಹೇಳಿದ್ದಾರೆ. ಚಿತ್ರದಲ್ಲಿ ನಾಯಕನದ್ದು ಮಧ್ಯಮ ವರ್ಗದ ಯುವಕನ ಪಾತ್ರವಾಗಿದ್ದು, ದುಷ್ಟರಿಗೆ ಸಿಂಹಸ್ವಪ್ನವಾಗಿ ಕಾಡುತ್ತಾನೆ. ಆದರೆ, ತಾನು ಪ್ರೀತಿಸಿದ ಹುಡುಗಿ ವಿಚಾರಕ್ಕೆ ಬಂದ್ರೆ ಮತ್ತ್ಯಾವ ಅವತಾರ ತಾಳಬಹುದೋ ಗೊತ್ತಿಲ್ಲ. ಅಂತಹ ಲವರ್ ಬಾಯ್ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಪವನ್ ತೇಜ ತಿಳಿಸಿದರು. 'ಅಥರ್ವ' ಚಿತ್ರದ ನಂತರ ಸುಮಾರು ಕಥೆಗಳನ್ನು ಕೇಳಿದ್ದೆ. ಅದರೆ ಈ ಕಥೆ ಬಹಳ ಇಷ್ಟವಾಯಿತು. ಹಾಗಾಗಿ 'ಕಂಸಾಳೆ ' ಚಿತ್ರಕ್ಕೆ ಒಕೆ ಅಂದೆ‌. ಈ ಚಿತ್ರದ ಟೈಟಲ್​​​​ಗೂ ಪಾತ್ರಗಳಿಗೂ ಹಾಗೂ ಕಥೆಗೂ ಹೇಗೆ ಹೊಂದಾಣಿಕೆ ಆಗುತ್ತದೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು ಎಂದು ಪವನ್ ತೇಜ ಹೇಳಿದರು.

Kamsale
'ಕಂಸಾಳೆ' ಚಿತ್ರತಂಡ

ಇನ್ನು ಚಿತ್ರದಲ್ಲಿ ನಾಯಕಿಯಾಗಿ ಮೈಸೂರು ಹುಡುಗಿ ನಯನಾ ನಟಿಸುತ್ತಿದ್ದು, ಶ್ರೀಮಂತನ‌ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಡ ಹುಡುಗ ಶ್ರೀಮಂತ ಹುಡುಗಿ ನಡುವಿನ ಲವ್ ಸ್ಟೋರಿಯಲ್ಲಿ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎಂಬುದು ಚಿತ್ರದ ಕಥೆಯಾಗಿದೆ. ಸಿನಿಮಾದಲ್ಲಿ ಕಲಾತಪಸ್ವಿ ಹಿರಿಯ ನಟ ರಾಜೇಶ್, ಪ್ರಮೀಳಾ ಜೋಷಾಯ್ , ಖಳನಟ ಶೋಭರಾಜ್ ಕೂಡಾ ನಟಿಸುತ್ತಿದ್ದಾರೆ. ಚಿತ್ರವನ್ನು ಎಸ್​​​​.ಚಂದ್ರ ಶೇಖರ್ ಹಾಗೂ ಲೋಕೇಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

'ಅಥರ್ವ' ಚಿತ್ರದಲ್ಲಿ ನಾಯಕನಾಗಿ ಗಮನ ಸೆಳೆದಿದ್ದ ಅರ್ಜುನ್ ಸರ್ಜಾ ಅಳಿಯ ಪವನ್ ತೇಜ ಈಗ ಮತ್ತೆ 'ಕಂಸಾಳೆ' ಚಿತ್ರದ ಮೂಲಕ ಚಂದನವನದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಮೊದಲ ಚಿತ್ರದಲ್ಲಿ ಮಾಸ್ ಲುಕ್​​​​​ನಲ್ಲಿ ಎಂಟ್ರಿ ಕೊಟ್ಟಿದ್ದ ಪವನ್ ತೇಜ 'ಕಂಸಾಳೆ' ಚಿತ್ರದಲ್ಲಿ ಪಕ್ಕಾ ಲವರ್ ಬಾಯ್ ಆಗಿ ಮಿಂಚಲು ರೆಡಿಯಾಗಿದ್ದು. ನಿನ್ನೆ ನಗರದ ಕಾಶಿ ವಿಶ್ವನಾಥ ದೇವಾಲಯದಲ್ಲಿ ಸಿನಿಮಾ ಸೆಟ್ಟೇರಿದೆ.

'ಕಂಸಾಳೆ' ಚಿತ್ರದ ಮುಹೂರ್ತ

'ಕಂಸಾಳೆ' ಸಿನಿಮಾ ಹಳ್ಳಿ ಬ್ಯಾಕ್​​​ಡ್ರಾಪ್​​​​​​​​​​​​​​ನಲ್ಲಿ ನಡೆಯುವ ಪ್ರೇಮಾ ಕಥಾ ಹಂದರ ಹೊಂದಿರುವ ಚಿತ್ರವಾಗಿದೆ. ಪ್ರಜ್ವಲ್ ದೇವರಾಜ್ ಅಭಿನಯದ 'ಭುಜಂಗ' ಚಿತ್ರವನ್ನು ನಿರ್ದೇಶಿಸಿದ್ದ ಜೀವಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಚಿಕ್ಕಮಗಳೂರಿನ ಸುತ್ತ ಮುತ್ತ ನಡೆಯಲಿದ್ದು ಸದ್ಯ ಮಲೆನಾಡಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು ಮಳೆ ನಿಂತ ಮೇಲೆ ಶೂಟಿಂಗ್ ಶುರು ಮಾಡುವುದಾಗಿ ನಿರ್ದೇಶಕ ಜೀವಾ ಹೇಳಿದ್ದಾರೆ. ಚಿತ್ರದಲ್ಲಿ ನಾಯಕನದ್ದು ಮಧ್ಯಮ ವರ್ಗದ ಯುವಕನ ಪಾತ್ರವಾಗಿದ್ದು, ದುಷ್ಟರಿಗೆ ಸಿಂಹಸ್ವಪ್ನವಾಗಿ ಕಾಡುತ್ತಾನೆ. ಆದರೆ, ತಾನು ಪ್ರೀತಿಸಿದ ಹುಡುಗಿ ವಿಚಾರಕ್ಕೆ ಬಂದ್ರೆ ಮತ್ತ್ಯಾವ ಅವತಾರ ತಾಳಬಹುದೋ ಗೊತ್ತಿಲ್ಲ. ಅಂತಹ ಲವರ್ ಬಾಯ್ ಪಾತ್ರದಲ್ಲಿ ನಟಿಸುತ್ತಿರುವುದಾಗಿ ಪವನ್ ತೇಜ ತಿಳಿಸಿದರು. 'ಅಥರ್ವ' ಚಿತ್ರದ ನಂತರ ಸುಮಾರು ಕಥೆಗಳನ್ನು ಕೇಳಿದ್ದೆ. ಅದರೆ ಈ ಕಥೆ ಬಹಳ ಇಷ್ಟವಾಯಿತು. ಹಾಗಾಗಿ 'ಕಂಸಾಳೆ ' ಚಿತ್ರಕ್ಕೆ ಒಕೆ ಅಂದೆ‌. ಈ ಚಿತ್ರದ ಟೈಟಲ್​​​​ಗೂ ಪಾತ್ರಗಳಿಗೂ ಹಾಗೂ ಕಥೆಗೂ ಹೇಗೆ ಹೊಂದಾಣಿಕೆ ಆಗುತ್ತದೆ ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕು ಎಂದು ಪವನ್ ತೇಜ ಹೇಳಿದರು.

Kamsale
'ಕಂಸಾಳೆ' ಚಿತ್ರತಂಡ

ಇನ್ನು ಚಿತ್ರದಲ್ಲಿ ನಾಯಕಿಯಾಗಿ ಮೈಸೂರು ಹುಡುಗಿ ನಯನಾ ನಟಿಸುತ್ತಿದ್ದು, ಶ್ರೀಮಂತನ‌ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಡ ಹುಡುಗ ಶ್ರೀಮಂತ ಹುಡುಗಿ ನಡುವಿನ ಲವ್ ಸ್ಟೋರಿಯಲ್ಲಿ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎಂಬುದು ಚಿತ್ರದ ಕಥೆಯಾಗಿದೆ. ಸಿನಿಮಾದಲ್ಲಿ ಕಲಾತಪಸ್ವಿ ಹಿರಿಯ ನಟ ರಾಜೇಶ್, ಪ್ರಮೀಳಾ ಜೋಷಾಯ್ , ಖಳನಟ ಶೋಭರಾಜ್ ಕೂಡಾ ನಟಿಸುತ್ತಿದ್ದಾರೆ. ಚಿತ್ರವನ್ನು ಎಸ್​​​​.ಚಂದ್ರ ಶೇಖರ್ ಹಾಗೂ ಲೋಕೇಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.

Intro:" ಅಥರ್ವ" ಚಿತ್ರದಲ್ಲಿ ನಾಯಕನಾಗಿ ಗಮನ ಸೆಳೆದಿದ್ದ ಅರ್ಜುನ್ ಸರ್ಜಾ ಅಳಿಯ ಪವನ್ ತೇಜಾ ಈಗ ಮತ್ತೆ " ಕಂಸಾಳೆ" ಚಿತ್ರದ ಮೂಲಕ ಚಂದನವನದಲ್ಲಿ ಪ್ರತ್ಯಕ್ಷವಾಗಿದ್ದಾರೆ. ಮೊದಲ ಚಿತ್ರದಲ್ಲಿ ಮಾಸ್ ಲುಕ್ ನಲ್ಲಿ ಎಂಟ್ರಿಕೊಟ್ಟಿದ್ದ ಪವನ್ ತೇಜಾ ಈ " ಕಂಸಾಳೆ " ಚಿತ್ರದಲ್ಲಿ ಪಕ್ಕಾ ಲವರ್ ಬಾಯ್ ಆಗಿ ಮಿಂಚೋಕೆ ರೆಡಿಯಾಗಿದ್ದು. ನಿನ್ನೆ ನಗರದ ಕಾಶಿ ವಿಶ್ವನಾಥ ದೇವಾಲಯದಲ್ಲಿ "ಕಂಸಾಳೆ" ಸೆಟ್ಟೇರಿದೆ.


Body:ಕಂಸಾಳೆ ಚಿತ್ರ ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಪ್ರೇಮಾ ಕಥಾ ಹಂದರಹೊಂದಿರುವ ಚಿತ್ರವಾಗಿದ್ದು, ಪ್ರಜ್ವಲ್ ದೇವರಾಜ್ ಅಭಿನಯದ ಭುಜಂಗ ಚಿತ್ರ ನಿರ್ದೇಶನ ಮಾಡಿದ್ದ ಜೀವಾ ಕಂಸಾಳೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.ಇನ್ನೂ ಈ ಚಿತ್ರವೂ ಚಿಕ್ಕಮಗಳೂರಿನ ಸುತ್ತ ಮುತ್ತ ನಡೆಯಲಿದ್ದು ಸದ್ಯ ಮಲೆನಾಡಿನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು ಮಳೆ ನಿಂತ ಮೇಲೆ ಶೂಟಿಂಗ್ ಶುರು ಮಾಡುವುದಾಗಿ ನಿರ್ದೇಶಕ ಜೀವಾ ಹೇಳಿದ್ರು.ಚಿತ್ರದಲ್ಲಿ ನಾಯಕನ ಪಾತ್ರ ಮಧ್ಯಮವರ್ಗದ ಯುವಕನ ಪಾತ್ರವಾಗಿದ್ದು, ದುಷ್ಠರಿಗೆ ಸಿಂಹಸ್ವಪ್ನವಾಗಿ ಕಾಡ್ತಾನೆ.ಅದ್ರೆ ತಾನು ಪ್ರೀತಿಸಿದ ಹುಡುಗಿ ವಿಚಾರ ಬಂದ್ರೆ ಇನ್ಯಾವ ಅವತಾರ ತಾಳುಬಹುದೋ ಗೊತ್ತಿಲ್ಲ.ಅಂತ ಲವರ್ ಪಾತ್ರದಲ್ಲಿ ಕಾಣಿಸುತ್ತಿರುವುದಾಗಿ ನಟ ಪವನ್ ತೇಜಾ ತಿಳಿಸಿದ್ರು.ಅಥರ್ವ ಚಿತ್ರದ ನಂತ್ರ ಸುಮಾರು ಕಥೆಗಳ ಕೇಳಿದ್ದೆ.ಅದ್ರೆ ಈ ಕಥೆ ತುಂಭಾ ಇಷ್ಟವಾಯಿತು ಅಗಾಗಿ ಕಂಸಾಳೆ ಚಿತ್ರಕ್ಕೆ ಒಕೆ ಅಂದೆ‌.ಇನ್ನೂ "ಕಂಸಾಳೆ " ಟೈಟಲ್ ಗೂ ಲವ್ ಸ್ಟೋರಿಗೂ ಹೇಂಗೆ ಲಿಂಕ್ ಆಗುತ್ತೆ ಎನ್ನುವುದ ತಿಳಿಯೋದಕ್ಕೆ ಸಿನಿಮಾ ನೋಡಿದ್ರೆ ಗೊತ್ತಾಗುತ್ತೆ ಎಂದು ಪವನ್ ತಮ್ಮ ಪಾತ್ರದ ಬಗ್ಗೆ ಪರಿಚಯ ಮಾಡಿಕೊಂಡ್ರು.


Conclusion:ಇನ್ನೂ ಈ ಚಿತ್ರದಲ್ಲಿ ನಾಯಕಿಯಾಗಿ ಮೈಸೂರಿನ ಹುಡುಗಿ ನಯನಾ ಕಾಣಿಸ್ತಿದ್ದು.ಶ್ರೀಮಂತನ‌ ಮಗಳ ಪಾತ್ರದಲ್ಲಿ ನಯನ ಕಾಣಿಸಲಿದ್ದು, ಬಡ ಹುಡುಗ ಶ್ರೀಮಂತ ಹುಡ್ಗಿಯ ನಡುವಿನ ಲವ್ ಸ್ಟೋರಿ ಏನೇಲ್ಲಾ ತಿರುವು ಪಡೆದು ಕೊಳ್ಳುತ್ತೆ ಎಂಬುದು ಚಿತ್ರದ ಕಥೆಯಾಗಿದ್ದು, ಚಿತ್ರದಲ್ಲಿ ಶ್ರೀಮಂತ ಹುಡುಗಿ ಪಾತ್ರದಲ್ಲಿ ನಾನುವಕಾಣಿಸ್ತಿದ್ದೇನೆ ಎಂದು ನಟಿ ನಯನ ಹೇಳಿದರು.ಇನ್ನೂ ಈ ಚಿತ್ರದಲ್ಲಿ ಕಲಾತಪಸ್ವಿ ಹಿರಿಯ ನಟ ರಾಜೇಶ್,ಪ್ರಮೀಳಾ ಜೋಷಾಯ್ , ಖಳನಟ ಶೋಭರಾಜ್, ನಟಿಸುತ್ತಿದ್ದು. ಕಂಸಾಳೆ ಚಿತ್ರವನ್ನು ಎಸ್ ಚಂದ್ರ ಶೇಖರ್ ಹಾಗೂ ಲೋಕೇಶ್ ಗೌಡ ನಿರ್ಮಾಣ ಮಾಡ್ತಿದ್ದಾರೆ.

ಸತೀಶ ಎಂಬಿ‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.