ETV Bharat / sitara

'ಅನುಷ್ಕ' ನಂತರ ಅಮೃತ ಅಯ್ಯಂಗಾರ್​​​ಗೆ ಸ್ಯಾಂಡಲ್​​​ವುಡ್​​ನಲ್ಲಿ ಉತ್ತಮ ಅವಕಾಶ

author img

By

Published : May 1, 2019, 9:53 AM IST

'ಅನುಷ್ಕ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅಮೃತ ಅಯ್ಯಂಗಾರ್​​​​​​​​​​​ಗೆ ಇದೀಗ ಇತರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಲಭಿಸಿದೆ. ಶಿವತೇಜಸ್ ನಿರ್ಮಾಣದ ಇನ್ನೂ ಹೆಸರಿಡದ ಸಿನಿಮಾದಲ್ಲಿ ಅಮೃತ ನಟಿಸುತ್ತಿದ್ದಾರೆ.

ಅಮೃತ ಅಯ್ಯಂಗಾರ್

ಎಸ್​​.ಕೆ. ಗಂಗಾಧರ್ ನಿರ್ಮಾಣದ ಮಹಿಳಾ ಪ್ರಧಾನ ಕಥೆಯನ್ನೊಂದಿರುವ 'ಅನುಷ್ಕ' ಸಿನಿಮಾದಲ್ಲಿ ನಟಿಸಿದ ನಂತರ ನಾಯಕಿ ಅಮೃತ ಅಯ್ಯಂಗಾರ್​​ಗೆ ಇದೀಗ ಕನ್ನಡದಲ್ಲಿ ಉತ್ತಮ ಅವಕಾಶಗಳು ಹುಡುಕಿ ಬರುತ್ತಿವೆ.

amrita
ಅಮೃತ ಅಯ್ಯಂಗಾರ್

ಅಮೃತ ಮೂಲತ: ಮೈಸೂರಿನವರು. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮನಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. 'ಸಿಂಹ ಹಾಕಿದ ಹೆಜ್ಜೆ' ಸಿನಿಮಾ ಮೂಲಕ ಸ್ಯಾಂಡಲ್​​ವುಡ್​​​​ಗೆ ಕಾಲಿಟ್ಟ ಅಮೃತಾಗೆ ನಂತರ ದೇವರಾಜ್ ಕುಮಾರ್ ನಿರ್ದೇಶನದ ಪುನರ್​​​ ಜನ್ಮದ ಕಥೆ ಹೊಂದಿರುವ 'ಅನುಷ್ಕ' ಸಿನಿಮಾದಲ್ಲಿ ನಟಿಸುವ ಅವಕಾಶ ಲಭಿಸಿತು. ಇದರಲ್ಲಿ ಅಮೃತ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ್ದು ಚಿತ್ರಕ್ಕಾಗಿ ಅವರು ಕುದುರೆ ಸವಾರಿ, ಕತ್ತಿ ವರಸೆ ಕೂಡಾ ಕಲಿತಿದ್ದರು.

ಇದೀಗ ಅಮೃತ ದುನಿಯಾ ಸೂರಿ ನಿರ್ದೇಶನದ ‘ಪಾಪ್​​​​ಕಾರ್ನ್ ಮಂಕಿ ಟೈಗರ್​‘ ಸಿನಿಮಾದಲ್ಲಿ ಡಾಲಿ ಧನಂಜಯ್ ಸ್ನೇಹಿತೆ ಆಗಿ ನಟಿಸುತ್ತಿದ್ದಾರೆ. ಇದರೊಂದಿಗೆ ಶಿವ ತೇಜಸ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಅಕ್ಷತಾ ಶ್ರೀನಿವಾಸ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಎಸ್​​.ಕೆ. ಗಂಗಾಧರ್ ನಿರ್ಮಾಣದ ಮಹಿಳಾ ಪ್ರಧಾನ ಕಥೆಯನ್ನೊಂದಿರುವ 'ಅನುಷ್ಕ' ಸಿನಿಮಾದಲ್ಲಿ ನಟಿಸಿದ ನಂತರ ನಾಯಕಿ ಅಮೃತ ಅಯ್ಯಂಗಾರ್​​ಗೆ ಇದೀಗ ಕನ್ನಡದಲ್ಲಿ ಉತ್ತಮ ಅವಕಾಶಗಳು ಹುಡುಕಿ ಬರುತ್ತಿವೆ.

amrita
ಅಮೃತ ಅಯ್ಯಂಗಾರ್

ಅಮೃತ ಮೂಲತ: ಮೈಸೂರಿನವರು. ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮನಶಾಸ್ತ್ರ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. 'ಸಿಂಹ ಹಾಕಿದ ಹೆಜ್ಜೆ' ಸಿನಿಮಾ ಮೂಲಕ ಸ್ಯಾಂಡಲ್​​ವುಡ್​​​​ಗೆ ಕಾಲಿಟ್ಟ ಅಮೃತಾಗೆ ನಂತರ ದೇವರಾಜ್ ಕುಮಾರ್ ನಿರ್ದೇಶನದ ಪುನರ್​​​ ಜನ್ಮದ ಕಥೆ ಹೊಂದಿರುವ 'ಅನುಷ್ಕ' ಸಿನಿಮಾದಲ್ಲಿ ನಟಿಸುವ ಅವಕಾಶ ಲಭಿಸಿತು. ಇದರಲ್ಲಿ ಅಮೃತ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಿದ್ದು ಚಿತ್ರಕ್ಕಾಗಿ ಅವರು ಕುದುರೆ ಸವಾರಿ, ಕತ್ತಿ ವರಸೆ ಕೂಡಾ ಕಲಿತಿದ್ದರು.

ಇದೀಗ ಅಮೃತ ದುನಿಯಾ ಸೂರಿ ನಿರ್ದೇಶನದ ‘ಪಾಪ್​​​​ಕಾರ್ನ್ ಮಂಕಿ ಟೈಗರ್​‘ ಸಿನಿಮಾದಲ್ಲಿ ಡಾಲಿ ಧನಂಜಯ್ ಸ್ನೇಹಿತೆ ಆಗಿ ನಟಿಸುತ್ತಿದ್ದಾರೆ. ಇದರೊಂದಿಗೆ ಶಿವ ತೇಜಸ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಅಕ್ಷತಾ ಶ್ರೀನಿವಾಸ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಅಮೃತ ಅಯ್ಯಂಗಾರ್ ಶಿವ ತೇಜಸ್ ನಿರ್ದೇಶನದಲ್ಲಿ

 

ಒಂದು ನಾಯಕಿ ಪ್ರಧಾನ ಚಿತ್ರ ಮಾಡಿ ಆಮೇಲೆ ಮೂವರು ನಾಯಕಿಯರಲ್ಲಿ ಒಬ್ಬರಾಗಿ ಒಪ್ಪಿಕೊಳ್ಳುವುದು ಆ ಪಾತ್ರದ ಸಾಮರ್ಥ್ಯದ ಬಗ್ಗೆ ಗಮನಿಸಬೇಕಾದ್ದೇ.

 

ನಟಿ ಅಮೃತ ಅಯ್ಯಂಗಾರ್ ಮೈಸೂರು ಮೂಲದವರು. ಮಹಾಜನ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ಮನಶಾಸ್ತ್ರ ವಿಭಾಗದಲ್ಲಿ ಪದವಿದರೆ. ಮೊದಲು ಸಿಂಹ ಹಾಕಿದ ಹೆಜ್ಜೆ ಸಿನಿಮಾದಲ್ಲಿ ನಾಯಕಿ ಆಗಿ ಒಂದು ಮಾದಕವಾದ ಹಾಡಿನಲ್ಲಿ ಹೆಸರು ಮಾಡಿ ಆಮೇಲೆ ದೇವರಾಜ್ ಕುಮಾರ್ ಅವರ ಅನುಷ್ಕ (ಪುನರ್ ಜನ್ಮದ ಕಥೆ ಚಿತ್ರ) ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿ ಪ್ರಧಾನ ಚಿತ್ರ ಅಭಿನಯಿಸಿದ್ದಾರೆ. ಅದರಲ್ಲಿ ಅವರು ಕುದುರೆ ಸವಾರಿ, ಕತ್ತಿ ವರಸೆ ಸಹ ಕಲಿತು ಟ್ರೈಲರ್ ಇಂದ ಒಳ್ಳೆಯ ಹೆಸರನ್ನು ಗಳಿಸಿದ್ದಾರೆ. ಧುನಿಯ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ಡಾಲಿ ಧನಂಜಯ್ ಸ್ನೇಹಿತೆ ಆಗಿ ಸಹ ಅಭಿನಯ ಮಾಡಿ ಬ್ಯುಸಿ ಆಗುತ್ತಿದ್ದಾರೆ ಅಮೃತ ಅಯ್ಯಂಗಾರ್.

 

ಈಗ ಅಮೃತ ಅಯ್ಯಂಗಾರ್ ನಿರ್ದೇಶಕ ಶಿವ ತೇಜಸ್ ಮೂರನೇ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಚಿರಂಜೀವಿ ಸರ್ಜಾ ನಾಯಕ ಆಗಿರುವ ಈ ಚಿತ್ರದಲ್ಲಿ ಅಕ್ಷತ ಶ್ರೀನಿವಾಸ್ ಸಹ ನಾಯಕಿ. ಮತ್ತೊಬ್ಬ ನಾಯಕಿಯ ತಲಾಷ್ ನಡೆಯುತ್ತಿದೆ. ನಿರ್ದೇಶಕ ಶಿವ ತೇಜಸ್ ಮಳೆ ಹಾಗೂ ಧೈರ್ಯಮ್ ನಂತರ ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ಮೊದಲು ಭೈರವ ಎಂದು ಹೆಸರಿಡಲಾಗಿತ್ತು. 

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.