ETV Bharat / sitara

ನೀನೇನು ದೊಡ್ಡ ಡಾನ್​ ಅನ್ಕೊಂಡಾ?.. ನಟ ರಾಜ್ ಬಿ ಶೆಟ್ಟಿಗೆ ಶಿವಣ್ಣ​ ಆವಾಜ್​.. ಏನಿದರ ಅಸಲಿಯತ್ತು?

author img

By

Published : Jan 4, 2022, 9:04 PM IST

ಶಿವರಾಜಕುಮಾರ್​ ಅವರು ರಾಜ್​ ಬಿ ಶೆಟ್ಟಿಗೆ ಕರೆ ಮಾಡಿ ವಿಶ್​​ ಮಾಡುವ ಮುನ್ನ ಈ ರೀತಿಯಾಗಿ ಆವಾಜ್​ ಹಾಕುವ ಮೂಲಕ ಕಾಲೆಳೆದಿದ್ದಾರೆ. ಇಬ್ಬರ ನಡುವಿನ ತಮಾಷೆಯ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

shivarajakumar
ಶಿವರಾಜಕುಮಾರ್

ಮಂಗಳಾದೇವಿಗೆ ನೀನೇನು ದೊಡ್ಡ ಡಾನ್​ ಅನ್ಕೊಂಡಾ?. ಬರ್ಲಾ ನಾನು ಅಲ್ಲಿಗೆ, ನೋಡೆ ಬಿಡೋಣಾ, ನಾನಾ ನೀನಾ ಅಂತ..! ಇದು, ಹ್ಯಾಟ್ರಿಕ್​ ಹೀರೋ ಶಿವರಾಜಕುಮಾರ್​ ಅವರು ನಟ ರಾಜ್​ ಬಿ. ಶೆಟ್ಟಿಗೆ ಹಾಕಿದ ಆವಾಜ್​. ಇಬ್ಬರು ಸ್ಟಾರ್​ ನಟರ ಮಧ್ಯೆ ಏನಾಯ್ತು. ಶಿವರಾಜಕುಮಾರ್​ ಅವರು ಯಾಕೆ ಹೀಗೆ ರಾಜ್​ ಬಿ ಶೆಟ್ಟಿಗೆ ಬೈದ್ರು ಅಂತ ಅನ್ಕೊಂಡ್ರಾ.

ಗುರುಡ ಗಮನ ವೃಷಭ ವಾಹನ ಸಿನಿಮಾ ಭಾರಿ ಯಶಸ್ಸು ಕಂಡಿದ್ದು, ಇದೀಗ ಚಿತ್ರವನ್ನು ಒಟಿಟಿಯೊಂದು ಖರೀದಿಸಿದೆ. ಇದೇ ಸಂಕ್ರಾಂತಿ ಹಬ್ಬಕ್ಕೆ ಒಟಿಟಿಯಲ್ಲಿ ಜನರಿಗೆ ವೀಕ್ಷಣೆಗೆ ಸಿಗಲಿದೆ. ಶಿವರಾಜಕುಮಾರ್​ ನಟನೆಯ ಭಜರಂಗಿ-2 ಸಿನಿಮಾದ ಪ್ರಸಾರದ ಹಕ್ಕನ್ನು ಕೂಡ ಇದೇ ಒಟಿಟಿ ಖರೀದಿಸಿದ್ದು, ಎರಡು ದೊಡ್ಡ ಸಿನಿಮಾಗಳು ಒಟಿಟಿಯಲ್ಲಿ ಸದ್ದು ಮಾಡಲಿವೆ.

ಈ ಕಾರಣಕ್ಕಾಗಿ ಶಿವರಾಜಕುಮಾರ್​ ಅವರು ರಾಜ್​ ಬಿ ಶೆಟ್ಟಿಗೆ ಕರೆ ಮಾಡಿ ವಿಶ್​​ ಮಾಡುವ ಮುನ್ನ ಈ ರೀತಿಯಾಗಿ ಆವಾಜ್​ ಹಾಕುವ ಮೂಲಕ ಕಾಲೆಳೆದಿದ್ದಾರೆ. ಇಬ್ಬರ ನಡುವಿನ ತಮಾಷೆಯ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಂಭಾಷಣೆ ಆರಂಭದಲ್ಲಿ ಶಿವಣ್ಣ, ರಾಜ್​ ಬಿ ಶೆಟ್ಟಿಗೆ ನೀನೇನು ದೊಡ್ಡ ಡಾನ್​ ಅನ್ಕೊಂಡಾ?.. ಬರ್ಲಾ ನಾನು ಎಂದು ಆವಾಜ್​ ಹಾಕುವ ರೀತಿಯಲ್ಲಿ ಮಾತನಾಡಿಸಿದ್ದಾರೆ. ಈ ವೇಳೆ ರಾಜ್​ ಬಿ ಶೆಟ್ಟಿ ಕೂಲ್ ಆಗಿಯೇ ಉತ್ತರಿಸುತ್ತಾ ಯಾರು ನೀವು ಎಂದು ಕೇಳಿದ್ದಾರೆ. ಬಳಿಕ ಶಿವಣ್ಣ ನಾನು ಭಜರಂಗಿ ಎಂದು ಹೇಳಿದಾಗ ರಾಜ್​ ಬಿ ಶೆಟ್ಟಿ ಇದು ಶಿವಣ್ಣ ಎಂದು ಗುರುತು ಹಿಡಿದಿದ್ದಾರೆ.

ಬಳಿಕ ರಾಜ್​ ಬಿ ಶೆಟ್ಟಿ ಮಾತನಾಡಿ, ನೀವು ಕನ್ನಡ ಸಿನಿಮಾದ ಮೊದಲ ಡಾನ್​. ನೀವು ಓಂ ಸಿನಿಮಾ ಮಾಡಿದ ಮೇಲೆಯೇ ನಾನು ಗರುಡ ಗಮನ ಮಾಡಿದ್ದೇನೆ ಸರ್​ ಅಂತಾ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಶಿವಣ್ಣ, ಒಟಿಟಿಯಲ್ಲಿ ಇಬ್ಬರ ಸಿನಿಮಾ ಪ್ರಸಾರವಾಗುವ ಕಾರಣ ವಿಶ್​​​ ಮಾಡಲು ಕರೆ ಮಾಡಿದೆ. ಗರುಡ ಗಮನ ಸಿನಿಮಾ ತುಂಬಾ ಚೆನ್ನಾಗಿದೆ. ನಿಮ್ಮ ನಟನೆಯೂ ಸೂಪರ್​ ಎಂದು ರಾಜ್​ ಬಿ ಶೆಟ್ಟಿಗೆ ಶಿವರಾಜಕುಮಾರ್​ ಹುರಿದುಂಬಿಸಿದ್ದಾರೆ. ಇದಕ್ಕೆ ಶೆಟ್ಟಿ ನಮ್ರತೆಯಿಂದ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​​​​ವುಡ್​ ಮತ್ತು ಟಾಲಿವುಡ್​​ನಲ್ಲಿ ಒಟ್ಟಿಗೆ ಎಂಟ್ರಿ ನೀಡಲು ಜನಾರ್ದನ ರೆಡ್ಡಿ ಪುತ್ರ ರೆಡಿ..

ಮಂಗಳಾದೇವಿಗೆ ನೀನೇನು ದೊಡ್ಡ ಡಾನ್​ ಅನ್ಕೊಂಡಾ?. ಬರ್ಲಾ ನಾನು ಅಲ್ಲಿಗೆ, ನೋಡೆ ಬಿಡೋಣಾ, ನಾನಾ ನೀನಾ ಅಂತ..! ಇದು, ಹ್ಯಾಟ್ರಿಕ್​ ಹೀರೋ ಶಿವರಾಜಕುಮಾರ್​ ಅವರು ನಟ ರಾಜ್​ ಬಿ. ಶೆಟ್ಟಿಗೆ ಹಾಕಿದ ಆವಾಜ್​. ಇಬ್ಬರು ಸ್ಟಾರ್​ ನಟರ ಮಧ್ಯೆ ಏನಾಯ್ತು. ಶಿವರಾಜಕುಮಾರ್​ ಅವರು ಯಾಕೆ ಹೀಗೆ ರಾಜ್​ ಬಿ ಶೆಟ್ಟಿಗೆ ಬೈದ್ರು ಅಂತ ಅನ್ಕೊಂಡ್ರಾ.

ಗುರುಡ ಗಮನ ವೃಷಭ ವಾಹನ ಸಿನಿಮಾ ಭಾರಿ ಯಶಸ್ಸು ಕಂಡಿದ್ದು, ಇದೀಗ ಚಿತ್ರವನ್ನು ಒಟಿಟಿಯೊಂದು ಖರೀದಿಸಿದೆ. ಇದೇ ಸಂಕ್ರಾಂತಿ ಹಬ್ಬಕ್ಕೆ ಒಟಿಟಿಯಲ್ಲಿ ಜನರಿಗೆ ವೀಕ್ಷಣೆಗೆ ಸಿಗಲಿದೆ. ಶಿವರಾಜಕುಮಾರ್​ ನಟನೆಯ ಭಜರಂಗಿ-2 ಸಿನಿಮಾದ ಪ್ರಸಾರದ ಹಕ್ಕನ್ನು ಕೂಡ ಇದೇ ಒಟಿಟಿ ಖರೀದಿಸಿದ್ದು, ಎರಡು ದೊಡ್ಡ ಸಿನಿಮಾಗಳು ಒಟಿಟಿಯಲ್ಲಿ ಸದ್ದು ಮಾಡಲಿವೆ.

ಈ ಕಾರಣಕ್ಕಾಗಿ ಶಿವರಾಜಕುಮಾರ್​ ಅವರು ರಾಜ್​ ಬಿ ಶೆಟ್ಟಿಗೆ ಕರೆ ಮಾಡಿ ವಿಶ್​​ ಮಾಡುವ ಮುನ್ನ ಈ ರೀತಿಯಾಗಿ ಆವಾಜ್​ ಹಾಕುವ ಮೂಲಕ ಕಾಲೆಳೆದಿದ್ದಾರೆ. ಇಬ್ಬರ ನಡುವಿನ ತಮಾಷೆಯ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಂಭಾಷಣೆ ಆರಂಭದಲ್ಲಿ ಶಿವಣ್ಣ, ರಾಜ್​ ಬಿ ಶೆಟ್ಟಿಗೆ ನೀನೇನು ದೊಡ್ಡ ಡಾನ್​ ಅನ್ಕೊಂಡಾ?.. ಬರ್ಲಾ ನಾನು ಎಂದು ಆವಾಜ್​ ಹಾಕುವ ರೀತಿಯಲ್ಲಿ ಮಾತನಾಡಿಸಿದ್ದಾರೆ. ಈ ವೇಳೆ ರಾಜ್​ ಬಿ ಶೆಟ್ಟಿ ಕೂಲ್ ಆಗಿಯೇ ಉತ್ತರಿಸುತ್ತಾ ಯಾರು ನೀವು ಎಂದು ಕೇಳಿದ್ದಾರೆ. ಬಳಿಕ ಶಿವಣ್ಣ ನಾನು ಭಜರಂಗಿ ಎಂದು ಹೇಳಿದಾಗ ರಾಜ್​ ಬಿ ಶೆಟ್ಟಿ ಇದು ಶಿವಣ್ಣ ಎಂದು ಗುರುತು ಹಿಡಿದಿದ್ದಾರೆ.

ಬಳಿಕ ರಾಜ್​ ಬಿ ಶೆಟ್ಟಿ ಮಾತನಾಡಿ, ನೀವು ಕನ್ನಡ ಸಿನಿಮಾದ ಮೊದಲ ಡಾನ್​. ನೀವು ಓಂ ಸಿನಿಮಾ ಮಾಡಿದ ಮೇಲೆಯೇ ನಾನು ಗರುಡ ಗಮನ ಮಾಡಿದ್ದೇನೆ ಸರ್​ ಅಂತಾ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಶಿವಣ್ಣ, ಒಟಿಟಿಯಲ್ಲಿ ಇಬ್ಬರ ಸಿನಿಮಾ ಪ್ರಸಾರವಾಗುವ ಕಾರಣ ವಿಶ್​​​ ಮಾಡಲು ಕರೆ ಮಾಡಿದೆ. ಗರುಡ ಗಮನ ಸಿನಿಮಾ ತುಂಬಾ ಚೆನ್ನಾಗಿದೆ. ನಿಮ್ಮ ನಟನೆಯೂ ಸೂಪರ್​ ಎಂದು ರಾಜ್​ ಬಿ ಶೆಟ್ಟಿಗೆ ಶಿವರಾಜಕುಮಾರ್​ ಹುರಿದುಂಬಿಸಿದ್ದಾರೆ. ಇದಕ್ಕೆ ಶೆಟ್ಟಿ ನಮ್ರತೆಯಿಂದ ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್​​​​ವುಡ್​ ಮತ್ತು ಟಾಲಿವುಡ್​​ನಲ್ಲಿ ಒಟ್ಟಿಗೆ ಎಂಟ್ರಿ ನೀಡಲು ಜನಾರ್ದನ ರೆಡ್ಡಿ ಪುತ್ರ ರೆಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.