ETV Bharat / sitara

ಬೀದಿನಾಯಿಗಳ ಹೊಟ್ಟೆ ತುಂಬಿಸಲು ಹೊರಟ ನಟ ಸತೀಶ್​ !

author img

By

Published : Jun 20, 2019, 10:11 PM IST

ಸ್ಯಾಂಡಲ್​​ವುಡ್ ಬ್ರಹ್ಮಚಾರಿ ನಟ ಸತೀಶ್ ನೀನಾಸಂ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34 ನೇ ವಸಂತಕ್ಕೆ ಕಾಲಿಟ್ಟ ಅವರು ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸರಳವಾಗಿ ಜನ್ಮದಿನ ಆಚರಿಸಿಕೊಂಡ್ರು.

ನಟ ಸತೀಶ

ಸತೀಶ್​, ಜನ್ಮದಿನದ ಉಡುಗೊರೆಯಾಗಿ ಅಭಿಮಾನಿಗಳಿಗೆ 100 ಸಸಿಗಳನ್ನು ನೀಡಿ ಪರಿಸರ ಕಾಳಜಿ ಮೆರೆದರು. ಇದರ ಜತೆಗೆ ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ಅವರು, ಇಂದು ರಾತ್ರಿ ಹಾಗೂ ನಾಳೆ ಬೆಂಗಳೂರಿನಲ್ಲಿರುವ ಬೀದಿ ನಾಯಿಗಳಿಗೆ ಹೊಟ್ಟೆತುಂಬಾ ಊಟ ಹಾಕಲಿದ್ದಾರೆ. ಈ ಬಗ್ಗೆ ಮಾತಾಡಿರುವ ಸತೀಶ್​, ನಾವು ಮನೆಗಳಲ್ಲಿ ಫಾರಿನ್ ಬ್ರೀಡ್​​ಗಳ ನಾಯಿಗಳನ್ನು ಸಾಕುತ್ತೇವೆ. ಆದರೆ, ಬೀದಿನಾಯಿಗಳು ಹೊಟ್ಟೆಗಿಲ್ಲದೇ ಸಾಯುತ್ತಿವೆ. ಅವುಗಳಿಗೆ ಊಟ ಹಾಕುವ ಕೆಲಸ ಮಾಡುತ್ತೇನೆ ಎಂದರು.

ಹುಟ್ಟುಹಬ್ಬ ಆಚರಿಸಿಕೊಂಡ ನಟ ಸತೀಶ್​

ಸತೀಶ್ ಅವರಿಗೆ ಜನ್ಮದಿನದ ಉಡುಗೊರೆಯಾಗಿ ಅವರು ನಟಿಸುತ್ತಿರುವ ಬ್ರಹ್ಮಚಾರಿ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ಒಂದೂವರೆ ನಿಮಿಷದ ಈ ಟೀಸರ್ ಸಖತ್ ಆಗಿ ಮೂಡಿ ಬಂದಿದೆ.

  • " class="align-text-top noRightClick twitterSection" data="">

ಸತೀಶ್​, ಜನ್ಮದಿನದ ಉಡುಗೊರೆಯಾಗಿ ಅಭಿಮಾನಿಗಳಿಗೆ 100 ಸಸಿಗಳನ್ನು ನೀಡಿ ಪರಿಸರ ಕಾಳಜಿ ಮೆರೆದರು. ಇದರ ಜತೆಗೆ ಮತ್ತೊಂದು ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವ ಅವರು, ಇಂದು ರಾತ್ರಿ ಹಾಗೂ ನಾಳೆ ಬೆಂಗಳೂರಿನಲ್ಲಿರುವ ಬೀದಿ ನಾಯಿಗಳಿಗೆ ಹೊಟ್ಟೆತುಂಬಾ ಊಟ ಹಾಕಲಿದ್ದಾರೆ. ಈ ಬಗ್ಗೆ ಮಾತಾಡಿರುವ ಸತೀಶ್​, ನಾವು ಮನೆಗಳಲ್ಲಿ ಫಾರಿನ್ ಬ್ರೀಡ್​​ಗಳ ನಾಯಿಗಳನ್ನು ಸಾಕುತ್ತೇವೆ. ಆದರೆ, ಬೀದಿನಾಯಿಗಳು ಹೊಟ್ಟೆಗಿಲ್ಲದೇ ಸಾಯುತ್ತಿವೆ. ಅವುಗಳಿಗೆ ಊಟ ಹಾಕುವ ಕೆಲಸ ಮಾಡುತ್ತೇನೆ ಎಂದರು.

ಹುಟ್ಟುಹಬ್ಬ ಆಚರಿಸಿಕೊಂಡ ನಟ ಸತೀಶ್​

ಸತೀಶ್ ಅವರಿಗೆ ಜನ್ಮದಿನದ ಉಡುಗೊರೆಯಾಗಿ ಅವರು ನಟಿಸುತ್ತಿರುವ ಬ್ರಹ್ಮಚಾರಿ ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ಒಂದೂವರೆ ನಿಮಿಷದ ಈ ಟೀಸರ್ ಸಖತ್ ಆಗಿ ಮೂಡಿ ಬಂದಿದೆ.

  • " class="align-text-top noRightClick twitterSection" data="">
Intro:ಸ್ಯಾಂಡಲ್ ವುಡ್ ನ ಬ್ರಹ್ಮಾಚಾರಿ "ಅಯೋಗ್ಯ" ಸತೀಶ್ ನೀನಾಸಂ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34 ನೇ ವಸಂತಕ್ಕೆ ಕಾಲಿಟ್ಟ ಸತೀಶ್ ನೀನಾಸಂ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಲ್ಲದೆ ತಮ್ಮ ಹುಟ್ಟುಹಬ್ಬವನ್ನು ಸ್ಮರಣೀಯವಾಗಿಸಿಕೊಂಡ ಅಯೋಗ್ಯ ಸತೀಶ್ 100 ಸಸಿಗಳನ್ನು ಅಭಿಮಾನಿಗಳಿಗೆ ಉಡುಗೊರೆ ನೀಡಿ ಅವುಗಳನ್ನು ನೆಟ್ಟು ಪೋಷಿಸುವಂತೆ ಸಲಹೆ ನೀಡಿ ಯೋಗ್ಯ ಕೆಲಸ ಮಾಡಿದರು.


Body:ಅಲ್ಲದೆ ಪ್ರಾಣಿಗಳ ಬಗ್ಗೆ ಕಾಳಜಿ ಹೊಂದಿರುವ ನೀನಾಸಂನ ಪ್ರತಿಭೆ ಸತೀಶ್ ನಾಳೆ ಬೆಂಗಳೂರಿನಲ್ಲಿರುವ ಕೆಲವು ಬೀದಿನಾಯಿಗಳಿಗೆ ಬಿಸ್ಕೆಟ್ ಹಾಕುವ ಪ್ಲಾನ್ ಮಾಡಿಕೊಂಡಿದ್ದಾರೆ. ಹೆಚ್ಚು ಬೀದಿನಾಯಿಗಳು ಯಾವ ಏರಿಯಾದಲ್ಲಿ ಇವೆಯೋ ಅಲ್ಲಿಗೆ ತೆರಳಿ ಬೀದಿ ನಾಯಿಗಳಿಗೆ ನಾಳೆ ಬಿಸ್ಕೆಟ್ ಹಾಕಲು ಸತೀಶ್ ನೀನಾಸಂ ರೆಡಿಯಾಗಿದ್ದಾರೆ. ನಾವು ಮನೆಗಳಲ್ಲಿ ಫಾರಿನ್ ಬ್ರಿಡ್ ಗಳ ನಾಯಿಗಳನ್ನು ತಂದು ಸಾಕುತ್ತೇವೆ. ಆದರೆ ಬೀದಿನಾಯಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು ಅವುಗಳಿಗೆ ಆಹಾರವಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ಕಾರ್ಯವನ್ನು ಕೈಗೊಳ್ಳಬೇಕಿದೆ ಇದರಿಂದ ಬೀದಿ ನಾಯಿಗಳ ಸಂಖ್ಯೆ ಕಡಿಮೆಯಾಗಿ ಆಹಾರವಿಲ್ಲದೆ ಸಾಯುವ ಅಥವಾ ಅಪಘಾತದಲ್ಲಿ ಸಾಯುವ ನಾಯಿಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಸಂದೇಶವನ್ನು ಪರೋಕ್ಷವಾಗಿ ಸರಕಾರಕ್ಕೆ ಹೇಳಿದ್ರು.ಅದೇನೇ ಇರಲಿ ಬೀದಿನಾಯಿಗಳನ್ನು ಕೀಳಾಗಿ ಕಾಣುವ ಈ ಸಮಯದಲ್ಲಿ ಸತೀಶ್ ನೀನಾಸಂ‌ ಅವುಗಳ ಬಗ್ಗೆ ಕಾಳಜಿ ವಹಿಸಿ ಇತರರಿಗೆ ಮಾದರಿಯಾಗಿದ್ದಾರೆ.

ಸತೀಶ ಎಂಬಿ.


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.