ETV Bharat / sitara

'ಹಳೆ ಡವ್ ನೆನಪಲ್ಲಿ' ಮತ್ತೆ ಅಖಾಡಕ್ಕಿಳಿದ ನಟ ನಕುಲ್ ಗೌಡ - undefined

ಒಂದು ವರ್ಷದ ಗ್ಯಾಪ್ ನಂತರ ಮತ್ತೆ ನಟನೆ ಕಡೆ ಮುಖ ಮಾಡಿರುವ ನಕುಲ್ ಗೌಡ ಹಳೆ ಡವ್​ ನೆನಪಲ್ಲಿ ಅನ್ನೋ ಚಿತ್ರಕ್ಕೆ ಸಕಲ ಸಿದ್ಧತೆ ಮಾಡಿಕೊಂಡೇ ಅಖಾಡಕ್ಕಿಳಿದಿದ್ದಾರೆ.

ನಕುಲ್ ಗೌಡ
author img

By

Published : Jun 25, 2019, 2:26 PM IST

'ಪ್ರೀತಿಯ ರಾಯಭಾರಿ' ಚಿತ್ರದ ನಟ ನಕುಲ್ ಗೌಡ ಈಗ 'ಹಳೆ ಡವ್ ನೆನಪಲ್ಲಿ' ಎಂಬ ಚಿತ್ರದ ಮೂಲಕ ಮತ್ತೆ ಗಾಂಧಿನಗರದತ್ತ ಮುಖ ಮಾಡಿದ್ದಾರೆ. ಸೋಮವಾರ ಈ ಚಿತ್ರದ ಮುಹೂರ್ತ​ ನೆರವೇರಿಸಿರುವ ಚಿತ್ರತಂಡ ಟೀಸರ್​ ಕೂಡ ರಿಲೀಸ್ ಮಾಡಿದೆ.

'ಪ್ರೀತಿಯ ರಾಯಭಾರಿ' ಚಿತ್ರದ ಮೂಲಕ ನಾಯಕನಾಗಿದ್ದ ನಕುಲ್​ ಒಂದು ವರ್ಷ ಬಿಡುವು ಪಡೆದಿದ್ದರು. ಈ ಟೈಮ್​​ನಲ್ಲಿ ನಟನೆ ಬಗ್ಗೆ ತೆರಬೇತಿ ಪಡೆದು ಈಗ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ನವ ನಿರ್ದೇಶಕ ಮಾರುತಿ ಕಥೆ-ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದು, ಸ್ಯಾಂಡಲ್​​ವುಡ್​​ನಲ್ಲಿ ಮೋಡಿ ಎನ್ನುವ ದೃಢ ನಂಬಿಕೆಯಲ್ಲಿದ್ದಾರೆ.

ಹಳೆ ಡವ್ ನೆನಪಲ್ಲಿ ಚಿತ್ರದ ಮುಹೂರ್ತ

ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅವರ ಹೆಸರುಗಳನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಮೋಸ ಮಾಡಿದ ಹುಡುಗಿಯರ ನೆನಪಿನಲ್ಲಿ ನಾಯಕ ಇರ್ತಾನೆ. ಈ ಸಂಕೋಲೆಗಳಿಂದ ಆತ ಹೇಗೆ ಹೊರ ಬರುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ. ಈ ಚಿತ್ರದಲ್ಲಿ ಮೂರು ಲವ್ ಸ್ಟೋರಿ ತೋರಿಸಲು ನಿರ್ದೇಶಕರು ಪ್ಲಾನ್ ಮಾಡಿದ್ದಾರೆ. ಆಗಸ್ಟ್​​ಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚಿತ್ರವನ್ನು ನಾಯಕ ನಕುಲ್ ಗೌಡ ಸ್ನೇಹಿತ ಗಿರಿಧರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಸ್ಟೋರಿಯು ಅದ್ಭುತವಾಗಿದ್ದು, ನಕುಲ್​ ನನ್ನ ಸ್ನೇಹಿತ. ಹಾಗಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿರುವುದಾಗಿ ಗಿರಿಧರ್ ಹೇಳಿದ್ದಾರೆ.

ಇನ್ನು ನಿನ್ನೆ ನಗರದ ಎಸ್.ಅರ್.ವಿ ಥಿಯೇಟರ್​​​ಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಶರವಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡರು ಹಾಗೂ ಕಾರ್ಯದರ್ಶಿಗಳಾದ ಭಾಮಾ ಹರೀಶ್ ಆಗಮಿಸಿ ಚಿತ್ರದ ಟೀಸರನ್ನು ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.

'ಪ್ರೀತಿಯ ರಾಯಭಾರಿ' ಚಿತ್ರದ ನಟ ನಕುಲ್ ಗೌಡ ಈಗ 'ಹಳೆ ಡವ್ ನೆನಪಲ್ಲಿ' ಎಂಬ ಚಿತ್ರದ ಮೂಲಕ ಮತ್ತೆ ಗಾಂಧಿನಗರದತ್ತ ಮುಖ ಮಾಡಿದ್ದಾರೆ. ಸೋಮವಾರ ಈ ಚಿತ್ರದ ಮುಹೂರ್ತ​ ನೆರವೇರಿಸಿರುವ ಚಿತ್ರತಂಡ ಟೀಸರ್​ ಕೂಡ ರಿಲೀಸ್ ಮಾಡಿದೆ.

'ಪ್ರೀತಿಯ ರಾಯಭಾರಿ' ಚಿತ್ರದ ಮೂಲಕ ನಾಯಕನಾಗಿದ್ದ ನಕುಲ್​ ಒಂದು ವರ್ಷ ಬಿಡುವು ಪಡೆದಿದ್ದರು. ಈ ಟೈಮ್​​ನಲ್ಲಿ ನಟನೆ ಬಗ್ಗೆ ತೆರಬೇತಿ ಪಡೆದು ಈಗ ಹೊಸ ಚಿತ್ರಕ್ಕೆ ಅಣಿಯಾಗಿದ್ದಾರೆ. ನವ ನಿರ್ದೇಶಕ ಮಾರುತಿ ಕಥೆ-ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದು, ಸ್ಯಾಂಡಲ್​​ವುಡ್​​ನಲ್ಲಿ ಮೋಡಿ ಎನ್ನುವ ದೃಢ ನಂಬಿಕೆಯಲ್ಲಿದ್ದಾರೆ.

ಹಳೆ ಡವ್ ನೆನಪಲ್ಲಿ ಚಿತ್ರದ ಮುಹೂರ್ತ

ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅವರ ಹೆಸರುಗಳನ್ನು ಚಿತ್ರತಂಡ ರಿವೀಲ್ ಮಾಡಿಲ್ಲ. ಮೋಸ ಮಾಡಿದ ಹುಡುಗಿಯರ ನೆನಪಿನಲ್ಲಿ ನಾಯಕ ಇರ್ತಾನೆ. ಈ ಸಂಕೋಲೆಗಳಿಂದ ಆತ ಹೇಗೆ ಹೊರ ಬರುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿಯಾಗಿದೆ. ಈ ಚಿತ್ರದಲ್ಲಿ ಮೂರು ಲವ್ ಸ್ಟೋರಿ ತೋರಿಸಲು ನಿರ್ದೇಶಕರು ಪ್ಲಾನ್ ಮಾಡಿದ್ದಾರೆ. ಆಗಸ್ಟ್​​ಲ್ಲಿ ಚಿತ್ರದ ಶೂಟಿಂಗ್ ಶುರುವಾಗಲಿದೆ. ಚಿತ್ರವನ್ನು ನಾಯಕ ನಕುಲ್ ಗೌಡ ಸ್ನೇಹಿತ ಗಿರಿಧರ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಸ್ಟೋರಿಯು ಅದ್ಭುತವಾಗಿದ್ದು, ನಕುಲ್​ ನನ್ನ ಸ್ನೇಹಿತ. ಹಾಗಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿರುವುದಾಗಿ ಗಿರಿಧರ್ ಹೇಳಿದ್ದಾರೆ.

ಇನ್ನು ನಿನ್ನೆ ನಗರದ ಎಸ್.ಅರ್.ವಿ ಥಿಯೇಟರ್​​​ಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯ ಶರವಣ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಚಿನ್ನೇಗೌಡರು ಹಾಗೂ ಕಾರ್ಯದರ್ಶಿಗಳಾದ ಭಾಮಾ ಹರೀಶ್ ಆಗಮಿಸಿ ಚಿತ್ರದ ಟೀಸರನ್ನು ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.

Intro:"ಪ್ರೀತಿಯ ರಾಯಭಾರಿ" ಚಿತ್ರದಲ್ಲಿ ಗಮನ ಸೆಳೆದಿದ್ದ ನವ ನಟ ನಕುಲ್ ಗೌಡ ಈಗ " ಹಳೆ ಡವ್ ನೆನಪಲ್ಲಿ" ಮತ್ತೆ ಗಾಂಧಿನಗರದ ಕಡೆ ಮುಖ ಮಾಡಿದ್ದಾರೆ. ಎಸ್ ಪ್ರೀತಿಯರಾಯಭಾರಿ ಚಿತ್ರದ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ. ನಕುಲ್ ಗೌಡ ಈಗ "ಹಳೆ ಡವ್ ನೆನಪಲ್ಲಿ". ಎಂಬ ಹೊಸ ಚಿತ್ರದ ಮೂಲಕ ಒಂದು ವರ್ಷದ ಗ್ಯಾಫ್ ನಂತರ ಮತ್ತೆ ಬಣ್ಣ ಹಚ್ಚೊಕೆ ರೆಡಿಯಾಗಿದ್ದಾರೆ.


Body:ಅಲ್ಲದೆ ನಿನ್ನೆ ಹಳೆ ಡವ್ ನೆನಪಲ್ಲಿ" ಚಿತ್ರದ ಮುಹೂರ್ತ ನೆರವೇರಿದೆ.ಜೊತೆಗೆ ಚಿತ್ರದ ಟೀಸರನ್ನು ಸಹ ಚಿತ್ರತಂಡ ಬಿಡುಗಡೆ ಮಾಡಿತು. ನಗರದ ಎಸ್ ಅರ್ ವಿ ಥಿಯೇಟರ್ ನಲ್ಲಿ ನಡೆದ ಚಿತ್ರದ ಮುಹೂರ್ತ ಕಾರ್ಯಕ್ರಮಕ್ಕೆ ವಿಧಾನಪರಿಷತ್ ಸದಸ್ಯರಾದ ಶರವಣ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೇಗೌಡರು ಹಾಗೂ ಕಾರ್ಯದರ್ಶಿಗಳಾದ ಭಾಮಾ ಹರೀಶ್ ಆಗಮಿಸಿ ಚಿತ್ರದ ಟೀಸರನ್ನು ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು.


Conclusion:ಒಂದು ವರ್ಷದ ಗ್ಯಾಪ್ ನಂತರ ಮತ್ತೆ ನಟನೆ ಕಡೆ ಮುಖ ಮಾಡಿರುವ ನಕುಲ್ ಗೌಡ ಈ ಚಿತ್ರದಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಂಡೆ ಅಖಾಡಕ್ಕಿಳಿದಿದ್ದಾರೆ. ಇನ್ನು ಈ ಚಿತ್ರವನ್ನು ಮಾರುತಿ ಎಂಬ ಹೊಸ ನಿರ್ದೇಶಕ ಕಥೆ ಚಿತ್ರಕಥೆ ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದು ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡೇ ಮಾಡ್ತಿವಿ ಎನ್ನುವ ಕಾನ್ಫಿಡೆನ್ಸ್ ನಲ್ಲಿ ಬಂದಿದ್ದಾರೆ. ಇನ್ನೂ ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಕೈಕೊಟ್ಟು ಹೋದ ಹುಡುಗಿಯರ ನೆನಪಿನಲ್ಲಿ ನಾಯಕ ಇರ್ತಾನೆ. ಅಲ್ಲದೆ ಕೈಕೊಟ್ಟು ಬಿಟ್ಟುಹೋದ ಹಳೆ ಡವ್ ಗಳ ನೆನಪಿನಿಂದ ಮತ್ತೆ ಹೇಗೆ ನಾಯಕನಟ ಹೊರ ಬರುತ್ತಾನೆ ಎಂಬುದೇ ಚಿತ್ರದ ಒನ್ ಲೈನ್ ಸ್ಟೋರಿ ಯಾಗಿದ್ದು. ಮೂರು ಲವ್ ಸ್ಟೋರಿ ಗಳನ್ನು ಚಿತ್ರದಲ್ಲಿ ತೋರಿಸಲು ನಿರ್ದೇಶಕ ಮಾರುತಿ ಪ್ಲಾನ್ ಮಾಡಿಕೊಂಡಿದ್ದಾರೆ. ಅಲ್ಲದೆ ಮೂರು ಲವ್ ಸ್ಟೋರಿ ಗಳಲ್ಲಿ ಒಂದು ಅಂತರ್ಧರ್ಮೀಯ ಸ್ಟೋರಿಯನ್ನು ಹೆಣೆದಿದ್ದಾರಂತೆ. ಆಗಸ್ಟ್ ನಲ್ಲಿ ಚಿತ್ರದ ಶೂಟಿಂಗ್ ಅನ್ನು ಪ್ಲಾನ್ ಮಾಡಿರುವ ನಿರ್ದೇಶಕರು ಆದಷ್ಟು ಬೇಗ ನಾಯಕಿಯರನ್ನು ರಿವೀಲ್ ಮಾಡುವುದಾಗಿ ಹೇಳಿದ್ದಾರೆ. ಇನ್ನು ಚಿತ್ರವನ್ನು ನಾಯಕ ನಕುಲ್ ಗೌಡ ಸ್ನೇಹಿತರಾದ ಗಿರಿಧರ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಸ್ಟೋರಿ ಯು ತುಂಬಾ ಅದ್ಭುತವಾಗಿ ಮೂಡಿ ಬಂದಿದೆ ಜೊತೆಗೆ ನಾಯಕನೂ ನನ್ನ ಆತ್ಮೀಯ ಸ್ನೇಹಿತ ಹಾಗಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದಾಗಿ ಗಿರಿಧರ್ ಹೇಳಿದರು. ಇನ್ನೂ ಮೊದಲ ಚಿತ್ರದಲ್ಲಿ ನನಗೆ ಒಂದು ಒಳ್ಳೆ ಪ್ಲಾಟ್ಫಾರ್ಮ್ ಸಿಕ್ಕಿದೆ ನಾನು ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ನನ್ನದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿ ಕೊಡ್ತೀನಿ ಎಂಬ ಭರವಸೆಯೊಂದಿಗೆ ನಾಯಕ ನಕುಲ್ ಗೌಡ ಇದ್ದಾರೆ. ಅಲ್ಲದೆ ನಾಯಕನ ನಕುಲ್ ಗೌಡ ಅವರಿಗೆ ಈಗಾಗಲೇ ಅಭಿಮಾನಿಬಳಗ ಹುಟ್ಟಿಕೊಂಡಿದ್ದು ಯುನಿಕ್ ಪ್ರಿನ್ಸ್ ಎಂಬ ಟೈಟಲ್ ಕೊಟ್ಟಿದ್ದಾರೆ..


ಸತೀಶ ಎಂಬಿ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.