ಕಿಲ್ಲರ್ ವೆಂಕಟೇಶ್ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ನಟನಾಗಿ ಮಿಂಚಿದವರು. ಪೋಷಕ ಪಾತ್ರ, ಖಳ ನಟ, ಸ್ನೇಹಿತನ ಪಾತ್ರ ಹೀಗೆ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಅನಾರೋಗ್ಯಕ್ಕೀಡಾಗಿದ್ದಾರೆ. ವೆಂಕಟೇಶ್ ಕುಟುಂಬ ಸಹ ಅವರನ್ನ ಬದುಕಿಸಿಕೊಳ್ಳಲು ಹರಸಾಹಸ ಪಡುತ್ತಿದೆ.
![Actor Killer Venkatesh suffering from illness](https://etvbharatimages.akamaized.net/etvbharat/prod-images/kn-bng-02-sahanatan-sahayake-bnada-jaggesh-7204735_19022020151010_1902f_1582105210_233.jpg)
ಬಹುಪಾಲು ಜಗ್ಗೇಶ್ ಅಭಿನಯಿಸುತ್ತಿದ್ದ ಚಿತ್ರಗಳಲ್ಲಿ ನಟಿಸುತ್ತಿದ್ದ ನಟ ಕಿಲ್ಲರ್ ವೆಂಕಟೇಶ್ ಲೀವರ್ ವೈಫಲ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆ ನವರಸ ನಾಯಕ ಜಗ್ಗೇಶ್, ವೆಂಕಟೇಶ್ರನ್ನು ಭೇಟಿಯಾಗಿ ಆತ್ಮಸ್ಥೈರ್ಯ ತುಂಬಿದ್ದಾರೆ. 'ನನ್ನ ಕೈಲಾದ ಸಹಾಯ ಮಾಡಿ ಇವನ ಉಳಿಸಿಕೊಳ್ಳಲು ಯತ್ನಿಸುತ್ತಿರುವೆ. ಹಿರಿಯ ಕಲಾವಿದನ ಸ್ಥಿತಿ ಕಂಡು ತುಂಬಾ ದುಃಖವಾಯಿತು. ರಾಯರೇ ಕಾಪಾಡಬೇಕು ಇಂಥ ಕಲಾವಿದರನ್ನ' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
-
#ಮಾಧ್ಯಮಮಿತ್ರರೆ #ಕಲಾಭಿಮಾನಿಗಳೆ #ಸಹೃದಯರೆ 35ವರ್ಷ ಕಲಾಸೇವೆ ಮಾಡಿದ ಈ ಕಲಾವಿದನಿಗೆ ಧನಸಹಾಯ ಮಾಡುವ ಮನಸ್ಸು ರಾಯರು ನಿಮಗೆ ನೀಡಿದರೆ ಮಾತ್ರ ಅವನ ಖಾತೆಗೆ ಹಣ ಹಾಕಬಹುದು..
— ನವರಸನಾಯಕ ಜಗ್ಗೇಶ್ (@Jaggesh2) February 19, 2020 " class="align-text-top noRightClick twitterSection" data="
ಬಲವಂತವಿಲ್ಲ..ಯಕೃತ್ ಕಸಿಗೆ ತುಂಬ ದೊಡ್ಡಮೊತ್ತ ಆಗತ್ತದೆ ಹಾಗಾಗಿ ವಿನಂತಿ..
ಧನ್ಯವಾದಗಳು.. pic.twitter.com/GYEYmi6Xup
#ಮಾಧ್ಯಮಮಿತ್ರರೆ #ಕಲಾಭಿಮಾನಿಗಳೆ #ಸಹೃದಯರೆ 35ವರ್ಷ ಕಲಾಸೇವೆ ಮಾಡಿದ ಈ ಕಲಾವಿದನಿಗೆ ಧನಸಹಾಯ ಮಾಡುವ ಮನಸ್ಸು ರಾಯರು ನಿಮಗೆ ನೀಡಿದರೆ ಮಾತ್ರ ಅವನ ಖಾತೆಗೆ ಹಣ ಹಾಕಬಹುದು..
ಬಲವಂತವಿಲ್ಲ..ಯಕೃತ್ ಕಸಿಗೆ ತುಂಬ ದೊಡ್ಡಮೊತ್ತ ಆಗತ್ತದೆ ಹಾಗಾಗಿ ವಿನಂತಿ..
ಧನ್ಯವಾದಗಳು.. pic.twitter.com/GYEYmi6Xup
#ಮಾಧ್ಯಮಮಿತ್ರರೆ #ಕಲಾಭಿಮಾನಿಗಳೆ #ಸಹೃದಯರೆ 35ವರ್ಷ ಕಲಾಸೇವೆ ಮಾಡಿದ ಈ ಕಲಾವಿದನಿಗೆ ಧನಸಹಾಯ ಮಾಡುವ ಮನಸ್ಸು ರಾಯರು ನಿಮಗೆ ನೀಡಿದರೆ ಮಾತ್ರ ಅವನ ಖಾತೆಗೆ ಹಣ ಹಾಕಬಹುದು..
— ನವರಸನಾಯಕ ಜಗ್ಗೇಶ್ (@Jaggesh2) February 19, 2020
ಬಲವಂತವಿಲ್ಲ..ಯಕೃತ್ ಕಸಿಗೆ ತುಂಬ ದೊಡ್ಡಮೊತ್ತ ಆಗತ್ತದೆ ಹಾಗಾಗಿ ವಿನಂತಿ..
ಧನ್ಯವಾದಗಳು.. pic.twitter.com/GYEYmi6Xup
ಹೆಚ್ಚಿನ ಚಿಕಿತ್ಸೆಗಾಗಿ ಕಿಲ್ಲರ್ ವೆಂಕಟೇಶ್ರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆರವು ನೀಡಬೇಕೆಂದು ಆರೋಗ್ಯ ಸಚಿವ ಶ್ರೀರಾಮುಲು, ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರನ್ನು ನಟ ಜಗ್ಗೇಶ್ ಮನವಿ ಮಾಡಿದ್ದಾರೆ.