ETV Bharat / sitara

ಮಗನ ಚೊಚ್ಚಲ ಚಿತ್ರದಲ್ಲಿ ರಿಯಲ್ 'ಅಮರ್' ದರ್ಶನ,ಚಿತ್ರಕ್ಕೆ ಮೈಲೇಜ್‌ ತರುವ 'ಐರಾವತ' - undefined

ದಿವಂಗತ ನಟ ಅಂಬರೀಶ್ ಅವರಿಗೆ ತಮ್ಮ ಪುತ್ರ ಅಭಿಷೇಕ್ ಅವರನ್ನು ತೆರೆಯ ಮೇಲೆ ನೋಡುವ ಕನಸು ಈಡೇರಲಿಲ್ಲ. ಅಮರ್ ಚಿತ್ರದ ಕೆಲಸ ಕೊನೆಯ ಹಂತದಲ್ಲಿದ್ದಾಗಲೇ ಅವರು ಇಹಲೋಕ ತ್ಯಜಿಸಿದ್ದರು.

ಅಮರ್
author img

By

Published : May 31, 2019, 1:50 PM IST

Updated : May 31, 2019, 2:27 PM IST

ಇಂದು ತೆರೆಗೆ ಬಂದಿರುವ 'ಅಮರ್' ಚಿತ್ರದಲ್ಲಿ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ಹಾಗಂತ ಅವರು ಈ ಚಿತ್ರದಲ್ಲಿ ನಟಿಸಿಲ್ಲ. ಬದಲಾಗಿ ಅವರ ಒಂದು ಸಣ್ಣ ವಿಡಿಯೋ ತುಣುಕು ಚಿತ್ರತಂಡ ಚಿತ್ರದ ಕ್ಲೈಮ್ಯಾಕ್ಸ್​​ನಲ್ಲಿ ಸೇರಿಸಿದೆ. ಕಪ್ಪು ಬಣ್ಣದ ಸೂಟ್ ಧರಿಸಿ, ಪಿಯಾನೋ ಮುಂದೆ ಒಲವಿನ ಉಡುಗೊರೆ ಸಾಂಗ್ ನುಡಿಸುತ್ತಿರುವ ಅಂಬಿ ದೃಶ್ಯದ ಮೂಲಕ ಅಮರ್ ಚಿತ್ರಕ್ಕೆ ಶುಭಂ ಹೇಳಿದ್ದಾರೆ ನಿರ್ದೇಶಕ ನಾಗಶೇಖರ್.

ಈ ಚಿತ್ರದಲ್ಲಿ ನಟ ದರ್ಶನ್ ಹಾಗೂ ನಿರೂಪ್ ಭಂಡಾರಿ ಸಹೋದರರಾಗಿ ನಟಿಸಿದ್ದಾರೆ. ಅಭಿಗೆ ಆತನ ಪ್ರೀತಿಯನ್ನು ಮರಳಿ ಒಪ್ಪಿಸುವ ಪಾತ್ರ ದಚ್ಚು ನಿಭಾಯಿಸಿದ್ದಾರೆ. ಇದು ತುಂಬ ತೂಕದ ಪಾತ್ರವಾಗಿದ್ದು, ಚಿತ್ರಕ್ಕೆ ಮೈಲೇಜ್ ನೀಡಿದೆ.

ಇಂದು ತೆರೆಗೆ ಬಂದಿರುವ 'ಅಮರ್' ಚಿತ್ರದಲ್ಲಿ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ಹಾಗಂತ ಅವರು ಈ ಚಿತ್ರದಲ್ಲಿ ನಟಿಸಿಲ್ಲ. ಬದಲಾಗಿ ಅವರ ಒಂದು ಸಣ್ಣ ವಿಡಿಯೋ ತುಣುಕು ಚಿತ್ರತಂಡ ಚಿತ್ರದ ಕ್ಲೈಮ್ಯಾಕ್ಸ್​​ನಲ್ಲಿ ಸೇರಿಸಿದೆ. ಕಪ್ಪು ಬಣ್ಣದ ಸೂಟ್ ಧರಿಸಿ, ಪಿಯಾನೋ ಮುಂದೆ ಒಲವಿನ ಉಡುಗೊರೆ ಸಾಂಗ್ ನುಡಿಸುತ್ತಿರುವ ಅಂಬಿ ದೃಶ್ಯದ ಮೂಲಕ ಅಮರ್ ಚಿತ್ರಕ್ಕೆ ಶುಭಂ ಹೇಳಿದ್ದಾರೆ ನಿರ್ದೇಶಕ ನಾಗಶೇಖರ್.

ಈ ಚಿತ್ರದಲ್ಲಿ ನಟ ದರ್ಶನ್ ಹಾಗೂ ನಿರೂಪ್ ಭಂಡಾರಿ ಸಹೋದರರಾಗಿ ನಟಿಸಿದ್ದಾರೆ. ಅಭಿಗೆ ಆತನ ಪ್ರೀತಿಯನ್ನು ಮರಳಿ ಒಪ್ಪಿಸುವ ಪಾತ್ರ ದಚ್ಚು ನಿಭಾಯಿಸಿದ್ದಾರೆ. ಇದು ತುಂಬ ತೂಕದ ಪಾತ್ರವಾಗಿದ್ದು, ಚಿತ್ರಕ್ಕೆ ಮೈಲೇಜ್ ನೀಡಿದೆ.

ಅನಿಲ್ ಕಪೂರ್ ನೆನಪಿಸಿಕೊಂಡ ಪಲ್ಲವಿ ಅನುಪಲ್ಲವಿ

ಹಿಂದಿ ಚಿತ್ರ ರಂಗದ ದಿಗ್ಗಜ ನಟರುಗಳಲ್ಲಿ ಒಬ್ಬರಾದ ಅನಿಲ್ ಕಪೂರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಮೃತಿ ಪಟಲವನ್ನು ಒಮ್ಮೆ ಬ್ರಷ್ ಮಾಡಿದ್ದಾರೆ.

ಅನಿಲ್ ಕಪೂರ್ ಅವರು 1983 ಆ ದಿನಗಳಿಗೆ ಜಾರಿ ಅವರ ಏಕೈಕ ಕನ್ನಡ ಸಿನಿಮಾ ಪಲ್ಲವಿ ಅನುಪಲ್ಲವಿ ಚಿತ್ರೀಕರಣದ ಸ್ಥಳ, ಸೇವಿಸಿದ ಆಹಾರ, ಓಡಾಡಿದ ಸ್ಥಳ, ಬೇಟಿ ಮಾಡಿದ ವ್ಯಕ್ತಿಗಳು, ನಾಯಕಿ ಆಗಿ ಅಭಿನಯಿಸಿದ ಜೂಲಿ ಲಕ್ಷ್ಮಿ, ನಿರ್ದೇಶಕ ಮಣಿರತ್ನಂ, ಸಂಗೀತ ನಿರ್ದೇಶಕ ಮಾಂತ್ರಿಕ ಇಳಯರಾಜ ಅವರನ್ನು ನೆನಪಿಗೆ ತಂದುಕೊಂಡಿದ್ದಾರೆ.

ಅನಿಲ್ ಕಪೂರ್ ವಿಜಯ್ ಪಾತ್ರದಲ್ಲಿ ಗಂಡನಿಂದ ಬೇರ್ಪಟ್ಟ ಅನು (ಲಕ್ಷ್ಮಿ) ಜೊತೆ ಅಭಿನಯಿಸಿದ್ದರು. ವಯಸ್ಸಿನಲ್ಲಿ ಹಿರಿಯರನ್ನು ಪ್ರೇಮಿಸಿ ಆ ಕಡೆ ತನ್ನ ಪ್ರೇಯಸಿ ಮಧು (ಕಿರಣ್) ತಪ್ಪಿ ಹೋದರೆ ಎಂಬ ಗೊಂದಲ ಇರುವ ಪಾತ್ರ ಇವರದಾಗಿತ್ತು.

ಪಲ್ಲವಿ ಅನುಪಲ್ಲವಿ ಚಿತ್ರದಲ್ಲಿ ನಾಲ್ಕು ಹಾಡುಗಳು ಇಂದಿಗೂ ಜನಪ್ರಿಯ. ಮಣಿರತ್ನಂ ಸಹ ಅನಿಲ್ ಕಪೂರ್ ಅಂತೆ ಈ ಒಂದು ಸಿನಿಮಾ ಆದ ನಂತರ ಮತ್ತೆ ಕನ್ನಡಕ್ಕೆ ವಾಪಸ್ಸು ಬರಲೇ ಇಲ್ಲ. ಅನಿಲ್ ಕಪೂರ್ ಅಭಿನಯದ ಹಿಂದಿ ಸಿನಿಮಾ, ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಗಳು ಕನ್ನಡದಲ್ಲಿ ರೀಮೇಕ್ ಆಗಿ ಬಂದಿವೆ.

ಛಾಯಾಗ್ರಾಹಕ ಬಾಲು ಮಹೇಂದರ್ ಅವರ ಕೈಚಳಕ ಸಹ ಅದ್ಬುತವಾಗಿತ್ತು. ಅಂದಿನ ಕಬ್ಬನ್ ಪಾರ್ಕ್, ಎಂ ಜಿ ರಸ್ತೆ ನೀವು ನೋಡಬೇಕಂಡರೆ ಈ ಚಿತ್ರದಲ್ಲಿ ಲಭ್ಯವಿದೆ. 

Last Updated : May 31, 2019, 2:27 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.