ETV Bharat / sitara

ಕವಿರಾಜ್​​​ ನಿರ್ದೇಶನದ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರಕ್ಕೆ 21 ನಾಯಕಿಯರು...! - ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಕ್ಕಾಗಿ 21 ನಾಯಕಿಯರು

'ಮದುವೆ ಮಮತೆ ಕರೆಯೋಲೆ' ಚಿತ್ರವನ್ನು ನಿರ್ದೇಶಿಸಿದ್ದ ಕವಿರಾಜ್​​​ ಇದೀಗ ಜಗ್ಗೇಶ್ ಹಾಗೂ ಮೇಘನಾ ಗಾಂವ್ಕರ್ ಅಭಿನಯದಲ್ಲಿ 'ಕಾಳಿದಾಸ ಕನ್ನಡ ಮೇಷ್ಟ್ರು' ಚಿತ್ರವನ್ನು ನಿರ್ದೇಶಿಸುತ್ತಿದ್ದು, ಈ ಚಿತ್ರದ ಪ್ರಮೋಷನಲ್​ ಹಾಡಿನಲ್ಲಿ 21 ನಟಿಯರು ಅಭಿನಯಿಸುತ್ತಿದ್ದಾರೆ.

'ಕಾಳಿದಾಸ ಕನ್ನಡ ಮೇಷ್ಟ್ರು'
author img

By

Published : Oct 22, 2019, 7:18 PM IST

ಇದೇನಪ್ಪ, ಒಂದು ಸಿನಿಮಾದಲ್ಲಿ ಹೆಚ್ಚು ಅಂದರೆ ಮೂವರು ನಾಯಕಿಯರು ಇರುತ್ತಾರೆ. ಇದೇನಿದು, ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ 21 ನಾಯಕಿಯರು ಇದ್ದಾರಾ ಎಂದು ಆಶ್ಚರ್ಯ ಪಡಬೇಡಿ. ಈ ಚಿತ್ರದಲ್ಲಿ ನಟಿಸಿರುವುದು ಒಬ್ಬರೇ ನಾಯಕಿ, ಮೇಘನಾ ಗಾಂವ್ಕರ್.

Amulya
ಅಮೂಲ್ಯ

ಉಳಿದ 21 ನಾಯಕಿಯರು ನಟಿಸುತ್ತಿರುವುದು ಚಿತ್ರದಲ್ಲಿ ಅಲ್ಲ. ಬದಲಿಗೆ ಇವರೆಲ್ಲ ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಬಂದು ಹೋಗಲಿದ್ದಾರೆ. 4:30 ನಿಮಿಷ ಇರುವ ಈ ಚಿತ್ರದ ಹಾಡೊಂದರಲ್ಲಿ ಈ ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡಿಗೆ ನಿರ್ದೇಶಕ ಕವಿರಾಜ್ ಅವರೇ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಪ್ರಮೋಷನಲ್ ಹಾಡು ಭರ್ಜರಿಯಾಗಿ ಚಿತ್ರೀಕರಣವಾಗುತ್ತಿದೆ. ಈ ಮುನ್ನ 'ಮದುವೆ ಮಮತೆ ಕರೆಯೋಲೆ' ಚಿತ್ರವನ್ನು ನಿರ್ದೇಶಿಸಿದ್ದ ಕವಿರಾಜ್​​​ಗೆ ಇದು ಎರಡನೇ ಸಿನಿಮಾ. ಇನ್ನು ಈ ಪ್ರಮೋಷನಲ್ ಹಾಡಿಗಾಗಿ ಆಯಾ ಕಲಾವಿದರು ಇರುವ ಸ್ಥಳಕ್ಕೆ ಹೋಗಿ ಹಾಡಿನ ಚಿತ್ರೀಕರಣ ಮಾಡಿಕೊಂಡು ಬರಲಾಗಿದೆ.

Rachita ram
ರಚಿತಾ ರಾಮ್

ನಟಿಯರಾದ ಹರಿಪ್ರಿಯಾ, ರಚಿತಾ ರಾಮ್, ಅಮೂಲ್ಯ, ನಿಶ್ವಿಕಾ ನಾಯ್ಡು, ದಿವ್ಯ ಉರುಡುಗ, ಶುಭ ಪೂಂಜಾ, ಸಿಂಧು ಲೋಕನಾಥ್, ಹರ್ಷಿಕಾ ಪೂಣಚ್ಚ, ಕಾರುಣ್ಯ ರಾಮ್, ಅನುಪಮ ಗೌಡ, ಸಂಯುಕ್ತ ಹೊರನಾಡು, ರೂಪಿಕಾ, ಅನು ಗೌಡ, ದಿಶಾ ಪೂವಯ್ಯ, ಅದಿತಿ ಪ್ರಭುದೇವ, ಮಾನ್ವಿತ ಹರೀಶ್, ವೈಭವಿ, ವೈನಿಧಿ, ವೈಸಿರಿ, ರಾಗಿಣಿ ದ್ವಿವೇದಿ ಸೇರಿ ಇನ್ನಿತರ ನಟಿಯರು ಈ ಹಾಡಿನಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಈ ರೀತಿಯ ಪ್ರಯತ್ನ ದೀಪಿಕಾ ಪಡುಕೋಣೆ, ಶಾರುಖ್ ಖಾನ್ ನಟನೆಯ ‘ಓಂ ಶಾಂತಿ ಓಂ’ ಚಿತ್ರದಲ್ಲಿ ಆಗಿತ್ತು. ಆ ಚಿತ್ರದ ಒಂದು ಹಾಡಿನಲ್ಲಿ ಹಿಂದಿಯ 31 ಪ್ರಮುಖ ನಟ-ನಟಿಯರು ಬಂದುಹೋಗಿದ್ದರು.

haripriya
ಹರಿಪ್ರಿಯಾ

ಕನ್ನಡದಲ್ಲಿ 10ಕ್ಕೂ ಹೆಚ್ಚು ಕಲಾವಿದರನ್ನು ಎಸ್​​​​​​.ವಿ. ರಾಜೇಂದ್ರ ಸಿಂಗ್ ಬಾಬು ಉಪೇಂದ್ರ ಹಾಗೂ ರಮ್ಯ ಅಭಿನಯದ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಚಿತ್ರದಲ್ಲಿ ಬಳಸಿಕೊಂಡಿದ್ದರು. ಡಾ. ವಿಷ್ಣುವರ್ಧನ್​, ರಮೇಶ್ ಅರವಿಂದ್, ಜಗ್ಗೇಶ್, ಆದಿತ್ಯ ಹಾಗೂ ಇನ್ನಿತರರು ಆ ಹಾಡಿನಲ್ಲಿ ಪಾಲ್ಗೊಂಡಿದ್ದರು. ಆದರೆ, ಆ ಸಿನಿಮಾ ದಶಕ ಕಳೆದರೂ ಬಿಡುಗಡೆ ಭಾಗ್ಯ ಕಂಡಿಲ್ಲ. ಇದೀಗ ಕಾಳಿದಾಸ ಚಿತ್ರದಲ್ಲಿ ಈ ಪ್ರಯತ್ನ ನಡೆಯುತ್ತಿದೆ. ಈ ಹಾಡು ಹೇಗೆ ಮೂಡಿಬರಲಿದೆ ಎಂಬುದನ್ನು ಸ್ವಲ್ಪ ದಿನಗಳು ಕಾದು ನೋಡಬೇಕು.

Ragini dwivedi
ರಾಗಿಣಿ ದ್ವಿವೇದಿ

ಇದೇನಪ್ಪ, ಒಂದು ಸಿನಿಮಾದಲ್ಲಿ ಹೆಚ್ಚು ಅಂದರೆ ಮೂವರು ನಾಯಕಿಯರು ಇರುತ್ತಾರೆ. ಇದೇನಿದು, ‘ಕಾಳಿದಾಸ ಕನ್ನಡ ಮೇಷ್ಟ್ರು’ ಚಿತ್ರದಲ್ಲಿ 21 ನಾಯಕಿಯರು ಇದ್ದಾರಾ ಎಂದು ಆಶ್ಚರ್ಯ ಪಡಬೇಡಿ. ಈ ಚಿತ್ರದಲ್ಲಿ ನಟಿಸಿರುವುದು ಒಬ್ಬರೇ ನಾಯಕಿ, ಮೇಘನಾ ಗಾಂವ್ಕರ್.

Amulya
ಅಮೂಲ್ಯ

ಉಳಿದ 21 ನಾಯಕಿಯರು ನಟಿಸುತ್ತಿರುವುದು ಚಿತ್ರದಲ್ಲಿ ಅಲ್ಲ. ಬದಲಿಗೆ ಇವರೆಲ್ಲ ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಬಂದು ಹೋಗಲಿದ್ದಾರೆ. 4:30 ನಿಮಿಷ ಇರುವ ಈ ಚಿತ್ರದ ಹಾಡೊಂದರಲ್ಲಿ ಈ ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಾಡಿಗೆ ನಿರ್ದೇಶಕ ಕವಿರಾಜ್ ಅವರೇ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಪ್ರಮೋಷನಲ್ ಹಾಡು ಭರ್ಜರಿಯಾಗಿ ಚಿತ್ರೀಕರಣವಾಗುತ್ತಿದೆ. ಈ ಮುನ್ನ 'ಮದುವೆ ಮಮತೆ ಕರೆಯೋಲೆ' ಚಿತ್ರವನ್ನು ನಿರ್ದೇಶಿಸಿದ್ದ ಕವಿರಾಜ್​​​ಗೆ ಇದು ಎರಡನೇ ಸಿನಿಮಾ. ಇನ್ನು ಈ ಪ್ರಮೋಷನಲ್ ಹಾಡಿಗಾಗಿ ಆಯಾ ಕಲಾವಿದರು ಇರುವ ಸ್ಥಳಕ್ಕೆ ಹೋಗಿ ಹಾಡಿನ ಚಿತ್ರೀಕರಣ ಮಾಡಿಕೊಂಡು ಬರಲಾಗಿದೆ.

Rachita ram
ರಚಿತಾ ರಾಮ್

ನಟಿಯರಾದ ಹರಿಪ್ರಿಯಾ, ರಚಿತಾ ರಾಮ್, ಅಮೂಲ್ಯ, ನಿಶ್ವಿಕಾ ನಾಯ್ಡು, ದಿವ್ಯ ಉರುಡುಗ, ಶುಭ ಪೂಂಜಾ, ಸಿಂಧು ಲೋಕನಾಥ್, ಹರ್ಷಿಕಾ ಪೂಣಚ್ಚ, ಕಾರುಣ್ಯ ರಾಮ್, ಅನುಪಮ ಗೌಡ, ಸಂಯುಕ್ತ ಹೊರನಾಡು, ರೂಪಿಕಾ, ಅನು ಗೌಡ, ದಿಶಾ ಪೂವಯ್ಯ, ಅದಿತಿ ಪ್ರಭುದೇವ, ಮಾನ್ವಿತ ಹರೀಶ್, ವೈಭವಿ, ವೈನಿಧಿ, ವೈಸಿರಿ, ರಾಗಿಣಿ ದ್ವಿವೇದಿ ಸೇರಿ ಇನ್ನಿತರ ನಟಿಯರು ಈ ಹಾಡಿನಲ್ಲಿ ಇರಲಿದ್ದಾರೆ ಎನ್ನಲಾಗಿದೆ. ಈ ರೀತಿಯ ಪ್ರಯತ್ನ ದೀಪಿಕಾ ಪಡುಕೋಣೆ, ಶಾರುಖ್ ಖಾನ್ ನಟನೆಯ ‘ಓಂ ಶಾಂತಿ ಓಂ’ ಚಿತ್ರದಲ್ಲಿ ಆಗಿತ್ತು. ಆ ಚಿತ್ರದ ಒಂದು ಹಾಡಿನಲ್ಲಿ ಹಿಂದಿಯ 31 ಪ್ರಮುಖ ನಟ-ನಟಿಯರು ಬಂದುಹೋಗಿದ್ದರು.

haripriya
ಹರಿಪ್ರಿಯಾ

ಕನ್ನಡದಲ್ಲಿ 10ಕ್ಕೂ ಹೆಚ್ಚು ಕಲಾವಿದರನ್ನು ಎಸ್​​​​​​.ವಿ. ರಾಜೇಂದ್ರ ಸಿಂಗ್ ಬಾಬು ಉಪೇಂದ್ರ ಹಾಗೂ ರಮ್ಯ ಅಭಿನಯದ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಚಿತ್ರದಲ್ಲಿ ಬಳಸಿಕೊಂಡಿದ್ದರು. ಡಾ. ವಿಷ್ಣುವರ್ಧನ್​, ರಮೇಶ್ ಅರವಿಂದ್, ಜಗ್ಗೇಶ್, ಆದಿತ್ಯ ಹಾಗೂ ಇನ್ನಿತರರು ಆ ಹಾಡಿನಲ್ಲಿ ಪಾಲ್ಗೊಂಡಿದ್ದರು. ಆದರೆ, ಆ ಸಿನಿಮಾ ದಶಕ ಕಳೆದರೂ ಬಿಡುಗಡೆ ಭಾಗ್ಯ ಕಂಡಿಲ್ಲ. ಇದೀಗ ಕಾಳಿದಾಸ ಚಿತ್ರದಲ್ಲಿ ಈ ಪ್ರಯತ್ನ ನಡೆಯುತ್ತಿದೆ. ಈ ಹಾಡು ಹೇಗೆ ಮೂಡಿಬರಲಿದೆ ಎಂಬುದನ್ನು ಸ್ವಲ್ಪ ದಿನಗಳು ಕಾದು ನೋಡಬೇಕು.

Ragini dwivedi
ರಾಗಿಣಿ ದ್ವಿವೇದಿ

ಕವಿರಾಜ್ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಕ್ಕೆ 21 ನಾಯಕಿಯರು

ಇದೇನಪ್ಪ ಇಷ್ಟೊಂದು ನಾಯಕಿಯರು ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರಕ್ಕೆ ಎಂದು ಅಂದುಕೊಂಡಿರ? ಆ 21 ನಾಯಕಿಯರು ಈ ಚಿತ್ರದ ಒಂದು ಪ್ರೋಮೋಷನಲ್ ಹಾಡಿಗೆ ಬರುತ್ತಿದ್ದಾರೆ. ಈ 4 ನಿಮಿಷ 30 ಸೆಕಂಡ್ ಒಂದು ಹಾಡು ಕವಿರಾಜ್, ನಿರ್ದೇಶಕ ಹಾಗೂ ಗೀತ ಸಾಹಿತಿ ರಚಿಸಿದ್ದಾರೆ. ಜಗ್ಗೇಶ್, ಮೇಘನ ಗವಾಂಕರ್ ಮುಖ್ಯ ತಾರಗಣದ ಸಿನಿಮಾ ಕಾಳಿದಾಸ ಕನ್ನಡ ಮೇಷ್ಟ್ರು’.

ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾಕ್ಕೆ ಕೇವಲ ಎರಡು ಹಾಡುಗಳು ತೆರೆಯ ಮೇಲೆ ಆದರೆ ಚಿತ್ರದ ಪ್ರೋಮೋಷನ್ ಹಾಡು ಮಾತ್ರ ಭರ್ಜರಿ ಆಗಿ ಚಿತ್ರೀಕರಣ ಆಗುತ್ತಿದೆ. ನಿರ್ದೇಶಕ ಕವಿರಾಜ್ (ಇದು ಅವರ ಎರಡನೇ ಸಿನಿಮಾ = ಮೊದಲು ಮದುವೆಯ ಮಮತೆಯ ಕರೆಯೋಲೆ) ಕಲಾವಿದರುಗಳು ಇರುವ ಜಾಗಕ್ಕೆ ತೆರಳಿ ಹಾಡಿಗಾಗಿ ಚಿತ್ರೀಕರಣ ಸಹ ಮಾಡಿಕೊಂಡಿದ್ದಾರೆ.

ಕನ್ನಡದ ನಟಿಯರುಗಳಾದ – ಹರಿಪ್ರಿಯಾ, ರಚಿತ ರಾಮ್, ಅಮೂಲ್ಯ, ನಿಶ್ವಿಕ ನಾಯ್ಡು, ದಿವ್ಯ ಉರುಡುಗ, ಶುಭ ಪೂಂಜಾ, ಸಿಂಧು ಲೋಕನಾಥ್, ಹರ್ಷಿಕ ಪೂನಾಚ್ಚ, ಕಾರುಣ್ಯ ರಾಮ್, ಅನುಪಮ ಗೌಡ, ಸಂಯುಕ್ತ ಹೊರನಾಡು, ರೂಪಿಕಾ, ಅನು ಗೌಡ, ದಿಶಾ ಪೂವಯ್ಯ, ಅದಿತಿ ಪ್ರಭೂದೇವ, ಮನ್ವಿತ ಹರೀಶ್, ವೈಭವಿ, ವೈನಿಧಿ, ವೈಸಿರಿ, ಮೇಘನ ಗವಾಂಕರ್....ಇವರ ಜೊತೆ ರಾಗಿಣಿ ದ್ವಿವೇದಿ ಸಂಪರ್ಕದಲ್ಲಿ ನಿರ್ದೇಶಕ ಕವಿರಾಜ್ ಇದ್ದಾರೆ.

ಅಂದಹಾಗೆ ಈ ರೀತಿಯ ಪ್ರಯತ್ನ ಹಿಂದಿ ಚಿತ್ರ ಓಂ ಶಾಂತಿ ಓಂ ಅಲ್ಲಿ ಆಗಿತ್ತು, ಆ ಚಿತ್ರದ ಒಂದು ಹಾಡಿಗೆ ಹಿಂದಿಯ 31 ಪ್ರಮುಖ ಕಲಾವಿದರುಗಳು ಪಾಲ್ಗೊಂಡಿದ್ದರು.

ಕನ್ನಡದಲ್ಲಿ 10ಕ್ಕೂ ಹೆಚ್ಚು ಕಲಾವಿದರುಗಳನ್ನು ಬಳಸಿ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಉಪೇಂದ್ರ ಹಾಗೂ ರಮ್ಯ ಅಭಿನಯದ ಭಿಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್ ಚಿತ್ರಕ್ಕೆ ಹಾಡೊಂದನ್ನು ಚಿತ್ರೀಕರಿಸಿದ್ದರು. ಡಾ ವಿಷ್ಣು, ರಮೇಶ್ ಅರವಿಂದ್, ಜಗ್ಗೇಶ್, ಆದಿತ್ಯ...ಹಾಗೂ ಇನ್ನಿತರರು ಆ ಹಾಡಿನಲ್ಲಿ ಪಾಲ್ಗೊಂಡಿದ್ದರು. ಆದರೆ ಆ ಸಿನಿಮಾ ದಶಕ ಕಳೆದರೂ ಬಿಡುಗಡೆ ಭಾಗ್ಯ ಕಂಡಿಲ್ಲ.

 

 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.