ETV Bharat / sitara

2019 ಕನ್ನಡ ಚಿತ್ರರಂಗದ ಅಚ್ಚರಿ, ಆಘಾತಕಾರಿ ವಿಷಯಗಳ ಹಿನ್ನೋಟ..! - 2019 ಕನ್ನಡ ಚಿತ್ರರಂಗದ ಹಿನ್ನೋಟ

2019 ಮುಗಿಯಲು ಇನ್ನು ಎರಡು ವಾರಗಳು ಬಾಕಿ ಇದೆ. 2019ಕ್ಕೆ ಗುಡ್ ಬೈ ಹೇಳಿ 2020ನ್ನು ಸ್ವಾಗತ ಮಾಡಿಕೊಳ್ಳಲು ವಿಶ್ವದೆ್ಲ್ಲೆಡೆ ತಯಾರಿ ನಡೆಯುತ್ತಿದೆ. ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಆಘಾತಕಾರಿ ಹಾಗೂ ಅಚ್ಚರಿ ವಿಷಯಗಳು ನಡೆದಿವೆ. ಮೊದಲಿಗೆ ಚಿತ್ರಾಭಿಮಾನಿಗಳ ಮನಸ್ಸಿಗೆ ನೋವು ತಂದ ಘಟನೆಗಳ ಬಗ್ಗೆ ಒಂದು ನೋಟ ಇಲ್ಲಿದೆ.

2019  Kannada film industry
2019 ಸ್ಯಾಂಡಲ್​ವುಡ್ ಹಿನ್ನೋಟ
author img

By

Published : Dec 20, 2019, 1:16 AM IST

Updated : Dec 20, 2019, 12:01 PM IST

2019, ಸ್ಯಾಂಡಲ್​​​ವುಡ್​​​ನಲ್ಲಿ ಅತಿ ಹೆಚ್ಚು ಸಿನಿಮಾಗಳು ನಿರ್ಮಾಣ ಆದ ವರ್ಷ ಎಂಬ ಹೆಗ್ಗಳಿಕೆ ಪಡೆದಿದೆ. ಈ ವರ್ಷದ ಹೊಸ್ತಿಲಲ್ಲಿ ಕನ್ನಡ ಚಿತ್ರರಂಗದ ಕೋಟಿ ವಿತರಕ ಎನ್. ಪ್ರಸಾದ್ ಕಿಡ್ನಿ ವೈಫಲ್ಯದಿಂದ ಇಹಲೋಕ ತ್ಯಜಿಸಿದರು. ಸ್ಯಾಂಡಲ್​​​​​ವುಡ್​​​​ನಲ್ಲಿ ಕಡಿಮೆ ಸಮಯದಲ್ಲಿ ಅಣ್ಣಾಬಾಂಡ್, ಗಾಡ್ ಫಾದರ್, ಭೀಮಾ ತೀರದಲ್ಲಿ, ಚಿಂಗಾರಿ, ಚಂದ್ರ ಹೀಗೆ ಹಲವು ದೊಡ್ಡ ಸ್ಟಾರ್​​​​ಗಳ ಸಿನಿಮಾಗಳನ್ನು ಕೋಟಿ ಕೋಟಿ ಕೊಟ್ಟು ವಿತರಣೆ ಮಾಡುವ ಮೂಲಕ ರಾತ್ರೋರಾತ್ರಿ ಕೋಟಿ ವಿತರಕ ಅನಿಸಿಕೊಂಡಿದ್ದರು. ಎನ್​​​.ಪ್ರಸಾದ್ ಸಾವು ಚಿತ್ರರಂಗಕ್ಕೆ ಶಾಕಿಂಗ್ ನ್ಯೂಸ್ ಆಗಿತ್ತು. ಕಿಡ್ನಿ ವೈಫಲ್ಯದಿಂದ ಜನವರಿ 6ರಂದು ಎನ್.ಪ್ರಸಾದ್ ನಿಧನರಾದರು.

Distributer N. prasad
ವಿತರಕ ಎನ್​​​. ಪ್ರಸಾದ್

ಪ್ರಸಾದ್ ನಂತರ ಕನ್ನಡ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕಿ ಜಯಶ್ರೀದೇವಿ ಕೂಡಾ ಬಾರದ ಲೋಕಕ್ಕೆ ತೆರೆಳಿದರು. ಎಮ್ಮೆ ತಮ್ಮಣ್ಣ, ಕೊಟ್ರೇಶಿ ಕನಸು, ನಾಗಮಂಡಲ, ನಮ್ಮೂರ ಮಂದಾರ ಹೂವೆ, ಅಮೃತ ವರ್ಷಿಣಿ, ಶ್ರೀ ಮಂಜುನಾಥ, ಹಬ್ಬ, ಸ್ನೇಹ ಲೋಕ, ಮುಕುಂದ ಮುರಾರಿ, ಹೀಗೆ ಬಿಗ್ ಬಜೆಟ್ ಹಾಗೂ ದೊಡ್ಡ ಸ್ಟಾರ್​​​​​ಗಳ ಸಿನಿಮಾ ನಿರ್ಮಾಣ ಮಾಡಿದ ಖ್ಯಾತಿ ಜಯಶ್ರೀ ದೇವಿಗೆ ಸಲ್ಲುತ್ತದೆ. ಆದರೆ ಫೆಬ್ರವರಿ 13ರಂದು ಜಯಶ್ರೀ ದೇವಿಯ ಸಾವಿನ ಸುದ್ದಿ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲು ಆಗಲಿಲ್ಲ. ಹೈದರಾಬಾದ್​​ನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ಜಯಶ್ರೀ ಅವರಿಗೆ 60 ವರ್ಷ ವಯಸ್ಸಾಗಿತ್ತು.

Producer Jayashree devi
ನಿರ್ಮಾಪಕಿ ಜಯಶ್ರೀ ದೇವಿ

ಇನ್ನು ರಂಗಕರ್ಮಿ, ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಕೂಡಾ ಮೇ 2ರಂದು ಅನಾರೋಗ್ಯದಿಂದ ಸಾವನ್ನಪ್ಪಿದರು. ನಾಟಕಗಳಿಂದಲೇ ಭ್ರಷ್ಟಾಚಾರಿಗಳು ಹಾಗೂ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುತ್ತಿದ್ದ ಚಾಣಕ್ಯ ಅವರು. ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ವಿಧಿವಶರಾದರು.

Master Hiranaiah
ಮಾಸ್ಟರ್ ಹಿರಣಯ್ಯ

ಮಾಸ್ಟರ್ ಹಿರಣ್ಣಯ್ಯ ನಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಜೂನ್ 10ರಂದು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಬಹುಭಾಷೆ ಸಿನಿಮಾಗಳಲ್ಲಿ ಗಿರೀಶ್ ಕಾರ್ನಾಡ್ ಅಭಿನಯಿಸಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ನಿಧನ ಸುದ್ದಿ ಕನ್ನಡ ಚಿತ್ರರಂಗ ಅಲ್ಲದೆ ಇಡೀ ದಕ್ಷಿಣ ಸಿನಿಮಾರಂಗಕ್ಕೆ ಆಘಾತ ಉಂಟು ಮಾಡಿತ್ತು.

Girish karnad
ಗಿರೀಶ್ ಕಾರ್ನಾಡ್

ಕನ್ನಡ ಚಿತ್ರರಂಗದ ಮೊದಲ ವಾಕ್ಚಿತ್ರ, ಭಕ್ತಧ್ರುವ ಸಿನಿಮಾದ ನಟಿ ಎಸ್.ಕೆ. ಪದ್ಮಾದೇವಿ ಕಳೆದ ಸೆಪ್ಟೆಂಬರ್​​​​​​ನಲ್ಲಿ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು

S.K. Padmadevi
ಎಸ್.ಕೆ. ಪದ್ಮಾದೇವಿ

ಎಸ್​​​​​​.ಕೆ.ಪದ್ಮಾವತಿ ಬಳಿಕ ಕನ್ನಡ ಚಿತ್ರರಂಗ ಮತ್ತೊಬ್ಬ ಹಿರಿಯ ನಟಿ ಎಲ್​​​​​​.ವಿ.ಶಾರದಾ ಅವರನ್ನು ಕಳೆದುಕೊಂಡಿತ್ತು. ವಂಶವೃಕ್ಷ, ಫಣಿಯಮ್ಮ, ಭೂತಯ್ಯನ ಮಗ ಅಯ್ಯು, ವಾತ್ಸಲ್ಯ ಪಥ, ಆದಿ ಶಂಕರಾಚಾರ್ಯ, ಹೀಗೆ ಹಲವಾರು ಸಿನಿಮಾಗಳಲ್ಲಿ ಎಲ್​​​.ವಿ.ಶಾರದಾ ಅಭಿನಯಿಸಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಎಲ್.ವಿ.ಶಾರದಾ ಮಾರ್ಚ್ 21ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

L.V. Sharada
ಎಲ್​​​. ವಿ. ಶಾರದಾ

ಇನ್ನು ಕನ್ನಡ ಚಿತ್ರರಂಗದಲ್ಲಿ ಅಚ್ಚರಿ ವಿಷಯಗಳ ಬಗ್ಗೆ ನೋಡಿದಾಗ, ಕೆಲವೇ ಕೆಲವು ಘಟನೆಗಳು ಕಣ್ಮುಂದೆ ಬರುತ್ತದೆ. ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಜೊತೆ ಸೇರಿ ಸುಮಲತಾ ಅಂಬರೀಶ್ ಅವರ ಪರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದು. ದರ್ಶನ್ ಹಾಗೂ ಯಶ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟರ ಸಿನಿಮಾ ಡೈಲಾಗ್​​​ಗಳ ಮೂಲಕ ಎನ್​ಕೌಂಟರ್ ಕೊಡುತ್ತಿದ್ದರೂ, ಈ ಇಬ್ಬರು ನಟರು ಮಾತ್ರ ಜೊತೆ ಸೇರಿ ಅಂಬಿಯ ಋಣ ತೀರಿಸಲು ಒಟ್ಟಿಗೆ ಸೇರಿ ಚುನಾವಣಾ ಪ್ರಚಾರ ಮಾಡಿದರು.

Darshan and Yash in Mandya Parliament election
ಮಂಡ್ಯ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ದರ್ಶನ್, ಯಶ್​​​

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಳಿಯ ಅನಿರುದ್ಧ್​​​​, ಸಿನಿಮಾಗಳಲ್ಲಿ ಅಭಿನಯಿಸುವಾಗ ಅಷ್ಟೊಂದು ಸ್ಟಾರ್ ಡಮ್ ಇರಲಿಲ್ಲ. ಆದರೆ 'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಅವರು ಕಿರುತೆರೆಗೆ ಕಾಲಿಟ್ಟ ನಂತರ ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡರು. ಜೊತೆಗೆ ಕಿರುತೆರೆಯ ಸ್ಟಾರ್ ಹೀರೋ ಆದದ್ದು ನಿಜಕ್ಕೂ ಆಶ್ಚರ್ಯದ ವಿಚಾರ ಎನ್ನಬಹುದು.

Jote joteyali serial
ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್

ಇನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ವಾರ್ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿ ಐರಾ ಹುಟ್ಟುಹಬ್ಬಕ್ಕೆ ಇಡೀ ಕನ್ನಡ ಚಿತ್ರರಂಗ ಬಂದು ನಾವೆಲ್ಲರೂ ಒಂದೇ ಅಂತಾ ಸಂದೇಶ ನೀಡಿದ್ದು ಎಲ್ಲರಿಗೂ ಖುಷಿಯ ವಿಚಾರ. ಕನ್ನಡದ ಚಿಕ್ಕ ನಟನಿಂದ ಹಿಡಿದು ದೊಡ್ಡ ಸ್ಟಾರ್​​​ವರೆಗೂ ಯಶ್ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

Rocking star Yash daughter birthday
ರಾಕಿಂಗ್ ಸ್ಟಾರ್ ಯಶ್ ಪುತ್ರಿ ಐರಾ ಹುಟ್ಟುಹಬ್ಬ

2019, ಸ್ಯಾಂಡಲ್​​​ವುಡ್​​​ನಲ್ಲಿ ಅತಿ ಹೆಚ್ಚು ಸಿನಿಮಾಗಳು ನಿರ್ಮಾಣ ಆದ ವರ್ಷ ಎಂಬ ಹೆಗ್ಗಳಿಕೆ ಪಡೆದಿದೆ. ಈ ವರ್ಷದ ಹೊಸ್ತಿಲಲ್ಲಿ ಕನ್ನಡ ಚಿತ್ರರಂಗದ ಕೋಟಿ ವಿತರಕ ಎನ್. ಪ್ರಸಾದ್ ಕಿಡ್ನಿ ವೈಫಲ್ಯದಿಂದ ಇಹಲೋಕ ತ್ಯಜಿಸಿದರು. ಸ್ಯಾಂಡಲ್​​​​​ವುಡ್​​​​ನಲ್ಲಿ ಕಡಿಮೆ ಸಮಯದಲ್ಲಿ ಅಣ್ಣಾಬಾಂಡ್, ಗಾಡ್ ಫಾದರ್, ಭೀಮಾ ತೀರದಲ್ಲಿ, ಚಿಂಗಾರಿ, ಚಂದ್ರ ಹೀಗೆ ಹಲವು ದೊಡ್ಡ ಸ್ಟಾರ್​​​​ಗಳ ಸಿನಿಮಾಗಳನ್ನು ಕೋಟಿ ಕೋಟಿ ಕೊಟ್ಟು ವಿತರಣೆ ಮಾಡುವ ಮೂಲಕ ರಾತ್ರೋರಾತ್ರಿ ಕೋಟಿ ವಿತರಕ ಅನಿಸಿಕೊಂಡಿದ್ದರು. ಎನ್​​​.ಪ್ರಸಾದ್ ಸಾವು ಚಿತ್ರರಂಗಕ್ಕೆ ಶಾಕಿಂಗ್ ನ್ಯೂಸ್ ಆಗಿತ್ತು. ಕಿಡ್ನಿ ವೈಫಲ್ಯದಿಂದ ಜನವರಿ 6ರಂದು ಎನ್.ಪ್ರಸಾದ್ ನಿಧನರಾದರು.

Distributer N. prasad
ವಿತರಕ ಎನ್​​​. ಪ್ರಸಾದ್

ಪ್ರಸಾದ್ ನಂತರ ಕನ್ನಡ ಹಾಗೂ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕಿ ಜಯಶ್ರೀದೇವಿ ಕೂಡಾ ಬಾರದ ಲೋಕಕ್ಕೆ ತೆರೆಳಿದರು. ಎಮ್ಮೆ ತಮ್ಮಣ್ಣ, ಕೊಟ್ರೇಶಿ ಕನಸು, ನಾಗಮಂಡಲ, ನಮ್ಮೂರ ಮಂದಾರ ಹೂವೆ, ಅಮೃತ ವರ್ಷಿಣಿ, ಶ್ರೀ ಮಂಜುನಾಥ, ಹಬ್ಬ, ಸ್ನೇಹ ಲೋಕ, ಮುಕುಂದ ಮುರಾರಿ, ಹೀಗೆ ಬಿಗ್ ಬಜೆಟ್ ಹಾಗೂ ದೊಡ್ಡ ಸ್ಟಾರ್​​​​​ಗಳ ಸಿನಿಮಾ ನಿರ್ಮಾಣ ಮಾಡಿದ ಖ್ಯಾತಿ ಜಯಶ್ರೀ ದೇವಿಗೆ ಸಲ್ಲುತ್ತದೆ. ಆದರೆ ಫೆಬ್ರವರಿ 13ರಂದು ಜಯಶ್ರೀ ದೇವಿಯ ಸಾವಿನ ಸುದ್ದಿ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳಲು ಆಗಲಿಲ್ಲ. ಹೈದರಾಬಾದ್​​ನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದ ಜಯಶ್ರೀ ಅವರಿಗೆ 60 ವರ್ಷ ವಯಸ್ಸಾಗಿತ್ತು.

Producer Jayashree devi
ನಿರ್ಮಾಪಕಿ ಜಯಶ್ರೀ ದೇವಿ

ಇನ್ನು ರಂಗಕರ್ಮಿ, ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯ ಕೂಡಾ ಮೇ 2ರಂದು ಅನಾರೋಗ್ಯದಿಂದ ಸಾವನ್ನಪ್ಪಿದರು. ನಾಟಕಗಳಿಂದಲೇ ಭ್ರಷ್ಟಾಚಾರಿಗಳು ಹಾಗೂ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸುತ್ತಿದ್ದ ಚಾಣಕ್ಯ ಅವರು. ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ವಿಧಿವಶರಾದರು.

Master Hiranaiah
ಮಾಸ್ಟರ್ ಹಿರಣಯ್ಯ

ಮಾಸ್ಟರ್ ಹಿರಣ್ಣಯ್ಯ ನಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಜೂನ್ 10ರಂದು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಬಹುಭಾಷೆ ಸಿನಿಮಾಗಳಲ್ಲಿ ಗಿರೀಶ್ ಕಾರ್ನಾಡ್ ಅಭಿನಯಿಸಿ ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ನಿಧನ ಸುದ್ದಿ ಕನ್ನಡ ಚಿತ್ರರಂಗ ಅಲ್ಲದೆ ಇಡೀ ದಕ್ಷಿಣ ಸಿನಿಮಾರಂಗಕ್ಕೆ ಆಘಾತ ಉಂಟು ಮಾಡಿತ್ತು.

Girish karnad
ಗಿರೀಶ್ ಕಾರ್ನಾಡ್

ಕನ್ನಡ ಚಿತ್ರರಂಗದ ಮೊದಲ ವಾಕ್ಚಿತ್ರ, ಭಕ್ತಧ್ರುವ ಸಿನಿಮಾದ ನಟಿ ಎಸ್.ಕೆ. ಪದ್ಮಾದೇವಿ ಕಳೆದ ಸೆಪ್ಟೆಂಬರ್​​​​​​ನಲ್ಲಿ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು

S.K. Padmadevi
ಎಸ್.ಕೆ. ಪದ್ಮಾದೇವಿ

ಎಸ್​​​​​​.ಕೆ.ಪದ್ಮಾವತಿ ಬಳಿಕ ಕನ್ನಡ ಚಿತ್ರರಂಗ ಮತ್ತೊಬ್ಬ ಹಿರಿಯ ನಟಿ ಎಲ್​​​​​​.ವಿ.ಶಾರದಾ ಅವರನ್ನು ಕಳೆದುಕೊಂಡಿತ್ತು. ವಂಶವೃಕ್ಷ, ಫಣಿಯಮ್ಮ, ಭೂತಯ್ಯನ ಮಗ ಅಯ್ಯು, ವಾತ್ಸಲ್ಯ ಪಥ, ಆದಿ ಶಂಕರಾಚಾರ್ಯ, ಹೀಗೆ ಹಲವಾರು ಸಿನಿಮಾಗಳಲ್ಲಿ ಎಲ್​​​.ವಿ.ಶಾರದಾ ಅಭಿನಯಿಸಿದ್ದಾರೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಎಲ್.ವಿ.ಶಾರದಾ ಮಾರ್ಚ್ 21ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

L.V. Sharada
ಎಲ್​​​. ವಿ. ಶಾರದಾ

ಇನ್ನು ಕನ್ನಡ ಚಿತ್ರರಂಗದಲ್ಲಿ ಅಚ್ಚರಿ ವಿಷಯಗಳ ಬಗ್ಗೆ ನೋಡಿದಾಗ, ಕೆಲವೇ ಕೆಲವು ಘಟನೆಗಳು ಕಣ್ಮುಂದೆ ಬರುತ್ತದೆ. ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಇಬ್ಬರೂ ಜೊತೆ ಸೇರಿ ಸುಮಲತಾ ಅಂಬರೀಶ್ ಅವರ ಪರ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದು. ದರ್ಶನ್ ಹಾಗೂ ಯಶ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟರ ಸಿನಿಮಾ ಡೈಲಾಗ್​​​ಗಳ ಮೂಲಕ ಎನ್​ಕೌಂಟರ್ ಕೊಡುತ್ತಿದ್ದರೂ, ಈ ಇಬ್ಬರು ನಟರು ಮಾತ್ರ ಜೊತೆ ಸೇರಿ ಅಂಬಿಯ ಋಣ ತೀರಿಸಲು ಒಟ್ಟಿಗೆ ಸೇರಿ ಚುನಾವಣಾ ಪ್ರಚಾರ ಮಾಡಿದರು.

Darshan and Yash in Mandya Parliament election
ಮಂಡ್ಯ ಲೋಕಸಭೆ ಚುನಾವಣಾ ಪ್ರಚಾರದಲ್ಲಿ ದರ್ಶನ್, ಯಶ್​​​

ಸಾಹಸಸಿಂಹ ಡಾ. ವಿಷ್ಣುವರ್ಧನ್ ಅಳಿಯ ಅನಿರುದ್ಧ್​​​​, ಸಿನಿಮಾಗಳಲ್ಲಿ ಅಭಿನಯಿಸುವಾಗ ಅಷ್ಟೊಂದು ಸ್ಟಾರ್ ಡಮ್ ಇರಲಿಲ್ಲ. ಆದರೆ 'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಅವರು ಕಿರುತೆರೆಗೆ ಕಾಲಿಟ್ಟ ನಂತರ ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡರು. ಜೊತೆಗೆ ಕಿರುತೆರೆಯ ಸ್ಟಾರ್ ಹೀರೋ ಆದದ್ದು ನಿಜಕ್ಕೂ ಆಶ್ಚರ್ಯದ ವಿಚಾರ ಎನ್ನಬಹುದು.

Jote joteyali serial
ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್

ಇನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ವಾರ್ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಪುತ್ರಿ ಐರಾ ಹುಟ್ಟುಹಬ್ಬಕ್ಕೆ ಇಡೀ ಕನ್ನಡ ಚಿತ್ರರಂಗ ಬಂದು ನಾವೆಲ್ಲರೂ ಒಂದೇ ಅಂತಾ ಸಂದೇಶ ನೀಡಿದ್ದು ಎಲ್ಲರಿಗೂ ಖುಷಿಯ ವಿಚಾರ. ಕನ್ನಡದ ಚಿಕ್ಕ ನಟನಿಂದ ಹಿಡಿದು ದೊಡ್ಡ ಸ್ಟಾರ್​​​ವರೆಗೂ ಯಶ್ ಮಗಳ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿದ್ದರು.

Rocking star Yash daughter birthday
ರಾಕಿಂಗ್ ಸ್ಟಾರ್ ಯಶ್ ಪುತ್ರಿ ಐರಾ ಹುಟ್ಟುಹಬ್ಬ
Intro:Body:2019ರ ಆಘಾತ ಹಾಗು ಅಚ್ಚರಿ ವಿಷ್ಯಗಳ ರೌಂಡ್ ಆಫ್

2019 ಮುಗಿಯೋದಿಕ್ಕೆ ಇನ್ನು ಎರಡು ವಾರಗಳು ಬಾಕಿ ಇದೆ.. 2019ಗೆ ಗುಡ್ ಬೈ ಹೇಳಿ 2020ನ್ನ ವೆಲ್ ಕಮ್ ಮಾಡಿಕೊಳ್ಳೊದಿಕ್ಕೆ ವಿಶ್ವದೆಲ್ಲಡೆ ತಯಾರಿ ನಡೆಯುತ್ತಿದೆ.ಈ ವರ್ಷ ಕನ್ನಡ ಚಿತ್ರರಗದಲ್ಲಿ ಆಘಾತ ಹಾಗು ಅಚ್ಚರಿ ವಿಷ್ಯಗಳು ನಡೆದಿವೆ...ಮೊದಲಿಗೆ ಮನಸ್ಸಿಗೆ ನೋವು ತಂದ ಘಟನೆಗಳ ಬಗ್ಗೆ ಒಂದು ಮೆಲುಕ ನೋಟ ಇಲ್ಲಿದೆ....

2019 ಕನ್ನಡ ಸಿನಿಮಾ ಇಂಡಸ್ಟ್ರಿಗೆ ಅತೀ ಹೆಚ್ಚು ಸಿನಿಮಾಗಳನ್ನ ನಿರ್ಮಾಣ ಆದ ವರ್ಷ ಎಂಬ ಹೆಗ್ಗಳಿಕೆ ಪಡೆದಿದೆ. ಈ ವರ್ಷದ ಹೊಸ್ತಿಲಲ್ಲಿ ಕನ್ನಡ ಚಿತ್ರರಂಗದ ಕೋಟಿ ವಿತರಕ ಎನ್ ಪ್ರಸಾದ್ ಕಿಡ್ನಿ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ರು..ಸ್ಯಾಂಡಲ್ ವುಡ್ ನಲ್ಲಿ ಕಡಿಮೆ ಟೈಮಲ್ಲಿ . ಅಣ್ಣಾಬಾಂಡ್, ಗಾಡ್ ಫಾದರ್, ಭೀಮ ತೀರದಲ್ಲಿ, ಚಿಂಗಾರಿ, ಚಂದ್ರ ಹೀಗೆ ಹಲವು, ಬಿಗ್ ಸ್ಟಾರ್ ಗಳ ಸಿನಿಮಾಗಳನ್ನ ಕೋಟಿ ಕೋಟಿ ಕೊಟ್ಟು ವಿತರಣೆ ಮಾಡುವ ಮೂಲಕ ರಾತ್ರೋ ರಾತ್ರಿ ಕೋಟಿ ವಿತರಕ ಅನಿಸಿಕೊಂಡಿದ್ರು..ಆದ್ರೆ ಎನ್ ಪ್ರಸಾದ್ ಸಾವು ಚಿತ್ರರಂಗಕ್ಕೆ ಶಾಕಿಂಗ್ ನ್ಯೂಸ್ ಆಗಿತ್ತು..ಕಿಡ್ನಿ ವೈಫಲ್ಯದಿಂದ ಜನವರಿ 6ರಂದು ಎನ್ ಪ್ರಸಾದ್ ನಿಧನರಾದ್ರು..

ನಾಗ ಪ್ರಸಾದ್ ನಂತ್ರ ಕನ್ನಡ ಹಾಗು ತೆಲುಗು ಚಿತ್ರರಂಗದ ಪ್ರಖ್ಯಾತ ನಿರ್ಮಾಪಕಿ ಜಯಶ್ರೀದೇವಿ ಕೂಡ ಬಾರದ ಲೋಕಕ್ಕೆ ತೆರೆಳಿದ್ದು..ಎಮ್ಮೆ ತಮ್ಮಣ್ಣ, ಕೊಟ್ರೇಶಿ ಕನಸು, ನಾಗಮಂಡಲ, ನಮ್ಮೂರ ಮಂದಾರ ಹೂವೆ, ಅಮೃತ ವರ್ಷಿಣಿ, ಶ್ರೀ ಮಂಜುನಾಥ,ಹಬ್ಬ,ಸ್ನೇಹ ಲೋಕ, ಮುಕುಂದ ಮುರಾರಿ, ಹೀಗೆ ಬಿಗ್ ಬಜೆಟ್ ಹಾಗು ಬಿಗ್ ಸ್ಟಾರ್ ಗಳ ಸಿನಿಮಾ ನಿರ್ಮಾಣ ಮಾಡಿದ ಖ್ಯಾತಿ ಜಯಶ್ರೀ ದೇವಿಗೆ ಸಲ್ಲುತ್ತೆ..ಆದ್ರೆ ಫೆಬ್ರವರಿ 13 ಜಯಶ್ರೀದೇವಿಯ ಸಾವಿನ ಸುದ್ದಿ ಕನ್ನಡ ಚಿತ್ರರಂಗಕ್ಕೆ ಅರಗಿಸಿಕೊಳ್ಳೋದಿಕ್ಕೆ ಆಗಲಿಲ್ಲ..60ವರ್ಷದ ವಯಸ್ಸಾಗಿದ್ದ ಜಯಶ್ರೀದೇವಿ ಹೈದರಾಬಾದ್ ನ ಅಪೋಲೋ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಇನ್ನು ರಂಗಕರ್ಮಿ, ಹಿರಿಯ ನಟ ಮಾಸ್ಟರ್ ಹಿರಣ್ಣಯ್ಯನರುವ ಕೂಡ ಮೇ 2ರಂದು ಅನಾರೋಗ್ಯದಿಂದ ಸಾವನ್ನಪ್ಪಿದ್ರು..ನಾಟಕಗಳಿಂದಲೇ ಬ್ರಷ್ಟಚಾರಿಗಳು ಹಾಗು ರಾಜಕಾರಿಣಿಗಳಿಗೆ ಬಿಸಿ ಮುಟ್ಟಿಸುತ್ತಿದ್ದ ಚಾಣಕ್ಯ ನಟ.ಅನಾರೋಗ್ಯದಿಂದ ಬಳಲುತ್ತಿದ್ದ ಮಾಸ್ಟರ್ ಹಿರಣ್ಣಯ್ಯ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ವಿಧಿವಶರಾದರು..

ಮಾಸ್ಟರ್ ಹಿರಣ್ಣಯ್ಯ ನಂತ್ರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಕೂಡ ಜೂನ್ 10ರಂದು ಅಂತಿಮ ಪ್ರಯಾಣ ಬೆಳೆಸಿದರು..ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹೀಗೆ ಬಹುಭಾಷೆ ಸಿನಿಮಾಗಳಲ್ಲಿ ಗಿರೀಶ್ ಕಾರ್ನಾಡ್ ಅಭಿನಯಿಸಿ ಪ್ರೇಕ್ಷಕರಿಗೆ ಇಷ್ಟ ಆಗಿದ್ರು.ಬಹು ಅಂಗಾಂಗ ವೈಫಲ್ಯದಿಂದಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ನಟ, ನಿರ್ದೇಶಕ ಗಿರೀಶ್ ಕಾರ್ನಾಡ್ ನಿಧನ ಸುದ್ದಿ ಕನ್ನಡ ಚಿತ್ರರಂಗ ಅಲ್ಲದೆ ಇಡೀ ಸೌತ್ ಸಿನಿಮಾ ಇಂಡಸ್ಟ್ರಿಗೆ ಆಘಾತ ಉಂಟು ಮಾಡಿತ್ತು...

ಕನ್ನಡ ಚಿತ್ರರಂಗದ ಮೊದಲ ವಾಕ್ಚಿತ್ರ, ಭಕ್ತಧ್ರುವ ಸಿನಿಮಾದ ನಟಿ ಎಸ್.ಕೆ.ಪದ್ಮಾದೇವಿ ಕಳೆದ ಸೆಪ್ಟೆಂಬರ್ ನಲ್ಲಿ ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು

ಎಸ್ ಕೆ ಪದ್ಮಾವತಿ ಬಳಿಕ ಕನ್ನಡ ಚಿತ್ರರಂಗದ ಮತ್ತೊಬ್ಬ ಹಿರಿಯ ನಟಿ ಎಲ್, ವಿ ಶಾರದಾ ಅವನ್ನ ಕಳೆದು ಕೊಂಡಿತ್ತು...ವಂಶವೃಕ್ಷ, ಫಣಿಯಮ್ಮ, ಭೂತಯ್ಯನ ಮಗ ಅಯ್ಯು, ವಾತ್ಸಲ್ಯ ಪಥ', ಆದಿ ಶಂಕರಾಚಾರ್ಯ, ಹೀಗೆ ಹಲವಾರು ಸಿನಿಮಾಗಳಲ್ಲಿ ಎಲ್, ವಿ ಶಾರದಾ ಅಭಿನಯಿಸಿದ್ದಾರೆ..ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟಿ ಎಲ್.ವಿ.ಶಾರದಾ ಮಾರ್ಚ್ 21 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಇನ್ನು ಕನ್ನಡ ಚಿತ್ರರಂಗದಲ್ಲಿ ಅಚ್ಚರಿ ವಿಷ್ಯಗಳು ಅಂತಾ ಬಂದಾಗ, ಕೆಲವೇ ಕೆಲವು ಘಟನೆಗಳು ಕಣ್ಮುಂದೆ ಬರುತ್ತೆ..ಅದ್ರಲ್ಲಿ ಸ್ಟಾರ್ ವಿರೋಧಿಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ರಾಕಿಂಗ್ ಸ್ಟಾರ್ ಯಶ್ ಅಂಬರೀಷ್, ನಿಧನದ ಬಳಿಕ ಸುಮಲತಾ ಅಂಬರೀಷ್ ಪರವಾಗಿ ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ನಿಂತು ಪ್ರಚಾರ ಮಾಡಿದ್ದು..ಡೈಲಾಗ್ ಗಳ ಮೂಲ್ಕ ಕೌಂಟರ್ ಕೊಡುತ್ತಿದ್ದ ದರ್ಶನ್ ಹಾಗು ಯಶ್ ಅಂಬರೀಷ್ ಋಣ ತೀರಿಸೋಕ್ಕೆ ಒಂದಾಗಿ ಸ್ನೇಹಿತರು ಆಗಿದ್ದು..

ಇದ್ರ ಜೊತೆಗೆ ವಿಷ್ಣುವೃರ್ಧನ್ ಅಳಿಯ ಅನಿರುದ್ಧ್ ಗೆ ಸಿನಿಮಾದಲ್ಲಿ ಅಭಿನಯಿಸಬೇಕಾದ್ರೆ ಅಷ್ಟೊಂದು ಸ್ಟಾರ್ ಡಮ್ ಇರಲಿಲ್ಲ..ಈಗ ಕಿರುತೆರೆಗೆ ಎಂಟ್ರಿ ಕೊಟ್ಟು, ಕಿರುತೆರೆಯಲ್ಲಿ ದೊಡ್ಡ ಅಭಿಮಾನಿ ಬಗಳ ಜೊತೆಗೆ ಸ್ಮಾಲ್ ಸ್ಕೀನ್ ಸ್ಟಾರ್ ಹೀರೋ ಆಗಿರೋದು..

ಇನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಸ್ಟಾರ್ ವಾರ್ ನಡೆಯುತ್ತಿದೆ ಅನ್ನೋ ಮಾತುಗಳು ಕೇಳಿ ಬರುತ್ತೆ..ಆದ್ರೆ ರಾಕಿಂಗ್ ಸ್ಟಾರ್ ಯಶ್ ಹಾಗು ರಾಧಿಕಾ ಪಂಡಿತ್ ಮಗಳು ಐರಾ ಹುಟ್ಟು ಹಬ್ಬಕ್ಕೆ ಇಡೀ ಕನ್ನಡ ಚಿತ್ರರಂಗ ಬಂದು ನಾವೆಲ್ಲರು ಒಂದೇ ಅಂತಾ ಸಂದೇಶ ನೀಡಿದ್ರು..ಕನ್ನಡದ ಚಿಕ್ಕ ನಟನಿಂದ ಹಿಡಿದು ದೊಡ್ಡ ನಟನವರೆಗೂ ಯಶ್ ಮಗಳ ಹುಟ್ಟು ಹಬ್ಬಕ್ಕೆ ಬಂದು ಅಚ್ಚರಿ ಮೂಡಿಸಿದ್ರು...

ಒಟ್ಟಾರೆ ಇದು 2019ರಲ್ಲಿ ನಡೆದ ಆಘಾತ ಹಾಗು ಅಚ್ಚರಿ ವಿಷಯಗಳ ಒಂದು ನೋಟ ಇದು...



Conclusion:
Last Updated : Dec 20, 2019, 12:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.