ETV Bharat / sitara

'ಮಿಷನ್​ ಮಂಗಲ್​' ಹೊಸ ಟ್ರೇಲರ್​ ರಿಲೀಸ್... ಹೇಗಿದೆ ಮಂಗಳಯಾನದ ಫಸ್ಟ್​ಲುಕ್​!

ಭಾರತದ ವಿಜ್ಞಾನಿಗಳ ಅವಿರತ ಪ್ರಯತ್ನ, ಮಂಗಳನ ಅಂಗಳಕ್ಕೆ ನೌಕೆ ಹಾರಿಸಲೇಬೇಕೆಂಬ ಹಠ, ಜಗತ್ತಿನ ಬಲಾಢ್ಯ ರಾಷ್ಟ್ರಗಳ ಮುಂದೆ ಪ್ರತಿಷ್ಟೆಯ ಪ್ರಶ್ನೆಯಾಗಿದ್ದ ಚಂದ್ರಯಾನ-2 ಯಶಸ್ವಿಯಾಗಿದೆ. ಈ ಚಂದ್ರಯಾನದ ಹಿಂದೆ ನಮ್ಮ ಹೆಮ್ಮೆಯ ವಿಜ್ಞಾನಿಗಳು ಪಟ್ಟ ಶ್ರಮ ಎಂತಹದು ಎಂಬುದನ್ನ ತೋರಿಸುವ ಪ್ರಯತ್ನವೇ 'ಮಿಷನ್​ ಮಂಗಲ್'.

author img

By

Published : Aug 8, 2019, 7:12 PM IST

'ಮಿಷನ್​ ಮಂಗಲ್​' ಹೊಸ ಟ್ರೇಲರ್​ ರಿಲೀಸ್

ಅಕ್ಷಯ್​ ಕುಮಾರ್​ ಅಭಿನಯದ 'ಮಿಷನ್​ ಮಂಗಲ್​' ಚಿತ್ರದ ಎರಡನೇ ಅಧಿಕೃತ ಟ್ರೇಲರ್​ ಇಂದು ಬಿಡುಗಡೆಗೊಂಡಿದೆ. ಇತ್ತೀಚೆಗೆ ನಭಕ್ಕೆ ಹಾರಿದ ಚಂದ್ರಯಾನ-2ರ ಕುರಿತಾಗಿ ನಿರ್ಮಾಣಗೊಂಡಿರೋ ಈ ಚಿತ್ರಕ್ಕೆ ಚಿತ್ರಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

'ಮಿಷನ್​ ಮಂಗಲ್', ಚಂದ್ರಯಾನ-2ನ್ನು ಸಾಧ್ಯವಾಗಿಸಿದ ಇಸ್ರೋ ವಿಜ್ಞಾನಿಗಳ ಪ್ರಯತ್ನ ಹಾಗೂ ಸ್ಪಿರಿಟ್​ ಬಗ್ಗೆ ನಿರ್ಮಾಣವಾಗಿರೋ ಚಿತ್ರ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬಗೆಗಿನ ಕಥೆ.

ಲಾಂಚ್​ ಆಗಿರೋ ಹೊಸ ಟ್ರೇಲರ್​ನಲ್ಲಿ​, ಅಕ್ಷಯ್ ಕುಮಾರ್ ಉಪಗ್ರಹ ಉಡಾವಣೆಯ ವೈಫಲ್ಯ ಘೋಷಿಸುವುದರೊಂದಿಗೆ ಹೊಸ ಟ್ರೈಲರ್ ತೆರೆದುಕೊಳ್ಳುತ್ತದೆ. ಅಂತಹ ವೈಫಲ್ಯದ ಸಂದರ್ಭದಲ್ಲೂ ಅಕ್ಷಯ್ ಕುಮಾರ್ ಲಡ್ಡು ತಿನ್ನುತ್ತಿರುವ ಹಾಸ್ಯಮಯ ಸನ್ನಿವೇಶವೂ ಟ್ರೇಲರ್​ನಲ್ಲಿದೆ.

  • " class="align-text-top noRightClick twitterSection" data="">

ಮಂಗಳ ಗ್ರಹಕ್ಕೆ ಹೋಗುವ ದಾರಿಯಲ್ಲಿನ ನಿರಂತರ ಹೋರಾಟಗಳನ್ನು ಟ್ರೈಲರ್​ನಲ್ಲಿ ಮತ್ತಷ್ಟು ತೋರಿಸಲಾಗಿದೆ. ಚಿತ್ರದಲ್ಲಿ ನಟಿ ವಿದ್ಯಾ ಬಾಲನ್, ಓರ್ವ ಆಶಾವಾದಿ ವಿಜ್ಞಾನಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರೊಬ್ಬರೇ, ಚಂದ್ರಯಾನವನ್ನು ಭಾರತ ಸಾಧಿಸಿಯೇ ತೀರುತ್ತದೆ ಎಂಬ ಧನಾತ್ಮಕ ಯೋಚನೆಯಲ್ಲಿರುತ್ತಾರೆ. ಇನ್ನೊಂದು ಕಡೆ ತಮ್ಮ ಕಡೆಗುಂದದ ಸ್ಪಿರಿಟ್​ನೊಂದಿಗೆ ಚಂದ್ರಯಾನವನ್ನು ಸಾಧ್ಯವಾಗಿಸಿದ ಕಡಿಮೆ ಅನುಭವದ ವಿಜ್ಞಾನಿಗಳ ತಂಡವನ್ನು ಅಕ್ಷಯ್​ ಕುಮಾರ್​ ಹಾಗೂ ವಿದ್ಯಾ ಬಾಲನ್ ಹೇಗೆ ಒಟ್ಟುಗೂಡಿಸಿ ಅವರಲ್ಲಿ ಉತ್ಸಾಹ ತುಂಬಿಸುತ್ತಾರೆ ಎಂಬುದನ್ನು ತೋರಿಸುತ್ತದೆ.

ಒಟ್ಟಾರೆ ಅಲ್ಲಲ್ಲಿ ನಗೆ ಚಟಾಕಿಗಳೊಂದಿಗೆ ಟ್ರೇಲರ್​ ಇಸ್ರೋ ವಿಜ್ಞಾನಿಗಳ ನಿರಂತರ ಪ್ರಯತ್ನದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಚಿತ್ರ ಇದೇ ಆಗಸ್ಟ್​ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದ್ದು, ಇಡೀ ದೇಶವೇ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದೆ.

ಅಕ್ಷಯ್​ ಕುಮಾರ್​ ಅಭಿನಯದ 'ಮಿಷನ್​ ಮಂಗಲ್​' ಚಿತ್ರದ ಎರಡನೇ ಅಧಿಕೃತ ಟ್ರೇಲರ್​ ಇಂದು ಬಿಡುಗಡೆಗೊಂಡಿದೆ. ಇತ್ತೀಚೆಗೆ ನಭಕ್ಕೆ ಹಾರಿದ ಚಂದ್ರಯಾನ-2ರ ಕುರಿತಾಗಿ ನಿರ್ಮಾಣಗೊಂಡಿರೋ ಈ ಚಿತ್ರಕ್ಕೆ ಚಿತ್ರಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ.

'ಮಿಷನ್​ ಮಂಗಲ್', ಚಂದ್ರಯಾನ-2ನ್ನು ಸಾಧ್ಯವಾಗಿಸಿದ ಇಸ್ರೋ ವಿಜ್ಞಾನಿಗಳ ಪ್ರಯತ್ನ ಹಾಗೂ ಸ್ಪಿರಿಟ್​ ಬಗ್ಗೆ ನಿರ್ಮಾಣವಾಗಿರೋ ಚಿತ್ರ. ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಬಗೆಗಿನ ಕಥೆ.

ಲಾಂಚ್​ ಆಗಿರೋ ಹೊಸ ಟ್ರೇಲರ್​ನಲ್ಲಿ​, ಅಕ್ಷಯ್ ಕುಮಾರ್ ಉಪಗ್ರಹ ಉಡಾವಣೆಯ ವೈಫಲ್ಯ ಘೋಷಿಸುವುದರೊಂದಿಗೆ ಹೊಸ ಟ್ರೈಲರ್ ತೆರೆದುಕೊಳ್ಳುತ್ತದೆ. ಅಂತಹ ವೈಫಲ್ಯದ ಸಂದರ್ಭದಲ್ಲೂ ಅಕ್ಷಯ್ ಕುಮಾರ್ ಲಡ್ಡು ತಿನ್ನುತ್ತಿರುವ ಹಾಸ್ಯಮಯ ಸನ್ನಿವೇಶವೂ ಟ್ರೇಲರ್​ನಲ್ಲಿದೆ.

  • " class="align-text-top noRightClick twitterSection" data="">

ಮಂಗಳ ಗ್ರಹಕ್ಕೆ ಹೋಗುವ ದಾರಿಯಲ್ಲಿನ ನಿರಂತರ ಹೋರಾಟಗಳನ್ನು ಟ್ರೈಲರ್​ನಲ್ಲಿ ಮತ್ತಷ್ಟು ತೋರಿಸಲಾಗಿದೆ. ಚಿತ್ರದಲ್ಲಿ ನಟಿ ವಿದ್ಯಾ ಬಾಲನ್, ಓರ್ವ ಆಶಾವಾದಿ ವಿಜ್ಞಾನಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇವರೊಬ್ಬರೇ, ಚಂದ್ರಯಾನವನ್ನು ಭಾರತ ಸಾಧಿಸಿಯೇ ತೀರುತ್ತದೆ ಎಂಬ ಧನಾತ್ಮಕ ಯೋಚನೆಯಲ್ಲಿರುತ್ತಾರೆ. ಇನ್ನೊಂದು ಕಡೆ ತಮ್ಮ ಕಡೆಗುಂದದ ಸ್ಪಿರಿಟ್​ನೊಂದಿಗೆ ಚಂದ್ರಯಾನವನ್ನು ಸಾಧ್ಯವಾಗಿಸಿದ ಕಡಿಮೆ ಅನುಭವದ ವಿಜ್ಞಾನಿಗಳ ತಂಡವನ್ನು ಅಕ್ಷಯ್​ ಕುಮಾರ್​ ಹಾಗೂ ವಿದ್ಯಾ ಬಾಲನ್ ಹೇಗೆ ಒಟ್ಟುಗೂಡಿಸಿ ಅವರಲ್ಲಿ ಉತ್ಸಾಹ ತುಂಬಿಸುತ್ತಾರೆ ಎಂಬುದನ್ನು ತೋರಿಸುತ್ತದೆ.

ಒಟ್ಟಾರೆ ಅಲ್ಲಲ್ಲಿ ನಗೆ ಚಟಾಕಿಗಳೊಂದಿಗೆ ಟ್ರೇಲರ್​ ಇಸ್ರೋ ವಿಜ್ಞಾನಿಗಳ ನಿರಂತರ ಪ್ರಯತ್ನದ ಬಗ್ಗೆ ಬೆಳಕು ಚೆಲ್ಲುತ್ತದೆ. ಈ ಚಿತ್ರ ಇದೇ ಆಗಸ್ಟ್​ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆಯಾಗಲಿದ್ದು, ಇಡೀ ದೇಶವೇ ಚಿತ್ರದ ಬಿಡುಗಡೆಗಾಗಿ ಕಾಯುತ್ತಿದೆ.

Intro:Body:

nat


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.