ETV Bharat / sitara

ಸಾರ್ವಜನಿಕರಿಂದ ಥಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಯುವಕನ ಪರ ನಿಂತ ಖ್ಯಾತ ನಟ ಮಮ್ಮುಟ್ಟಿ! - ಬುಡಕಟ್ಟು ಜನಾಂಗದ ಯುವಕನಿಗೆ ನಟ ಮಮ್ಮುಟಿ ಸಹಾಯ

ಕಳ್ಳನೆಂದು ಭಾವಿಸಿ ಸಾರ್ವಜನಿಕರಿಂದ ಥಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಯುವಕ ಮತ್ತು ಆತನ ಕುಟುಂಬದ ಬೆನ್ನಿಗೆ ಕೇರಳದ ಖ್ಯಾತ ನಟ ಮಮ್ಮುಟ್ಟಿ ನಿಂತಿದ್ದಾರೆ..

Actor Mammootty help to Madhu family  tribal youth helped by Kerala actor  Kerala Actor Mammootty news  ಮಧ ಕುಟುಂಬದ ಬೆನ್ನಿಗೆ ನಿಂತ ನಟ ಮಮ್ಮುಟಿ  ಬುಡಕಟ್ಟು ಜನಾಂಗದ ಯುವಕನಿಗೆ ನಟ ಮಮ್ಮುಟಿ ಸಹಾಯ  ಕೇರಳ ನಟ ಮಮ್ಮುಟಿ ಸುದ್ದಿ
ಸಾರ್ವಜನಿಕರಿಂದ ಥಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಯುವಕನ ಪರವಾಗಿ ನಿಂತ ಖ್ಯಾತ ನಟ ಮಮ್ಮುಟಿ
author img

By

Published : Jan 31, 2022, 2:13 PM IST

Updated : Jan 31, 2022, 6:14 PM IST

ಎರ್ನಾಕುಲಂ : 2018ರ ಫೆಬ್ರುವರಿಯಲ್ಲಿ ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿಯಲ್ಲಿ ಕಳ್ಳನೆಂದು ಭಾವಿಸಿ ಸಾರ್ವಜನಿಕರಿಂದ ಥಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಯುವಕ ಮಧು ಎಂಬಾತನ ಕುಟುಂಬಕ್ಕೆ ಚಾರಿಟಿ ಕಾರ್ಯಗಳಿಗೆ ಹೆಸರುವಾಸಿಯಾಗಿರುವ ನಟ ಮಮ್ಮುಟ್ಟಿ ಕಾನೂನು ನೆರವು ನೀಡಿದ್ದಾರೆ.

ಸಂತ್ರಸ್ತನ ಪರವಾಗಿ ಯಾವುದೇ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ತಿಳಿದ ನಂತರ ಮಧು ಅವರ ಕುಟುಂಬಕ್ಕೆ ಸಹಾಯ ಮಾಡಲು ನಟ ಮಮ್ಮುಟ್ಟಿ ಮುಂದೆ ಬಂದರು.

ಸಂತ್ರಸ್ತನ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವಂತೆ ಮಮ್ಮುಟ್ಟಿ ಅವರಿಗೆ ಸೂಚಿಸಿದ್ದಾರೆ ಮತ್ತು ನಟ ಕೇರಳ ಕಾನೂನು ಸಚಿವ ಪಿ ರಾಜೀವ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ ಎಂದು ನಟನ ಚಾರಿಟಿ ಕಾರ್ಯಗಳನ್ನು ಸಂಯೋಜಿಸುತ್ತಿರುವ ರಾಬರ್ಟ್ ಕುರಿಯಾಕೋಸ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮಧು ಅವರ ಕುಟುಂಬದ ಪರವಾಗಿ ಅತ್ಯುತ್ತಮ ಸರ್ಕಾರಿ ವಕೀಲರನ್ನು ಹಾಜರುಪಡಿಸಲು ಸಚಿವರು ಮುಂದಾಗಿದ್ದರು ಮತ್ತು ಸಂತ್ರಸ್ತನ ಕುಟುಂಬವು ಸರ್ಕಾರಿ ವಕೀಲರನ್ನು ಹೊಂದಲು ಇಚ್ಛೆ ವ್ಯಕ್ತಪಡಿಸಿದೆ ಎಂದು ರಾಬರ್ಟ್ ಕುರಿಯಾಕೋಸ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಓದಿ: ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್: 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಇದರ ನಂತರ, ಮಮ್ಮುಟ್ಟಿ ಅವರು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಬೇಕು ಮತ್ತು ಯಾವುದೇ ಸಮಯದಲ್ಲಿ ಅವರಿಗೆ ಕಾನೂನು ಸಹಾಯ ಬೇಕಾದರೆ ಅದನ್ನು ಒದಗಿಸಬೇಕು ಎಂದು ಶ್ರೀ ಕುರಿಯಾಕೋಸ್ ಅವರಿಗೆ ಸೂಚಿಸಿದರು. ಕುಟುಂಬಕ್ಕೆ ಅಥವಾ ಸಂತ್ರಸ್ತೆಯ ಕುಟುಂಬವನ್ನು ಬೆಂಬಲಿಸಲು ಮುಂದೆ ಬರುವ ಯಾರಿಗಾದರೂ ಕಾನೂನು ಸಲಹೆ ನೀಡುವಂತೆ ಕೇರಳ ಹೈಕೋರ್ಟ್‌ನ ಹಿರಿಯ ವಕೀಲ ಪಿ.ನಂದಕುಮಾರ್ ಅವರಿಗೆ ಸೂಚಿಸಲಾಗಿದೆ.

ಈಗ ಸರ್ಕಾರವೇ ಕುಟುಂಬದ ಕಾನೂನು ಅಗತ್ಯಗಳನ್ನು ನೋಡಿಕೊಳ್ಳುತ್ತಿದೆ, ಮಧು ಅವರ ಕುಟುಂಬಕ್ಕೆ ಕಾನೂನು ಸಲಹೆ ಅಥವಾ ಇನ್ನಾವುದೇ ಕಾನೂನು ಅಗತ್ಯಗಳ ರೂಪದಲ್ಲಿ ಬೆಂಬಲವನ್ನು ನೀಡುತ್ತೇವೆ ಎಂದು ಅವರು ಹೇಳಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಎರ್ನಾಕುಲಂ : 2018ರ ಫೆಬ್ರುವರಿಯಲ್ಲಿ ಪಾಲಕ್ಕಾಡ್ ಜಿಲ್ಲೆಯ ಅಟ್ಟಪ್ಪಾಡಿಯಲ್ಲಿ ಕಳ್ಳನೆಂದು ಭಾವಿಸಿ ಸಾರ್ವಜನಿಕರಿಂದ ಥಳಿತಕ್ಕೊಳಗಾದ ಬುಡಕಟ್ಟು ಜನಾಂಗದ ಯುವಕ ಮಧು ಎಂಬಾತನ ಕುಟುಂಬಕ್ಕೆ ಚಾರಿಟಿ ಕಾರ್ಯಗಳಿಗೆ ಹೆಸರುವಾಸಿಯಾಗಿರುವ ನಟ ಮಮ್ಮುಟ್ಟಿ ಕಾನೂನು ನೆರವು ನೀಡಿದ್ದಾರೆ.

ಸಂತ್ರಸ್ತನ ಪರವಾಗಿ ಯಾವುದೇ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ತಿಳಿದ ನಂತರ ಮಧು ಅವರ ಕುಟುಂಬಕ್ಕೆ ಸಹಾಯ ಮಾಡಲು ನಟ ಮಮ್ಮುಟ್ಟಿ ಮುಂದೆ ಬಂದರು.

ಸಂತ್ರಸ್ತನ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವಂತೆ ಮಮ್ಮುಟ್ಟಿ ಅವರಿಗೆ ಸೂಚಿಸಿದ್ದಾರೆ ಮತ್ತು ನಟ ಕೇರಳ ಕಾನೂನು ಸಚಿವ ಪಿ ರಾಜೀವ್ ಅವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದಾರೆ ಎಂದು ನಟನ ಚಾರಿಟಿ ಕಾರ್ಯಗಳನ್ನು ಸಂಯೋಜಿಸುತ್ತಿರುವ ರಾಬರ್ಟ್ ಕುರಿಯಾಕೋಸ್ ಫೇಸ್‌ಬುಕ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮಧು ಅವರ ಕುಟುಂಬದ ಪರವಾಗಿ ಅತ್ಯುತ್ತಮ ಸರ್ಕಾರಿ ವಕೀಲರನ್ನು ಹಾಜರುಪಡಿಸಲು ಸಚಿವರು ಮುಂದಾಗಿದ್ದರು ಮತ್ತು ಸಂತ್ರಸ್ತನ ಕುಟುಂಬವು ಸರ್ಕಾರಿ ವಕೀಲರನ್ನು ಹೊಂದಲು ಇಚ್ಛೆ ವ್ಯಕ್ತಪಡಿಸಿದೆ ಎಂದು ರಾಬರ್ಟ್ ಕುರಿಯಾಕೋಸ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಓದಿ: ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್: 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ

ಇದರ ನಂತರ, ಮಮ್ಮುಟ್ಟಿ ಅವರು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡಬೇಕು ಮತ್ತು ಯಾವುದೇ ಸಮಯದಲ್ಲಿ ಅವರಿಗೆ ಕಾನೂನು ಸಹಾಯ ಬೇಕಾದರೆ ಅದನ್ನು ಒದಗಿಸಬೇಕು ಎಂದು ಶ್ರೀ ಕುರಿಯಾಕೋಸ್ ಅವರಿಗೆ ಸೂಚಿಸಿದರು. ಕುಟುಂಬಕ್ಕೆ ಅಥವಾ ಸಂತ್ರಸ್ತೆಯ ಕುಟುಂಬವನ್ನು ಬೆಂಬಲಿಸಲು ಮುಂದೆ ಬರುವ ಯಾರಿಗಾದರೂ ಕಾನೂನು ಸಲಹೆ ನೀಡುವಂತೆ ಕೇರಳ ಹೈಕೋರ್ಟ್‌ನ ಹಿರಿಯ ವಕೀಲ ಪಿ.ನಂದಕುಮಾರ್ ಅವರಿಗೆ ಸೂಚಿಸಲಾಗಿದೆ.

ಈಗ ಸರ್ಕಾರವೇ ಕುಟುಂಬದ ಕಾನೂನು ಅಗತ್ಯಗಳನ್ನು ನೋಡಿಕೊಳ್ಳುತ್ತಿದೆ, ಮಧು ಅವರ ಕುಟುಂಬಕ್ಕೆ ಕಾನೂನು ಸಲಹೆ ಅಥವಾ ಇನ್ನಾವುದೇ ಕಾನೂನು ಅಗತ್ಯಗಳ ರೂಪದಲ್ಲಿ ಬೆಂಬಲವನ್ನು ನೀಡುತ್ತೇವೆ ಎಂದು ಅವರು ಹೇಳಿದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 31, 2022, 6:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.