ಮುಂಬೈ: ನಟ ಅಭಿಷೇಕ್ ಬಚ್ಚನ್ ತಮ್ಮ ಅಜ್ಜ ಹರಿವಂಶ್ ರಾಯ್ ಅವರ 112 ನೇ ಜನ್ಮದಿನವನ್ನು ನೆನಪಿಸಿಕೊಂಡಿದ್ದಾರೆ. ಅಜ್ಜನೊಂದಿಗಿನ ನೆನಪಿನಂಗಳದ ಚಿತ್ರವೊಂದನ್ನು ಅಭಿಷೇಕ್ ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂನಲ್ಲಿ ಫೋಟೊವೊಂದನ್ನು ಹಂಚಿಕೊಂಡಿರುವ ಅವರು, ಇಂದು ನನ್ನಜ್ಜನಿದ್ದರೆ 112ನೇ ಜನ್ಮ ದಿನವಾಗುತ್ತಿತ್ತು. ಆದರೆ, ಅದು ತಪ್ಪಿ ಹೋಗಿದೆ ಎಂದು ಬರೆದುಕೊಂಡಿದ್ದಾರೆ.
ಹರಿವಂಶ್ ರಾಯ್ ಅವರ ಸಾಹಿತ್ಯ ರಚನೆಯಲ್ಲಿ ಮಧುಶಾಲಾದ ಸಾಹಿತ್ಯವನ್ನು ಹೆಚ್ಚಾಗಿ ಸ್ಮರಿಸಲಾಗುತ್ತದೆ. ಅಕುಲ್ ಅಂಟಾರ್, ಏಕಾಂತ್ ಸಂಗೀತ, ಸೂತ್ ಕಿ ಮಾಲಾ, ಆರತಿ ಅಂಗಾರ್ ಅಂಗಾರೆ ಮತ್ತು ಬಹುತ್ ದಿನ್ ಬೀಟೆ ಕವನಗಳ ಸಾಹಿತ್ಯ ಅತ್ಯಂತ ಹೆಸರು ವಾಸಿಯಾಗಿವೆ.
ಅಭಿಷೇಕ್ ಅವರ ಅಜ್ಜನ ನೆನಪಿಗೆ ಹಿರಿಯ ನಟ ನೀತು ಕಪೂರ್ ಕೂಡ ಕಮೆಂಟ್ ವಿಭಾಗದಲ್ಲಿ ಹರಿವಂಶ್ ರಾಯ್ ಅವರಿಗೆ ಗೌರವ ಸಲ್ಲಿಸಿದ್ದಾರೆ.