ETV Bharat / jagte-raho

ಹನಿಟ್ರ್ಯಾಪ್ ನಡೆಸಿ ಹಣ ವಸೂಲಿ ಮಾಡಲು ಯತ್ನ: ಇಬ್ಬರು ಆರೋಪಿಗಳ ಬಂಧನ - ದಿಲೀಪ್ ಟಿ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಯುವತಿಯರನ್ನು ಬಳಸಿಕೊಂಡು ಶ್ರೀ ಮಂತರಿಗೆ ಮೋಸ ಮಾಡಿ ಹನಿಟ್ರ್ಯಾಪ್ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Kn_Mng_01_Hanitrap_Arrest_Script_KA10015
ಹನಿಟ್ರ್ಯಾಪ್ ನಡೆಸಿ ಹಣ ವಸೂಲಿ ಮಾಡಲು ಯತ್ನ: ಇಬ್ಬರು ಆರೋಪಿಗಳನ್ನು ಬಂಧನ
author img

By

Published : Jan 9, 2020, 2:10 PM IST

ಮಂಗಳೂರು: ಯುವತಿಯರನ್ನು ಬಳಸಿಕೊಂಡು ಶ್ರೀ ಮಂತರಿಗೆ ಮೋಸ ಮಾಡಿ ಹನಿಟ್ರ್ಯಾಪ್ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಕುಶಾಲ ನಗರದ ನಿವಾಸಿ ಲೋಹಿತ್ ಹಾಗೂ ವಿಟ್ಲ ನಿವಾಸಿ ಶರೀಫ್ ಬಂಧಿತ ಆರೋಪಿಗಳು. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕಿನ ಪೆರುಬುಲ್ಲಿ ಕೆರಿ ಕುಟ್ಯಾಟೂರ್ ನಿವಾಸಿ ದಿಲೀಪ್ ಟಿ. ಎಂಬವರ ಮೋಬೈಲ್ ಗೆ ಯುವತಿಯೊಬ್ಬಳು ಕರೆ ಮಾಡಿ ಕಲ್ಲು ಕೋರೆ ಕೆಲಸಕ್ಕೆ ಜನ ಬೇಕಾಗಿದ್ದಲ್ಲಿ ಕಾಸರಗೋಡಿಗೆ ಬರಲು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸ್ನೇಹಿತರಾದ ಜನಾರ್ದನನ್, ಪ್ರಶಾಂತ್, ಪ್ರವೀಣ್ ಎಂಬವರೊಂದಿಗೆ ಕಾರಿನಲ್ಲಿ ಕಣ್ಣೂರಿನಿಂದ ಬಂದು ಯುವತಿಯನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಆ ಯುವತಿ, ರಾತ್ರಿ 12:30 ಸುಮಾರಿಗೆ ಕಾರಿನಲ್ಲಿ ಅರ್ಧ ಕೀ. ಮೀ. ದೂರದಲ್ಲಿರುವ ಒಂದು ಮನೆಗೆ ಕರೆದುಕೊಂಡು ಹೋಗಿದ್ದಳು.

ಆಗ ಮನೆಯಲ್ಲಿ ಮತ್ತೊಬ್ಬ ಯುವತಿ ಇದ್ದು, ಅದೇ ಸಮಯಕ್ಕೆ ಇಬ್ಬರು ಗಂಡಸರು ಏಕಾಏಕಿ ಪ್ರವೇಶ ಮಾಡಿ ಅಲ್ಲಿದ್ದವರಿಗೆ ಹಲ್ಲೆ ನಡೆಸಿದ್ದಾರೆ. ಆ ಬಳಿಕ ರೂಮಿನಲ್ಲಿ ಅಕ್ರಮವಾಗಿ ಕೂಡಿಟ್ಟು ಇಬ್ಬರು ಹುಡುಗಿಯರ ಜೊತೆ ಫೋಟೋ ತೆಗೆಸಿ ಇದನ್ನು ಪೊಲೀಸರಿಗೆ ಹಾಗೂ ಟಿ.ವಿ. ಚಾನಲ್ ನವರಿಗೆ ತಿಳಿಸುವುದಾಗಿ ಬೆದರಿಸಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಎಂದು ಹೇಳಿಕೊಂಡು ಬಂದ 3 ಜನ 10 ಲಕ್ಷ ರೂ‌. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ಇಲ್ಲವೆಂದು ತಿಳಿಸಿದಾಗ, ತನ್ನ ಹಾಗೂ ಜೊತೆಯಲ್ಲಿದ್ದವರ ಮೊಬೈಲ್ ಫೋನ್, ಹಣ ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತುಕೊಂಡು ಯಾವುದೋ ದಾಖಲಾತಿಗೆ ಸಹಿ ಮತ್ತು ಬೆರಳಚ್ಚು ತೆಗೆದುಕೊಂಡಿದ್ದಾರೆ ಎಂದು ದಿಲೀಪ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಮರುದಿನ ಬೆಳಗ್ಗೆ 10ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆಂದು ಹೇಳಿ ದೂರುದಾರರ ಇನ್ನೋವಾ ಕಾರಿನಲ್ಲಿ ರೆಸಾರ್ಟೊಂದಕ್ಕೆ ಬಂದು ಅಲ್ಲಿ ಎಲ್ಲರನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದರು. ಆದರೆ, ಅಲ್ಲಿಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿದ್ದಾರೆ. ಈ ಬಗ್ಗೆ ದಿಲೀಪ್ ಟಿ., ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳೂರು: ಯುವತಿಯರನ್ನು ಬಳಸಿಕೊಂಡು ಶ್ರೀ ಮಂತರಿಗೆ ಮೋಸ ಮಾಡಿ ಹನಿಟ್ರ್ಯಾಪ್ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಕುಶಾಲ ನಗರದ ನಿವಾಸಿ ಲೋಹಿತ್ ಹಾಗೂ ವಿಟ್ಲ ನಿವಾಸಿ ಶರೀಫ್ ಬಂಧಿತ ಆರೋಪಿಗಳು. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕಿನ ಪೆರುಬುಲ್ಲಿ ಕೆರಿ ಕುಟ್ಯಾಟೂರ್ ನಿವಾಸಿ ದಿಲೀಪ್ ಟಿ. ಎಂಬವರ ಮೋಬೈಲ್ ಗೆ ಯುವತಿಯೊಬ್ಬಳು ಕರೆ ಮಾಡಿ ಕಲ್ಲು ಕೋರೆ ಕೆಲಸಕ್ಕೆ ಜನ ಬೇಕಾಗಿದ್ದಲ್ಲಿ ಕಾಸರಗೋಡಿಗೆ ಬರಲು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸ್ನೇಹಿತರಾದ ಜನಾರ್ದನನ್, ಪ್ರಶಾಂತ್, ಪ್ರವೀಣ್ ಎಂಬವರೊಂದಿಗೆ ಕಾರಿನಲ್ಲಿ ಕಣ್ಣೂರಿನಿಂದ ಬಂದು ಯುವತಿಯನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಆ ಯುವತಿ, ರಾತ್ರಿ 12:30 ಸುಮಾರಿಗೆ ಕಾರಿನಲ್ಲಿ ಅರ್ಧ ಕೀ. ಮೀ. ದೂರದಲ್ಲಿರುವ ಒಂದು ಮನೆಗೆ ಕರೆದುಕೊಂಡು ಹೋಗಿದ್ದಳು.

ಆಗ ಮನೆಯಲ್ಲಿ ಮತ್ತೊಬ್ಬ ಯುವತಿ ಇದ್ದು, ಅದೇ ಸಮಯಕ್ಕೆ ಇಬ್ಬರು ಗಂಡಸರು ಏಕಾಏಕಿ ಪ್ರವೇಶ ಮಾಡಿ ಅಲ್ಲಿದ್ದವರಿಗೆ ಹಲ್ಲೆ ನಡೆಸಿದ್ದಾರೆ. ಆ ಬಳಿಕ ರೂಮಿನಲ್ಲಿ ಅಕ್ರಮವಾಗಿ ಕೂಡಿಟ್ಟು ಇಬ್ಬರು ಹುಡುಗಿಯರ ಜೊತೆ ಫೋಟೋ ತೆಗೆಸಿ ಇದನ್ನು ಪೊಲೀಸರಿಗೆ ಹಾಗೂ ಟಿ.ವಿ. ಚಾನಲ್ ನವರಿಗೆ ತಿಳಿಸುವುದಾಗಿ ಬೆದರಿಸಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಎಂದು ಹೇಳಿಕೊಂಡು ಬಂದ 3 ಜನ 10 ಲಕ್ಷ ರೂ‌. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ಇಲ್ಲವೆಂದು ತಿಳಿಸಿದಾಗ, ತನ್ನ ಹಾಗೂ ಜೊತೆಯಲ್ಲಿದ್ದವರ ಮೊಬೈಲ್ ಫೋನ್, ಹಣ ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತುಕೊಂಡು ಯಾವುದೋ ದಾಖಲಾತಿಗೆ ಸಹಿ ಮತ್ತು ಬೆರಳಚ್ಚು ತೆಗೆದುಕೊಂಡಿದ್ದಾರೆ ಎಂದು ದಿಲೀಪ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅಲ್ಲದೇ ಮರುದಿನ ಬೆಳಗ್ಗೆ 10ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆಂದು ಹೇಳಿ ದೂರುದಾರರ ಇನ್ನೋವಾ ಕಾರಿನಲ್ಲಿ ರೆಸಾರ್ಟೊಂದಕ್ಕೆ ಬಂದು ಅಲ್ಲಿ ಎಲ್ಲರನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದರು. ಆದರೆ, ಅಲ್ಲಿಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿದ್ದಾರೆ. ಈ ಬಗ್ಗೆ ದಿಲೀಪ್ ಟಿ., ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Intro:ಮಂಗಳೂರು: ಯುವತಿಯರನ್ನು ಬಳಸಿಕೊಂಡು ಹಣವಂತರನ್ನು ಮೋಸ ಮಾಡಿ ಹನಿಟ್ರ್ಯಾಪ್ ನಡೆಸಿ ಹಣ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಕುಶಾಲ ನಗರದ ನಿವಾಸಿ ಲೋಹಿತ್ ಹಾಗೂ ವಿಟ್ಲ ನಿವಾಸಿ ಶರೀಫ್ ಬಂಧಿತ ಆರೋಪಿಗಳು

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬ ತಾಲೂಕಿನ ಪೆರುಬುಲ್ಲಿ ಕೆರಿ ಕುಟ್ಯಾಟೂರ್
ನಿವಾಸಿ ದಿಲೀಪ್ ಟಿ. ಎಂಬವರ ಮೋಬೈಲ್ ಗೆ ಯುವತಿಯೊಬ್ಬಳು ಕರೆ ಮಾಡಿ ಕಲ್ಲು ಕೋರೆ ಕೆಲಸಕ್ಕೆ ಜನ ಬೇಕಾಗಿದ್ದಲ್ಲಿ ಕಾಸರಗೋಡಿಗೆ ಬರಲು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸ್ನೇಹಿತರಾದ ಜನಾರ್ದನನ್, ಪ್ರಶಾಂತ್, ಪ್ರವೀಣ್ ಎಂಬವರೊಂದಿಗೆ ಕಾರಿನಲ್ಲಿ ಕಣ್ಣೂರಿನಿಂದ ಬಂದು ಯುವತಿಯನ್ನು ಭೇಟಿಯಾಗಿದ್ದರು.

ಈ ಸಂದರ್ಭ ಆಕೆಯು ರಾತ್ರಿ 12:30 ಸುಮಾರಿಗೆ ತಮ್ಮನ್ನು ಕಾರಿನಲ್ಲಿ ಸುಮಾರು ಅರ್ಧ ಕೀ. ಮೀ. ದೂರದಲ್ಲಿರುವ ಒಂದು ಮನೆಗೆ ಕರೆದುಕೊಂಡು ಬಂದಿದ್ದರು. ಆಗ ಮನೆಯಲ್ಲಿ ಮತ್ತೊಬ್ಬಳು ಯುವತಿಯಿದ್ದಳು. ಅದೇ ಸಮಯಕ್ಕೆ ಇಬ್ಬರು ಗಂಡಸರು ಏಕಾಏಕಿ ಪ್ರವೇಶ ಮಾಡಿ ಅಲ್ಲಿದ್ದವರಿಗೆ ಹಲ್ಲೆ ನಡೆಸಿದ್ದರು. ಆ ಬಳಿಕ ರೂಮಿನಲ್ಲಿ ಅಕ್ರಮವಾಗಿ ಕೂಡಿಟ್ಟು ಇಬ್ಬರು ಹುಡುಗಿಯರ ಜೊತೆ ಫೋಟೋ ತೆಗೆಸಿ ಇದನ್ನು ಪೋಲಿಸರಿಗೆ ಹಾಗೂ ಟಿ.ವಿ. ಚ್ಯಾನಲ್ ನವರಿಗೆ ತಿಳಿಸುವುದಾಗಿ ಬೆದರಿಸಿ ಕೈಯಿಂದ ಹಲ್ಲೆ ನಡೆಸಿರುತ್ತಾರೆ. ಈ ವೇಳೆ ಪೊಲೀಸರು ಎಂಬುವುದಾಗಿ ಹೇಳಿಕೊಂಡು ಬಂದ 3 ಜನ ಬಂದಿದ್ದು, 10 ಲಕ್ಷ ರೂ‌. ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಈ ಸಂದರ್ಭ ಅಷ್ಟೊಂದು ಹಣ ಇಲ್ಲವೆಂದು ತಿಳಿಸಿದಾಗ, ತನ್ನ ಹಾಗೂ ಜೊತೆಯಲ್ಲಿದ್ದವರ ಮೊಬೈಲ್ ಫೋನ್, ಹಣ ಹಾಗೂ ಕಾರಿನ ಕೀ ಮತ್ತು ಕಾರಿನ ದಾಖಲಾತಿಯನ್ನು ಕಿತ್ತುಕೊಂಡು ಯಾವುದೋ ದಾಖಲಾತಿಗೆ ಸಹಿ ಮತ್ತು ಬೆರಳಚ್ಚು ತೆಗೆದುಕೊಂಡಿದ್ದಾರೆ ಎಂದು ದಿಲೀಪ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

Body:ಅಲ್ಲದೆ ಮರುದಿನ ಬೆಳಗ್ಗೆ 10ಗಂಟೆ ಸುಮಾರಿಗೆ ಪೊಲೀಸ್ ಎಂದು ಹೇಳಿಕೊಂಡಿದ್ದಾತ ಬಂದು ಪೊಲೀಸ್ ಠಾಣೆಗೆಂದು ಹೇಳಿ ದೂರದಾರರ ಇನ್ನೋವ ಕಾರಿನಲ್ಲಿ ರೆಸಾರ್ಟೊಂದಕ್ಕೆ ಬಂದು ಅಲ್ಲಿ ಎಲ್ಲರನ್ನು ಅಕ್ರಮವಾಗಿ ಬಂಧನದಲ್ಲಿರಿಸಿದ್ದರು. ಆದರೆ ಅಲ್ಲಿಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳೆಲ್ಲರೂ ಪರಾರಿಯಾಗಿದ್ದಾರೆ.

ಈ ಬಗ್ಗೆ ದಿಲೀಪ್ ಟಿ.ಯವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಮೂವರು ಪರಾರಿಯಾಗಿದ್ದಾರೆ.

Reporter_Vishwanath PanjimogaruConclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.