ರಾಯಚೂರು: ಎಟಿಎಂ ಕಳ್ಳತನ ಮಾಡಲು ಯತ್ನಸಿ ದುಷ್ಕರ್ಮಿಗಳು ವಿಫಲವಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಪೊಲೀಸ್ ಠಾಣೆಗೆ ಹತ್ತಿರವಿರುವ ಸೆಂಟ್ರಲ್ ಬ್ಯಾಂಕ್ಗೆ ಸೇರಿದ ಎಟಿಎಂನಲ್ಲಿ ಖದೀಮರು ಕಳ್ಳತನ ಮಾಡಲು ಮುಂದಾಗಿದ್ದಾರೆ. ಎಟಿಎಂ ಲಾಕ್ ಮುರಿಯಲು ಯತ್ನಿಸಿದಾಗ ಎಟಿಎಂನ ಸೆಕ್ಯುರಿಟಿ ಸೈರನ್ ಹೊಡೆದಿದೆ.
ಈ ವೇಳೆ ಖದೀಮರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿರವಾರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.