ETV Bharat / jagte-raho

ಇಬ್ಬರು ಅಧಿಕಾರಿಗಳನ್ನು ಕೊಂದಿದ್ದ ಮೋಸ್ಟ್ ವಾಂಟೆಡ್​ ನಕ್ಸಲ್​​ ಹತ

author img

By

Published : Nov 26, 2020, 12:43 PM IST

ಕೆಲ ತಿಂಗಳ ಹಿಂದೆ ಪೊಲೀಸ್​ ಅಧಿಕಾರಿ ಹಾಗೂ ಅರಣ್ಯಾಧಿಕಾರಿಯನ್ನು ಅಪಹರಿಸಿ ಕೊಲೆ ಮಾಡಿದ್ದ ನಕ್ಸಲ್​ನನ್ನು ಛತ್ತೀಸ್​ಗಢದ ಬಿಜಾಪುರ್​ ಜಿಲ್ಲೆಯಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಸದೆ ಬಡಿಯಲಾಗಿದೆ.

Naxal
ನಕ್ಸಲ್​​ ಹತ

ಬಿಜಾಪುರ್​ (ಛತ್ತೀಸ್​ಗಢ): ಎರಡು ಕೊಲೆ ಪ್ರಕರಣದ ಆರೋಪ ಹೊತ್ತಿದ್ದ ಮೋಸ್ಟ್ ವಾಂಟೆಡ್​ ನಕ್ಸಲ್​ನನ್ನು ಛತ್ತೀಸ್​ಗಢದಲ್ಲಿ ಭದ್ರತಾ ಪಡೆ ಹೊಡೆದುರುಳಿಸಿದೆ.

ಸಂತೋಷ್ ಪೋದಿಯಾಮ್​ ಮೃತ ನಕ್ಸಲ್​ ಆಗಿದ್ದು, ಈತ ಕೆಲ ತಿಂಗಳ ಹಿಂದೆ ಪೊಲೀಸ್​ ಅಧಿಕಾರಿ ಹಾಗೂ ಅರಣ್ಯಾಧಿಕಾರಿ ಅಪಹರಿಸಿ ಕೊಲೆಗೈದಿದ್ದ. ಈತನ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.

ಇಂದು ಬೆಳಗ್ಗೆ ಛತ್ತೀಸ್​ಗಢದ ಬಿಜಾಪುರ್​ ಜಿಲ್ಲೆಯ ದರ್ಬಾ ಅರಣ್ಯ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಭದ್ರತಾ ಸಿಬ್ಬಂದಿ ಸಂತೋಷ್ ಪೋದಿಯಾಮ್​​ನ ಹತ್ಯೆ ಮಾಡಲಾಗಿದೆ ಎಂದು ಬಸ್ತರ್ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಸುಂದರರಾಜ್ ಪಿ ತಿಳಿಸಿದ್ದಾರೆ.

ಬಿಜಾಪುರ್​ (ಛತ್ತೀಸ್​ಗಢ): ಎರಡು ಕೊಲೆ ಪ್ರಕರಣದ ಆರೋಪ ಹೊತ್ತಿದ್ದ ಮೋಸ್ಟ್ ವಾಂಟೆಡ್​ ನಕ್ಸಲ್​ನನ್ನು ಛತ್ತೀಸ್​ಗಢದಲ್ಲಿ ಭದ್ರತಾ ಪಡೆ ಹೊಡೆದುರುಳಿಸಿದೆ.

ಸಂತೋಷ್ ಪೋದಿಯಾಮ್​ ಮೃತ ನಕ್ಸಲ್​ ಆಗಿದ್ದು, ಈತ ಕೆಲ ತಿಂಗಳ ಹಿಂದೆ ಪೊಲೀಸ್​ ಅಧಿಕಾರಿ ಹಾಗೂ ಅರಣ್ಯಾಧಿಕಾರಿ ಅಪಹರಿಸಿ ಕೊಲೆಗೈದಿದ್ದ. ಈತನ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.

ಇಂದು ಬೆಳಗ್ಗೆ ಛತ್ತೀಸ್​ಗಢದ ಬಿಜಾಪುರ್​ ಜಿಲ್ಲೆಯ ದರ್ಬಾ ಅರಣ್ಯ ಪ್ರದೇಶದಲ್ಲಿ ನಡೆದ ಎನ್​ಕೌಂಟರ್​ನಲ್ಲಿ ಭದ್ರತಾ ಸಿಬ್ಬಂದಿ ಸಂತೋಷ್ ಪೋದಿಯಾಮ್​​ನ ಹತ್ಯೆ ಮಾಡಲಾಗಿದೆ ಎಂದು ಬಸ್ತರ್ ಶ್ರೇಣಿಯ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಸುಂದರರಾಜ್ ಪಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.