ETV Bharat / jagte-raho

ಮದುವೆ ಖರ್ಚಿಗಾಗಿ ದರೋಡೆಗಿಳಿದ ವರ ವಿವಾಹಕ್ಕೂ ಮುನ್ನವೇ ಪೊಲೀಸರ ಅತಿಥಿ! - ಬೇಬಿ ಬೆಟ್ಟದ ಕ್ರಷರ್​ಗಳ ಮೇಲೆ ದಾಳಿ ಮಾಡಿ ನಗದು ದೋಚಿದ್ದ ಪ್ರಕರಣ

ನಿಯತ್ತಿನಿಂದ ದುಡಿದು ವಿವಾಹವಾಗಿ ಸುಖಸಂಸಾರ ನಡೆಸುವ ಬದಲು ಯುವಕನೊಬ್ಬ ಕಳ್ಳಹಾದಿ ಹಿಡಿದು  ಹಣ ಸಂಪಾದನೆಗೆ ಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಮೂಲಕ ಕಳ್ಳನನ್ನು ಮದುವೆಯಾಗಲಿದ್ದ ಅಮಾಯಕ ಯುವತಿಯ ರಕ್ಷಣೆಯಾಗಿದೆ.

kn_mnd_01_arrest_avb_sp_byte_7202530
ಮದುವೆ ಖರ್ಚಿಗಾಗಿ ದರೋಡೆಗಿಳಿದ ವರ ವಿವಾಹಕ್ಕೂ ಮುನ್ನವೇ ಪೊಲೀಸರ ಅತಿಥಿ!
author img

By

Published : Dec 16, 2019, 3:34 PM IST

ಮಂಡ್ಯ: ತನ್ನ ಮದುವೆ ಖರ್ಚಿಗಾಗಿ ದರೋಡೆ ಹಾದಿ ಹಿಡಿದ ಯುವಕನೊಬ್ಬ, ವಿವಾಹ ಬಂಧನಕ್ಕೊಳಗಾಗುವುದಕ್ಕೂ ಮುನ್ನ ಪೊಲೀಸರ ಅತಿಥಿಯಾಗಿರುವ ಘಟನೆ ಪಾಂಡವಪುರದಲ್ಲಿ ನಡೆದಿದೆ.

ಮದುವೆ ಖರ್ಚಿಗಾಗಿ ದರೋಡೆಗಿಳಿದ ವರ ವಿವಾಹಕ್ಕೂ ಮುನ್ನವೇ ಪೊಲೀಸರ ಅತಿಥಿ!

ಕಳೆದ ಭಾನುವಾರವಷ್ಟೇ ಸರ್ಕಾರಿ ಶಾಲೆ ಶಿಕ್ಷಕಿಯನ್ನು ಮದುವೆ ಆಗಬೇಕಾಗಿದ್ದ ಕಳ್ಳನನ್ನು ಬಂಧಿಸಿದ ಪಾಂಡವಪುರ ಪೊಲೀಸರು, ಯುವತಿಯನ್ನು ರಕ್ಷಿಸುವ ಮೂಲಕ ಆಕೆಯ ಭವಿಷ್ಯ ಉಳಿಸಿದ್ದಾರೆ. ಸುಮಾರು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾದ ಮೈಸೂರು ಮೂಲದ ನವಾಜ್​ ಎಂಬಾತನನ್ನು ಬಂಧಿಸಿ, ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈತನ ಜೊತೆ ಆತನ ಸಹಚರರಾದ ಆರು ಮಂದಿಯನ್ನು ಬಂಧಿಸಿ, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ನವಾಜ್, ಮದುವೆ ಖರ್ಚಿಗಾಗಿ ದರೋಡೆಗೆ ಇಳಿದಿದ್ದ ಎನ್ನಲಾಗಿದೆ. ವಧುವಿಗೆ ಆಭರಣ ಹಾಗೂ ಮದುವೆ ಖರ್ಚಿಗಾಗಿ ದರೋಡೆ ಮಾಡಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳಿಂದ ಬೇಬಿ ಬೆಟ್ಟದ ಕ್ರಷರ್​ಗಳ ಮೇಲೆ ದಾಳಿ ಮಾಡಿ ನಗದು ದೋಚಿದ್ದ ಪ್ರಕರಣ, ಚಿನಕುರಳಿಯ ಚಿನ್ನದ ವ್ಯಾಪಾರಿ ಬಳಿ ದರೋಡೆ ಮಾಡಿದ್ದ ನಗದು ಸೇರಿದಂತೆ 60 ಗ್ರಾಂ ಚಿನ್ನಾಭರವಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಡ್ಯ: ತನ್ನ ಮದುವೆ ಖರ್ಚಿಗಾಗಿ ದರೋಡೆ ಹಾದಿ ಹಿಡಿದ ಯುವಕನೊಬ್ಬ, ವಿವಾಹ ಬಂಧನಕ್ಕೊಳಗಾಗುವುದಕ್ಕೂ ಮುನ್ನ ಪೊಲೀಸರ ಅತಿಥಿಯಾಗಿರುವ ಘಟನೆ ಪಾಂಡವಪುರದಲ್ಲಿ ನಡೆದಿದೆ.

ಮದುವೆ ಖರ್ಚಿಗಾಗಿ ದರೋಡೆಗಿಳಿದ ವರ ವಿವಾಹಕ್ಕೂ ಮುನ್ನವೇ ಪೊಲೀಸರ ಅತಿಥಿ!

ಕಳೆದ ಭಾನುವಾರವಷ್ಟೇ ಸರ್ಕಾರಿ ಶಾಲೆ ಶಿಕ್ಷಕಿಯನ್ನು ಮದುವೆ ಆಗಬೇಕಾಗಿದ್ದ ಕಳ್ಳನನ್ನು ಬಂಧಿಸಿದ ಪಾಂಡವಪುರ ಪೊಲೀಸರು, ಯುವತಿಯನ್ನು ರಕ್ಷಿಸುವ ಮೂಲಕ ಆಕೆಯ ಭವಿಷ್ಯ ಉಳಿಸಿದ್ದಾರೆ. ಸುಮಾರು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಯಾದ ಮೈಸೂರು ಮೂಲದ ನವಾಜ್​ ಎಂಬಾತನನ್ನು ಬಂಧಿಸಿ, ಯುವತಿಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಈತನ ಜೊತೆ ಆತನ ಸಹಚರರಾದ ಆರು ಮಂದಿಯನ್ನು ಬಂಧಿಸಿ, ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ನವಾಜ್, ಮದುವೆ ಖರ್ಚಿಗಾಗಿ ದರೋಡೆಗೆ ಇಳಿದಿದ್ದ ಎನ್ನಲಾಗಿದೆ. ವಧುವಿಗೆ ಆಭರಣ ಹಾಗೂ ಮದುವೆ ಖರ್ಚಿಗಾಗಿ ದರೋಡೆ ಮಾಡಿದ್ದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆರೋಪಿಗಳಿಂದ ಬೇಬಿ ಬೆಟ್ಟದ ಕ್ರಷರ್​ಗಳ ಮೇಲೆ ದಾಳಿ ಮಾಡಿ ನಗದು ದೋಚಿದ್ದ ಪ್ರಕರಣ, ಚಿನಕುರಳಿಯ ಚಿನ್ನದ ವ್ಯಾಪಾರಿ ಬಳಿ ದರೋಡೆ ಮಾಡಿದ್ದ ನಗದು ಸೇರಿದಂತೆ 60 ಗ್ರಾಂ ಚಿನ್ನಾಭರವಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Intro:ಮಂಡ್ಯ: ಕಳ್ಳನ ಹೆಂಡತಿ ಬಗ್ಗೆ ಒಂದು ನಾಣ್ನುಡಿ ಇದೆ. ಕಳ್ಳನ ಹೆಂಡತಿ ಯಾವತ್ತಿದ್ದರೂ .. . . . ಈ ಮಾತನ್ನು ಸುಳ್ಳು ಮಾಡಿದ್ದಾರೆ ಮಂಡ್ಯ ಪೊಲೀಸರು. ಹೌದು, ಭಾನುವಾರಷ್ಟೇ ಸರ್ಕಾರಿ ಶಾಲೆ ಶಿಕ್ಷಕಿಯನ್ನು ಮದುವೆ ಆಗಬೇಕಾಗಿದ್ದ ಕಳ್ಳನನ್ನು ಬಂಧಿಸಿ ಓರ್ವ ಯುವತಿಯ ಭವಿಷ್ಯವನ್ನು ರಕ್ಷಣೆ ಮಾಡಿದ್ದಾರೆ ಪೊಲೀಸರು.
ಪಾಂಡವಪುರ ಪೊಲೀಸರು ಸುಮಾರು 7 ಪ್ರಕರಣಗಳಲ್ಲಿ ಬೇಕಾಗಿದ್ದ ಮೈಸೂರಿನ ನವಾಜ್ ನನ್ನು ಬಂಧಿಸಿ ಯುವತಿಯ ಭವಿಷ್ಯವನ್ನು ರಕ್ಷಣೆ ಮಾಡಿದ್ದು, ಈತನ ಜೊತೆ ಆತನ ಸಹಚರರಾದ ಆರು ಮಂದಿಯನ್ನು ಬಂಧಿಸಿ ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ನವಾಜ್ ಮದುವೆ ಖರ್ಚಿಗಾಗಿ ದರೋಡೆಗೆ ಇಳಿದಿದ್ದ ಎನ್ನಲಾಗಿದೆ. ವಧುವಿಗೆ ಆಭರಣ ಹಾಗೂ ಮದುವೆ ಖರ್ಚಿಗಾಗಿ ದರೋಡೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೇಬಿ ಬೆಟ್ಟದ ಕ್ರಷರ್ ಗಳ ಮೇಲೆ ದಾಳಿ ಮಾಡಿ ನಗದು ದೋಚಿದ್ದ ಪ್ರಕರಣ ಸೇರಿದಂತೆ ಚಿನಕುರಳಿಯ ಚಿನ್ನದ ವ್ಯಾಪಾರಿ ಬಳಿ ದರೋಡೆ ಮಾಡಿದ್ದ ನಗದು ಸೇರಿದಂತೆ 60 ಗ್ರಾಂ ಚಿನ್ನಾಭರವಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಸಂಬಂಧ ಮೈಸೂರಿನ ನವಾಜ್ ಸೇರಿದಂತೆ ಅಬೀದ್, ವಶೀಂ ಹುಸೇನ್, ಚಿನಕುರಳಿಯ ಕೃಷ್ಣ, ಸಿ.ಎನ್. ಆಕಾಶ್, ರೋಹನ್ ಹಾಗೂ ಗುರುಕಿರಣ್ ಎಂಬವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಹೊಸ ಕಳ್ಳರರಾಗಿದ್ದು, ಎಲ್ಲರೂ ತಮ್ಮ ಕಷ್ಟದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಕಳ್ಳತನಕ್ಕೆ ಇಳಿದಿದ್ದರು. ಜೊತೆಗೆ ಇವರೆಲ್ಲರೂ ಆಸುಪಾಸು 25 ವರ್ಷದೊಳಗಿನವರಾಗಿದ್ದಾರೆ.

ಬೈಟ್; ಪರಶುರಾಮ್, ಎಸ್ಪಿ

(ಗಮನಕ್ಕೆ: ಹಳದಿ ಟೀ ಶರ್ಟ್ ಹಾಕಿರುವವನು ಭಾನುವಾರ ಮದುವೆ ಆಗಬೇಕಾದ ಮದುವೆ ಹುಡುಗ)
Body:ಯತೀಶ್ ಬಾಬು, ಈಟಿವಿ ಭಾರತ್, ಮಂಡ್ಯ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.