ETV Bharat / jagte-raho

ಮಾರುತಿ ಕಾರುಗಳನ್ನೇ ಕದಿಯುತ್ತಿದ್ದ ನಾಲ್ವರು ಖದೀಮರ ಬಂಧನ..

ಅದೃಷ್ಟವಶಾತ್ ಕಾರಿನಲ್ಲಿ ಜಿಪಿಎಸ್‌ ಅಳವಡಿಸಲಾಗಿತ್ತು. ಇದರ ಆಧಾರದ ಮೇಲೆ ಕಳ್ಳರನ್ನು ಬೆನ್ನತ್ತಿದ ಪೊಲೀಸರು, ತಮಿಳುನಾಡಿನ ತಿರುಚ್ಚಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಶೇಷ ಅಂದ್ರೆ ಇವರು ಮಾರುತಿ ಕಾರುಗಳನ್ನೇ ಕದಿಯುತ್ತಿದ್ದರು.

author img

By

Published : Jan 20, 2020, 11:01 PM IST

Four accused arrest by kamakshipalya police
ನಾಲ್ವರು ಖದೀಮರ ಬಂಧನ

ಬೆಂಗಳೂರು: ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ್ದ ನಾಲ್ವರು ಕಾರು ಕಳ್ಳರನ್ನು ಕೊನೆಗೂ ತಮಿಳುನಾಡಿನ ತಿರುಚ್ಚಿಯಲ್ಲಿ ಬಂಧಿಸಲಾಗಿದೆ.

ಸದ್ದಾಂಹುಸೇನ್, ಮಾರಿಮುತ್ತು,ನಾಹೂರ್ ಮೀರಾ ಮತ್ತು ಹರಿಕೃಷ್ಣ ಎಂಬುವರು ಬಂಧಿತ ಆರೋಪಿಗಳು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚಂದನ‌ಲೇಔಟ್ ನಿವಾಸಿ‌ ಕೃಷ್ಣೇಗೌಡ ಮೂರು ತಿಂಗಳ ಹಿಂದೆಮಾರುತಿ ಕಾರ್ ಖರೀದಿಸಿದ್ದರು. ಪಾರ್ಕಿಂಗ್ ಮಾಡಿದ್ದ ಕಾರನ್ನು ಈ ಖದೀಮರು ಎಗರಿಸಿದ್ದರು. ಈ ಹಿನ್ನೆಲೆ ಕೃಷ್ಣೇಗೌಡರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅದೃಷ್ಟವಶಾತ್ ಕಾರಿನಲ್ಲಿ ಜಿಪಿಎಸ್‌ ಅಳವಡಿಸಲಾಗಿತ್ತು. ಇದರ ಆಧಾರದ ಮೇಲೆ ಕಳ್ಳರನ್ನು ಬೆನ್ನತ್ತಿದ ಪೊಲೀಸರು, ತಮಿಳುನಾಡಿನ ತಿರುಚ್ಚಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಶೇಷ ಅಂದ್ರೆ ಇವರು ಮಾರುತಿ ಕಾರುಗಳನ್ನೇ ಕದಿಯುತ್ತಿದ್ದರು.

ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಹೆಚ್ಚಾಗಿ ತಮಿಳುನಾಡು ಗಡಿ ಭಾಗದ ಆಗ್ನೇಯ ವಿಭಾಗದ ಬೊಮ್ಮನಹಳ್ಳಿ, ಪರಪ್ಪನ ಅಗ್ರಹಾರ, ಸೂರ್ಯಸಿಟಿ, ಹುಳಿಮಾವು ಠಾಣೆ ವ್ಯಾಪ್ತಿಗಳಲ್ಲಿ ಈ ನಾಲ್ಕು ಜನ ಅಂತರ ರಾಜ್ಯ ಕಾರುಗಳ್ಳರ ವಿರುದ್ಧ 11 ಕೇಸ್ ದಾಖಲಾಗಿದ್ದವು. ಇದೀಗ ಬಂಧಿತರಿಂದ ಸುಮಾರು 30 ಲಕ್ಷ ರೂ. ಬೆಲೆಯ ಮಾರುತಿ, ಎರ್ಟಿಗಾ ಮತ್ತು ಸ್ವಿಫ್ಟ್ ಡಿಜೈರ್ ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ್ದ ನಾಲ್ವರು ಕಾರು ಕಳ್ಳರನ್ನು ಕೊನೆಗೂ ತಮಿಳುನಾಡಿನ ತಿರುಚ್ಚಿಯಲ್ಲಿ ಬಂಧಿಸಲಾಗಿದೆ.

ಸದ್ದಾಂಹುಸೇನ್, ಮಾರಿಮುತ್ತು,ನಾಹೂರ್ ಮೀರಾ ಮತ್ತು ಹರಿಕೃಷ್ಣ ಎಂಬುವರು ಬಂಧಿತ ಆರೋಪಿಗಳು. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಚಂದನ‌ಲೇಔಟ್ ನಿವಾಸಿ‌ ಕೃಷ್ಣೇಗೌಡ ಮೂರು ತಿಂಗಳ ಹಿಂದೆಮಾರುತಿ ಕಾರ್ ಖರೀದಿಸಿದ್ದರು. ಪಾರ್ಕಿಂಗ್ ಮಾಡಿದ್ದ ಕಾರನ್ನು ಈ ಖದೀಮರು ಎಗರಿಸಿದ್ದರು. ಈ ಹಿನ್ನೆಲೆ ಕೃಷ್ಣೇಗೌಡರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅದೃಷ್ಟವಶಾತ್ ಕಾರಿನಲ್ಲಿ ಜಿಪಿಎಸ್‌ ಅಳವಡಿಸಲಾಗಿತ್ತು. ಇದರ ಆಧಾರದ ಮೇಲೆ ಕಳ್ಳರನ್ನು ಬೆನ್ನತ್ತಿದ ಪೊಲೀಸರು, ತಮಿಳುನಾಡಿನ ತಿರುಚ್ಚಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ವಿಶೇಷ ಅಂದ್ರೆ ಇವರು ಮಾರುತಿ ಕಾರುಗಳನ್ನೇ ಕದಿಯುತ್ತಿದ್ದರು.

ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಹೆಚ್ಚಾಗಿ ತಮಿಳುನಾಡು ಗಡಿ ಭಾಗದ ಆಗ್ನೇಯ ವಿಭಾಗದ ಬೊಮ್ಮನಹಳ್ಳಿ, ಪರಪ್ಪನ ಅಗ್ರಹಾರ, ಸೂರ್ಯಸಿಟಿ, ಹುಳಿಮಾವು ಠಾಣೆ ವ್ಯಾಪ್ತಿಗಳಲ್ಲಿ ಈ ನಾಲ್ಕು ಜನ ಅಂತರ ರಾಜ್ಯ ಕಾರುಗಳ್ಳರ ವಿರುದ್ಧ 11 ಕೇಸ್ ದಾಖಲಾಗಿದ್ದವು. ಇದೀಗ ಬಂಧಿತರಿಂದ ಸುಮಾರು 30 ಲಕ್ಷ ರೂ. ಬೆಲೆಯ ಮಾರುತಿ, ಎರ್ಟಿಗಾ ಮತ್ತು ಸ್ವಿಫ್ಟ್ ಡಿಜೈರ್ ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ.

Intro:Body:
ಬೆಂಗಳೂರು:
ನಿರ್ದಿಷ್ಟ ಕಂಪೆನಿಯ ಕಾರುಗಳನ್ನೆ ಖದಿಯುತ್ತಿದ್ದ ಖದೀಮರ ಗ್ಯಾಂಗ್ ಇದು. ಇವರ ಕಣ್ಣು ಕಾರ್ ಮೇಲೆ ಬಿತ್ತು ಅಂದ್ರೆ ಆ ಕಾರು ಬೆಳಗ್ಗೆ ಸ್ಥಳದಿಂದ ಎಸ್ಕೇಪ್ ಆಗ್ತಿತ್ತು. ಬೆಂಗಳೂರು ಪೊಲೀಸರ ನಿದ್ದೆಗೆಡಿಸಿದ್ದ ಖದೀಮರಿಗೆ ಕಾಮಾಕ್ಷಿಪಾಳ್ಯ ಪೊಲೀಸರು ಕೋಳ ತೊಡಿಸಿದ್ದಾರೆ.
ಕಾಮಾಕ್ಷಿಪಾಳ್ಯ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ಚಂದನ‌ ಲೇಔಟ್ ನಿವಾಸಿ‌ ಕೃಷ್ಣೇಗೌಡ ಮೂರು ತಿಂಗಳ ಹಿಂದೆ ಮಾರುತಿ ವೆಟರಾ ಬ್ರೇಜಾ ಖಾರ್ ಖರೀದಿಸಿದ್ದರು. ಮಗುವಿಗಿಂತ ಹೆಚ್ಚಾಗಿ ಕಾರನ್ನು ಪ್ರೀತಿಸುತ್ತಿದ್ದ ಕೃಷ್ಣೇಗೌಡ ರಿಗೆ ಶಾಕ್ ಕಾದಿತ್ತು. ಮಧ್ಯರಾತ್ರಿ ಇದ್ದ ಕಾರು ಬೆಳಗಾಗುವಷ್ಟರಲ್ಲಿ ಪಾರ್ಕಿಂಗ್ ಸ್ಥಳದಲ್ಲಿರಲಿಲ್ಲ. ಶಾಕ್ ಗೊಳಗಾದ ಕೃಷ್ಣೇಗೌಡರು ನೇರವಾಗಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆರಲ್ಲಿ ದೂರು ನೀಡಿದ್ದರು.. ಅದೃಷ್ಟವಶಾತ್ ಬ್ರೇಜಾ ಕಾರಿನಲ್ಲಿ ಜಿ.ಪಿ.ಎಸ್.ಅಳವಡಿಸಲಾಗಿತ್ತು. ಕಳ್ಳರ ಬೆನ್ನತ್ತಿದ ಪೊಲೀಸರು ತಮಿಳುನಾಡಿನ ತಿರುಚ್ಚಿಯಲ್ಲಿ ನಾಲ್ಕು ಜನ ಖದೀಮರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸದ್ದಾಂಹುಸೇನ್ ಈತ ಮಾರುತಿ ಕಾರುಗಳ ಗ್ಲಾಸ್ ಹೊಡೆದು ಕಾರ್ ಗಳನ್ನು ಕ್ಷಣಾರ್ಧದಲ್ಲಿ ಎಗರಿಸುತ್ತಿದ್ದ. ಈತನ ಜೊತೆ ಉಳಿದ ಆರೋಪಿಗಳಾದ ಮಾರಿಮುತ್ತು, ನಾಹೂರ್ ಮೀರಾ ಮತ್ತು ಹರಿಕೃಷ್ಣ ಕೈಜೋಡಿಸಿದ್ದು, ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. ಬಂಧಿತರು ಮಾರುತಿ ಕಾರ್ ಳನ್ನೆ ಖದೀಯುತ್ತಿದ್ದರು. ಬಂಧಿತರಿಂದ ಸುಮಾರು 30 ಲಕ್ಷ ಬೆಲೆಯ ಮಾರುತಿ ವೆಟಾರಾ ಬ್ರೇಜಾ, ಎರ್ಟಿಗಾ ಮತ್ತು ಸ್ವಿಪ್ಟ್ ಡಿಜೈರ್ ಕಾರುಗಳನ್ನ ವಶಕ್ಕೆ ಪಡೆಯಲಾಗಿದೆ.


ಇನ್ನು ದೂರು ದಾಖಲಿಸಿಕೊಂಡ ಕಾಮಾಕ್ಷಿಪಾಳ್ಯ ಪೊಲೀಸರು ತಮಿಳುನಾಡಿನಲ್ಲಿ ಕದ್ದಕಾರುಗಳನ್ನು ಮಾರಲು ಯತ್ನಿಸುತ್ತಿದ್ದ ಆಸಾಮಿಗಳಿಗೆ ಶಾಕ್ ನೀಡಿದ್ದರು. ಈ ಮೊದಲು ಬೆಂಗಳೂರು ಸುತ್ತುಮುತ್ತ ಕದ್ದಿದ್ದ ಕಾರುಗಳನ್ನು ತಿರುಚ್ಚಿ ಸುತ್ತಮುತ್ತಲ ಮಾರಾಟ ಮಾಡಿದ್ದರು. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ಹೆಚ್ಚಾಗಿ ತಮಿಳುನಾಡು ಗಡಿ ಭಾಗದ ನಗರದ ಆಗ್ನೇಯ ವಿಭಾಗದ ಬೊಮ್ಮನಹಳ್ಳಿ, ಪರಪ್ಪನ ಅಗ್ರಹಾರ, ಸೂರ್ಯಸಿಟಿ, ಹುಳಿಮಾವು ಠಾಣೆ ವ್ಯಾಪ್ತಿಗಳಲ್ಲಿ ಈ ನಾಲ್ಕುಜನ ಅಂತರಾಜ್ಯ ಕಾರುಗಳ್ಳರ ವಿರುದ್ಧ 11 ಕೇಸ್ ದಾಖಲಾಗಿದ್ದವು. .
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.