ಹೊನ್ನಾವರ: ತಾಲೂಕಿನ ಮಂಕಿ ತುಂಬೆಬೀಳು ತಿರುವಿನಲ್ಲಿ ಬೈಕ್ ಸವಾರನೊಬ್ಬ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲೇ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಾತ್ರಿ ಸಂಭವಿಸಿದೆ.
ಮೃತ ಯುವಕ ಅಭಿಷೇಕ ಗಣಪತಿ ನಾಯ್ಕ ನರೆಕುಳಿ ಮುರ್ಡೇಶ್ವರ ನಿವಾಸಿಯಾಗಿದ್ದು, ಬೈಕ್ ಮೇಲೆ ಡೆತ್ ರೈಡರ್ ಅಂತಾ ಬರೆಸಿದ್ದಾರೆ. ಇವರು ಹೊನ್ನಾವರ ತಾಲೂಕಿನ ಮಂಕಿ ಜಾತ್ರೆ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.