ETV Bharat / jagte-raho

ಮತದಾನ ಆರಂಭಕ್ಕೂ ಮುನ್ನ ಕರಾಳ ಛಾಯೆ.. ಬಸ್​ ಪಲ್ಟಿಯಾಗಿ ತಾಯಿ, ಮಗು ಸೇರಿ ಮೂವರ ದುರ್ಮರಣ - undefined

ಸಾಗರದ ಉಳ್ಳೂರು ಗ್ರಾಮದ ಬಳಿ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮಗು ಸೇರಿ ಮೂವರು ದುರ್ಮರಣಕ್ಕೀಡಾಗಿದ್ದಾರೆ. 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳ್ಳೂರು ಗ್ರಾಮದ ಬಳಿ ಸಂಭವಿಸಿದ ಬಸ್ ಅಪಘಾತ
author img

By

Published : Apr 18, 2019, 8:35 AM IST

ಶಿವಮೊಗ್ಗ: ಸಾಗರ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ, ಅದರ​ಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಹೊನ್ನಾವರ ಮೂಲದ ಸುಜಾತಾ (40) ಹಾಗೂ ಮಗಳು ಕೀರ್ತನಾ (12) ಮತ್ತು ಚಿತ್ರದುರ್ಗದ ಮಹಮ್ಮದ್ ಯಾಸಿನ್ ಸ್ಥಳದಲ್ಲೇ ಮೃತಪಟ್ಟವರು. ನಸುಕಿನಲ್ಲಿ ಸಂಭವಿಸಿದ ದುರಂತದಿಂದ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಏನಾಗುತ್ತಿದೆ ಎಂಬುದನ್ನು ಅರಿಯುವಷ್ಟರಲ್ಲಿ ಬಸ್​ ತಿರುವಿನಲ್ಲಿ ಪಲ್ಟಿಯಾಗಿದ್ದುಮ ಸಣ್ಣ- ಪುಟ್ಟ ಗಾಯಗಳಿಂದ ಸಹಾಯಕ್ಕೆ ಮೊರೆಯಿಟ್ಟರು. ನಸುಕಿನಲ್ಲಿ ಜನಸಂದಣಿ ಇಲ್ಲದೆ ಸಕಾಲದಲ್ಲಿ ಸ್ಥಳೀಯರ ನೆರವು ಸಿಗಲಿಲ್ಲ. ಬೆಳಕು ಹರಿಯುತ್ತಿದ್ದಂತೆ ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. 20ಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಗಾಯಾಗೊಂಡಿದ್ದು, ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಿವಮೊಗ್ಗ: ಸಾಗರ ಮಾರ್ಗವಾಗಿ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ, ಅದರ​ಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ಹೊನ್ನಾವರ ಮೂಲದ ಸುಜಾತಾ (40) ಹಾಗೂ ಮಗಳು ಕೀರ್ತನಾ (12) ಮತ್ತು ಚಿತ್ರದುರ್ಗದ ಮಹಮ್ಮದ್ ಯಾಸಿನ್ ಸ್ಥಳದಲ್ಲೇ ಮೃತಪಟ್ಟವರು. ನಸುಕಿನಲ್ಲಿ ಸಂಭವಿಸಿದ ದುರಂತದಿಂದ ನಿದ್ರೆಯಲ್ಲಿದ್ದ ಪ್ರಯಾಣಿಕರಿಗೆ ಏನಾಗುತ್ತಿದೆ ಎಂಬುದನ್ನು ಅರಿಯುವಷ್ಟರಲ್ಲಿ ಬಸ್​ ತಿರುವಿನಲ್ಲಿ ಪಲ್ಟಿಯಾಗಿದ್ದುಮ ಸಣ್ಣ- ಪುಟ್ಟ ಗಾಯಗಳಿಂದ ಸಹಾಯಕ್ಕೆ ಮೊರೆಯಿಟ್ಟರು. ನಸುಕಿನಲ್ಲಿ ಜನಸಂದಣಿ ಇಲ್ಲದೆ ಸಕಾಲದಲ್ಲಿ ಸ್ಥಳೀಯರ ನೆರವು ಸಿಗಲಿಲ್ಲ. ಬೆಳಕು ಹರಿಯುತ್ತಿದ್ದಂತೆ ಗಮನಿಸಿದ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿ ಗಾಯಾಳುಗಳನ್ನು ರಕ್ಷಿಸಿದ್ದಾರೆ. 20ಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಗಾಯಾಗೊಂಡಿದ್ದು, ಅವರನ್ನ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Intro:ಸಾಗರ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೆ ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಸಾಗರದ ಉಳ್ಳೂರು ಗ್ರಾಮದ ಬಳಿ ನಡೆದಿದೆ. ಸಾಗರ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ಸಿಬರ್ಡ್ ಖಾಸಗಿ ಬಸ್ KA 01 AA 2045 ರಾತ್ರಿ ಸುಮಾರು 12-40 ರ ವೇಳೆಗೆ ಸಾಗರ ತಾಲೂಕು ಉಳ್ಳೂರು ಗ್ರಾಮದ ತಿರುವಿನಲ್ಲಿ‌ ಪಲ್ಟಿಯಾಗಿದೆBody:. ಪಲ್ಟಿಯಾದ ಪರಿಣಾಮ ಬಸ್ ನಲ್ಲಿ ಇದ್ದ ತಾಯಿ ಹಾಗೂ ಮಗಳು 12 ವರ್ಷದ ಕೀರ್ತನಾ, 40 ವರ್ಷದ ಸುಜಾತ ಹೊನ್ನಾವರ ಮೂಲದವರಾಗಿದ್ದು, ಚಿತ್ರದುರ್ಗದ 16 ವರ್ಷ ಮಹಮ್ಮದ್ ಯಾಸಿನ್ ಸ್ಥಳದಲ್ಲೆ ಮೃತ ಪಟ್ಟಿದ್ದಾರೆ. ಘಟನೆಯಲ್ಲಿ 20 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗಳಾಗಿವೆConclusion:ಸುಖ ನಿದ್ದೆಯಲ್ಲಿದ್ದ ಎಲ್ಲಾರು ಬಸ್ ಪಲ್ಟಿಯಾಗುತ್ತಿದ್ದಂತೆಯೇ ಗಾಬರಿ ಗೊಂಡಿದ್ದಾರೆ. ಕೆಲವರು ಬಸ್ ನಲ್ಲಿ ಸಿಕ್ಕಿ ಕೊಂಡು ಒದ್ದಾಡುವಾಗ ದಾರಿಯಲ್ಲಿನ ಪ್ರಯಾಣಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ರಕ್ಷಣೆ ಮಾಡಿ ಸಾಗರ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ. ಹೆಚ್ಚಿನ‌ ಚಿಕಿತ್ಸೆಗಾಗಿ‌ ಶಿವಮೊಗ್ಗ‌ ಆಸ್ಪತ್ರೆಗೆ ಕಳುಹಿಸಲಾಗಿದೆ.ಉಳ್ಳೂರು ಭಾಗದಲ್ಲಿ ಪ್ರತಿ ನಿತ್ಯ ಒಂದಲ್ಲ ಒಂದು ಅಪಘಾತ ನಡೆಯುತ್ತಲೆ ಇರುತ್ತದೆ. ಅಪಘಾತ ತಡೆಗಟ್ಟುವಲ್ಲಿ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ‌ ಹೆದ್ದಾರಿ ಪ್ರಾಧಿಕಾರ ಸೂಕ್ತ ಕ್ರಮ ತೆಗೆದು‌ ಕೊಂಡು ಅಮಾಯಕರ ಪ್ರಾಣ ರಕ್ಷಣೆ ಮಾಡಬೇಕಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.