ETV Bharat / jagte-raho

ಕೊರೊನಾ ಕಾಟ ಹೆಚ್ಚಾಗಿದೆ ಹೊರಗಡೆ ಹೋಗಬೇಡಿ ಎಂದ ಪತ್ನಿ...ನೇಣಿಗೆ ಶರಣಾದ ಪತಿ

author img

By

Published : Apr 23, 2020, 12:56 PM IST

ಕೊರೊನಾ ಕಾಟ ಜಾಸ್ತಿಯಾಗಿದೆ. ಇಂತಹ ಸಂದರ್ಭದಲ್ಲಿ ಸುಖಾಸುಮ್ಮನೆ ಓಡಾಡಬೇಡಿ ಎಂದು ಪತ್ನಿ ಹೇಳಿದ ಬುದ್ದಿವಾದಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

A man committed suicide
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ರಾಯಪೋಲ್​: ಕೊರೊನಾ ಸೋಂಕು ಹೆಚ್ಚುತ್ತಿದೆ ಮನೆಬಿಟ್ಟು ಹೊರಗಡೆ ಓಡಾಡಬೇಡಿ. ಸೋಂಕು ತಗುಲಿದರೆ ಪ್ರಾಣ ಹೋಗುತ್ತೆ ಎಂದು ಪತಿಗೆ ಪತ್ನಿ ಹೇಳಿದ್ದೇ ತಪ್ಪಾಯಿತು.

ಪತ್ನಿ ಹೇಳಿದ ಬುದ್ದಿಮಾತುಗಳಿಗೆ ಮನನೊಂದು ಪತಿ ರಾಮುಲು (60) ಸಾವನ್ನಪ್ಪಿದ್ದಾರೆ. ಸಿದ್ದಿಪೇಟ ಜಿಲ್ಲೆಯ ರಾಯಪೋಲ್​ ಮಂಡಲದ ಲಿಂಗಾರೆಡ್ಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ರಾಮುಲು ಅವರು ತನ್ನ ಮಗ ರಾಜುವಿನೊಂದಿಗೆ ಘಜ್ವೆಲ್‌ನಲ್ಲಿ ರಸಗೊಬ್ಬರ ಅಂಗಡಿಯೊಂದನ್ನು ನಡೆಸುತ್ತಿದ್ದರು. ಲಾಕ್​ಡೌನ್​​ನಿಂದಾಗಿ ಅಂಗಡಿ ಮುಚ್ಚಿ ಸ್ವಗ್ರಾಮ ಲಿಂಗಾರೆಡ್ಡಿಹಳ್ಳಿಗೆ ಹೋದರು. ಮನೆಗೆ ಹೋದ ನಂತರ ರಾಮುಲು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದರು.

ಮಂಗಳವಾರ ಘಜ್ವೆಲ್​​ಗೂ ಹೋಗಿ ಬಂದರು. ಹೀಗಾಗಿ ಪತ್ನಿ ಅಂಜಮ್ಮ ಈ ಕುರಿತು ಪ್ರಶ್ನಿಸಿದ್ದಾರೆ. ಈಗಾಗಲೇ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ತಿರುಗಾಡುವುದೇಕೆ ಎಂದು ಕೇಳಿದ್ದಾರೆ. ಆಗ ಅವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಇದಕ್ಕೆ ಮನನೊಂದ ರಾಮುಲು, ಬುಧವಾರ ಮುಂಜಾನೆ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದರು.

ರಾಯಪೋಲ್​: ಕೊರೊನಾ ಸೋಂಕು ಹೆಚ್ಚುತ್ತಿದೆ ಮನೆಬಿಟ್ಟು ಹೊರಗಡೆ ಓಡಾಡಬೇಡಿ. ಸೋಂಕು ತಗುಲಿದರೆ ಪ್ರಾಣ ಹೋಗುತ್ತೆ ಎಂದು ಪತಿಗೆ ಪತ್ನಿ ಹೇಳಿದ್ದೇ ತಪ್ಪಾಯಿತು.

ಪತ್ನಿ ಹೇಳಿದ ಬುದ್ದಿಮಾತುಗಳಿಗೆ ಮನನೊಂದು ಪತಿ ರಾಮುಲು (60) ಸಾವನ್ನಪ್ಪಿದ್ದಾರೆ. ಸಿದ್ದಿಪೇಟ ಜಿಲ್ಲೆಯ ರಾಯಪೋಲ್​ ಮಂಡಲದ ಲಿಂಗಾರೆಡ್ಡಿಹಳ್ಳಿಯಲ್ಲಿ ಈ ಘಟನೆ ನಡೆದಿದೆ.

ರಾಮುಲು ಅವರು ತನ್ನ ಮಗ ರಾಜುವಿನೊಂದಿಗೆ ಘಜ್ವೆಲ್‌ನಲ್ಲಿ ರಸಗೊಬ್ಬರ ಅಂಗಡಿಯೊಂದನ್ನು ನಡೆಸುತ್ತಿದ್ದರು. ಲಾಕ್​ಡೌನ್​​ನಿಂದಾಗಿ ಅಂಗಡಿ ಮುಚ್ಚಿ ಸ್ವಗ್ರಾಮ ಲಿಂಗಾರೆಡ್ಡಿಹಳ್ಳಿಗೆ ಹೋದರು. ಮನೆಗೆ ಹೋದ ನಂತರ ರಾಮುಲು ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದರು.

ಮಂಗಳವಾರ ಘಜ್ವೆಲ್​​ಗೂ ಹೋಗಿ ಬಂದರು. ಹೀಗಾಗಿ ಪತ್ನಿ ಅಂಜಮ್ಮ ಈ ಕುರಿತು ಪ್ರಶ್ನಿಸಿದ್ದಾರೆ. ಈಗಾಗಲೇ ಕೊರೊನಾ ವೈರಸ್​ ಸೋಂಕಿತರ ಸಂಖ್ಯೆ ಅಧಿಕವಾಗಿದೆ. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ತಿರುಗಾಡುವುದೇಕೆ ಎಂದು ಕೇಳಿದ್ದಾರೆ. ಆಗ ಅವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆಯಿತು. ಇದಕ್ಕೆ ಮನನೊಂದ ರಾಮುಲು, ಬುಧವಾರ ಮುಂಜಾನೆ ಮಾವಿನ ಮರಕ್ಕೆ ನೇಣು ಹಾಕಿಕೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.