ETV Bharat / international

'ಕಾಲ್ಪನಿಕ ದೇಶ'ದ ಮಾತುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ: ನಿತ್ಯಾನಂದನ ಪ್ರತಿನಿಧಿ ಹೇಳಿಕೆಗೆ ವಿಶ್ವಸಂಸ್ಥೆ ಸ್ಪಷ್ಟನೆ

ವಿಶ್ವಸಂಸ್ಥೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೈಲಾಸ ದೇಶದ ಹಲವಾರು ಕಾರ್ಯಕರ್ತರು ಭಾಗಿಯಾಗಿರುವ ವಿಡಿಯೋವನ್ನು ನಿತ್ಯಾನಂದ ಹಂಚಿಕೊಂಡಿದ್ದಾರೆ.

author img

By

Published : Mar 3, 2023, 1:40 PM IST

Un Clarification On Kailasa representative Speech
Un Clarification On Kailasa representative Speech

"ಭಾರತ ಬಿಟ್ಟು ಬಂದಿರುವ ದೇವಮಾನವ ನಿತ್ಯಾನಂದರ ವಿರುದ್ಧ ದ್ವೇಷ ಹರಡುವ ಕೆಲಸ ನಡೆಯುತ್ತಿದೆ. ಇಂತಹ ಹಿಂದೂ ವಿರೋಧಿ ಗುಂಪುಗಳ ವಿರುದ್ಧ ಭಾರತ ಸರ್ಕಾರ ಕ್ರಮಕ್ಕೆ ಮುಂದಾಗಬೇಕು" ಎಂದು ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ ವಿಶ್ವಸಂಸ್ಥೆಯಲ್ಲಿ ಮನವಿ ಮಾಡಿದ್ದಾರೆ.

ನಿತ್ಯಾನಂದರ 'ಯುನೈಟೆಡ್​ ಆಫ್​ ಸ್ಟೇಟ್​​ ಕೈಲಾಸ' ದೇಶದ ಪ್ರತಿನಿನಿಧಿಯಾಗಿರುವ ಮಾ ವಿಜಯಪ್ರಿಯಾ ನಿತ್ಯಾನಂದ ಈ ಸಂಬಂಧ ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡಿದ್ದಾರೆ. ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶರು ಮತ್ತು ಕೈಲಾಸದ ವಿರುದ್ಧ ನಿರಂತರವಾಗಿ ಹಿಂಸಾಚಾರವನ್ನು ಪ್ರಚೋದಿಸಲಾಗುತ್ತಿದೆ. ಭಾರತದ ಈ ವ್ಯವಸ್ಥಿತ ಚಟುವಟಿಕೆಯನ್ನು ನಿಲ್ಲಿಸಿ, ಅವರ ಸುರಕ್ಷತೆಗೆ ರಕ್ಷಣೆ ನೀಡಬೇಕು ಎಂದು ವಿಜಯಪ್ರಿಯ ಮನವಿ ಮಾಡಿದರು. ವಿಶ್ವಸಂಸ್ಥೆಯಲ್ಲಿ ತನ್ನ ದೇಶದ ಕುರಿತು ಧ್ವನಿ ಎತ್ತಿರುವ ಈ ಪ್ರತಿನಿಧಿಯ ವಿಡಿಯೋವನ್ನು ನಿತ್ಯಾನಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಗೆ ಹಲವು ಜನರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕೈಲಾಸ ದೇಶದ ವೀಸಾಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಕೇಳಿದ್ದಾರೆ. ಮತ್ತೆ ಕೆಲವರು ಕೈಲಾಸದಲ್ಲಿ ಶಾಶ್ವತ ನಿವಾಸಕ್ಕೆ ಬೇಕಾಗುವ ದಾಖಲಾತಿ ಕುರಿತು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಭಾರತದಲ್ಲಿ ಇದೀಗ ಜಿ20 ಶೃಂಗಸಭೆ ನಡೆಸಲಾಗುತ್ತಿದೆ. ಕೈಲಾಸ ದೇಶವನ್ನು ಸೇರಿಸುವ ಮೂಲಕ ಇದನ್ನು ಜಿ21 ಆಗಿ ಮಾಡಿ. ಕೈಲಾಸವನ್ನು ಅಖಂಡ ಭಾರತದ ಭೂಪಟಕ್ಕೆ ಸೇರಿಸಿ ಎಂದಿದ್ದಾರೆ. ನಿತ್ಯಾನಂದರ ದೇಶದ ಕುರಿತು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಪ್ರತಿನಿಧಿಯ ಧಿರಿಸಿನ ಹಂಚಿಕೊಂಡಿರುವ ಮತ್ತೊಬ್ಬರು, ಕೈಲಾಸದಲ್ಲಿ ಮಹಿಳೆಯರು ಡ್ರೆಸ್​ ಕೋಡ್​ ಹೀಗೆಯೇ ಇರುತ್ತದೆಯೇ ಎಂದಿದ್ದಾರೆ. ಈ ಹಿಂದೆ ನಿತ್ಯಾನಂದರ ವಿರುದ್ಧ ಕೇಳಿ ಬಂದ ಅತ್ಯಾಚಾರ ಆರೋಪದಲ್ಲಿ ಅವರು, ಪುರುಷ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಿದ್ದರ ಹಳೆ ವಿಡಿಯೋಗಳನ್ನು ಕೂಡ ಕೆಲವರು ಕೆದಕಿ ಹಂಚಿಕೊಂಡಿದ್ದಾರೆ.

ತಮ್ಮ ಆಶ್ರಮದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರದ ಆರೋಪದ ಹೊಂದಿದ್ದ ನಿತ್ಯಾನಂದ 2019ರಲ್ಲಿ ತಮ್ಮದೇ ಆದ ಕೈಲಾಸ ದೇಶ ಸೃಷ್ಟಿಸಿರುವುದಾಗಿ ಘೋಷಿಸಿದ್ದರು. ತಮ್ಮ ದೇಶದ ಮಹಿಳಾ ಗುಂಪು ಜಿನಿವಾದಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಜರಾಗಿರುವುದಾಗಿ ಚಿತ್ರವನ್ನು ನಿತ್ಯಾನಂದ ಹಂಚಿಕೊಂಡಿದ್ದಾರೆ.

ಕಾಲ್ಪನಿಕ ದೇಶದ ಹೇಳಿಕೆ ಪರಿಗಣನೆ ಇಲ್ಲ-ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಫೆ. 23 ಮತ್ತು 24ರಂದು ಕಾಲನುಕ್ರಮವಾಗಿ ಮಹಿಳಾ ವಿರುದ್ಧ ತಾರತಮ್ಯ ನಿರ್ಮೂಲನೆ ಸಮಿತಿ ಆಯೋಜಿಸಿದ್ದ ಸಭೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಭೆಯಲ್ಲಿ ಕೈಲಾಸ ದೇಶದ ಪ್ರತಿನಿಧಿಗಳು ಭಾಗಿಯಾಗಿದ್ದರು. ಈ ವಿಡಿಯೋವನ್ನು ನಿತ್ಯಾನಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೈಲಾಸ ದೇಶದ ಪ್ರತಿನಿಧಿಯ ಹೇಳಿಕೆ ಕುರಿತು ಗುರುವಾರ ಸ್ವಷ್ಟನೆ ನೀಡಿರುವ ವಿಶ್ವಸಂಸ್ಥೆ, ಕಾಲ್ಪನಿಕ ದೇಶದ ಯಾವುದೇ ಹೇಳಿಕೆಗಳನ್ನು ನಾವು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ವಿಶ್ವಸಂಸ್ಥೆಯ ಎರಡು ಕಾರ್ಯಕ್ರಮಗಳು ಸಾಮಾನ್ಯ ಚರ್ಚೆಗಳಾಗಿದ್ದು, ಆಸಕ್ತಿ ಹೊಂದಿರುವ ಸಾರ್ವಜನಿಕರು ಈ ಮಾತನಾಡಲು ಮುಕ್ತ ಅವಕಾಶ ನೀಡಲಾಗಿತ್ತು. ಈ ಸಭೆಯಲ್ಲಿ ಭಾಗಿಯಾಗಲು ವಿಶ್ವಸಂಸ್ಥೆಯ ಮಾರ್ಗಸೂಚಿ ಮಂಡಳಿ ಮಾನ್ಯತೆ ಹೊಂದಿರದ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: ವಿಮಾನಕ್ಕೆ ಪಕ್ಷಿ ಡಿಕ್ಕಿ: ಭುವನೇಶ್ವರ ಏರ್​ಪೋರ್ಟ್​ನಲ್ಲಿ ತುರ್ತು ಭೂಸ್ಪರ್ಶ

"ಭಾರತ ಬಿಟ್ಟು ಬಂದಿರುವ ದೇವಮಾನವ ನಿತ್ಯಾನಂದರ ವಿರುದ್ಧ ದ್ವೇಷ ಹರಡುವ ಕೆಲಸ ನಡೆಯುತ್ತಿದೆ. ಇಂತಹ ಹಿಂದೂ ವಿರೋಧಿ ಗುಂಪುಗಳ ವಿರುದ್ಧ ಭಾರತ ಸರ್ಕಾರ ಕ್ರಮಕ್ಕೆ ಮುಂದಾಗಬೇಕು" ಎಂದು ನಿತ್ಯಾನಂದನ ಕೈಲಾಸ ದೇಶದ ಪ್ರತಿನಿಧಿ ವಿಶ್ವಸಂಸ್ಥೆಯಲ್ಲಿ ಮನವಿ ಮಾಡಿದ್ದಾರೆ.

ನಿತ್ಯಾನಂದರ 'ಯುನೈಟೆಡ್​ ಆಫ್​ ಸ್ಟೇಟ್​​ ಕೈಲಾಸ' ದೇಶದ ಪ್ರತಿನಿನಿಧಿಯಾಗಿರುವ ಮಾ ವಿಜಯಪ್ರಿಯಾ ನಿತ್ಯಾನಂದ ಈ ಸಂಬಂಧ ವಿಶ್ವಸಂಸ್ಥೆ ಸಭೆಯಲ್ಲಿ ಮಾತನಾಡಿದ್ದಾರೆ. ಹಿಂದೂ ಧರ್ಮದ ಸರ್ವೋಚ್ಛ ಮಠಾಧೀಶರು ಮತ್ತು ಕೈಲಾಸದ ವಿರುದ್ಧ ನಿರಂತರವಾಗಿ ಹಿಂಸಾಚಾರವನ್ನು ಪ್ರಚೋದಿಸಲಾಗುತ್ತಿದೆ. ಭಾರತದ ಈ ವ್ಯವಸ್ಥಿತ ಚಟುವಟಿಕೆಯನ್ನು ನಿಲ್ಲಿಸಿ, ಅವರ ಸುರಕ್ಷತೆಗೆ ರಕ್ಷಣೆ ನೀಡಬೇಕು ಎಂದು ವಿಜಯಪ್ರಿಯ ಮನವಿ ಮಾಡಿದರು. ವಿಶ್ವಸಂಸ್ಥೆಯಲ್ಲಿ ತನ್ನ ದೇಶದ ಕುರಿತು ಧ್ವನಿ ಎತ್ತಿರುವ ಈ ಪ್ರತಿನಿಧಿಯ ವಿಡಿಯೋವನ್ನು ನಿತ್ಯಾನಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಗೆ ಹಲವು ಜನರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕೈಲಾಸ ದೇಶದ ವೀಸಾಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಬಗ್ಗೆ ಕೇಳಿದ್ದಾರೆ. ಮತ್ತೆ ಕೆಲವರು ಕೈಲಾಸದಲ್ಲಿ ಶಾಶ್ವತ ನಿವಾಸಕ್ಕೆ ಬೇಕಾಗುವ ದಾಖಲಾತಿ ಕುರಿತು ಪ್ರಶ್ನಿಸಿದ್ದಾರೆ. ಮತ್ತೊಬ್ಬರು ಭಾರತದಲ್ಲಿ ಇದೀಗ ಜಿ20 ಶೃಂಗಸಭೆ ನಡೆಸಲಾಗುತ್ತಿದೆ. ಕೈಲಾಸ ದೇಶವನ್ನು ಸೇರಿಸುವ ಮೂಲಕ ಇದನ್ನು ಜಿ21 ಆಗಿ ಮಾಡಿ. ಕೈಲಾಸವನ್ನು ಅಖಂಡ ಭಾರತದ ಭೂಪಟಕ್ಕೆ ಸೇರಿಸಿ ಎಂದಿದ್ದಾರೆ. ನಿತ್ಯಾನಂದರ ದೇಶದ ಕುರಿತು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದ ಪ್ರತಿನಿಧಿಯ ಧಿರಿಸಿನ ಹಂಚಿಕೊಂಡಿರುವ ಮತ್ತೊಬ್ಬರು, ಕೈಲಾಸದಲ್ಲಿ ಮಹಿಳೆಯರು ಡ್ರೆಸ್​ ಕೋಡ್​ ಹೀಗೆಯೇ ಇರುತ್ತದೆಯೇ ಎಂದಿದ್ದಾರೆ. ಈ ಹಿಂದೆ ನಿತ್ಯಾನಂದರ ವಿರುದ್ಧ ಕೇಳಿ ಬಂದ ಅತ್ಯಾಚಾರ ಆರೋಪದಲ್ಲಿ ಅವರು, ಪುರುಷ ಸಾಮರ್ಥ್ಯ ಪರೀಕ್ಷೆಗೆ ಒಳಗಾಗಿದ್ದರ ಹಳೆ ವಿಡಿಯೋಗಳನ್ನು ಕೂಡ ಕೆಲವರು ಕೆದಕಿ ಹಂಚಿಕೊಂಡಿದ್ದಾರೆ.

ತಮ್ಮ ಆಶ್ರಮದಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ಅತ್ಯಾಚಾರದ ಆರೋಪದ ಹೊಂದಿದ್ದ ನಿತ್ಯಾನಂದ 2019ರಲ್ಲಿ ತಮ್ಮದೇ ಆದ ಕೈಲಾಸ ದೇಶ ಸೃಷ್ಟಿಸಿರುವುದಾಗಿ ಘೋಷಿಸಿದ್ದರು. ತಮ್ಮ ದೇಶದ ಮಹಿಳಾ ಗುಂಪು ಜಿನಿವಾದಲ್ಲಿ ವಿಶ್ವಸಂಸ್ಥೆಯ ಸಾರ್ವಜನಿಕ ಕಾರ್ಯಕ್ರಮದಲ್ಲಿ ಹಾಜರಾಗಿರುವುದಾಗಿ ಚಿತ್ರವನ್ನು ನಿತ್ಯಾನಂದ ಹಂಚಿಕೊಂಡಿದ್ದಾರೆ.

ಕಾಲ್ಪನಿಕ ದೇಶದ ಹೇಳಿಕೆ ಪರಿಗಣನೆ ಇಲ್ಲ-ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಫೆ. 23 ಮತ್ತು 24ರಂದು ಕಾಲನುಕ್ರಮವಾಗಿ ಮಹಿಳಾ ವಿರುದ್ಧ ತಾರತಮ್ಯ ನಿರ್ಮೂಲನೆ ಸಮಿತಿ ಆಯೋಜಿಸಿದ್ದ ಸಭೆ ಮತ್ತು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಭೆಯಲ್ಲಿ ಕೈಲಾಸ ದೇಶದ ಪ್ರತಿನಿಧಿಗಳು ಭಾಗಿಯಾಗಿದ್ದರು. ಈ ವಿಡಿಯೋವನ್ನು ನಿತ್ಯಾನಂದ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೈಲಾಸ ದೇಶದ ಪ್ರತಿನಿಧಿಯ ಹೇಳಿಕೆ ಕುರಿತು ಗುರುವಾರ ಸ್ವಷ್ಟನೆ ನೀಡಿರುವ ವಿಶ್ವಸಂಸ್ಥೆ, ಕಾಲ್ಪನಿಕ ದೇಶದ ಯಾವುದೇ ಹೇಳಿಕೆಗಳನ್ನು ನಾವು ಪರಿಗಣಿಸುವುದಿಲ್ಲ ಎಂದು ತಿಳಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ವಿಶ್ವಸಂಸ್ಥೆಯ ಎರಡು ಕಾರ್ಯಕ್ರಮಗಳು ಸಾಮಾನ್ಯ ಚರ್ಚೆಗಳಾಗಿದ್ದು, ಆಸಕ್ತಿ ಹೊಂದಿರುವ ಸಾರ್ವಜನಿಕರು ಈ ಮಾತನಾಡಲು ಮುಕ್ತ ಅವಕಾಶ ನೀಡಲಾಗಿತ್ತು. ಈ ಸಭೆಯಲ್ಲಿ ಭಾಗಿಯಾಗಲು ವಿಶ್ವಸಂಸ್ಥೆಯ ಮಾರ್ಗಸೂಚಿ ಮಂಡಳಿ ಮಾನ್ಯತೆ ಹೊಂದಿರದ ಪ್ರತಿನಿಧಿಗಳಿಗೆ ಅವಕಾಶ ನೀಡಲಾಗಿತ್ತು.

ಇದನ್ನೂ ಓದಿ: ವಿಮಾನಕ್ಕೆ ಪಕ್ಷಿ ಡಿಕ್ಕಿ: ಭುವನೇಶ್ವರ ಏರ್​ಪೋರ್ಟ್​ನಲ್ಲಿ ತುರ್ತು ಭೂಸ್ಪರ್ಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.