ETV Bharat / international

'ಅಮೆರಿಕದ ಅಣತಿಯಂತೆ ನಡೆದ ಪಾಕ್ ಸೇನಾ​ ಮುಖ್ಯಸ್ಥ' ಎಂದು ಅಭಿಮಾನ : ಇಮ್ರಾನ್​ ಖಾನ್​ ಪಕ್ಷದ 6 ಜನರ ಬಂಧನ

author img

By

Published : Apr 13, 2022, 3:33 PM IST

ಇಮ್ರಾನ್​ ಖಾನ್​ ಪದಚ್ಯುತಿಗೆ ಸುಪ್ರೀಂ ನ್ಯಾಯಾಮೂರ್ತಿಗಳು ಮತ್ತು ಸೇನಾ ಮುಖ್ಯಸ್ಥರು ಕಾರಣವಾಗಿದ್ದಾರೆ. ಅಮೆರಿಕದ ಅಣತಿಯಂತೆ ಇವರು ನಡೆದುಕೊಂಡಿದ್ದಾರೆ. ಸಾವಿರಾರು ಟ್ವೀಟ್​ಗಳನ್ನು ಪ್ರಧಾನಿ ಇಮ್ರಾನ್​ ಖಾನ್​ ಅವರ ತೆಹ್ರೀಕ್​-ಎ-ಇನ್ಸಾಫ್​​ (ಪಿಟಿಐ) ಪಕ್ಷದ ಸಾಮಾಜಿಕ ಜಾಲತಾಣ ತಂಡದಿಂದ ಮಾಡಲಾಗಿತ್ತು ಎಂದು ಹೇಳಲಾಗಿದೆ..

ಪಿಟಿಐ ಪಕ್ಷದ ಸಾಮಾಜಿಕ ಜಾಲತಾಣ ತಂಡದ ಎಂಟು ಜನರ ಬಂಧನ
ಪಿಟಿಐ ಪಕ್ಷದ ಸಾಮಾಜಿಕ ಜಾಲತಾಣ ತಂಡದ ಎಂಟು ಜನರ ಬಂಧನ

ಲಹೋರ್(ಪಾಕಿಸ್ತಾನ) : ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್​ ಜಾವೇದ್​ ಭಜ್ವಾ ವಿರುದ್ಧ ನಿಂದನಾತ್ಮಕ ಅಭಿಯಾನ ನಡೆಸುತ್ತಿದ್ದ ಆರೋಪದಡಿ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರ ತೆಹ್ರೀಕ್​-ಎ-ಇನ್ಸಾಫ್​​(ಪಿಟಿಐ) ಪಕ್ಷದ ಸಾಮಾಜಿಕ ಜಾಲತಾಣ ತಂಡದ ಎಂಟು ಜನರನ್ನು ಫೆಡೆರಲ್ ತನಿಖಾ ಸಂಸ್ಥೆ (ಎಫ್​​ಐಎ) ಬಂಧಿಸಲಾಗಿದೆ. ಅಲ್ಲದೇ, ಬಂಧಿತ ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಪ್ರೀಂಕೋರ್ಟ್​​ ನ್ಯಾಯಾಧೀಶರನ್ನೂ ಗುರಿಯಾಗಿಕೊಂಡು ಅಪಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ.

ಇಮ್ರಾನ್​ ಖಾನ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ಮತದ ನಿಲುವಳಿಯನ್ನು ಮಂಡಿಸಿದ್ದರು. ಇದರಲ್ಲಿ ಇಮ್ರಾನ್​ ಸೋತು ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಂಡಿದ್ದಾರೆ. ಇದರ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದಿಂದ ಸೇನಾ ಮುಖ್ಯಸ್ಥ ಖಮರ್​ ಜಾವೇದ್​ ಭಜ್ವಾ ಹಾಗೂ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಅಪಪ್ರಚಾರ ಆರಂಭಿಸಲಾಗಿತ್ತು.

ಇದು ಟ್ವಿಟರ್​ನಲ್ಲಿ ಟಾಪ್​ ಟ್ರೆಂಡ್​​ನಲ್ಲೂ ಇತ್ತು. ಈ ಅಪಪ್ರಚಾರದ ಅಭಿಯಾನದಲ್ಲಿ 50 ಶಂಕಿತರ ಪಟ್ಟಿಯನ್ನು ಸಂಗ್ರಹಿಸಲಾಗಿತ್ತು. ಇದೀಗ ಎಂಟು ಜನರನ್ನು ವಶಕ್ಕೆ ಪಡೆಯಲಾಗಿದೆ. ಇಮ್ರಾನ್​ ಖಾನ್​ ಪದಚ್ಯುತಿಗೆ ಸುಪ್ರೀಂ ನ್ಯಾಯಾಮೂರ್ತಿಗಳು ಮತ್ತು ಸೇನಾ ಮುಖ್ಯಸ್ಥರು ಕಾರಣವಾಗಿದ್ದಾರೆ.

ಅಮೆರಿಕದ ಅಣತಿಯಂತೆ ಇವರು ನಡೆದುಕೊಂಡಿದ್ದಾರೆ. ಸಾವಿರಾರು ಟ್ವೀಟ್​ಗಳನ್ನು ಮಾಡಲಾಗಿತ್ತು ಎಂದು ಹೇಳಲಾಗಿದೆ. ಇತ್ತ, ಎಂಟು ಜನರ ಬಂಧನ ಪ್ರಶ್ನಿಸಿ ಪಿಟಿಐ ಪಕ್ಷವು ಹೈಕೋರ್ಟ್​ ಮೊರೆ ಹೋಗಲು ಮುಂದಾಗಿದೆ. ಸಾಮಾಜಿಕ ಜಾಲತಾಣ ತಂಡದ ಪ್ರತಿನಿಧಿಗಳಿಗೆ ಕಿರುಕುಳ ನೀಡುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸುವುದಾಗಿ ಇಮ್ರಾನ್​ ಖಾನ್​ ಆಪ್ತ ಅಸಾದ್​ ಉಮರ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ರಷ್ಯಾ ನರಮೇಧ ನಡೆಸುತ್ತಿದ್ದು, ಉಕ್ರೇನ್​​ ಅನ್ನು ಅಳಿಸಿಹಾಕಲು ಯತ್ನಿಸುತ್ತಿದೆ: ಬೈಡನ್

ಲಹೋರ್(ಪಾಕಿಸ್ತಾನ) : ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್​ ಜಾವೇದ್​ ಭಜ್ವಾ ವಿರುದ್ಧ ನಿಂದನಾತ್ಮಕ ಅಭಿಯಾನ ನಡೆಸುತ್ತಿದ್ದ ಆರೋಪದಡಿ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಅವರ ತೆಹ್ರೀಕ್​-ಎ-ಇನ್ಸಾಫ್​​(ಪಿಟಿಐ) ಪಕ್ಷದ ಸಾಮಾಜಿಕ ಜಾಲತಾಣ ತಂಡದ ಎಂಟು ಜನರನ್ನು ಫೆಡೆರಲ್ ತನಿಖಾ ಸಂಸ್ಥೆ (ಎಫ್​​ಐಎ) ಬಂಧಿಸಲಾಗಿದೆ. ಅಲ್ಲದೇ, ಬಂಧಿತ ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸುಪ್ರೀಂಕೋರ್ಟ್​​ ನ್ಯಾಯಾಧೀಶರನ್ನೂ ಗುರಿಯಾಗಿಕೊಂಡು ಅಪಪ್ರಚಾರ ಮಾಡುತ್ತಿದ್ದರು ಎನ್ನಲಾಗಿದೆ.

ಇಮ್ರಾನ್​ ಖಾನ್ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ಮತದ ನಿಲುವಳಿಯನ್ನು ಮಂಡಿಸಿದ್ದರು. ಇದರಲ್ಲಿ ಇಮ್ರಾನ್​ ಸೋತು ಪ್ರಧಾನಿ ಹುದ್ದೆಯಿಂದ ಪದಚ್ಯುತಿಗೊಂಡಿದ್ದಾರೆ. ಇದರ ಭಾಗವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷದಿಂದ ಸೇನಾ ಮುಖ್ಯಸ್ಥ ಖಮರ್​ ಜಾವೇದ್​ ಭಜ್ವಾ ಹಾಗೂ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಅಪಪ್ರಚಾರ ಆರಂಭಿಸಲಾಗಿತ್ತು.

ಇದು ಟ್ವಿಟರ್​ನಲ್ಲಿ ಟಾಪ್​ ಟ್ರೆಂಡ್​​ನಲ್ಲೂ ಇತ್ತು. ಈ ಅಪಪ್ರಚಾರದ ಅಭಿಯಾನದಲ್ಲಿ 50 ಶಂಕಿತರ ಪಟ್ಟಿಯನ್ನು ಸಂಗ್ರಹಿಸಲಾಗಿತ್ತು. ಇದೀಗ ಎಂಟು ಜನರನ್ನು ವಶಕ್ಕೆ ಪಡೆಯಲಾಗಿದೆ. ಇಮ್ರಾನ್​ ಖಾನ್​ ಪದಚ್ಯುತಿಗೆ ಸುಪ್ರೀಂ ನ್ಯಾಯಾಮೂರ್ತಿಗಳು ಮತ್ತು ಸೇನಾ ಮುಖ್ಯಸ್ಥರು ಕಾರಣವಾಗಿದ್ದಾರೆ.

ಅಮೆರಿಕದ ಅಣತಿಯಂತೆ ಇವರು ನಡೆದುಕೊಂಡಿದ್ದಾರೆ. ಸಾವಿರಾರು ಟ್ವೀಟ್​ಗಳನ್ನು ಮಾಡಲಾಗಿತ್ತು ಎಂದು ಹೇಳಲಾಗಿದೆ. ಇತ್ತ, ಎಂಟು ಜನರ ಬಂಧನ ಪ್ರಶ್ನಿಸಿ ಪಿಟಿಐ ಪಕ್ಷವು ಹೈಕೋರ್ಟ್​ ಮೊರೆ ಹೋಗಲು ಮುಂದಾಗಿದೆ. ಸಾಮಾಜಿಕ ಜಾಲತಾಣ ತಂಡದ ಪ್ರತಿನಿಧಿಗಳಿಗೆ ಕಿರುಕುಳ ನೀಡುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸುವುದಾಗಿ ಇಮ್ರಾನ್​ ಖಾನ್​ ಆಪ್ತ ಅಸಾದ್​ ಉಮರ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ರಷ್ಯಾ ನರಮೇಧ ನಡೆಸುತ್ತಿದ್ದು, ಉಕ್ರೇನ್​​ ಅನ್ನು ಅಳಿಸಿಹಾಕಲು ಯತ್ನಿಸುತ್ತಿದೆ: ಬೈಡನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.