ETV Bharat / international

ಭೂಕಂಪನ: ಅವಶೇಷಗಳಡಿ ಸಿಲುಕಿದ್ದ ಬಾಲಕಿ ರಕ್ಷಿಸಿದ ಶ್ವಾನದಳದ ಜೂಲಿ, ರೋಮಿಯೋ

author img

By

Published : Feb 13, 2023, 3:26 PM IST

ಟರ್ಕಿ ಸಿರಿಯಾದಲ್ಲಿ ಭೀಕರ ಭೂಕಂಪನ - ಅವಶೇಷಗಳಡಿ ಸಿಲುಕಿದವರ ರಕ್ಷಣೆ - ಬಾಲಕಿಯ ಗುರುತಿಸಿದ ಭಾರತದ ಶ್ವಾನದಳ - ಅವಶೇಷಗಳಡಿ ಸಿಲುಕಿದ್ದ ಬಾಲಕಿ ಜೀವಂತ ರಕ್ಷಣೆ - ಬಾಲಕಿಯ ರಕ್ಷಿಸಿದ ಜೂಲಿ ರೋಮಿಯೋ ಶ್ವಾನಗಳು

quake-hit-turkey
ಅವಶೇಷಗಳಡಿ ಸಿಲುಕಿದ್ದ ಬಾಲಕಿಯ ರಕ್ಷಿಸಿದ ಶ್ವಾನದಳ

ನುರ್ಡಗಿ (ಟರ್ಕಿ): ಭೀಕರ ಭೂಕಂಪನಕ್ಕೆ ನಲುಗಿರುವ ಟರ್ಕಿ, ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಭಾರತ 7 ವಿಮಾನಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ನೀಡಿ ಕಷ್ಟಕಾಲದಲ್ಲಿ ಔದಾರ್ಯ ಮೆರೆದಿದೆ. ನೂರಕ್ಕೂ ಅಧಿಕ ಎನ್​ಡಿಆರ್​ಎಫ್​ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ ಜನರ ರಕ್ಷಣೆ ಮಾಡುತ್ತಿದೆ. ಪಡೆಯೊಂದಿಗೆ ಟರ್ಕಿಗೆ ತೆರಳಿರುವ ಶ್ವಾನದಳದ ರೋಮಿಯೋ ಮತ್ತು ಜೂಲಿ 6 ವರ್ಷದ ಬಾಲಕಿಯನ್ನು ಅಚ್ಚರಿಯ ರೀತಿಯಲ್ಲಿ ಕಾಪಾಡಿವೆ.

ಕಂಪನಕ್ಕೆ ತತ್ತರಿಸಿರುವ ನುರ್ಡಗಿ ಎಂಬಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿವೆ. ದೊಡ್ಡ ಕಟ್ಟಡದಡಿ ಸಿಲುಕಿದ್ದ 6 ವರ್ಷದ ಬಾಲಕಿಯನ್ನು ಪತ್ತೆ ಮಾಡಲು ಸಿಬ್ಬಂದಿ ವಿಫಲವಾಗಿತ್ತು. ಆದರೆ, ಅವಶೇಷಗಳಡಿ ಇದ್ದ ಬಾಲಕಿಯನ್ನು ಶ್ವಾನದಳದ ರೋಮಿಯೋ ಮತ್ತು ಜೂಲಿ ಪತ್ತೆ ಮಾಡಿವೆ. ಇವು ನೀಡಿದ ಗುರುತಿನ ಆಧಾರದ ಮೇಲೆ ಎನ್​ಡಿಆರ್​ಎಫ್​ ಪಡೆ ಅಗೆದಾಗ ಬಾಲಕಿ ಸಿಕ್ಕಿದ್ದು ಜೀವಂತವಾಗಿ ರಕ್ಷಿಸಲಾಗಿದೆ.

ಅವಶೇಷಗಳಡಿಯಿಂದ ರಕ್ಷಿಸಲಾದ ಬಾಲಕಿಯನ್ನು ಬೆರೆನ್ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ರಕ್ಷಣೆ ಮಾಡಿದ್ದನ್ನು ಸಿಬ್ಬಂದಿ ಕುಂದನ್​ ಹೇಳುವಂತೆ, ನುರ್ಡಗಿ ಪ್ರದೇಶದಲ್ಲಿ ಅವಶೇಷಗಳಡಿ ಜನರು ಸಿಲುಕಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಅಲ್ಲಿನ ಸರ್ಕಾರ ಕೋರಿತು. ಅದರಂತೆ ಕಾರ್ಯಪ್ರವೃತ್ತರಾದ ನಮ್ಮ ಪಡೆ ಶೋಧ ನಡೆಸುತ್ತಿತ್ತು. ಈ ವೇಳೆ ತೀಕ್ಷ್ಣಮತಿಯಾದ ಜೂಲಿಯನ್ನು ಅವಶೇಷಗಳಡಿ ಕರೆದೊಯ್ದಾಗ ಕಟ್ಟಡದಡಿ ಮನುಷ್ಯರು ಸಿಲುಕಿದ್ದನ್ನು ಗುರುತಿಸಿದ ಅದು ಬೊಗಳಲು ಶುರು ಮಾಡಿತು.

ಜೀವಂತವಾಗಿ ಬಾಲಕಿಯ ರಕ್ಷಣೆ: ಇದನ್ನು ದೃಢಪಡಿಸಲು ರೋಮಿಯೋನನ್ನು ಕರೆತಂದು ಪರಿಶೀಲಿಸಿದಾಗ ಅದು ಕೂಡ ಬೊಗಳಿತು. ಆಗ ಅವಶೇಷಗಳಡಿ ಯಾರೋ ಇದ್ದಿದ್ದು ತಿಳಿದು ತಕ್ಷಣವೇ ಯಂತ್ರಗಳಿಂದ ಕತ್ತರಿಸಿದಾಗ ಅದರಡಿ ಬಾಲಕಿ ಇರುವುದು ಕಂಡು ಬಂತು. 6 ವರ್ಷದ ಬೆರೆನ್‌ಳನ್ನು ಜೀವಂತವಾಗಿ ಹೊರಕ್ಕೆ ತರಲಾಯಿತು.

ಫೆ.6 ರಂದು ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪನ ನಂತರ ಭಾರತ 'ಆಪರೇಷನ್ ದೋಸ್ತ್' ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆ ಘೋಷಿಸಿತು. 60 ಪ್ಯಾರಾ ಫೀಲ್ಡ್ ಆಸ್ಪತ್ರೆ ಮತ್ತು ಎನ್​ಡಿಆರ್​ಎಫ್​ ತಂಡವನ್ನು ಕಳುಹಿಸಿತು. ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಕಂಪನಕ್ಕೆ ಇದುವರೆಗೆ 34,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 7 ದಿನಗಳ ನಂತರವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಟರ್ಕಿ ದೇಶವೊಂದರಲ್ಲೇ 30 ಸಾವಿರದಷ್ಟು ಮಂದಿ ಅಸುನೀಗಿದ್ದರೆ, ಸಿರಿಯಾದಲ್ಲಿ 4 ಸಾವಿರ ಜನರು ಸಮಾಧಿಯಾಗಿದ್ದಾರೆ. ಭೂಕಂಪದಿಂದ 12 ಸಾವಿರಕ್ಕೂ ಅಧಿಕ ಕಟ್ಟಡಗಳು ನಾಶವಾಗಿದ್ದು, ಅವುಗಳ ಇನ್ನಷ್ಟು ಜನರು ಸಿಲುಕಿರುವ ಸಾಧ್ಯತೆ ಇದೆ. ಇದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಸಾವಿನ ಸಂಖ್ಯೆ 50 ಸಾವಿರ ಸಾಧ್ಯತೆ: ಇನ್ನೊಂದೆಡೆ ವಿಶ್ವಸಂಸ್ಥೆ ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದೆ. ಭೂಕಂಪನವಾದ ಉಭಯ ದೇಶಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 50 ಸಾವಿರಕ್ಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಅವಶೇಷಗಳಡಿ ಸಾವಿರಾರು ಜನರು ಸಿಲುಕಿದ್ದಾರೆ. ದುರಂತ ಘಟಿಸಿ 7 ದಿನಗಳಾಗಿದ್ದು, ಬಿದ್ದ ಕಟ್ಟಡದಡಿ ಸಿಲುಕಿದ ಜನರು ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಟರ್ಕಿ ಮತ್ತು ಸಿರಿಯಾದಲ್ಲಿ 12 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ ಎಂದು ಅಂದಾಜಿಸಲಾಗಿದೆ. ದುರ್ಬಲ ಕಟ್ಟಡಗಳ ನಿರ್ಮಾಣವೇ ಈ ಪ್ರಮಾಣದ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಟರ್ಕಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಟ್ಟಡಗಳನ್ನು ನಿರ್ಮಿಸಿದ ಗುತ್ತಿಗೆದಾರರ ವಿಚಾರಣೆ ನಡೆಸಲು ಮುಂದಾಗಿದೆ.

ಓದಿ: Turkey Earthquake: 34 ಸಾವಿರ ದಾಟಿದ ಮೃತರ ಸಂಖ್ಯೆ.. ಕಟ್ಟಡಗಳ ಗುತ್ತಿಗೆದಾರರ ವಿಚಾರಣೆ

ನುರ್ಡಗಿ (ಟರ್ಕಿ): ಭೀಕರ ಭೂಕಂಪನಕ್ಕೆ ನಲುಗಿರುವ ಟರ್ಕಿ, ಸಿರಿಯಾದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಭಾರತ 7 ವಿಮಾನಗಳಲ್ಲಿ ಅಗತ್ಯ ಸಾಮಗ್ರಿಗಳನ್ನು ನೀಡಿ ಕಷ್ಟಕಾಲದಲ್ಲಿ ಔದಾರ್ಯ ಮೆರೆದಿದೆ. ನೂರಕ್ಕೂ ಅಧಿಕ ಎನ್​ಡಿಆರ್​ಎಫ್​ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ ಜನರ ರಕ್ಷಣೆ ಮಾಡುತ್ತಿದೆ. ಪಡೆಯೊಂದಿಗೆ ಟರ್ಕಿಗೆ ತೆರಳಿರುವ ಶ್ವಾನದಳದ ರೋಮಿಯೋ ಮತ್ತು ಜೂಲಿ 6 ವರ್ಷದ ಬಾಲಕಿಯನ್ನು ಅಚ್ಚರಿಯ ರೀತಿಯಲ್ಲಿ ಕಾಪಾಡಿವೆ.

ಕಂಪನಕ್ಕೆ ತತ್ತರಿಸಿರುವ ನುರ್ಡಗಿ ಎಂಬಲ್ಲಿ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿವೆ. ದೊಡ್ಡ ಕಟ್ಟಡದಡಿ ಸಿಲುಕಿದ್ದ 6 ವರ್ಷದ ಬಾಲಕಿಯನ್ನು ಪತ್ತೆ ಮಾಡಲು ಸಿಬ್ಬಂದಿ ವಿಫಲವಾಗಿತ್ತು. ಆದರೆ, ಅವಶೇಷಗಳಡಿ ಇದ್ದ ಬಾಲಕಿಯನ್ನು ಶ್ವಾನದಳದ ರೋಮಿಯೋ ಮತ್ತು ಜೂಲಿ ಪತ್ತೆ ಮಾಡಿವೆ. ಇವು ನೀಡಿದ ಗುರುತಿನ ಆಧಾರದ ಮೇಲೆ ಎನ್​ಡಿಆರ್​ಎಫ್​ ಪಡೆ ಅಗೆದಾಗ ಬಾಲಕಿ ಸಿಕ್ಕಿದ್ದು ಜೀವಂತವಾಗಿ ರಕ್ಷಿಸಲಾಗಿದೆ.

ಅವಶೇಷಗಳಡಿಯಿಂದ ರಕ್ಷಿಸಲಾದ ಬಾಲಕಿಯನ್ನು ಬೆರೆನ್ ಎಂದು ಗುರುತಿಸಲಾಗಿದೆ. ಬಾಲಕಿಯನ್ನು ರಕ್ಷಣೆ ಮಾಡಿದ್ದನ್ನು ಸಿಬ್ಬಂದಿ ಕುಂದನ್​ ಹೇಳುವಂತೆ, ನುರ್ಡಗಿ ಪ್ರದೇಶದಲ್ಲಿ ಅವಶೇಷಗಳಡಿ ಜನರು ಸಿಲುಕಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಲು ಅಲ್ಲಿನ ಸರ್ಕಾರ ಕೋರಿತು. ಅದರಂತೆ ಕಾರ್ಯಪ್ರವೃತ್ತರಾದ ನಮ್ಮ ಪಡೆ ಶೋಧ ನಡೆಸುತ್ತಿತ್ತು. ಈ ವೇಳೆ ತೀಕ್ಷ್ಣಮತಿಯಾದ ಜೂಲಿಯನ್ನು ಅವಶೇಷಗಳಡಿ ಕರೆದೊಯ್ದಾಗ ಕಟ್ಟಡದಡಿ ಮನುಷ್ಯರು ಸಿಲುಕಿದ್ದನ್ನು ಗುರುತಿಸಿದ ಅದು ಬೊಗಳಲು ಶುರು ಮಾಡಿತು.

ಜೀವಂತವಾಗಿ ಬಾಲಕಿಯ ರಕ್ಷಣೆ: ಇದನ್ನು ದೃಢಪಡಿಸಲು ರೋಮಿಯೋನನ್ನು ಕರೆತಂದು ಪರಿಶೀಲಿಸಿದಾಗ ಅದು ಕೂಡ ಬೊಗಳಿತು. ಆಗ ಅವಶೇಷಗಳಡಿ ಯಾರೋ ಇದ್ದಿದ್ದು ತಿಳಿದು ತಕ್ಷಣವೇ ಯಂತ್ರಗಳಿಂದ ಕತ್ತರಿಸಿದಾಗ ಅದರಡಿ ಬಾಲಕಿ ಇರುವುದು ಕಂಡು ಬಂತು. 6 ವರ್ಷದ ಬೆರೆನ್‌ಳನ್ನು ಜೀವಂತವಾಗಿ ಹೊರಕ್ಕೆ ತರಲಾಯಿತು.

ಫೆ.6 ರಂದು ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪನ ನಂತರ ಭಾರತ 'ಆಪರೇಷನ್ ದೋಸ್ತ್' ಹೆಸರಿನಲ್ಲಿ ರಕ್ಷಣಾ ಕಾರ್ಯಾಚರಣೆ ಘೋಷಿಸಿತು. 60 ಪ್ಯಾರಾ ಫೀಲ್ಡ್ ಆಸ್ಪತ್ರೆ ಮತ್ತು ಎನ್​ಡಿಆರ್​ಎಫ್​ ತಂಡವನ್ನು ಕಳುಹಿಸಿತು. ಟರ್ಕಿ ಮತ್ತು ಸಿರಿಯಾದಲ್ಲಿ ಪ್ರಬಲ ಕಂಪನಕ್ಕೆ ಇದುವರೆಗೆ 34,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. 7 ದಿನಗಳ ನಂತರವೂ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಟರ್ಕಿ ದೇಶವೊಂದರಲ್ಲೇ 30 ಸಾವಿರದಷ್ಟು ಮಂದಿ ಅಸುನೀಗಿದ್ದರೆ, ಸಿರಿಯಾದಲ್ಲಿ 4 ಸಾವಿರ ಜನರು ಸಮಾಧಿಯಾಗಿದ್ದಾರೆ. ಭೂಕಂಪದಿಂದ 12 ಸಾವಿರಕ್ಕೂ ಅಧಿಕ ಕಟ್ಟಡಗಳು ನಾಶವಾಗಿದ್ದು, ಅವುಗಳ ಇನ್ನಷ್ಟು ಜನರು ಸಿಲುಕಿರುವ ಸಾಧ್ಯತೆ ಇದೆ. ಇದರಿಂದ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ಸಾವಿನ ಸಂಖ್ಯೆ 50 ಸಾವಿರ ಸಾಧ್ಯತೆ: ಇನ್ನೊಂದೆಡೆ ವಿಶ್ವಸಂಸ್ಥೆ ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದೆ. ಭೂಕಂಪನವಾದ ಉಭಯ ದೇಶಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 50 ಸಾವಿರಕ್ಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಅದು ಹೇಳಿದೆ. ಅವಶೇಷಗಳಡಿ ಸಾವಿರಾರು ಜನರು ಸಿಲುಕಿದ್ದಾರೆ. ದುರಂತ ಘಟಿಸಿ 7 ದಿನಗಳಾಗಿದ್ದು, ಬಿದ್ದ ಕಟ್ಟಡದಡಿ ಸಿಲುಕಿದ ಜನರು ಬದುಕುಳಿದಿರುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

ಟರ್ಕಿ ಮತ್ತು ಸಿರಿಯಾದಲ್ಲಿ 12 ಸಾವಿರಕ್ಕೂ ಹೆಚ್ಚು ಕಟ್ಟಡಗಳು ನೆಲಸಮಗೊಂಡಿವೆ ಎಂದು ಅಂದಾಜಿಸಲಾಗಿದೆ. ದುರ್ಬಲ ಕಟ್ಟಡಗಳ ನಿರ್ಮಾಣವೇ ಈ ಪ್ರಮಾಣದ ದುರಂತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಟರ್ಕಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಕಟ್ಟಡಗಳನ್ನು ನಿರ್ಮಿಸಿದ ಗುತ್ತಿಗೆದಾರರ ವಿಚಾರಣೆ ನಡೆಸಲು ಮುಂದಾಗಿದೆ.

ಓದಿ: Turkey Earthquake: 34 ಸಾವಿರ ದಾಟಿದ ಮೃತರ ಸಂಖ್ಯೆ.. ಕಟ್ಟಡಗಳ ಗುತ್ತಿಗೆದಾರರ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.