ETV Bharat / international

ಪರಮಾಣು ದಾಳಿಗೆ ಸಜ್ಜಾಗಿದ್ದ ಭಾರತ-ಪಾಕಿಸ್ತಾನ: ಅಮೆರಿಕದ ಮಾಜಿ ವಿದೇಶಾಂಗ ಸಚಿವ

author img

By

Published : Jan 26, 2023, 9:16 AM IST

Updated : Jan 26, 2023, 9:39 AM IST

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಬಾಲಾಕೋಟ್​​ ದಾಳಿ ನಡೆಸಿತ್ತು. ಇದರಿಂದ ಪಾಕಿಸ್ತಾನ, ಭಾರತದ ಪರಮಾಣು ದಾಳಿಗೆ ಮುಂದಾಗಿತ್ತು ಎಂಬ ರಹಸ್ಯ ಮಾಹಿತಿಯನ್ನು ಅಮೆರಿಕದ ಮಾಜಿ ವಿದೇಶಾಂಗ ಸಚಿವ ಮೈಕ್​ ಪೊಂಪಿಯೊ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

former-us-secretary
ಅಮೆರಿಕದ ಮಾಜಿ ವಿದೇಶಾಂಗ ಸಚಿವ

ನ್ಯೂಯಾರ್ಕ್: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ರಹಸ್ಯವಾಗಿ ಗಡಿದಾಟಿ ಬಾಲಾಕೋಟ್​ ಮೇಲೆ ಬಾಂಬ್​ ಹಾಕಿ ಬಂದಿದ್ದ ಭಾರತದ ಮೇಲೆ ಪಾಕಿಸ್ತಾನ ಅಣುಬಾಂಬ್​ ದಾಳಿಗೆ ಸಂಚು ರೂಪಿಸಿತ್ತು. ಇದನ್ನರಿತ ಭಾರತ ಕೂಡ ಪರಮಾಣು ಯುದ್ಧಕ್ಕೆ ಸಜ್ಜಾಗಿತ್ತು ಎಂಬ ಸ್ಫೋಟಕ ರಹಸ್ಯವನ್ನು ಅಮೆರಿಕದ ಮಾಜಿ ವಿದೇಶಾಂಗ ಸಚಿವ ಮೈಕ್​ ಪೊಂಪಿಯೊ ಬಹಿರಂಗಪಡಿಸಿದ್ದಾರೆ. ಮಂಗಳವಾರ ಬಿಡುಗಡೆಯಾದ ತಮ್ಮ "ನೆವರ್ ಗಿವ್ ಆ್ಯನ್​ ಇಂಚ್" ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಪುಲ್ವಾಮಾ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಬಾಲಾಕೋಟ್​​ ದಾಳಿಯಿಂದ ಪಾಕಿಸ್ತಾನ ಖುದ್ದು ಹೋಗಿತ್ತು. ಭಾರತದ ಸೇನೆಯ ಚತುರತೆಗೆ ಬೆಕ್ಕಸ ಬೆರಗಾಗಿದ್ದಲ್ಲದೇ, ಅವಮಾನಕ್ಕೀಡಾಗಿತ್ತು. ವಿಶ್ವಮಟ್ಟದಲ್ಲಿ ತನ್ನ ಮರ್ಯಾದೆ ಉಳಿಸಿಕೊಳ್ಳಲು ಮತ್ತು ಇದೇ ಅವಕಾಶದಲ್ಲಿ ಭಾರತದ ಮೇಲೆ ಅಣುಬಾಂಬ್​ ದಾಳಿಗೆ ಸಂಚು ರೂಪಿಸಿತ್ತು.

ಭಾರತದ ಗುಪ್ತಚರ ದಳಗಳು ಇದರ ಬಗ್ಗೆ ನಿಖರ ಮಾಹಿತಿ ಕಲೆಹಾಕಿದ್ದವು. ಒಂದು ವೇಳೆ ಪಾಕಿಸ್ತಾನ ಅಣುಬಾಂಬ್​ ದಾಳಿ ಮಾಡಿದರೆ, ಭಾರತ ಕೂಡ ಪ್ರತಿಯಾಗಿ ಭೀಕರ ಯುದ್ಧಕ್ಕೆ ಸಜ್ಜಾಗಿತ್ತು ಎಂದು ಮೈಕ್​ ಪೊಂಪಿಯೊ ತಿಳಿಸಿದ್ದಾರೆ. 2019 ರಲ್ಲಿ ಉಭಯ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗಿತ್ತು. ಅದೃಷ್ಟವಶಾತ್​ ಪಾಕಿಸ್ತಾನ ಅಂತಹ ದುಷ್ಕೃತ್ಯಕ್ಕೆ ಕೈಹಾಕದ ಕಾರಣ ಪರಮಾಣು ಯುದ್ಧ ನಡೆಯಲಿಲ್ಲ. ಇಲ್ಲವಾದಲ್ಲಿ ಇಷ್ಟೊತ್ತಿಗಾಗಲೇ ಎರಡು ರಾಷ್ಟ್ರಗಳ ಮಧ್ಯೆ ಭೀಕರ ಯುದ್ಧ ಘಟನೆಯುವುದಿತ್ತು ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ದಾಳಿಯ ಬಗ್ಗೆ ಸುಷ್ಮಾ ಸ್ವರಾಜ್​ ಮಾಹಿತಿ: ಅಮೆರಿಕ- ದಕ್ಷಿಣ ಕೊರಿಯಾ ನಡುವಿನ ಸಭೆಗಾಗಿ ನಾನು ಅಧಿಕಾರಿಗಳ ಜೊತೆಗೆ ಹನೋಯ್​ಗೆ ಭೇಟಿ ನೀಡಿದ್ದೆ. ಫೆ.27 ರಂದು ರಾತ್ರಿ ಕರೆ ಮಾಡಿದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರು ಪಾಕಿಸ್ತಾನದ ದುರ್ನಡತೆಯ ಬಗ್ಗೆ ತಿಳಿಸಿದರು. ಬಾಲಾಕೋಟ್​ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ನಮ್ಮ ಮೇಲೆ ಪರಮಾಣು ದಾಳಿ ನಡೆಸಲು ಸಜ್ಜಾಗಿದೆ. ನಾವೂ ಕೂಡ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದರು. ಕ್ರೋಧಗೊಂಡಿದ್ದ ಅವರನ್ನು ನಾನು ಆ ಹಂತದಲ್ಲಿ ಸಮಾಧಾನ ಮಾಡಿದೆ. ತಕ್ಷಣಕ್ಕೆ ಯಾವುದೇ ಇಂತಹ ನಿರ್ಧಾರಕ್ಕೆ ಬರಬೇಡಿ ಎಂದು ಕೇಳಿಕೊಂಡೆ ಎಂದು ಹೇಳಿದ್ದಾರೆ.

"ಭಾರತ-ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆಯುವ ಹಂತಕ್ಕೆ ಪರಿಸ್ಥಿತಿ ಬಂದಿತ್ತು ಎಂಬುದು ಜಗತ್ತಿಗೆ ಸರಿಯಾಗಿ ಗೊತ್ತಿಲ್ಲ. ಸುಷ್ಮಾ ಸ್ವರಾಜ್​ ಅವರು ಮಾಹಿತಿ ತಿಳಿಸಿದ ಬಳಿಕ ಪಾಕಿಸ್ತಾನದ ಸೇನಾಪಡೆಯ ಮುಖ್ಯಸ್ಥ ಜನರಲ್​ ಬಜ್ವಾ ಅವರನ್ನು ಸಂಪರ್ಕಿಸಿದೆ. ಪಾಕಿಸ್ತಾನ, ಭಾರತದ ಮೇಲೆ ಅಣು ಬಾಂಬ್​ ದಾಳಿಗೆ ಮುಂದಾದ ಬಗ್ಗೆ ಪ್ರಶ್ನಿಸಿದಾಗ, ಅವರು ಇದನ್ನು ಅಲ್ಲಗಳೆದರು. ಭಾರತವೇ ತಮ್ಮ ಮೇಲೆ ದಾಳಿಗೆ ಮುಂದಾಗಿದೆ ಎಂದು ಹೇಳಿದ್ದರು" ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಉಭಯ ರಾಷ್ಟ್ರಗಳಿಗೆ ಅಣುಬಾಂಬ್​ ಯುದ್ಧದ ಪರಿಣಾಮಗಳನ್ನು ತಿಳಿಹೇಳಲಾಯಿತು. ಇದಾದ ಬಳಿಕ ಯಾವುದೇ ಯುದ್ಧ ಸಂಭವಿಸಲಿಲ್ಲ. ನವದೆಹಲಿಯಲ್ಲಿ ಆಗಿನ ಯುಎಸ್ ರಾಯಭಾರಿಯಾಗಿದ್ದ ಕೆನ್ನೆತ್ ಜಸ್ಟರ್ ಅವರು ಯುದ್ಧ ತಪ್ಪಿಸಲು ಮಾಡಿದ ಸೂಚನೆಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ತಿಳಿಸಿದ್ದಾರೆ.

ದಾಳಿಯ ಕಹಿ ನೆನಪು: ಪುಲ್ವಾಮಾದಲ್ಲಿ 2019 ರ ಫೆಬ್ರವರಿ 14 ರಂದು ಜೈಷ್-ಎ- ಮೊಹಮದ್​ ಸಂಘಟನೆಯ ಉಗ್ರರು ಆರ್​ಡಿಎಕ್ಸ್​ ಬಳಸಿ ಸಿಆರ್​ಪಿಎಫ್​ ಯೋಧರು ಹೊರಟಿದ್ದ ವಾಹನಗಳ ಮೇಲೆ ದಾಳಿ ಮಾಡಿ ಮಾಡಿದ್ದರು. ದುರ್ಘಟನೆಯಲ್ಲಿ 44 ಯೋಧರು ಪ್ರಾಣ ಕಳೆದುಕೊಂಡರು. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಯೋಧರ ನೆತ್ತರು ಹರಿಸಿದ ಪಾಕ್​ ಕೃಪಾಪೋಷಿತ ಉಗ್ರ ಸಂಘಟನೆಯ ವಿರುದ್ಧ ಪ್ರತೀಕಾರಕ್ಕಾಗಿ ಭಾರತೀಯ ಸೇನೆ 26 ರಂದು ರಾತ್ರೋರಾತ್ರಿ ಪಾಕ್​ನ ಬಾಲಾಕೋಟ್​​ ಪ್ರದೇಶದ ಮೇಲೆ ದಾಳಿ ಮಾಡಿ ಅಲ್ಲಿನ ಉಗ್ರ ತಾಣಗಳನ್ನು ಪುಡಿಗಟ್ಟಿ ವಾಪಸ್​ ಬಂದಿತ್ತು.

ಇದನ್ನೂ ಓದಿ: ಗಣರಾಜ್ಯೋತ್ಸವದ ಶುಭಾಶಯಗಳು ಭಾರತ!: ವಿಭಿನ್ನ ಕಲಾಕೃತಿ ಮೂಲಕ ಶುಭ ಕೋರಿದ ಗೂಗಲ್ ಡೂಡಲ್

ನ್ಯೂಯಾರ್ಕ್: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ರಹಸ್ಯವಾಗಿ ಗಡಿದಾಟಿ ಬಾಲಾಕೋಟ್​ ಮೇಲೆ ಬಾಂಬ್​ ಹಾಕಿ ಬಂದಿದ್ದ ಭಾರತದ ಮೇಲೆ ಪಾಕಿಸ್ತಾನ ಅಣುಬಾಂಬ್​ ದಾಳಿಗೆ ಸಂಚು ರೂಪಿಸಿತ್ತು. ಇದನ್ನರಿತ ಭಾರತ ಕೂಡ ಪರಮಾಣು ಯುದ್ಧಕ್ಕೆ ಸಜ್ಜಾಗಿತ್ತು ಎಂಬ ಸ್ಫೋಟಕ ರಹಸ್ಯವನ್ನು ಅಮೆರಿಕದ ಮಾಜಿ ವಿದೇಶಾಂಗ ಸಚಿವ ಮೈಕ್​ ಪೊಂಪಿಯೊ ಬಹಿರಂಗಪಡಿಸಿದ್ದಾರೆ. ಮಂಗಳವಾರ ಬಿಡುಗಡೆಯಾದ ತಮ್ಮ "ನೆವರ್ ಗಿವ್ ಆ್ಯನ್​ ಇಂಚ್" ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಪುಲ್ವಾಮಾ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಬಾಲಾಕೋಟ್​​ ದಾಳಿಯಿಂದ ಪಾಕಿಸ್ತಾನ ಖುದ್ದು ಹೋಗಿತ್ತು. ಭಾರತದ ಸೇನೆಯ ಚತುರತೆಗೆ ಬೆಕ್ಕಸ ಬೆರಗಾಗಿದ್ದಲ್ಲದೇ, ಅವಮಾನಕ್ಕೀಡಾಗಿತ್ತು. ವಿಶ್ವಮಟ್ಟದಲ್ಲಿ ತನ್ನ ಮರ್ಯಾದೆ ಉಳಿಸಿಕೊಳ್ಳಲು ಮತ್ತು ಇದೇ ಅವಕಾಶದಲ್ಲಿ ಭಾರತದ ಮೇಲೆ ಅಣುಬಾಂಬ್​ ದಾಳಿಗೆ ಸಂಚು ರೂಪಿಸಿತ್ತು.

ಭಾರತದ ಗುಪ್ತಚರ ದಳಗಳು ಇದರ ಬಗ್ಗೆ ನಿಖರ ಮಾಹಿತಿ ಕಲೆಹಾಕಿದ್ದವು. ಒಂದು ವೇಳೆ ಪಾಕಿಸ್ತಾನ ಅಣುಬಾಂಬ್​ ದಾಳಿ ಮಾಡಿದರೆ, ಭಾರತ ಕೂಡ ಪ್ರತಿಯಾಗಿ ಭೀಕರ ಯುದ್ಧಕ್ಕೆ ಸಜ್ಜಾಗಿತ್ತು ಎಂದು ಮೈಕ್​ ಪೊಂಪಿಯೊ ತಿಳಿಸಿದ್ದಾರೆ. 2019 ರಲ್ಲಿ ಉಭಯ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗಿತ್ತು. ಅದೃಷ್ಟವಶಾತ್​ ಪಾಕಿಸ್ತಾನ ಅಂತಹ ದುಷ್ಕೃತ್ಯಕ್ಕೆ ಕೈಹಾಕದ ಕಾರಣ ಪರಮಾಣು ಯುದ್ಧ ನಡೆಯಲಿಲ್ಲ. ಇಲ್ಲವಾದಲ್ಲಿ ಇಷ್ಟೊತ್ತಿಗಾಗಲೇ ಎರಡು ರಾಷ್ಟ್ರಗಳ ಮಧ್ಯೆ ಭೀಕರ ಯುದ್ಧ ಘಟನೆಯುವುದಿತ್ತು ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ದಾಳಿಯ ಬಗ್ಗೆ ಸುಷ್ಮಾ ಸ್ವರಾಜ್​ ಮಾಹಿತಿ: ಅಮೆರಿಕ- ದಕ್ಷಿಣ ಕೊರಿಯಾ ನಡುವಿನ ಸಭೆಗಾಗಿ ನಾನು ಅಧಿಕಾರಿಗಳ ಜೊತೆಗೆ ಹನೋಯ್​ಗೆ ಭೇಟಿ ನೀಡಿದ್ದೆ. ಫೆ.27 ರಂದು ರಾತ್ರಿ ಕರೆ ಮಾಡಿದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಅವರು ಪಾಕಿಸ್ತಾನದ ದುರ್ನಡತೆಯ ಬಗ್ಗೆ ತಿಳಿಸಿದರು. ಬಾಲಾಕೋಟ್​ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ನಮ್ಮ ಮೇಲೆ ಪರಮಾಣು ದಾಳಿ ನಡೆಸಲು ಸಜ್ಜಾಗಿದೆ. ನಾವೂ ಕೂಡ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದರು. ಕ್ರೋಧಗೊಂಡಿದ್ದ ಅವರನ್ನು ನಾನು ಆ ಹಂತದಲ್ಲಿ ಸಮಾಧಾನ ಮಾಡಿದೆ. ತಕ್ಷಣಕ್ಕೆ ಯಾವುದೇ ಇಂತಹ ನಿರ್ಧಾರಕ್ಕೆ ಬರಬೇಡಿ ಎಂದು ಕೇಳಿಕೊಂಡೆ ಎಂದು ಹೇಳಿದ್ದಾರೆ.

"ಭಾರತ-ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆಯುವ ಹಂತಕ್ಕೆ ಪರಿಸ್ಥಿತಿ ಬಂದಿತ್ತು ಎಂಬುದು ಜಗತ್ತಿಗೆ ಸರಿಯಾಗಿ ಗೊತ್ತಿಲ್ಲ. ಸುಷ್ಮಾ ಸ್ವರಾಜ್​ ಅವರು ಮಾಹಿತಿ ತಿಳಿಸಿದ ಬಳಿಕ ಪಾಕಿಸ್ತಾನದ ಸೇನಾಪಡೆಯ ಮುಖ್ಯಸ್ಥ ಜನರಲ್​ ಬಜ್ವಾ ಅವರನ್ನು ಸಂಪರ್ಕಿಸಿದೆ. ಪಾಕಿಸ್ತಾನ, ಭಾರತದ ಮೇಲೆ ಅಣು ಬಾಂಬ್​ ದಾಳಿಗೆ ಮುಂದಾದ ಬಗ್ಗೆ ಪ್ರಶ್ನಿಸಿದಾಗ, ಅವರು ಇದನ್ನು ಅಲ್ಲಗಳೆದರು. ಭಾರತವೇ ತಮ್ಮ ಮೇಲೆ ದಾಳಿಗೆ ಮುಂದಾಗಿದೆ ಎಂದು ಹೇಳಿದ್ದರು" ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.

ಉಭಯ ರಾಷ್ಟ್ರಗಳಿಗೆ ಅಣುಬಾಂಬ್​ ಯುದ್ಧದ ಪರಿಣಾಮಗಳನ್ನು ತಿಳಿಹೇಳಲಾಯಿತು. ಇದಾದ ಬಳಿಕ ಯಾವುದೇ ಯುದ್ಧ ಸಂಭವಿಸಲಿಲ್ಲ. ನವದೆಹಲಿಯಲ್ಲಿ ಆಗಿನ ಯುಎಸ್ ರಾಯಭಾರಿಯಾಗಿದ್ದ ಕೆನ್ನೆತ್ ಜಸ್ಟರ್ ಅವರು ಯುದ್ಧ ತಪ್ಪಿಸಲು ಮಾಡಿದ ಸೂಚನೆಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ತಿಳಿಸಿದ್ದಾರೆ.

ದಾಳಿಯ ಕಹಿ ನೆನಪು: ಪುಲ್ವಾಮಾದಲ್ಲಿ 2019 ರ ಫೆಬ್ರವರಿ 14 ರಂದು ಜೈಷ್-ಎ- ಮೊಹಮದ್​ ಸಂಘಟನೆಯ ಉಗ್ರರು ಆರ್​ಡಿಎಕ್ಸ್​ ಬಳಸಿ ಸಿಆರ್​ಪಿಎಫ್​ ಯೋಧರು ಹೊರಟಿದ್ದ ವಾಹನಗಳ ಮೇಲೆ ದಾಳಿ ಮಾಡಿ ಮಾಡಿದ್ದರು. ದುರ್ಘಟನೆಯಲ್ಲಿ 44 ಯೋಧರು ಪ್ರಾಣ ಕಳೆದುಕೊಂಡರು. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಯೋಧರ ನೆತ್ತರು ಹರಿಸಿದ ಪಾಕ್​ ಕೃಪಾಪೋಷಿತ ಉಗ್ರ ಸಂಘಟನೆಯ ವಿರುದ್ಧ ಪ್ರತೀಕಾರಕ್ಕಾಗಿ ಭಾರತೀಯ ಸೇನೆ 26 ರಂದು ರಾತ್ರೋರಾತ್ರಿ ಪಾಕ್​ನ ಬಾಲಾಕೋಟ್​​ ಪ್ರದೇಶದ ಮೇಲೆ ದಾಳಿ ಮಾಡಿ ಅಲ್ಲಿನ ಉಗ್ರ ತಾಣಗಳನ್ನು ಪುಡಿಗಟ್ಟಿ ವಾಪಸ್​ ಬಂದಿತ್ತು.

ಇದನ್ನೂ ಓದಿ: ಗಣರಾಜ್ಯೋತ್ಸವದ ಶುಭಾಶಯಗಳು ಭಾರತ!: ವಿಭಿನ್ನ ಕಲಾಕೃತಿ ಮೂಲಕ ಶುಭ ಕೋರಿದ ಗೂಗಲ್ ಡೂಡಲ್

Last Updated : Jan 26, 2023, 9:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.