ETV Bharat / international

ಭೀಕರ ಭೂಕಂಪನ: ಸಾವಿನ ಸಂಖ್ಯೆ 28 ಸಾವಿರ! ಉತ್ತರಾಖಂಡ ವ್ಯಕ್ತಿಯ ಶವ ಶೀಘ್ರ ರವಾನೆ

author img

By

Published : Feb 12, 2023, 8:01 AM IST

Updated : Feb 12, 2023, 10:30 AM IST

ಭೀಕರ ಭೂಕಂಪನದಿಂದಾಗಿ ಸಿರಿಯಾ, ಟರ್ಕಿ ಸಾವಿನ ಮನೆಯಾಗಿದೆ. ದಿನವೂ ಸಾವಿನ ಸಂಖ್ಯೆ ಏರುತ್ತಿದೆ. 80 ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, 12 ಸಾವಿರ ಮನೆಗಳು ನೆಲಸಮವಾಗಿವೆ.

earthquake
ಭೀಕರ ಭೂಕಂಪನ

ಅಂಕಾರಾ (ಟರ್ಕಿ): ಟರ್ಕಿ, ಸಿರಿಯಾ ದೇಶಗಳನ್ನು ನಡುಗಿಸಿದ ಭೂಕಂಪನ ಘಟಿಸಿ 6 ದಿನಗಳು ಕಳೆದಿದ್ದು, ಸಾವಿನ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆಯ ಮಧ್ಯೆಯೂ ಅವಶೇಷಗಳಡಿ ಸಿಲುಕಿದ ಜನರನ್ನು ಕಾಪಾಡುವುದು ಅಸಾಧ್ಯವಾಗಿದೆ. ಜನರು ಆಹಾರ, ನೀರಿನ ಕೊರತೆಯಿಂದ ಪರದಾಡುತ್ತಿದ್ದಾರೆ. ಇನ್ನೊಂದೆಡೆ, ಕೆಲಸದ ಮೇಲೆ ಟರ್ಕಿಗೆ ತೆರಳಿದ್ದ ಬೆಂಗಳೂರಿನ ವ್ಯಕ್ತಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಟರ್ಕಿಯ ಉಪಾಧ್ಯಕ್ಷ ಫುಅತ್ ಓಕ್ತಾಯ್​, "ಭೀಕರ ಭೂಕಂಪನಕ್ಕೆ ಈವರೆಗೂ 28,192 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಟರ್ಕಿಯಲ್ಲೇ 24,617 ಮಂದಿಯಾದರೆ, ಸಿರಿಯಾದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ 2,167, ಸರ್ಕಾರ ನಿಯಂತ್ರಿತ ಪ್ರದೇಶದಲ್ಲಿ 1408 ಸೇರಿ 3575 ಸಾವು ಸಂಭವಿಸಿದೆ" ಎಂದು ಆರೋಗ್ಯ ಸಚಿವಾಲಯ ನೀಡಿದ ದಾಖಲೆಗಳನ್ನು ಉಲ್ಲೇಖಿಸಿದರು.

ಉತ್ತರಾಖಂಡ ವ್ಯಕ್ತಿಯ ಮೃತದೇಹ ಪತ್ತೆ: ಟರ್ಕಿಯಲ್ಲಿ ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪದಲ್ಲಿ ಕಾಣೆಯಾಗಿದ್ದ ಉತ್ತರಾಖಂಡ ರಾಜ್ಯದ ಪ್ರಜೆ ಈಗ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಮಲಾತ್ಯದಲ್ಲಿನ ಹೋಟೆಲ್‌ನ ಅವಶೇಷಗಳ ಅಡಿಯಲ್ಲಿ ಶವ ಸಿಕ್ಕಿದೆ ಎಂದು ಟರ್ಕಿಯ ಭಾರತೀಯ ರಾಯಭಾರ ಕಚೇರಿ ಶನಿವಾರ ಟ್ವೀಟ್‌ ಮೂಲಕ ತಿಳಿಸಿದೆ. ಮೃತರನ್ನು ವಿಜಯ್​ಕುಮಾರ್ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಟರ್ಕಿಗೆ ವ್ಯಾಪಾರ ಉದ್ದೇಶಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

ಟರ್ಕಿಯಲ್ಲಿ ಶವವಾಗಿ ಪತ್ತೆಯಾದ ಬೆಂಗಳೂರು ವ್ಯಕ್ತಿ
ವಿಜಯ್​ಕುಮಾರ್

ದುರಂತದ ಸುದ್ದಿ ಕೇಳಿ ಕುಮಾರ್ ಅವರ ಕುಟುಂಬ ಸದಸ್ಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ ವಿಜಯ್​ಕುಮಾರ್ ಅವರು ತಂದೆಯನ್ನು ಕಳೆದುಕೊಂಡಿದ್ದರು. ಜನವರು 22 ರಂದು ಟರ್ಕಿಗೆ ತೆರಳಿದ್ದರು. ಫೆಬ್ರವರಿ 20 ರಂದು ವಾಪಸ್​ ಭಾರತಕ್ಕೆ ಬರುವ ಯೋಜನೆಯಲ್ಲಿದ್ದರು. ಆದರೆ, ವಿಧಿಯಾಟದಲ್ಲಿ ವಿಜಯ್​ ಬಲಿಯಾಗಿದ್ದಾರೆ. ತಾಯಿ, ಪತ್ನಿ ಮತ್ತು ಆರು ವರ್ಷದ ಮಗುವನ್ನು ಅಗಲಿದ್ದಾರೆ.

"ಮೃತದೇಹವನ್ನು ಪತ್ತೆ ಮಾಡಲಾಗಿದ್ದು ಕುಟುಂಬಕ್ಕೆ ಸಾಧ್ಯವಾದಷ್ಟು ಬೇಗ ತಲುಪಿಸಲು ವ್ಯವಸ್ಥೆ ಮಾಡಲಾಗುವುದು. ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಮ್ಮ ಸಂತಾಪಗಳು" ಎಂದು ಟರ್ಕಿಯಲ್ಲಿನ ಭಾರತದ ರಾಯಭಾರ ಕಚೇರಿ ಹೇಳಿದೆ. ಭೂಕಂಪನಪೀಡಿತ ಪ್ರದೇಶಗಳಲ್ಲಿ 10 ಭಾರತೀಯರು ಸಿಲುಕಿಕೊಂಡಿದ್ದಾರೆ. ಭೀಕರ ನೈಸರ್ಗಿಕ ವಿಕೋಪದಿಂದ ಗಾಯಗೊಂಡಿದ್ದರೂ ಅವರು ಸುರಕ್ಷಿತವಾಗಿದ್ದಾರೆ ಎಂದು ಕೆಲ ದಿನಗಳ ಹಿಂದಷ್ಟೇ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂಜಯ್ ವರ್ಮಾ ತಿಳಿಸಿದ್ದರು.

ಅವಶೇಷಗಳಲ್ಲಿ ಸಿಲುಕಿದವರ ರಕ್ಷಣೆ: ಟರ್ಕಿಯ ಎಲ್ಬಿಸ್ತಾನ್‌ ಎಂಬಲ್ಲಿ 132 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ 20 ವರ್ಷದ ಮೆಲಿಸಾ ಉಲ್ಕು ಮತ್ತು ಇನ್ನೊಬ್ಬಾತನನ್ನು ರಕ್ಷಣಾ ಪಡೆಗಳು ಹೊರತೆಗೆದಿವೆ. ಹಟೇ ಪ್ರಾಂತ್ಯದ ಇಸ್ಕೆಂಡರುನ್‌ನಲ್ಲಿ 44 ವರ್ಷದ ವ್ಯಕ್ತಿ 138 ಗಂಟೆಗಳ ಬಳಿಕ ಜೀವಂತವಾಗಿ ಹೊರಬಂದಿದ್ದಾನೆ. ಅವಶೇಷಗಳನ್ನು ಕತ್ತರಿಸುತ್ತಿದ್ದಾಗ ವ್ಯಕ್ತಿ ಜೀವಂತವಾಗಿ ಕಂಡು ಬಂದಿದ್ದ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

140 ಗಂಟೆಗಳ ನಂತರ ಅಂಟಾಕ್ಯಾದಲ್ಲಿ ಹಮ್ಜಾ ಎಂಬ ಮಗುವೊಂದು ಜೀವಂತವಾಗಿ ಪತ್ತೆಯಾಗಿದೆ. ಮಗು ಇಷ್ಟು ದಿನ ಬದುಕುಳಿದಿದ್ದೇ ಅಚ್ಚರಿಯಾಗಿದೆ. ಜರ್ಮನ್​ ಪಡೆಗಳು ಅವಶೇಷಗಳಡಿಯಿಂದ ಹೊರತೆಗೆಗಿದ್ದ ಝೆನೆಪ್ ಕಹ್ರಾಮನ್ ಎಂಬ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನ ಹೊಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಜನತೆಗೆ ವಿದ್ಯುತ್​ ಶಾಕ್​: ಪ್ರತಿ ಯೂನಿಟ್​ಗೆ ವಿಶೇಷ ಹೆಚ್ಚುವರಿ ಶುಲ್ಕ

ಅಂಕಾರಾ (ಟರ್ಕಿ): ಟರ್ಕಿ, ಸಿರಿಯಾ ದೇಶಗಳನ್ನು ನಡುಗಿಸಿದ ಭೂಕಂಪನ ಘಟಿಸಿ 6 ದಿನಗಳು ಕಳೆದಿದ್ದು, ಸಾವಿನ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆಯ ಮಧ್ಯೆಯೂ ಅವಶೇಷಗಳಡಿ ಸಿಲುಕಿದ ಜನರನ್ನು ಕಾಪಾಡುವುದು ಅಸಾಧ್ಯವಾಗಿದೆ. ಜನರು ಆಹಾರ, ನೀರಿನ ಕೊರತೆಯಿಂದ ಪರದಾಡುತ್ತಿದ್ದಾರೆ. ಇನ್ನೊಂದೆಡೆ, ಕೆಲಸದ ಮೇಲೆ ಟರ್ಕಿಗೆ ತೆರಳಿದ್ದ ಬೆಂಗಳೂರಿನ ವ್ಯಕ್ತಿ ಮೃತದೇಹವಾಗಿ ಪತ್ತೆಯಾಗಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಟರ್ಕಿಯ ಉಪಾಧ್ಯಕ್ಷ ಫುಅತ್ ಓಕ್ತಾಯ್​, "ಭೀಕರ ಭೂಕಂಪನಕ್ಕೆ ಈವರೆಗೂ 28,192 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಟರ್ಕಿಯಲ್ಲೇ 24,617 ಮಂದಿಯಾದರೆ, ಸಿರಿಯಾದಲ್ಲಿ ಬಂಡುಕೋರರ ಹಿಡಿತದಲ್ಲಿರುವ ಪ್ರದೇಶದಲ್ಲಿ 2,167, ಸರ್ಕಾರ ನಿಯಂತ್ರಿತ ಪ್ರದೇಶದಲ್ಲಿ 1408 ಸೇರಿ 3575 ಸಾವು ಸಂಭವಿಸಿದೆ" ಎಂದು ಆರೋಗ್ಯ ಸಚಿವಾಲಯ ನೀಡಿದ ದಾಖಲೆಗಳನ್ನು ಉಲ್ಲೇಖಿಸಿದರು.

ಉತ್ತರಾಖಂಡ ವ್ಯಕ್ತಿಯ ಮೃತದೇಹ ಪತ್ತೆ: ಟರ್ಕಿಯಲ್ಲಿ ಫೆಬ್ರವರಿ 6 ರಂದು ಸಂಭವಿಸಿದ ಭೂಕಂಪದಲ್ಲಿ ಕಾಣೆಯಾಗಿದ್ದ ಉತ್ತರಾಖಂಡ ರಾಜ್ಯದ ಪ್ರಜೆ ಈಗ ಮೃತದೇಹವಾಗಿ ಪತ್ತೆಯಾಗಿದ್ದಾರೆ. ಮಲಾತ್ಯದಲ್ಲಿನ ಹೋಟೆಲ್‌ನ ಅವಶೇಷಗಳ ಅಡಿಯಲ್ಲಿ ಶವ ಸಿಕ್ಕಿದೆ ಎಂದು ಟರ್ಕಿಯ ಭಾರತೀಯ ರಾಯಭಾರ ಕಚೇರಿ ಶನಿವಾರ ಟ್ವೀಟ್‌ ಮೂಲಕ ತಿಳಿಸಿದೆ. ಮೃತರನ್ನು ವಿಜಯ್​ಕುಮಾರ್ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಟರ್ಕಿಗೆ ವ್ಯಾಪಾರ ಉದ್ದೇಶಕ್ಕೆ ಬಂದಿದ್ದರು ಎಂದು ತಿಳಿದುಬಂದಿದೆ.

ಟರ್ಕಿಯಲ್ಲಿ ಶವವಾಗಿ ಪತ್ತೆಯಾದ ಬೆಂಗಳೂರು ವ್ಯಕ್ತಿ
ವಿಜಯ್​ಕುಮಾರ್

ದುರಂತದ ಸುದ್ದಿ ಕೇಳಿ ಕುಮಾರ್ ಅವರ ಕುಟುಂಬ ಸದಸ್ಯರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ ವಿಜಯ್​ಕುಮಾರ್ ಅವರು ತಂದೆಯನ್ನು ಕಳೆದುಕೊಂಡಿದ್ದರು. ಜನವರು 22 ರಂದು ಟರ್ಕಿಗೆ ತೆರಳಿದ್ದರು. ಫೆಬ್ರವರಿ 20 ರಂದು ವಾಪಸ್​ ಭಾರತಕ್ಕೆ ಬರುವ ಯೋಜನೆಯಲ್ಲಿದ್ದರು. ಆದರೆ, ವಿಧಿಯಾಟದಲ್ಲಿ ವಿಜಯ್​ ಬಲಿಯಾಗಿದ್ದಾರೆ. ತಾಯಿ, ಪತ್ನಿ ಮತ್ತು ಆರು ವರ್ಷದ ಮಗುವನ್ನು ಅಗಲಿದ್ದಾರೆ.

"ಮೃತದೇಹವನ್ನು ಪತ್ತೆ ಮಾಡಲಾಗಿದ್ದು ಕುಟುಂಬಕ್ಕೆ ಸಾಧ್ಯವಾದಷ್ಟು ಬೇಗ ತಲುಪಿಸಲು ವ್ಯವಸ್ಥೆ ಮಾಡಲಾಗುವುದು. ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಮ್ಮ ಸಂತಾಪಗಳು" ಎಂದು ಟರ್ಕಿಯಲ್ಲಿನ ಭಾರತದ ರಾಯಭಾರ ಕಚೇರಿ ಹೇಳಿದೆ. ಭೂಕಂಪನಪೀಡಿತ ಪ್ರದೇಶಗಳಲ್ಲಿ 10 ಭಾರತೀಯರು ಸಿಲುಕಿಕೊಂಡಿದ್ದಾರೆ. ಭೀಕರ ನೈಸರ್ಗಿಕ ವಿಕೋಪದಿಂದ ಗಾಯಗೊಂಡಿದ್ದರೂ ಅವರು ಸುರಕ್ಷಿತವಾಗಿದ್ದಾರೆ ಎಂದು ಕೆಲ ದಿನಗಳ ಹಿಂದಷ್ಟೇ ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಸಂಜಯ್ ವರ್ಮಾ ತಿಳಿಸಿದ್ದರು.

ಅವಶೇಷಗಳಲ್ಲಿ ಸಿಲುಕಿದವರ ರಕ್ಷಣೆ: ಟರ್ಕಿಯ ಎಲ್ಬಿಸ್ತಾನ್‌ ಎಂಬಲ್ಲಿ 132 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ 20 ವರ್ಷದ ಮೆಲಿಸಾ ಉಲ್ಕು ಮತ್ತು ಇನ್ನೊಬ್ಬಾತನನ್ನು ರಕ್ಷಣಾ ಪಡೆಗಳು ಹೊರತೆಗೆದಿವೆ. ಹಟೇ ಪ್ರಾಂತ್ಯದ ಇಸ್ಕೆಂಡರುನ್‌ನಲ್ಲಿ 44 ವರ್ಷದ ವ್ಯಕ್ತಿ 138 ಗಂಟೆಗಳ ಬಳಿಕ ಜೀವಂತವಾಗಿ ಹೊರಬಂದಿದ್ದಾನೆ. ಅವಶೇಷಗಳನ್ನು ಕತ್ತರಿಸುತ್ತಿದ್ದಾಗ ವ್ಯಕ್ತಿ ಜೀವಂತವಾಗಿ ಕಂಡು ಬಂದಿದ್ದ. ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.

140 ಗಂಟೆಗಳ ನಂತರ ಅಂಟಾಕ್ಯಾದಲ್ಲಿ ಹಮ್ಜಾ ಎಂಬ ಮಗುವೊಂದು ಜೀವಂತವಾಗಿ ಪತ್ತೆಯಾಗಿದೆ. ಮಗು ಇಷ್ಟು ದಿನ ಬದುಕುಳಿದಿದ್ದೇ ಅಚ್ಚರಿಯಾಗಿದೆ. ಜರ್ಮನ್​ ಪಡೆಗಳು ಅವಶೇಷಗಳಡಿಯಿಂದ ಹೊರತೆಗೆಗಿದ್ದ ಝೆನೆಪ್ ಕಹ್ರಾಮನ್ ಎಂಬ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನ ಹೊಂದಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಜನತೆಗೆ ವಿದ್ಯುತ್​ ಶಾಕ್​: ಪ್ರತಿ ಯೂನಿಟ್​ಗೆ ವಿಶೇಷ ಹೆಚ್ಚುವರಿ ಶುಲ್ಕ

Last Updated : Feb 12, 2023, 10:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.