ETV Bharat / international

ಆತ್ಮಾಹುತಿ ದಾಳಿಗೆ 17 ಮಂದಿ ಬಲಿ.. ಪೇಶಾವರದಲ್ಲಿ ಮಾರಣಹೋಮ

author img

By

Published : Jan 30, 2023, 3:48 PM IST

Updated : Jan 30, 2023, 3:58 PM IST

ಮಸೀದಿಯೊಳಗೆ ಬಾಂಬ್​ ಸ್ಫೋಟದಿಂದ ಅಪಾರ ಸಾವುನೋವು - ಸೂಸೈಡ್​ ಬಾಂಬರ್​ನಿಂದ ಕೃತ್ಯ- 17 ಮಂದಿ ಸಾವು, 50 ಮಂದಿಗೆ ಗಾಯ

ಪಾಕಿಸ್ತಾನದ ಪೇಶಾವರದಲ್ಲಿ ಬಾಂಬ್​​ ಸ್ಪೋಟ 17 ಮಂದಿ ಸಾವು
17-killed-in-bomb-blast-in-peshawar-pakistan

ಇಸ್ಲಾಮಾಬಾದ್​: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನದಲ್ಲಿ ಇಂದು ನಡೆದಿರುವ ಆತಂಕಕಾರಿ ಘಟನೆಯಿಂದ ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ. ಪೇಶಾವರದ ಮಸೀದಿಯಲ್ಲಿ ಬಾಂಬ್​ ಸ್ಫೋಟ ಸಂಭವಿಸಿದ್ದು, 17 ಮಂದಿ ಸಾವನ್ನಪ್ಪಿರುವ ವರದಿ ಆಗಿದೆ. ಆತ್ಮಾಹುತಿ ದಾಳಿ (ಸೂಸೈಡ್​ ಬಾಂಬರ್​) ಮೂಲಕ ಈ ಕೃತ್ಯ ನಡೆಸಿರುವ ಶಂಕೆ ಇದೆ ಎನ್ನಲಾಗಿದೆ. ಮಸೀದಿಗೊಳಗೆ ಬಾಂಬ್​ ಸ್ಫೋಟಿಸಿದ್ದು, ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೇಶಾವರದ ಪೊಲೀಸ್​ ಲೈನ್ಸ್​ ಪ್ರದೇಶದಲ್ಲಿರುವ ಮಸೀದಿಯಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆ ಬಳಿಕ ಈ ಕೃತ್ಯ ನಡೆದಿದೆ. ಇಲ್ಲಿನ ರಕ್ಷಣಾ ಅಧಿಕಾರಿಗಳ ಮಾಹಿತಿ ಪ್ರಕಾರ, ಸೂಸೈಡ್​ ಬಾಂಬರ್​ ಮಧ್ಯಾಹ್ನದ ಪ್ರಾರ್ಥನೆ ಸಮಯದಲ್ಲಿ ಮಸೀದಿಯ ಮುಖ್ಯದ್ವಾರದಲ್ಲಿ ನಿಂತಿದ್ದ, ಆತ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ ಮಾರಣಹೋಮಕ್ಕೆ ಕಾರಣವಾಗಿದ್ದಾನೆ ಎಂದಿದ್ದಾರೆ.

ಘಟನೆಯಲ್ಲಿ 13 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ ಎಂದು ಜಿಯೋ ನ್ಯೂಸ್​ ವರದಿ ಮಾಡಿದೆ. ಗಾಯಗೊಂಡ ವ್ಯಕ್ತಿಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಪೇಶಾವರ ಲೇಡಿ ರೀಡಿಂಗ್​ ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ. ಸ್ಫೋಟ ನಡೆದ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್​ ಮಾಡಲಾಗಿದ್ದು, ಕೇವಲ ಅಂಬ್ಯುಲೆನ್ಸ್​ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಡಾನ್​ ವರದಿ ಮಾಡಿದೆ.

ಸ್ಫೋಟದಿಂದ ಮಸೀದಿ ಕಟ್ಟಡದ ಒಂದು ಭಾಗ ಕುಸಿದಿದ್ದು. ಹಲವು ಮಂದಿ ಇದರ ಅಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ನಡೆಸಲಾಗಿದೆ. ಇದು ಸೂಸೈಡ್​ ಬಾಂಬ್​​ ದಾಳಿಯ ಅಥವಾ ಮಸೀದಿಯಲ್ಲಿ ಬಾಂಬ್​ ಇಟ್ಟು ಈ ಯೋಜನೆ ರೂಪಿಸಲಾಗಿದೆಯಾ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಘಟನೆಯನ್ನು ಖಂಡಿಸಿ ಟ್ವೀಟ್​ ಮಾಡಿರುವ ಪಾಕಿಸ್ತಾನ ಮಾಜಿ ಪ್ರಧಾನ ಮಂತ್ರಿ ಇಮ್ರಾಖ್​ ಖಾನ್​, ಪೇಶಾವರದ ಪೊಲೀಸ್​ ಲೈನ್ಸ್​ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ನಡೆಸಿರುವ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಾಂತ್ವನ. ಹೆಚ್ಚುತ್ತಿರುವ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ನಮ್ಮ ಗುಪ್ತಚರ ಇಲಾಖೆ ಸುಧಾರಿಸುವುದು ಮತ್ತು ನಮ್ಮ ಪೊಲೀಸ್ ಪಡೆಗಳನ್ನು ಸರಿಯಾಗಿ ಸಜ್ಜುಗೊಳಿಸುವುದು ಅತ್ಯಗತ್ಯ ಎಂದು ಟ್ವೀಟ್​ ಮೂಲಕ ಒತ್ತಾಯಿಸಿದ್ದಾರೆ.

2022ರಲ್ಲೂ ಕೂಡ ಪೇಶಾವರದಲ್ಲಿ ಇದೇ ರೀತಿ ಕೊಚ ರಿಸಲ್ದಾರ್​ ಪ್ರದೇಶದ ಮಸೀದಿಯಲ್ಲಿ ಸೂಸೈಡ್​ ಬಾಂಬರ್​ ಸ್ಫೋಟ ನಡೆಸಿದ್ದ. ಈ ಘಟನೆಯಲ್ಲಿ 63 ಮಂದಿ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಕಳೆದ ವರ್ಷದ ಜನವರಿ 22ರಂದು ಪೇಶಾವರದ ಬಡಬೆರ್​​ ಪೊಲೀಸ್​ ಠಾಣೆಯ ಸಮೀಪ ಪೊಲೀಸ್​ ಕಾರನ್ನು ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ನಸೀರ್​ ಖಾನ್​ ಎಂಬಾತ ಐಇಡಿ ಬಳಸಿ ಈ ಸ್ಫೋಟ ನಡೆಸಿದ್ದನು ಎಂದು ಜಿಯೋ ನ್ಯೂಸ್​ ವರದಿ ಮಾಡಿತ್ತು. ಈ ಸ್ಫೋಟವನ್ನು ರಿಮೋಟ್​ ಕಂಟ್ರೋಲ್​ ಸಾಧನದ ಸಹಾಯದಿಂದ ಮಾಡಲಾಗಿತ್ತು. ಸ್ಫೋಟಕಗಳನ್ನು ಕಾರಿನಲ್ಲಿ ಇಡಲಾಗಿತ್ತು. ಇದಾದ ಬಳಿಕ ಪೊಲೀಸರು ಈ ಅಪರಾಧ ಸಂಬಂಧ ಮಾಹಿತಿ ಸಂಗ್ರಹಿಸಿದ್ದರು.

ಇದನ್ನೂ ಓದಿ: ಉಕ್ರೇನ್​ ಯುದ್ಧಕ್ಕೂ ಮೊದಲು ನನ್ನ ಮೇಲೆ ಪುಟಿನ್​ ಕ್ಷಿಪಣಿ ದಾಳಿ ಬೆದರಿಕೆ: ಇಂಗ್ಲೆಂಡ್​ ಮಾಜಿ ಪ್ರಧಾನಿ

ಇಸ್ಲಾಮಾಬಾದ್​: ಆರ್ಥಿಕ ಬಿಕ್ಕಟ್ಟಿನಿಂದ ಕಂಗಾಲಾಗಿರುವ ಪಾಕಿಸ್ತಾನದಲ್ಲಿ ಇಂದು ನಡೆದಿರುವ ಆತಂಕಕಾರಿ ಘಟನೆಯಿಂದ ಅಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ. ಪೇಶಾವರದ ಮಸೀದಿಯಲ್ಲಿ ಬಾಂಬ್​ ಸ್ಫೋಟ ಸಂಭವಿಸಿದ್ದು, 17 ಮಂದಿ ಸಾವನ್ನಪ್ಪಿರುವ ವರದಿ ಆಗಿದೆ. ಆತ್ಮಾಹುತಿ ದಾಳಿ (ಸೂಸೈಡ್​ ಬಾಂಬರ್​) ಮೂಲಕ ಈ ಕೃತ್ಯ ನಡೆಸಿರುವ ಶಂಕೆ ಇದೆ ಎನ್ನಲಾಗಿದೆ. ಮಸೀದಿಗೊಳಗೆ ಬಾಂಬ್​ ಸ್ಫೋಟಿಸಿದ್ದು, ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಪೇಶಾವರದ ಪೊಲೀಸ್​ ಲೈನ್ಸ್​ ಪ್ರದೇಶದಲ್ಲಿರುವ ಮಸೀದಿಯಲ್ಲಿ ಸೋಮವಾರ ಮಧ್ಯಾಹ್ನದ ಪ್ರಾರ್ಥನೆ ಬಳಿಕ ಈ ಕೃತ್ಯ ನಡೆದಿದೆ. ಇಲ್ಲಿನ ರಕ್ಷಣಾ ಅಧಿಕಾರಿಗಳ ಮಾಹಿತಿ ಪ್ರಕಾರ, ಸೂಸೈಡ್​ ಬಾಂಬರ್​ ಮಧ್ಯಾಹ್ನದ ಪ್ರಾರ್ಥನೆ ಸಮಯದಲ್ಲಿ ಮಸೀದಿಯ ಮುಖ್ಯದ್ವಾರದಲ್ಲಿ ನಿಂತಿದ್ದ, ಆತ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ ಮಾರಣಹೋಮಕ್ಕೆ ಕಾರಣವಾಗಿದ್ದಾನೆ ಎಂದಿದ್ದಾರೆ.

ಘಟನೆಯಲ್ಲಿ 13 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ ಎಂದು ಜಿಯೋ ನ್ಯೂಸ್​ ವರದಿ ಮಾಡಿದೆ. ಗಾಯಗೊಂಡ ವ್ಯಕ್ತಿಗಳನ್ನು ತಕ್ಷಣಕ್ಕೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಪೇಶಾವರ ಲೇಡಿ ರೀಡಿಂಗ್​ ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ. ಸ್ಫೋಟ ನಡೆದ ಪ್ರದೇಶವನ್ನು ಸಂಪೂರ್ಣವಾಗಿ ಸೀಲ್​ ಮಾಡಲಾಗಿದ್ದು, ಕೇವಲ ಅಂಬ್ಯುಲೆನ್ಸ್​ ವಾಹನಗಳಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ ಎಂದು ಡಾನ್​ ವರದಿ ಮಾಡಿದೆ.

ಸ್ಫೋಟದಿಂದ ಮಸೀದಿ ಕಟ್ಟಡದ ಒಂದು ಭಾಗ ಕುಸಿದಿದ್ದು. ಹಲವು ಮಂದಿ ಇದರ ಅಡಿ ಸಿಲುಕಿರುವ ಸಾಧ್ಯತೆ ಇದ್ದು, ರಕ್ಷಣಾ ಕಾರ್ಯ ನಡೆಸಲಾಗಿದೆ. ಇದು ಸೂಸೈಡ್​ ಬಾಂಬ್​​ ದಾಳಿಯ ಅಥವಾ ಮಸೀದಿಯಲ್ಲಿ ಬಾಂಬ್​ ಇಟ್ಟು ಈ ಯೋಜನೆ ರೂಪಿಸಲಾಗಿದೆಯಾ ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

ಘಟನೆಯನ್ನು ಖಂಡಿಸಿ ಟ್ವೀಟ್​ ಮಾಡಿರುವ ಪಾಕಿಸ್ತಾನ ಮಾಜಿ ಪ್ರಧಾನ ಮಂತ್ರಿ ಇಮ್ರಾಖ್​ ಖಾನ್​, ಪೇಶಾವರದ ಪೊಲೀಸ್​ ಲೈನ್ಸ್​ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ನಡೆಸಿರುವ ಘಟನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಸಂತ್ರಸ್ತ ಕುಟುಂಬಗಳಿಗೆ ನನ್ನ ಸಾಂತ್ವನ. ಹೆಚ್ಚುತ್ತಿರುವ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸಲು ನಮ್ಮ ಗುಪ್ತಚರ ಇಲಾಖೆ ಸುಧಾರಿಸುವುದು ಮತ್ತು ನಮ್ಮ ಪೊಲೀಸ್ ಪಡೆಗಳನ್ನು ಸರಿಯಾಗಿ ಸಜ್ಜುಗೊಳಿಸುವುದು ಅತ್ಯಗತ್ಯ ಎಂದು ಟ್ವೀಟ್​ ಮೂಲಕ ಒತ್ತಾಯಿಸಿದ್ದಾರೆ.

2022ರಲ್ಲೂ ಕೂಡ ಪೇಶಾವರದಲ್ಲಿ ಇದೇ ರೀತಿ ಕೊಚ ರಿಸಲ್ದಾರ್​ ಪ್ರದೇಶದ ಮಸೀದಿಯಲ್ಲಿ ಸೂಸೈಡ್​ ಬಾಂಬರ್​ ಸ್ಫೋಟ ನಡೆಸಿದ್ದ. ಈ ಘಟನೆಯಲ್ಲಿ 63 ಮಂದಿ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಕಳೆದ ವರ್ಷದ ಜನವರಿ 22ರಂದು ಪೇಶಾವರದ ಬಡಬೆರ್​​ ಪೊಲೀಸ್​ ಠಾಣೆಯ ಸಮೀಪ ಪೊಲೀಸ್​ ಕಾರನ್ನು ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ನಸೀರ್​ ಖಾನ್​ ಎಂಬಾತ ಐಇಡಿ ಬಳಸಿ ಈ ಸ್ಫೋಟ ನಡೆಸಿದ್ದನು ಎಂದು ಜಿಯೋ ನ್ಯೂಸ್​ ವರದಿ ಮಾಡಿತ್ತು. ಈ ಸ್ಫೋಟವನ್ನು ರಿಮೋಟ್​ ಕಂಟ್ರೋಲ್​ ಸಾಧನದ ಸಹಾಯದಿಂದ ಮಾಡಲಾಗಿತ್ತು. ಸ್ಫೋಟಕಗಳನ್ನು ಕಾರಿನಲ್ಲಿ ಇಡಲಾಗಿತ್ತು. ಇದಾದ ಬಳಿಕ ಪೊಲೀಸರು ಈ ಅಪರಾಧ ಸಂಬಂಧ ಮಾಹಿತಿ ಸಂಗ್ರಹಿಸಿದ್ದರು.

ಇದನ್ನೂ ಓದಿ: ಉಕ್ರೇನ್​ ಯುದ್ಧಕ್ಕೂ ಮೊದಲು ನನ್ನ ಮೇಲೆ ಪುಟಿನ್​ ಕ್ಷಿಪಣಿ ದಾಳಿ ಬೆದರಿಕೆ: ಇಂಗ್ಲೆಂಡ್​ ಮಾಜಿ ಪ್ರಧಾನಿ

Last Updated : Jan 30, 2023, 3:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.