ETV Bharat / international

ತಾಲಿಬಾನ್​ ದಾಳಿ: ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​ನ ವಕ್ತಾರ ಫಾಹೀಮ್ ದಾಷ್ಟಿ ಸಾವು

ಪಂಜ್​ಶೀರ್​ನ ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​ನ ವಕ್ತಾರ ಫಾಹೀಮ್ ದಾಷ್ಟಿ ತಾಲಿಬಾನ್​ಗಳ ವಿರುದ್ಧದ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

author img

By

Published : Sep 6, 2021, 7:31 AM IST

Updated : Sep 6, 2021, 7:39 AM IST

Fahim Dashti
ಫಾಹೀಮ್ ದಾಷ್ಟಿ

ಕಾಬೂಲ್: ಪಂಜ್​ಶೀರ್ ಪ್ರಾಂತ್ಯದಲ್ಲಿ ಭಾನುವಾರ ನಡೆದ ತಾಲಿಬಾನ್​ಗಳ ವಿರುದ್ಧದ ಹೋರಾಟದಲ್ಲಿ ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​ನ ವಕ್ತಾರ ಫಾಹೀಮ್ ದಾಷ್ಟಿ ಮೃತಪಟ್ಟಿದ್ದಾರೆ ಎಂದು ಪಂಜ್​ಶೀರ್ ಮೂಲವನ್ನು ಉಲ್ಲೇಖಿಸಿ ಟಾಲೋ ವರದಿ ಮಾಡಿದೆ. ದಾಷ್ಟಿಯು ಜಮಿಯತ್-ಇ-ಇಸ್ಲಾಮಿ ಪಕ್ಷದ ಹಿರಿಯ ಸದಸ್ಯ ಮತ್ತು ಅಫ್ಘಾನ್ ಪತ್ರಕರ್ತರ ಒಕ್ಕೂಟದ ಸದಸ್ಯರಾಗಿದ್ದರು ಎನ್ನಲಾಗಿದೆ.

  • Terrible news from Panjshir. Fahim Dashti, the spokesperson for the resistance has been killed in battle. He was in the same room as Ahmad Shah Massoud when he was killed 20 years ago. He was also a journalist.

    Rest in peace. 💔 pic.twitter.com/7uiH9OWo06

    — Roh Yakobi (@Roh_Yakobi) September 5, 2021 " class="align-text-top noRightClick twitterSection" data=" ">

ಪಂಜ್​ಶೀರ್ ಕಣಿವೆ ಕಾಬೂಲ್​ನಿಂದ ಉತ್ತರಕ್ಕೆ 90 ಮೈಲಿ ದೂರದಲ್ಲಿರುವ ಹಿಂದೂ ಕುಶ್ ಪರ್ವತದಲ್ಲಿದೆ. ಈ ಪ್ರದೇಶವನ್ನು ಕೈವಶ ಮಾಡಿಕೊಳ್ಳಲು ತಾಲಿಬಾನ್​ಗಳು ಶತಪ್ರಯತ್ನ ಮಾಡುತ್ತಿದ್ದಾರೆ. ಪಂಜ್‌ಶೀರ್ ಪ್ರಾಂತ್ಯದ ಮೇಲಿನ ಯುದ್ಧ ಶುಕ್ರವಾರ ರಾತ್ರಿಯಿಂದ ಮತ್ತೆ ಪ್ರಾರಂಭಗೊಂಡಿದ್ದು, ಈ ಸಂದರ್ಭದಲ್ಲಿ ದಾಷ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ತಾಲಿಬಾನ್​ಗಳು ಪಂಜ್​ಶೀರ್​ ಪ್ರಾಂತ್ಯದಿಂದ ಹೊರನಡೆದರೆ ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​ಗಳು ಹೋರಾಟವನ್ನು ನಿಲ್ಲಿಸಲು ಮತ್ತು ಮಾತುಕತೆ ಆರಂಭಿಸಲು ಸಿದ್ಧವಾಗಿವೆ ಎಂದು ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯದ ನಾಯಕ ಅಹ್ಮದ್ ಮಸೂದ್ ಭಾನುವಾರ ತಿಳಿಸಿದ್ದಾರೆ.

ಧರ್ಮ ಮತ್ತು ನೈತಿಕತೆಯ ತತ್ವಗಳಿಗೆ ಅನುಗುಣವಾಗಿ ತಾಲಿಬಾನ್‌ನೊಂದಿಗಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಲು ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​​ ಬದ್ಧವಾಗಿದೆ ಎಂದು ಮಸೂದ್ ಹೇಳಿದ್ದಾರೆ.

ಕಾಬೂಲ್: ಪಂಜ್​ಶೀರ್ ಪ್ರಾಂತ್ಯದಲ್ಲಿ ಭಾನುವಾರ ನಡೆದ ತಾಲಿಬಾನ್​ಗಳ ವಿರುದ್ಧದ ಹೋರಾಟದಲ್ಲಿ ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​ನ ವಕ್ತಾರ ಫಾಹೀಮ್ ದಾಷ್ಟಿ ಮೃತಪಟ್ಟಿದ್ದಾರೆ ಎಂದು ಪಂಜ್​ಶೀರ್ ಮೂಲವನ್ನು ಉಲ್ಲೇಖಿಸಿ ಟಾಲೋ ವರದಿ ಮಾಡಿದೆ. ದಾಷ್ಟಿಯು ಜಮಿಯತ್-ಇ-ಇಸ್ಲಾಮಿ ಪಕ್ಷದ ಹಿರಿಯ ಸದಸ್ಯ ಮತ್ತು ಅಫ್ಘಾನ್ ಪತ್ರಕರ್ತರ ಒಕ್ಕೂಟದ ಸದಸ್ಯರಾಗಿದ್ದರು ಎನ್ನಲಾಗಿದೆ.

  • Terrible news from Panjshir. Fahim Dashti, the spokesperson for the resistance has been killed in battle. He was in the same room as Ahmad Shah Massoud when he was killed 20 years ago. He was also a journalist.

    Rest in peace. 💔 pic.twitter.com/7uiH9OWo06

    — Roh Yakobi (@Roh_Yakobi) September 5, 2021 " class="align-text-top noRightClick twitterSection" data=" ">

ಪಂಜ್​ಶೀರ್ ಕಣಿವೆ ಕಾಬೂಲ್​ನಿಂದ ಉತ್ತರಕ್ಕೆ 90 ಮೈಲಿ ದೂರದಲ್ಲಿರುವ ಹಿಂದೂ ಕುಶ್ ಪರ್ವತದಲ್ಲಿದೆ. ಈ ಪ್ರದೇಶವನ್ನು ಕೈವಶ ಮಾಡಿಕೊಳ್ಳಲು ತಾಲಿಬಾನ್​ಗಳು ಶತಪ್ರಯತ್ನ ಮಾಡುತ್ತಿದ್ದಾರೆ. ಪಂಜ್‌ಶೀರ್ ಪ್ರಾಂತ್ಯದ ಮೇಲಿನ ಯುದ್ಧ ಶುಕ್ರವಾರ ರಾತ್ರಿಯಿಂದ ಮತ್ತೆ ಪ್ರಾರಂಭಗೊಂಡಿದ್ದು, ಈ ಸಂದರ್ಭದಲ್ಲಿ ದಾಷ್ಟಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಇನ್ನು ತಾಲಿಬಾನ್​ಗಳು ಪಂಜ್​ಶೀರ್​ ಪ್ರಾಂತ್ಯದಿಂದ ಹೊರನಡೆದರೆ ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​ಗಳು ಹೋರಾಟವನ್ನು ನಿಲ್ಲಿಸಲು ಮತ್ತು ಮಾತುಕತೆ ಆರಂಭಿಸಲು ಸಿದ್ಧವಾಗಿವೆ ಎಂದು ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯದ ನಾಯಕ ಅಹ್ಮದ್ ಮಸೂದ್ ಭಾನುವಾರ ತಿಳಿಸಿದ್ದಾರೆ.

ಧರ್ಮ ಮತ್ತು ನೈತಿಕತೆಯ ತತ್ವಗಳಿಗೆ ಅನುಗುಣವಾಗಿ ತಾಲಿಬಾನ್‌ನೊಂದಿಗಿನ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಪರಿಹರಿಸಲು ನ್ಯಾಷನಲ್​ ರೆಸಿಸ್ಟ್ಯಾಂಟ್​ ಫ್ರಂಟ್​​ ಬದ್ಧವಾಗಿದೆ ಎಂದು ಮಸೂದ್ ಹೇಳಿದ್ದಾರೆ.

Last Updated : Sep 6, 2021, 7:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.