ETV Bharat / international

ಲಾಹೋರ್​ನ ಅನಾರ್ಕಲಿ​​ ಮಾರ್ಕೆಟ್​​ನಲ್ಲಿ ಬಾಂಬ್​​ ಸ್ಫೋಟ.. ಮೂವರು ಸಾವು, 23 ಮಂದಿಗೆ ಗಾಯ

author img

By

Published : Jan 20, 2022, 5:43 PM IST

Lahore Bomb Blast-2022: ಲಾಹೋರ್​​ನ ಅನಾರ್ಕಲಿ ಬಜಾರ್​​ನಲ್ಲಿ ಪ್ರಬಲ ಬಾಂಬ್​ ಸ್ಫೋಟಗೊಂಡಿದ್ದು, ಸ್ಥಳದಲ್ಲೇ ಮೂವರು ದುರ್ಮರಣಕ್ಕೀಡಾಗಿದ್ದಾರೆಂದು ವರದಿಯಾಗಿದೆ.

Lahore Bomb Blast
Lahore Bomb Blast

ಲಾಹೋರ್​(ಪಾಕಿಸ್ತಾನ): ಪಾಕಿಸ್ತಾನದ ಲಾಹೋರ್​​ನಲ್ಲಿರುವ ಪ್ರಮುಖ ಅನಾರ್ಕಲಿ ಮಾರುಕಟ್ಟೆಯಲ್ಲಿ ಪ್ರಬಲ ಬಾಂಬ್​​ ಸ್ಫೋಟಗೊಂಡಿದ್ದು, ಪರಿಣಾಮ ಓರ್ವ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ 23 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡಿರುವ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಭಾರತೀಯ ವಸ್ತುಗಳ ಮಾರಾಟ ಮಾಡುವ ಲಾಹೋರ್​​ನ ಪ್ರಸಿದ್ಧ ಮಾರ್ಕೆಟ್​ನ ಪಾನ್ ಮಂಡಿಯಲ್ಲಿ ಈ ಬಾಂಬ್​​ ಸ್ಫೋಟಗೊಂಡಿದೆ. ಪ್ರತಿದಿನ ಅತಿ ಹೆಚ್ಚಿನ ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಬಾಂಬ್​​ ಸ್ಫೋಟದಿಂದಾಗಿ ಅನೇಕ ಅಂಗಡಿ ಮತ್ತು ಕಟ್ಟಡಗಳ ಕಿಟಕಿ ಒಡೆದು ಹೋಗಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ರಾಜ್ಯಗಳಿಗೆ ಹೆಚ್ಚುವರಿಯಾಗಿ ₹47,541 ಸಾವಿರ ಕೋಟಿ ತೆರಿಗೆ ಹಣ ರಿಲೀಸ್​ ಮಾಡಿದ ಕೇಂದ್ರ: ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

ಲಭ್ಯವಾಗಿರುವ ಮಾಹಿತಿ ಪ್ರಕಾರ ಬೈಕ್​ನಲ್ಲಿಟ್ಟಿದ್ದ ಬಾಂಬ್​ ಸ್ಫೋಟಗೊಂಡಿದ್ದು, ಈ ವೇಳೆ ಸ್ಥಳದಲ್ಲಿ ನಿಲ್ಲಿಸಿದ್ದ ಅನೇಕ ವಾಹನಗಳು ಜಖಂಗೊಂಡಿವೆ. ಬಾಂಬ್​ ಸ್ಫೋಟದ ಹೊಣೆಯನ್ನ ಇಲ್ಲಿಯವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ ಎಂದು ಡೆಪ್ಯುಟಿ ಇನ್ಸ್​​ಪೆಕ್ಟರ್​​ ಜನರಲ್​​ ಡಾ. ಮೊಹಮ್ಮದ್​​ ಅಬಿದ್​ ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಲಾಹೋರ್​(ಪಾಕಿಸ್ತಾನ): ಪಾಕಿಸ್ತಾನದ ಲಾಹೋರ್​​ನಲ್ಲಿರುವ ಪ್ರಮುಖ ಅನಾರ್ಕಲಿ ಮಾರುಕಟ್ಟೆಯಲ್ಲಿ ಪ್ರಬಲ ಬಾಂಬ್​​ ಸ್ಫೋಟಗೊಂಡಿದ್ದು, ಪರಿಣಾಮ ಓರ್ವ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ 23 ಮಂದಿ ಗಾಯಗೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಫೋಟದಲ್ಲಿ ಗಾಯಗೊಂಡಿರುವ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಭಾರತೀಯ ವಸ್ತುಗಳ ಮಾರಾಟ ಮಾಡುವ ಲಾಹೋರ್​​ನ ಪ್ರಸಿದ್ಧ ಮಾರ್ಕೆಟ್​ನ ಪಾನ್ ಮಂಡಿಯಲ್ಲಿ ಈ ಬಾಂಬ್​​ ಸ್ಫೋಟಗೊಂಡಿದೆ. ಪ್ರತಿದಿನ ಅತಿ ಹೆಚ್ಚಿನ ಜನರು ಈ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಬಾಂಬ್​​ ಸ್ಫೋಟದಿಂದಾಗಿ ಅನೇಕ ಅಂಗಡಿ ಮತ್ತು ಕಟ್ಟಡಗಳ ಕಿಟಕಿ ಒಡೆದು ಹೋಗಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ರಾಜ್ಯಗಳಿಗೆ ಹೆಚ್ಚುವರಿಯಾಗಿ ₹47,541 ಸಾವಿರ ಕೋಟಿ ತೆರಿಗೆ ಹಣ ರಿಲೀಸ್​ ಮಾಡಿದ ಕೇಂದ್ರ: ಕರ್ನಾಟಕಕ್ಕೆ ಸಿಕ್ಕಿದ್ದೆಷ್ಟು?

ಲಭ್ಯವಾಗಿರುವ ಮಾಹಿತಿ ಪ್ರಕಾರ ಬೈಕ್​ನಲ್ಲಿಟ್ಟಿದ್ದ ಬಾಂಬ್​ ಸ್ಫೋಟಗೊಂಡಿದ್ದು, ಈ ವೇಳೆ ಸ್ಥಳದಲ್ಲಿ ನಿಲ್ಲಿಸಿದ್ದ ಅನೇಕ ವಾಹನಗಳು ಜಖಂಗೊಂಡಿವೆ. ಬಾಂಬ್​ ಸ್ಫೋಟದ ಹೊಣೆಯನ್ನ ಇಲ್ಲಿಯವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿಲ್ಲ ಎಂದು ಡೆಪ್ಯುಟಿ ಇನ್ಸ್​​ಪೆಕ್ಟರ್​​ ಜನರಲ್​​ ಡಾ. ಮೊಹಮ್ಮದ್​​ ಅಬಿದ್​ ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.