ETV Bharat / international

ಪಾಕ್‌ನಲ್ಲಿ ಲಂಕಾ ವ್ಯಕ್ತಿಯ ಬರ್ಬರ ಹತ್ಯೆ: ಕ್ರೌರ್ಯಕ್ಕೆ ಕನ್ನಡಿ ಹಿಡಿದ ಮರಣೋತ್ತರ ಪರೀಕ್ಷೆ ವರದಿ

author img

By

Published : Dec 6, 2021, 8:25 AM IST

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಧರ್ಮನಿಂದನೆಯ ಆರೋಪದಡಿ ಶ್ರೀಲಂಕಾ ಪ್ರಜೆಯನ್ನು ಇತ್ತೀಚೆಗೆ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆದರೆ, ಆತ ಸಾವಿಗೂ ಮುನ್ನ ಅನುಭವಿರುವ ನರಕಯಾತನೆಯನ್ನು ಇದೀಗ ಮರಣೋತ್ತರ ಪರೀಕ್ಷೆಯ ವರದಿ ಬಯಲು ಮಾಡಿದೆ.

autopsy of Lynched Sri Lankan nation  PM Imran Khan speaks to Mahinda Rajapaksa  all bones of lynched man broken  ಶ್ರೀಲಂಕಾ ಪ್ರಜೆಯ ಮರಣೋತ್ತರ ಪರೀಕ್ಷೆ ವರದಿ  ಮಹಿಂದ ರಾಜಪಕ್ಸೆ ಜೊತೆ ಮಾತನಾಡಿದ ಪಾಕ್​ ಪ್ರಧಾನಿ ಇಮ್ರಾನ್ ಖಾನ್  ಪ್ರಿಯಾಂತ ಕುಮಾರ ದೀಯವದನಾ ಹತ್ಯೆ  ಪಾಕ್​ನಲ್ಲಿ ಪ್ರಿಯಾಂತ ಕುಮಾರ ದೀಯವದನಾ ದಾರುಣ ಹತ್ಯೆ  ಪ್ರಿಯಾಂತ ಕುಮಾರ ದೀಯವದನಾ ಸುಟ್ಟು ಹಾಕಿದ ಟಿಎಲ್​ಪಿ ಕಾರ್ಯಕರ್ತರು
ಪಾಕ್​ನಲ್ಲಿ ಶ್ರೀಲಂಕಾ ಪ್ರಜೆಯ ಹತ್ಯೆ

ಲಾಹೋರ್(ಪಾಕಿಸ್ತಾನ): ಪಾಕಿಸ್ತಾನದಲ್ಲಿ ನಡೆದ ಭೀಕರ ಹತ್ಯೆ ಪ್ರಕರಣದಲ್ಲಿ ಶ್ರೀಲಂಕಾದ ಪ್ರಜೆ ಪ್ರಿಯಾಂತ ಕುಮಾರ ದಿಯವದನಾ ಅವರ ದೇಹದ ಬಹುತೇಕ ಎಲ್ಲಾ ಮೂಳೆಗಳು ಮುರಿದುಹೋಗಿವೆ. ಅವರ ದೇಹವು ಶೇಕಡಾ 99ರಷ್ಟು ಸುಟ್ಟುಹೋಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದು ಬಂದಿದೆ.

ಇಸ್ಲಾಮಿಸ್ಟ್ ಪಕ್ಷ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಉದ್ರಿಕ್ತ ಬೆಂಬಲಿಗರು ಶುಕ್ರವಾರ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರ ಮೇಲೆ ಮನಬಂದಂತೆ ದಾಳಿ ಮಾಡಿದ್ದರು. ಈ ವೇಳೆ, ಗಾರ್ಮೆಂಟ್ಸ್‌ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ದಿಯಾವದನಾ ಅವರನ್ನು ಹೊರ ಎಳೆದೊಯ್ದು ಧರ್ಮನಿಂದನೆಯ ಆರೋಪದಡಿ ಮನಬಂದಂತೆ ಥಳಿಸಿ, ಅವರ ದೇಹಕ್ಕೆ ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ್ದರು. ಈ ಘಟನೆಯ ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಕೈಗೊಂಡಿದ್ದರು.

autopsy of Lynched Sri Lankan nation  PM Imran Khan speaks to Mahinda Rajapaksa  all bones of lynched man broken  ಶ್ರೀಲಂಕಾ ಪ್ರಜೆಯ ಮರಣೋತ್ತರ ಪರೀಕ್ಷೆ ವರದಿ  ಮಹಿಂದ ರಾಜಪಕ್ಸೆ ಜೊತೆ ಮಾತನಾಡಿದ ಪಾಕ್​ ಪ್ರಧಾನಿ ಇಮ್ರಾನ್ ಖಾನ್  ಪ್ರಿಯಾಂತ ಕುಮಾರ ದೀಯವದನಾ ಹತ್ಯೆ  ಪಾಕ್​ನಲ್ಲಿ ಪ್ರಿಯಾಂತ ಕುಮಾರ ದೀಯವದನಾ ದಾರುಣ ಹತ್ಯೆ  ಪ್ರಿಯಾಂತ ಕುಮಾರ ದೀಯವದನಾ ಸುಟ್ಟು ಹಾಕಿದ ಟಿಎಲ್​ಪಿ ಕಾರ್ಯಕರ್ತರು
ಹಿಂಸಾಚಾರದಲ್ಲಿ ತೀವ್ರವಾಗಿ ಹಾನಿಗೀಡಾದ ಕಟ್ಟಡ

ಮರಣೋತ್ತರ ಪರೀಕ್ಷೆಯಲ್ಲಿ ದಿಯಾವದನಾ ಅವರ ಮೇಲೆ ನಡೆದ ದಾಳಿಯಲ್ಲಿ ಎಲ್ಲಾ ಪ್ರಮುಖ ಅಂಗಗಳು, ಹೊಟ್ಟೆ ಮತ್ತು ಅವರ ಕಿಡ್ನಿಗಳಿಗೆ ಭಾರಿ ಪ್ರಮಾಣದ ಪೆಟ್ಟು ಬಿದ್ದಿದ್ದವು. ಅವರ ದೇಹದಾದ್ಯಂತ ಚಿತ್ರಹಿಂಸೆಯ ಗುರುತುಗಳು ಗೋಚರಿಸಿದ್ದು, ಬೆನ್ನುಮೂಳೆಗಳು ಮೂರು ವಿಭಿನ್ನ ಹಂತಗಳಲ್ಲಿ ಮುರಿದುಹೋಗಿವೆ. ಬೆಂಕಿ ಹಚ್ಚಿದ್ದ ಪರಿಣಾಮ ದೇಹದ ಶೇ 99ರಷ್ಟು ಭಾಗ ಸುಟ್ಟು ಕರಕಲಾಗಿತ್ತು. ಒಂದು ಕಾಲು ಹೊರತುಪಡಿಸಿ ಅವರ ದೇಹದ ಎಲ್ಲಾ ಮೂಳೆಗಳು ಮುರಿದುಹೋಗಿದ್ದವು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಹುಕೋಟಿ ಸುಲಿಗೆ ಪ್ರಕರಣ: ಬಾಲಿವುಡ್‌ ನಟಿ ಜಾಕ್ವೆಲಿನ್‌ ವಿದೇಶ ಪ್ರಯಾಣಕ್ಕೆ ನಿರ್ಬಂಧ

ಪಂಜಾಬ್ ಪೊಲೀಸ್ ವಕ್ತಾರರೊಬ್ಬರು ಮಾತನಾಡಿ, ಶವಪರೀಕ್ಷೆಯ ನಂತರ ದಿಯವದನಾ ಅವರ ದೇಹವನ್ನು ಲಾಹೋರ್‌ಗೆ ಕಳುಹಿಸಲಾಗಿದೆ. ಕಾನೂನು ವಿಧಿವಿಧಾನಗಳ ನಂತರ ವಿಶೇಷ ವಿಮಾನದ ಮೂಲಕ ಶ್ರೀಲಂಕಾಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಲಾಹೋರ್(ಪಾಕಿಸ್ತಾನ): ಪಾಕಿಸ್ತಾನದಲ್ಲಿ ನಡೆದ ಭೀಕರ ಹತ್ಯೆ ಪ್ರಕರಣದಲ್ಲಿ ಶ್ರೀಲಂಕಾದ ಪ್ರಜೆ ಪ್ರಿಯಾಂತ ಕುಮಾರ ದಿಯವದನಾ ಅವರ ದೇಹದ ಬಹುತೇಕ ಎಲ್ಲಾ ಮೂಳೆಗಳು ಮುರಿದುಹೋಗಿವೆ. ಅವರ ದೇಹವು ಶೇಕಡಾ 99ರಷ್ಟು ಸುಟ್ಟುಹೋಗಿದೆ ಎಂದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದು ಬಂದಿದೆ.

ಇಸ್ಲಾಮಿಸ್ಟ್ ಪಕ್ಷ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (ಟಿಎಲ್‌ಪಿ) ಉದ್ರಿಕ್ತ ಬೆಂಬಲಿಗರು ಶುಕ್ರವಾರ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರ ಮೇಲೆ ಮನಬಂದಂತೆ ದಾಳಿ ಮಾಡಿದ್ದರು. ಈ ವೇಳೆ, ಗಾರ್ಮೆಂಟ್ಸ್‌ ಫ್ಯಾಕ್ಟರಿಯ ಜನರಲ್ ಮ್ಯಾನೇಜರ್ ದಿಯಾವದನಾ ಅವರನ್ನು ಹೊರ ಎಳೆದೊಯ್ದು ಧರ್ಮನಿಂದನೆಯ ಆರೋಪದಡಿ ಮನಬಂದಂತೆ ಥಳಿಸಿ, ಅವರ ದೇಹಕ್ಕೆ ಬೆಂಕಿ ಹಚ್ಚಿ ಜೀವಂತ ಸುಟ್ಟು ಹಾಕಿದ್ದರು. ಈ ಘಟನೆಯ ಬಳಿಕ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ತನಿಖೆ ಕೈಗೊಂಡಿದ್ದರು.

autopsy of Lynched Sri Lankan nation  PM Imran Khan speaks to Mahinda Rajapaksa  all bones of lynched man broken  ಶ್ರೀಲಂಕಾ ಪ್ರಜೆಯ ಮರಣೋತ್ತರ ಪರೀಕ್ಷೆ ವರದಿ  ಮಹಿಂದ ರಾಜಪಕ್ಸೆ ಜೊತೆ ಮಾತನಾಡಿದ ಪಾಕ್​ ಪ್ರಧಾನಿ ಇಮ್ರಾನ್ ಖಾನ್  ಪ್ರಿಯಾಂತ ಕುಮಾರ ದೀಯವದನಾ ಹತ್ಯೆ  ಪಾಕ್​ನಲ್ಲಿ ಪ್ರಿಯಾಂತ ಕುಮಾರ ದೀಯವದನಾ ದಾರುಣ ಹತ್ಯೆ  ಪ್ರಿಯಾಂತ ಕುಮಾರ ದೀಯವದನಾ ಸುಟ್ಟು ಹಾಕಿದ ಟಿಎಲ್​ಪಿ ಕಾರ್ಯಕರ್ತರು
ಹಿಂಸಾಚಾರದಲ್ಲಿ ತೀವ್ರವಾಗಿ ಹಾನಿಗೀಡಾದ ಕಟ್ಟಡ

ಮರಣೋತ್ತರ ಪರೀಕ್ಷೆಯಲ್ಲಿ ದಿಯಾವದನಾ ಅವರ ಮೇಲೆ ನಡೆದ ದಾಳಿಯಲ್ಲಿ ಎಲ್ಲಾ ಪ್ರಮುಖ ಅಂಗಗಳು, ಹೊಟ್ಟೆ ಮತ್ತು ಅವರ ಕಿಡ್ನಿಗಳಿಗೆ ಭಾರಿ ಪ್ರಮಾಣದ ಪೆಟ್ಟು ಬಿದ್ದಿದ್ದವು. ಅವರ ದೇಹದಾದ್ಯಂತ ಚಿತ್ರಹಿಂಸೆಯ ಗುರುತುಗಳು ಗೋಚರಿಸಿದ್ದು, ಬೆನ್ನುಮೂಳೆಗಳು ಮೂರು ವಿಭಿನ್ನ ಹಂತಗಳಲ್ಲಿ ಮುರಿದುಹೋಗಿವೆ. ಬೆಂಕಿ ಹಚ್ಚಿದ್ದ ಪರಿಣಾಮ ದೇಹದ ಶೇ 99ರಷ್ಟು ಭಾಗ ಸುಟ್ಟು ಕರಕಲಾಗಿತ್ತು. ಒಂದು ಕಾಲು ಹೊರತುಪಡಿಸಿ ಅವರ ದೇಹದ ಎಲ್ಲಾ ಮೂಳೆಗಳು ಮುರಿದುಹೋಗಿದ್ದವು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಹುಕೋಟಿ ಸುಲಿಗೆ ಪ್ರಕರಣ: ಬಾಲಿವುಡ್‌ ನಟಿ ಜಾಕ್ವೆಲಿನ್‌ ವಿದೇಶ ಪ್ರಯಾಣಕ್ಕೆ ನಿರ್ಬಂಧ

ಪಂಜಾಬ್ ಪೊಲೀಸ್ ವಕ್ತಾರರೊಬ್ಬರು ಮಾತನಾಡಿ, ಶವಪರೀಕ್ಷೆಯ ನಂತರ ದಿಯವದನಾ ಅವರ ದೇಹವನ್ನು ಲಾಹೋರ್‌ಗೆ ಕಳುಹಿಸಲಾಗಿದೆ. ಕಾನೂನು ವಿಧಿವಿಧಾನಗಳ ನಂತರ ವಿಶೇಷ ವಿಮಾನದ ಮೂಲಕ ಶ್ರೀಲಂಕಾಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.