ETV Bharat / international

ಆಫ್ಘನ್​​​​ ಮಣ್ಣನ್ನು ಭಯೋತ್ಪಾದನೆಗೆ ಬಳಸದಂತೆ ಬದ್ಧತೆ ತೋರಿಸಿ: ತಾಲಿಬಾನ್​ಗೆ ಭಾರತ ಸಲಹೆ

author img

By

Published : Sep 23, 2021, 7:43 AM IST

Updated : Sep 23, 2021, 7:55 AM IST

ಆಫ್ಘನ್​ ಮಣ್ಣನ್ನು ಭಯೋತ್ಪಾದನೆಗೆ ಬಳಸದಂತೆ ತಾಲಿಬಾನ್​, ಬದ್ಧತೆ ತೋರಿಸಬೇಕೆಂದು ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.

ಎಸ್ ಜೈಶಂಕರ್
ಎಸ್ ಜೈಶಂಕರ್

ನ್ಯೂಯಾರ್ಕ್ (ಅಮೆರಿಕ): ತಾಲಿಬಾನ್​, ಆಫ್ಘನ್​ ಮಣ್ಣನ್ನು ಭಯೋತ್ಪಾದನೆಗೆ ಬಳಸದಂತೆ ಬದ್ಧತೆ ತೋರಿಸಬೇಕಿದ್ದು, ಅಂತಹ ವಾತಾವರಣ ಸಹ ಸೃಷ್ಟಿಯಾಗಬೇಕು ಎಂದು ಭಾರತ ಪ್ರತಿಪಾದಿಸಿದೆ.

  • UNSC resolution 2593, which reflects global sentiment, should continue to guide our approach.

    India’s engagement will be driven by its historical friendship with the Afghan people.

    — Dr. S. Jaishankar (@DrSJaishankar) September 22, 2021 " class="align-text-top noRightClick twitterSection" data=" ">

ಜಿ -20 ವಿದೇಶಾಂಗ ಮಂತ್ರಿಗಳ ಸಭೆಯನ್ನುದ್ದೇಶಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತನಾಡಿದರು. ಆಫ್ಘನ್​​ ​ಅನ್ನು ಯಾವುದೇ ದೇಶಗಳ ವಿರುದ್ಧವಾಗಿ ಬಳಸುವುದಿಲ್ಲ ಎಂದು ತಾಲಿಬಾನ್ ಹೇಳಿದೆ. ತಾಲಿಬಾನ್​ ಈ ಹೇಳಿಕೆಯನ್ನು ಕಾರ್ಯಗತಗೊಳಿಸಬೇಕು. ಆಫ್ಘನ್​ ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿಯನ್ನು ಒಳಗೊಂಡ ವಿಶಾಲ ಅಂತರ್ಗತ ಪ್ರಕ್ರಿಯೆಯನ್ನು ಜಗತ್ತು ನಿರೀಕ್ಷಿಸುತ್ತದೆ ಎಂದು ಜೈ ಶಂಕರ್ ಹೇಳಿದ್ದಾರೆ.

ಜಾಗತಿಕ ಭಾವನೆ ಪ್ರತಿಬಿಂಬಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರೆಸಲ್ಯೂಷನ್ 2593​ ನಮ್ಮ ವಿಧಾನಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಬೇಕು. ಭಾರತವು ಆಫ್ಘನ್​ನೊಂದಿಗಿನ ಐತಿಹಾಸಿಕ ಸ್ನೇಹದಿಂದಲೇ ವ್ಯವಹಾರ ಮುಂದುವರಿಸುತ್ತದೆ ಎಂದು ಜೈ ಶಂಕರ್ ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 15 ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದ್ದರಿಂದ ಅಲ್ಲಿನ ಚುನಾಯಿತ ಸರ್ಕಾರ ಪತನಗೊಂಡಿತು. ಇತ್ತೀಚೆಗಷ್ಟೇ ಅಲ್ಲಿ ತಾಲಿಬಾನ್​ ನೇತೃತ್ವದ ಸರ್ಕಾರ ರಚನೆಯಾಯಿತು.

ಇದನ್ನೂ ಓದಿ: ಪಾಕ್ ಸರಣಿ ರದ್ದು ಮಾಡಿಕೊಂಡ ನ್ಯೂಜಿಲ್ಯಾಂಡ್​​​: ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ

ನ್ಯೂಯಾರ್ಕ್ (ಅಮೆರಿಕ): ತಾಲಿಬಾನ್​, ಆಫ್ಘನ್​ ಮಣ್ಣನ್ನು ಭಯೋತ್ಪಾದನೆಗೆ ಬಳಸದಂತೆ ಬದ್ಧತೆ ತೋರಿಸಬೇಕಿದ್ದು, ಅಂತಹ ವಾತಾವರಣ ಸಹ ಸೃಷ್ಟಿಯಾಗಬೇಕು ಎಂದು ಭಾರತ ಪ್ರತಿಪಾದಿಸಿದೆ.

  • UNSC resolution 2593, which reflects global sentiment, should continue to guide our approach.

    India’s engagement will be driven by its historical friendship with the Afghan people.

    — Dr. S. Jaishankar (@DrSJaishankar) September 22, 2021 " class="align-text-top noRightClick twitterSection" data=" ">

ಜಿ -20 ವಿದೇಶಾಂಗ ಮಂತ್ರಿಗಳ ಸಭೆಯನ್ನುದ್ದೇಶಿಸಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮಾತನಾಡಿದರು. ಆಫ್ಘನ್​​ ​ಅನ್ನು ಯಾವುದೇ ದೇಶಗಳ ವಿರುದ್ಧವಾಗಿ ಬಳಸುವುದಿಲ್ಲ ಎಂದು ತಾಲಿಬಾನ್ ಹೇಳಿದೆ. ತಾಲಿಬಾನ್​ ಈ ಹೇಳಿಕೆಯನ್ನು ಕಾರ್ಯಗತಗೊಳಿಸಬೇಕು. ಆಫ್ಘನ್​ ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿಯನ್ನು ಒಳಗೊಂಡ ವಿಶಾಲ ಅಂತರ್ಗತ ಪ್ರಕ್ರಿಯೆಯನ್ನು ಜಗತ್ತು ನಿರೀಕ್ಷಿಸುತ್ತದೆ ಎಂದು ಜೈ ಶಂಕರ್ ಹೇಳಿದ್ದಾರೆ.

ಜಾಗತಿಕ ಭಾವನೆ ಪ್ರತಿಬಿಂಬಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರೆಸಲ್ಯೂಷನ್ 2593​ ನಮ್ಮ ವಿಧಾನಕ್ಕೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಬೇಕು. ಭಾರತವು ಆಫ್ಘನ್​ನೊಂದಿಗಿನ ಐತಿಹಾಸಿಕ ಸ್ನೇಹದಿಂದಲೇ ವ್ಯವಹಾರ ಮುಂದುವರಿಸುತ್ತದೆ ಎಂದು ಜೈ ಶಂಕರ್ ಟ್ವೀಟ್ ಮಾಡಿದ್ದಾರೆ.

ಆಗಸ್ಟ್ 15 ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡಿದ್ದರಿಂದ ಅಲ್ಲಿನ ಚುನಾಯಿತ ಸರ್ಕಾರ ಪತನಗೊಂಡಿತು. ಇತ್ತೀಚೆಗಷ್ಟೇ ಅಲ್ಲಿ ತಾಲಿಬಾನ್​ ನೇತೃತ್ವದ ಸರ್ಕಾರ ರಚನೆಯಾಯಿತು.

ಇದನ್ನೂ ಓದಿ: ಪಾಕ್ ಸರಣಿ ರದ್ದು ಮಾಡಿಕೊಂಡ ನ್ಯೂಜಿಲ್ಯಾಂಡ್​​​: ಭಾರತದ ಮೇಲೆ ಗೂಬೆ ಕೂರಿಸಿದ ಪಾಕಿಸ್ತಾನ

Last Updated : Sep 23, 2021, 7:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.