ETV Bharat / entertainment

ಅಡ್ಡದಾರಿ ಹಿಡಿದು ಹಣ ಸಂಪಾದಿಸಲು ಮುಂದಾದ 'ಲೊಡ್ಡೆ' ಸಿನಿಮಾ ನಿರ್ಮಾಪಕ ಸೇರಿ ನಾಲ್ವರ ಬಂಧನ​

author img

By

Published : Jun 4, 2022, 10:49 AM IST

ನಟ ಕೋಮಲ್ ಅಭಿನಯದ 'ಲೊಡ್ಡೆ' ಸಿನಿಮಾ ನಿರ್ಮಾಣ ಮಾಡಿ ನಷ್ಟ ಅನುಭವಿಸಿದ ಬಳಿಕ ಅಡ್ಡದಾರಿ ಹಿಡಿದು ಹಣ ಸಂಪಾದಿಸಲು ಮುಂದಾಗಿದ್ದ ಸ್ಯಾಂಡಲ್​ವುಡ್ ನಿರ್ಮಾಪಕ ಮಂಜುನಾಥ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ನಿರ್ಮಾಪಕ ಸೇರಿ ನಾಲ್ವರ ಬಂಧನ​
ನಿರ್ಮಾಪಕ ಸೇರಿ ನಾಲ್ವರ ಬಂಧನ​

ಬೆಂಗಳೂರು: ಸಿನಿಮಾಗೆ ಬಂಡವಾಳ ಹೂಡಿ, ನಷ್ಟ ಅನುಭವಿಸಿ ಅಡ್ಡದಾರಿ ಹಿಡಿದಿದ್ದ ಸ್ಯಾಂಡಲ್​ವುಡ್ ನಿರ್ಮಾಪಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸಿದ್ದ ನಿರ್ಮಾಪಕ ಮಂಜುನಾಥ್, ಶಿವಕುಮಾರ್, ಗೋಪಾಲ್ ಹಾಗೂ ಚಂದ್ರಶೇಖರ್ ಎಂಬಾತನನ್ನ ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಂಜುನಾಥ ನಟ ಕೋಮಲ್ ಅಭಿನಯದ 'ಲೊಡ್ಡೆ' ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ, ಚಿತ್ರ ನಿರೀಕ್ಷಿತ ಪ್ರದರ್ಶನ ಕಾಣದ ಹಿನ್ನೆಲೆ ನಷ್ಟ ಅನುಭವಿಸಿದ್ದರು. ಬಳಿಕ ರಾಜಾಜಿನಗರದಲ್ಲಿ ಈಗಲ್ ಟ್ರೀ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಡಾಟ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕಚೇರಿ ತೆರೆದಿದ್ದ.

ಜಾಹೀರಾತು ನೋಡಿ ಮಂಜುನಾಥ್ ನನ್ನ ಸಂಪರ್ಕಿಸಿದ್ದ ಪುಷ್ಪಕುಮಾರ್ ಎಂಬಾತನಿಗೆ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ನಂಬಿಸಿ, ಯಾರದ್ದೋ ಸೈಟ್ ತೋರಿಸಿ ಹಂತ ಹಂತವಾಗಿ 2 ಲಕ್ಷ ಪಡೆದಿದ್ದ. ಸೈಟ್​ ಕುರಿತು ಸೂಕ್ತ ದಾಖಲೆಗಳನ್ನ ಪುಷ್ಪಕುಮಾರ್ ಕೇಳಿದಾಗ ಮಂಜುನಾಥ್​ನ ಅಸಲಿ ಬಣ್ಣ ಬಯಲಾಗಿದ್ದು, ರಾಜಾಜಿನಗರ ಠಾಣೆಗೆ ನೀಡಿದ ದೂರಿನನ್ವಯ ನಿರ್ಮಾಪಕ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: 'ಸಾಮ್ರಾಟ್ ಪೃಥ್ವಿರಾಜ್' ರಿಲೀಸ್​​: ಸಿದ್ಧಿವಿನಾಯಕ ದೇವಸ್ಥಾನಕ್ಕೆ ಮಾನುಷಿ ಚಿಲ್ಲರ್‌‌ ಭೇಟಿ

ಬೆಂಗಳೂರು: ಸಿನಿಮಾಗೆ ಬಂಡವಾಳ ಹೂಡಿ, ನಷ್ಟ ಅನುಭವಿಸಿ ಅಡ್ಡದಾರಿ ಹಿಡಿದಿದ್ದ ಸ್ಯಾಂಡಲ್​ವುಡ್ ನಿರ್ಮಾಪಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ರಿಯಲ್ ಎಸ್ಟೇಟ್ ಹೆಸರಿನಲ್ಲಿ ವಂಚಿಸಿದ್ದ ನಿರ್ಮಾಪಕ ಮಂಜುನಾಥ್, ಶಿವಕುಮಾರ್, ಗೋಪಾಲ್ ಹಾಗೂ ಚಂದ್ರಶೇಖರ್ ಎಂಬಾತನನ್ನ ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಮಂಜುನಾಥ ನಟ ಕೋಮಲ್ ಅಭಿನಯದ 'ಲೊಡ್ಡೆ' ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ, ಚಿತ್ರ ನಿರೀಕ್ಷಿತ ಪ್ರದರ್ಶನ ಕಾಣದ ಹಿನ್ನೆಲೆ ನಷ್ಟ ಅನುಭವಿಸಿದ್ದರು. ಬಳಿಕ ರಾಜಾಜಿನಗರದಲ್ಲಿ ಈಗಲ್ ಟ್ರೀ ಬಿಲ್ಡರ್ಸ್ ಹಾಗೂ ಡೆವಲಪರ್ಸ್ ಡಾಟ್ ಹೆಸರಿನಲ್ಲಿ ರಿಯಲ್ ಎಸ್ಟೇಟ್ ಕಚೇರಿ ತೆರೆದಿದ್ದ.

ಜಾಹೀರಾತು ನೋಡಿ ಮಂಜುನಾಥ್ ನನ್ನ ಸಂಪರ್ಕಿಸಿದ್ದ ಪುಷ್ಪಕುಮಾರ್ ಎಂಬಾತನಿಗೆ ಕಡಿಮೆ ಬೆಲೆಗೆ ಸೈಟ್ ಕೊಡಿಸುವುದಾಗಿ ನಂಬಿಸಿ, ಯಾರದ್ದೋ ಸೈಟ್ ತೋರಿಸಿ ಹಂತ ಹಂತವಾಗಿ 2 ಲಕ್ಷ ಪಡೆದಿದ್ದ. ಸೈಟ್​ ಕುರಿತು ಸೂಕ್ತ ದಾಖಲೆಗಳನ್ನ ಪುಷ್ಪಕುಮಾರ್ ಕೇಳಿದಾಗ ಮಂಜುನಾಥ್​ನ ಅಸಲಿ ಬಣ್ಣ ಬಯಲಾಗಿದ್ದು, ರಾಜಾಜಿನಗರ ಠಾಣೆಗೆ ನೀಡಿದ ದೂರಿನನ್ವಯ ನಿರ್ಮಾಪಕ ಸೇರಿದಂತೆ ನಾಲ್ವರು ಆರೋಪಿಗಳನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ: 'ಸಾಮ್ರಾಟ್ ಪೃಥ್ವಿರಾಜ್' ರಿಲೀಸ್​​: ಸಿದ್ಧಿವಿನಾಯಕ ದೇವಸ್ಥಾನಕ್ಕೆ ಮಾನುಷಿ ಚಿಲ್ಲರ್‌‌ ಭೇಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.