ETV Bharat / entertainment

'ಪ್ರಭಾಸ್​ ಬಗ್ಗೆ ನನಗೆ ಅಪಾರ ಗೌರವವಿದೆ'.. ವದಂತಿಗಳಿಗೆ ತೆರೆ ಎಳೆದ ವಿವೇಕ್ ಅಗ್ನಿಹೋತ್ರಿ

author img

By

Published : Jul 28, 2023, 7:05 PM IST

Updated : Jul 28, 2023, 9:17 PM IST

ಪ್ರಭಾಸ್​ ವಿರುದ್ಧ ಅಗ್ನಿಹೋತ್ರಿ ಮಾತನಾಡಿರುವುದಾಗಿ ಸುದ್ದಿಯೊಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಇದೀಗ ಸ್ವತಃ ಅಗ್ನಿಹೋತ್ರಿ ಅವರೇ ಸ್ಪಷ್ಟನೆ ನೀಡಿದ್ದಾರೆ.

vivek agnihotri
ವಿವೇಕ್​ ಅಗ್ನಿಹೋತ್ರಿ

'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಮೂಲಕ ಸಂಚಲನ ಮೂಡಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಕೆಲವು ವಿವಾದಗಳಿಂದ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ವಿರುದ್ಧ ಅಗ್ನಿಹೋತ್ರಿ ಮಾತನಾಡಿರುವುದಾಗಿ ಸುದ್ದಿಯೊಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಇದೀಗ ಸ್ವತಃ ಅಗ್ನಿಹೋತ್ರಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್​ ಮಾಡುವ ಮೂಲಕ ಎಲ್ಲ ಸುಳ್ಳು ವದಂತಿಗಳಿಗೆ ತೆರೆ ಎಳೆದಿದ್ದಾರೆ.

  • Who is spreading such fake news attributing fake quotes to me? I respect Prabhas who is a mega mega star doing mega mega budget films.

    We make non-starter, small budget, people’s films. There is no comparison between us.

    Pl spare me. https://t.co/IoHqdZGXCl

    — Vivek Ranjan Agnihotri (@vivekagnihotri) July 27, 2023 " class="align-text-top noRightClick twitterSection" data=" ">

ಅಗ್ನಿಹೋತ್ರಿ ಟ್ವೀಟ್​: "ನಾನು ಮತ್ತೊಮ್ಮೆ ಪ್ರಭಾಸ್​ ಚಿತ್ರಕ್ಕೆ ಪೈಪೋಟಿ ನೀಡುತ್ತಿದ್ದೇನೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವವರು ಯಾರು? ಪ್ರಭಾಸ್​ ಬಗ್ಗೆ ನನಗೆ ಅಪಾರ ಗೌರವವಿದೆ. ಅವರೊಬ್ಬ ಮೆಗಾ ಸ್ಟಾರ್​. ಅವರು ಭಾರಿ ಬಜೆಟ್​ ಚಿತ್ರಗಳನ್ನು ಮಾಡುತ್ತಾರೆ. ಆದರೆ, ನಾವು ಸ್ಟಾರ್​ ನಟರಿಲ್ಲದೇ ಕಡಿಮೆ ಬಜೆಟ್​ನಲ್ಲಿ ಜನ ಸಾಮಾನ್ಯರಿಗಾಗಿ ಸಿನಿಮಾ ಮಾಡುತ್ತೇವೆ. ನಮ್ಮ ನಡುವೆ ಯಾವುದೇ ಹೋಲಿಕೆ ಇಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ" ಎಂದು ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: 'ಮೈ ನೇಮ್ ಈಸ್ ಲಖನ್' ಸಾಂಗ್ ಆನಂದಿಸಿದ ವಿದೇಶಿಗ - ಮೆಚ್ಚಿನ ನಟ ಅನಿಲ್​ ಕಪೂರ್​ ಎದುರಿದ್ದರೂ ಗುರುತಿಸದ ಅಭಿಮಾನಿ

ನಿರ್ದೇಶಕನ ಸಿನಿಮಾ.. 'ದಿ ಕಾಶ್ಮೀರ್ ಫೈಲ್ಸ್' 2022ರ ಮಾರ್ಚ್​​ನಲ್ಲಿ ತೆರೆಕಂಡಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ ಎಲ್ಲೆಡೆ ಸಖತ್​ ಸದ್ದು ಮಾಡಿತ್ತು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿತ್ತು. ನಟ ಅನುಪಮ್​ ಖೇರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಕಾಶ್ಮೀರಿ ಪಂಡಿತರ ವಲಸೆ ಮೇಲೆ ಕಥೆ ಹೆಣೆಯಲಾಗಿದೆ. ಇನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸದ್ಯ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 'ದಿ ವ್ಯಾಕ್ಸಿನ್​ ವಾರ್' ಸಿನಿಮಾದ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ.

ಕೋವಿಡ್​ ಸಂದರ್ಭದಲ್ಲಿನ ನೈಜ ಘಟನೆಗಳನ್ನು ಆಧರಿಸಿ ಚಿತ್ರ ತಯಾರಾಗುತ್ತಿದೆ. ಜೊತೆಗೆ, ಭಾರತೀಯ ವಿಜ್ಞಾನಿಗಳ ಕಥೆಯಾಧರಿತವಾಗಿದೆ. ಇದರಲ್ಲಿ ಸಪ್ತಮಿ ಗೌಡ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ. ದಿ ವ್ಯಾಕ್ಸಿನ್ ವಾರ್ ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಈ ಸಿನಿಮಾ ದಸರಾ ವೇಳೆಗೆ 11 ಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ, ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್, ರೈಮಾ ಸೇನ್, ಸಪ್ತಮಿ ಗೌಡ, ನಾನಾ ಪಾಟೇಕರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ದುಲ್ಕರ್​ ಸಲ್ಮಾನ್​ ಹುಟ್ಟುಹಬ್ಬ: 'ಗನ್ಸ್ ಅಂಡ್​​ ಗುಲಾಬ್ಸ್‌' ಟ್ರೇಲರ್​ ಡೇಟ್​ ಅನೌನ್ಸ್

'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಮೂಲಕ ಸಂಚಲನ ಮೂಡಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ. ಕೆಲವು ವಿವಾದಗಳಿಂದ ಅವರು ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ವಿರುದ್ಧ ಅಗ್ನಿಹೋತ್ರಿ ಮಾತನಾಡಿರುವುದಾಗಿ ಸುದ್ದಿಯೊಂದು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಇದೀಗ ಸ್ವತಃ ಅಗ್ನಿಹೋತ್ರಿ ಅವರೇ ಸ್ಪಷ್ಟನೆ ನೀಡಿದ್ದಾರೆ. ಟ್ವೀಟ್​ ಮಾಡುವ ಮೂಲಕ ಎಲ್ಲ ಸುಳ್ಳು ವದಂತಿಗಳಿಗೆ ತೆರೆ ಎಳೆದಿದ್ದಾರೆ.

  • Who is spreading such fake news attributing fake quotes to me? I respect Prabhas who is a mega mega star doing mega mega budget films.

    We make non-starter, small budget, people’s films. There is no comparison between us.

    Pl spare me. https://t.co/IoHqdZGXCl

    — Vivek Ranjan Agnihotri (@vivekagnihotri) July 27, 2023 " class="align-text-top noRightClick twitterSection" data=" ">

ಅಗ್ನಿಹೋತ್ರಿ ಟ್ವೀಟ್​: "ನಾನು ಮತ್ತೊಮ್ಮೆ ಪ್ರಭಾಸ್​ ಚಿತ್ರಕ್ಕೆ ಪೈಪೋಟಿ ನೀಡುತ್ತಿದ್ದೇನೆ ಎಂಬ ಮಾತುಗಳು ಕೇಳಿಬರುತ್ತಿವೆ. ಇಂತಹ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವವರು ಯಾರು? ಪ್ರಭಾಸ್​ ಬಗ್ಗೆ ನನಗೆ ಅಪಾರ ಗೌರವವಿದೆ. ಅವರೊಬ್ಬ ಮೆಗಾ ಸ್ಟಾರ್​. ಅವರು ಭಾರಿ ಬಜೆಟ್​ ಚಿತ್ರಗಳನ್ನು ಮಾಡುತ್ತಾರೆ. ಆದರೆ, ನಾವು ಸ್ಟಾರ್​ ನಟರಿಲ್ಲದೇ ಕಡಿಮೆ ಬಜೆಟ್​ನಲ್ಲಿ ಜನ ಸಾಮಾನ್ಯರಿಗಾಗಿ ಸಿನಿಮಾ ಮಾಡುತ್ತೇವೆ. ನಮ್ಮ ನಡುವೆ ಯಾವುದೇ ಹೋಲಿಕೆ ಇಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ" ಎಂದು ವಿವೇಕ್​ ಅಗ್ನಿಹೋತ್ರಿ ಟ್ವೀಟ್​ ಮಾಡಿದ್ದಾರೆ. ಇದೀಗ ಈ ವಿಚಾರ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: 'ಮೈ ನೇಮ್ ಈಸ್ ಲಖನ್' ಸಾಂಗ್ ಆನಂದಿಸಿದ ವಿದೇಶಿಗ - ಮೆಚ್ಚಿನ ನಟ ಅನಿಲ್​ ಕಪೂರ್​ ಎದುರಿದ್ದರೂ ಗುರುತಿಸದ ಅಭಿಮಾನಿ

ನಿರ್ದೇಶಕನ ಸಿನಿಮಾ.. 'ದಿ ಕಾಶ್ಮೀರ್ ಫೈಲ್ಸ್' 2022ರ ಮಾರ್ಚ್​​ನಲ್ಲಿ ತೆರೆಕಂಡಿತ್ತು. ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ ಎಲ್ಲೆಡೆ ಸಖತ್​ ಸದ್ದು ಮಾಡಿತ್ತು. ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿತ್ತು. ನಟ ಅನುಪಮ್​ ಖೇರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಕಾಶ್ಮೀರಿ ಪಂಡಿತರ ವಲಸೆ ಮೇಲೆ ಕಥೆ ಹೆಣೆಯಲಾಗಿದೆ. ಇನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸದ್ಯ 'ದಿ ವ್ಯಾಕ್ಸಿನ್ ವಾರ್' ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. 'ದಿ ವ್ಯಾಕ್ಸಿನ್​ ವಾರ್' ಸಿನಿಮಾದ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆ ಇದೆ.

ಕೋವಿಡ್​ ಸಂದರ್ಭದಲ್ಲಿನ ನೈಜ ಘಟನೆಗಳನ್ನು ಆಧರಿಸಿ ಚಿತ್ರ ತಯಾರಾಗುತ್ತಿದೆ. ಜೊತೆಗೆ, ಭಾರತೀಯ ವಿಜ್ಞಾನಿಗಳ ಕಥೆಯಾಧರಿತವಾಗಿದೆ. ಇದರಲ್ಲಿ ಸಪ್ತಮಿ ಗೌಡ ಪಾತ್ರ ಹೇಗಿರಲಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬರಬೇಕಿದೆ. ದಿ ವ್ಯಾಕ್ಸಿನ್ ವಾರ್ ಸಿನಿಮಾದ ಚಿತ್ರೀಕರಣ ಈಗಾಗಲೇ ನಡೆಯುತ್ತಿದೆ. ಈ ಸಿನಿಮಾ ದಸರಾ ವೇಳೆಗೆ 11 ಭಾಷೆಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ, ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್, ರೈಮಾ ಸೇನ್, ಸಪ್ತಮಿ ಗೌಡ, ನಾನಾ ಪಾಟೇಕರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ದುಲ್ಕರ್​ ಸಲ್ಮಾನ್​ ಹುಟ್ಟುಹಬ್ಬ: 'ಗನ್ಸ್ ಅಂಡ್​​ ಗುಲಾಬ್ಸ್‌' ಟ್ರೇಲರ್​ ಡೇಟ್​ ಅನೌನ್ಸ್

Last Updated : Jul 28, 2023, 9:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.