ETV Bharat / entertainment

ಮುಂಜಾನೆ 3ರವರೆಗೂ ನಟ ಮೈಲಿಸ್ವಾಮಿ ನನ್ನೊಂದಿಗಿದ್ದರು: ನಂತರ ಇನ್ನಿಲ್ಲ ಎಂಬ ಸುದ್ದಿ ಬಂತು: ಡ್ರಮ್ಸ್ ಶಿವಮಣಿ

author img

By

Published : Feb 19, 2023, 6:28 PM IST

Updated : Feb 19, 2023, 7:21 PM IST

ಇಂದು ಬೆಳಗಿನ ಜಾವ ನಿಧನರಾದ ತಮಿಳಿನ ಖ್ಯಾತ ಹಾಸ್ಯ ನಟ ಮೈಲಿಸ್ವಾಮಿ ಅವರಿಗೆ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

various-film-celebrities-paid-tribute-to-the-actor-mayilsamy
ಮುಂಜಾನೆ 3ರವರೆಗೂ ನಟ ಮೈಲಿಸ್ವಾಮಿ ನನ್ನೊಂದಿಗಿದ್ದರು: ನಂತರ ಇನ್ನಿಲ್ಲ ಎಂಬ ಸುದ್ದಿ ಬಂತು: ಡ್ರಮ್ಸ್ ಶಿವಮಣಿ

ಚೆನ್ನೈ (ತಮಿಳುನಾಡು): ತಮಿಳಿನ ಖ್ಯಾತ ಹಾಸ್ಯ ನಟ ಮೈಲಿಸ್ವಾಮಿ (57) ನಿಧನರಾಗಿದ್ದಾರೆ. ಶನಿವಾರ ತಡರಾತ್ರಿವರೆಗೂ ಚೆನ್ನಾಗಿದ್ದ ಅವರು ಹಠಾತ್​ ಹೃದಯಾಘಾತದಿಂದ ಬೆಳಗಿನ ಜಾವ ಕೊನೆಯುಸಿಳೆದಿದ್ದಾರೆ. ಮೈಲಿಸ್ವಾಮಿ ಅವರ ಅಕಾಲಿಕ ನಿಧನದಿಂದ ಚಿತ್ರರಂಗಕ್ಕೆ ಆಘಾತ​ ಉಂಟಾಗಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಆಪ್ತರು ಮೈಲಿಸ್ವಾಮಿ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

ಚೆನ್ನೈನ ಮೇಲುಕೊಟ್ಟೈಯೂರ್ ಶಿವನ ದೇವಸ್ಥಾನದಲ್ಲಿ ತೆರಳಿದ್ದ ಮೈಲಿಸ್ವಾಮಿ ನಂತರ ಮನೆಗೆ ಬರುತ್ತಿದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅಂತೆಯೇ, ಮೊದಲಿಗೆ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿತ್ತು. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿಳೆದಿದ್ದಾರೆ. ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದ ಡ್ರಮ್ಸ್ ಶಿವಮಣಿ, ಮುಂಜಾನೆ 3 ಗಂಟೆಯವರೆಗೂ ಮೈಲಿಸ್ವಾಮಿ ನನ್ನೊಂದಿಗಿದ್ದರು. ಆದರೆ, 5.30ರ ಸುಮಾರಿಗೆ ಅವರ ಮಗ ಕರೆ ಮಾಡಿ ತಂದೆ ಇನ್ನಿಲ್ಲ ಎಂದು ಹೇಳಿದ್ದು ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಮೈಲಿಸ್ವಾಮಿ ನಿಧನವು ಆಘಾತಕಾರಿ. ಅವರು ಪ್ರತಿದಿನ ಬೆಳಗ್ಗೆ ನನಗೆ ಮೊಬೈಲ್​ ಮೂಲಕ​ ಸಂದೇಶ ಕಳುಹಿಸುತ್ತಿದ್ದರು. ಹಾಗೆಯೇ, ನಿನ್ನೆ ಶಿವರಾತ್ರಿ ದಿನದಂದು ನನಗೆ ಮೆಸೇಜ್​ ಮಾಡಿದ್ದರು. ಇಂದು ತಿರುವಣ್ಣಾಮಲೈಗೆ ಹೋಗುವುದಿಲ್ಲ. ಮೇಲುಕೊಟ್ಟೈಯೂರ್ ಶಿವನ ದೇವಸ್ಥಾನದಲ್ಲಿ ಭೇಟಿಯಾಗಬಹುದು ಎಂದು ಹೇಳಿದ್ದರು. ಆಗ ನಾನು ಹೇಗಾದರೂ ಮಾಡಿ ಬರುತ್ತೇನೆ ಎಂಬುದಾಗಿ ತಿಳಿಸಿದ್ದೆ ಎಂದು ಡ್ರಮ್ಸ್ ಶಿವಮಣಿ ಮಾಹಿತಿ ನೀಡಿದರು.

ಮುಂಜಾನೆ 3 ಗಂಟೆಯವರೆಗೂ ನನ್ನೊಂದಿಗಿದ್ದರು-ಶಿವಮಣಿ: ಅಲ್ಲದೇ, ನಂತರ ದೇವಸ್ಥಾನದಲ್ಲಿ ಮುಂಜಾನೆ 3 ಗಂಟೆಯವರೆಗೂ ನನ್ನೊಂದಿಗಿದ್ದರು. ಅಲ್ಲದೇ, ನನ್ನೊಂದಿಗೆ ಮೈಲಿಸ್ವಾಮಿ ಡ್ರಮ್ ಬಾರಿಸಿದರು ಮತ್ತು ಹಾಡಿದರು. ಇದಾದ ಬಳಿಕ ಇವತ್ತು ಒಳ್ಳೆಯ ದಿನ ಎಂದು ವಾಟ್ಸಾಪ್​ನಲ್ಲಿ ವಾಯ್ಸ್ ಮೆಸೇಜ್ ಕೂಡ ಹಾಕಿದ್ದರು. 5.30ರ ಸುಮಾರಿಗೆ ಮತ್ತೆ ಅವರ ಫೋನ್​ನಿಂದಲೇ ನನಗೆ ಕರೆ ಬಂತು. ಆದರೆ, ಈ ಸಮಯದಲ್ಲಿ ಮೈಲಿಸ್ವಾಮಿ ಮಾತನಾಡಲಿಲ್ಲ. ಬದಲಿಗೆ ಅವರ ಮಗ ನನ್ನೊಂದಿಗೆ ಮಾತನಾಡಿ ವಿಷಯ ತಿಳಿಸಿದರು ಎಂದು ಡ್ರಮ್ಸ್ ಶಿವಮಣಿ ಕಂಬನಿ ಮಿಡಿದರು.

ಮತ್ತೊಬ್ಬ ಖ್ಯಾತ ನಟ ಜಯರಾಮ್ ಮಾತನಾಡಿ, ಮೈಲಿಸ್ವಾಮಿ ಒಳ್ಳೆಯ ಸ್ನೇಹಿತ. ಒಳ್ಳೆಯ ವ್ಯಕ್ತಿ. ಸಿನಿಮಾ ರಂಗದಲ್ಲಿ ನೀವು ಯಾರನ್ನು ಕೇಳಿದರೂ, ಅವರೆಲ್ಲೂ ಇದೇ ಮಾತನ್ನೇ ಹೇಳುತ್ತಾರೆ. ನಾವಿಬ್ಬರೂ ವಾರದಲ್ಲಿ ಒಂದು ದಿನವಾದರೂ ಮಾತನಾಡುತ್ತಿದ್ದೆವು. ಕಳೆದ ವಾರವೂ ಅವರು ನನಗೆ ಕರೆ ಮಾಡಿ ತಿರುವಣ್ಣಾಮಲೈಗೆ ಬರುವಂತೆ ಹೇಳಿದ್ದರು ಎಂದು ಅವರೊಂದಿಗಿನ ಒಡನಾಟ ಸ್ಮರಿಸಿದರು.

ಸತ್ಯಮಂಗಲದವರಾದ ವೈಲಿಸಾಮಿ 1984ರಲ್ಲಿ ಭಾಗ್ಯರಾಜ್ ನಿರ್ದೇಶನದ 'ತವಣಿ ಕಣಪುಂ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಹಲವು ಪ್ರಮುಖ ನಟರೊಂದಿಗೆ ಕೆಲಸ ಮಾಡಿದ್ದ ಅವರು, ಎಂಜಿಆರ್‌ ಅವರ ಕಟ್ಟಾಭಿಮಾನಿಯಾಗಿದ್ದರು. ಸಣ್ಣ-ಪುಟ್ಟ ಕಾರ್ಯಕ್ರಮಗಳ ಸಂಚಾಲಕರಾಗಿ ಮತ್ತು ಆ್ಯಂಕರ್ ಆಗಿಯೂ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ತಮಿಳು ಹಾಸ್ಯನಟ ಮೈಲಸಾಮಿ ಹೃದಯಾಘಾತದಿಂದ ನಿಧನ

ಚೆನ್ನೈ (ತಮಿಳುನಾಡು): ತಮಿಳಿನ ಖ್ಯಾತ ಹಾಸ್ಯ ನಟ ಮೈಲಿಸ್ವಾಮಿ (57) ನಿಧನರಾಗಿದ್ದಾರೆ. ಶನಿವಾರ ತಡರಾತ್ರಿವರೆಗೂ ಚೆನ್ನಾಗಿದ್ದ ಅವರು ಹಠಾತ್​ ಹೃದಯಾಘಾತದಿಂದ ಬೆಳಗಿನ ಜಾವ ಕೊನೆಯುಸಿಳೆದಿದ್ದಾರೆ. ಮೈಲಿಸ್ವಾಮಿ ಅವರ ಅಕಾಲಿಕ ನಿಧನದಿಂದ ಚಿತ್ರರಂಗಕ್ಕೆ ಆಘಾತ​ ಉಂಟಾಗಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಆಪ್ತರು ಮೈಲಿಸ್ವಾಮಿ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

ಚೆನ್ನೈನ ಮೇಲುಕೊಟ್ಟೈಯೂರ್ ಶಿವನ ದೇವಸ್ಥಾನದಲ್ಲಿ ತೆರಳಿದ್ದ ಮೈಲಿಸ್ವಾಮಿ ನಂತರ ಮನೆಗೆ ಬರುತ್ತಿದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅಂತೆಯೇ, ಮೊದಲಿಗೆ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿತ್ತು. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿಳೆದಿದ್ದಾರೆ. ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದ ಡ್ರಮ್ಸ್ ಶಿವಮಣಿ, ಮುಂಜಾನೆ 3 ಗಂಟೆಯವರೆಗೂ ಮೈಲಿಸ್ವಾಮಿ ನನ್ನೊಂದಿಗಿದ್ದರು. ಆದರೆ, 5.30ರ ಸುಮಾರಿಗೆ ಅವರ ಮಗ ಕರೆ ಮಾಡಿ ತಂದೆ ಇನ್ನಿಲ್ಲ ಎಂದು ಹೇಳಿದ್ದು ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

ಮೈಲಿಸ್ವಾಮಿ ನಿಧನವು ಆಘಾತಕಾರಿ. ಅವರು ಪ್ರತಿದಿನ ಬೆಳಗ್ಗೆ ನನಗೆ ಮೊಬೈಲ್​ ಮೂಲಕ​ ಸಂದೇಶ ಕಳುಹಿಸುತ್ತಿದ್ದರು. ಹಾಗೆಯೇ, ನಿನ್ನೆ ಶಿವರಾತ್ರಿ ದಿನದಂದು ನನಗೆ ಮೆಸೇಜ್​ ಮಾಡಿದ್ದರು. ಇಂದು ತಿರುವಣ್ಣಾಮಲೈಗೆ ಹೋಗುವುದಿಲ್ಲ. ಮೇಲುಕೊಟ್ಟೈಯೂರ್ ಶಿವನ ದೇವಸ್ಥಾನದಲ್ಲಿ ಭೇಟಿಯಾಗಬಹುದು ಎಂದು ಹೇಳಿದ್ದರು. ಆಗ ನಾನು ಹೇಗಾದರೂ ಮಾಡಿ ಬರುತ್ತೇನೆ ಎಂಬುದಾಗಿ ತಿಳಿಸಿದ್ದೆ ಎಂದು ಡ್ರಮ್ಸ್ ಶಿವಮಣಿ ಮಾಹಿತಿ ನೀಡಿದರು.

ಮುಂಜಾನೆ 3 ಗಂಟೆಯವರೆಗೂ ನನ್ನೊಂದಿಗಿದ್ದರು-ಶಿವಮಣಿ: ಅಲ್ಲದೇ, ನಂತರ ದೇವಸ್ಥಾನದಲ್ಲಿ ಮುಂಜಾನೆ 3 ಗಂಟೆಯವರೆಗೂ ನನ್ನೊಂದಿಗಿದ್ದರು. ಅಲ್ಲದೇ, ನನ್ನೊಂದಿಗೆ ಮೈಲಿಸ್ವಾಮಿ ಡ್ರಮ್ ಬಾರಿಸಿದರು ಮತ್ತು ಹಾಡಿದರು. ಇದಾದ ಬಳಿಕ ಇವತ್ತು ಒಳ್ಳೆಯ ದಿನ ಎಂದು ವಾಟ್ಸಾಪ್​ನಲ್ಲಿ ವಾಯ್ಸ್ ಮೆಸೇಜ್ ಕೂಡ ಹಾಕಿದ್ದರು. 5.30ರ ಸುಮಾರಿಗೆ ಮತ್ತೆ ಅವರ ಫೋನ್​ನಿಂದಲೇ ನನಗೆ ಕರೆ ಬಂತು. ಆದರೆ, ಈ ಸಮಯದಲ್ಲಿ ಮೈಲಿಸ್ವಾಮಿ ಮಾತನಾಡಲಿಲ್ಲ. ಬದಲಿಗೆ ಅವರ ಮಗ ನನ್ನೊಂದಿಗೆ ಮಾತನಾಡಿ ವಿಷಯ ತಿಳಿಸಿದರು ಎಂದು ಡ್ರಮ್ಸ್ ಶಿವಮಣಿ ಕಂಬನಿ ಮಿಡಿದರು.

ಮತ್ತೊಬ್ಬ ಖ್ಯಾತ ನಟ ಜಯರಾಮ್ ಮಾತನಾಡಿ, ಮೈಲಿಸ್ವಾಮಿ ಒಳ್ಳೆಯ ಸ್ನೇಹಿತ. ಒಳ್ಳೆಯ ವ್ಯಕ್ತಿ. ಸಿನಿಮಾ ರಂಗದಲ್ಲಿ ನೀವು ಯಾರನ್ನು ಕೇಳಿದರೂ, ಅವರೆಲ್ಲೂ ಇದೇ ಮಾತನ್ನೇ ಹೇಳುತ್ತಾರೆ. ನಾವಿಬ್ಬರೂ ವಾರದಲ್ಲಿ ಒಂದು ದಿನವಾದರೂ ಮಾತನಾಡುತ್ತಿದ್ದೆವು. ಕಳೆದ ವಾರವೂ ಅವರು ನನಗೆ ಕರೆ ಮಾಡಿ ತಿರುವಣ್ಣಾಮಲೈಗೆ ಬರುವಂತೆ ಹೇಳಿದ್ದರು ಎಂದು ಅವರೊಂದಿಗಿನ ಒಡನಾಟ ಸ್ಮರಿಸಿದರು.

ಸತ್ಯಮಂಗಲದವರಾದ ವೈಲಿಸಾಮಿ 1984ರಲ್ಲಿ ಭಾಗ್ಯರಾಜ್ ನಿರ್ದೇಶನದ 'ತವಣಿ ಕಣಪುಂ' ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ಹಲವು ಪ್ರಮುಖ ನಟರೊಂದಿಗೆ ಕೆಲಸ ಮಾಡಿದ್ದ ಅವರು, ಎಂಜಿಆರ್‌ ಅವರ ಕಟ್ಟಾಭಿಮಾನಿಯಾಗಿದ್ದರು. ಸಣ್ಣ-ಪುಟ್ಟ ಕಾರ್ಯಕ್ರಮಗಳ ಸಂಚಾಲಕರಾಗಿ ಮತ್ತು ಆ್ಯಂಕರ್ ಆಗಿಯೂ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ತಮಿಳು ಹಾಸ್ಯನಟ ಮೈಲಸಾಮಿ ಹೃದಯಾಘಾತದಿಂದ ನಿಧನ

Last Updated : Feb 19, 2023, 7:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.